ಜನಪ್ರತಿನಿಧಿಗಳು-ಅಧಿಕಾರಿಗಳ ನಡುವಿನ ಘರ್ಷಣೆಗೆ ಕಾರಣವಾಗುತ್ತಿರುವ ನೀತಿ-ನಿಯಮ!


ಸರ್ಕಾರದ ನೀತಿ-ನಿಯಮಗಳು ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳ ನಡುವಿನ ಘರ್ಷಣೆಗೆ ಅವಕಾಶ ಮಾಡುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಇಂದು ಬೇಡ್ಕಣಿ ಗ್ರಾ.ಪಂ.(sಸಿದ್ಧಾಪುರ ಉ.ಕ.) ಸಾಮಾನ್ಯ ಸಭೆಯಲ್ಲಿ ತಾಂತ್ರಿಕ ತೊಂದರೆಗಳ ಕಾರಣಕ್ಕೆ ಗ್ರಾ.ಪಂ. ಉಪಾಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಯಿತು.
ಸಾಮಾನ್ಯ ಸಭೆಯ ಮೊದಲು ಸಹಜ, ಮುಂಚಿತ ಚರ್ಚೆಯ ವೇಳೆ ಮಾಧ್ಯಮಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬೇಡ್ಕಣಿ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಾಯ್ಕ ಅಧಿಕಾರಿಗಳ ಅಸಹಕಾರ,ಸರ್ಕಾರದ ಕಠಿಣ ನಿಯಮಗಳಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಠರಾವಿನಲ್ಲಿ ನಮ್ಮ ಆಕ್ಷೇಪ, ಚರ್ಚೆಗಳನ್ನೂ ನಮೂದಿಸುವುದಿಲ್ಲ, ಸಾಮಾನ್ಯ ಸಭೆಯ ಠರಾವುಗಳಲ್ಲಿ ಚರ್ಚೆ, ವಿಷಯ ದಾಖಲಾತಿ ಆಗದಿದ್ದರೆ ಸಭೆಯ ಔಚಿತ್ಯವೇನು ಎಂದು ಪ್ರಶ್ನಿಸಿದರು. ನಂತರ ಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿದರೆ ಮಾಧ್ಯಮಗಳಲ್ಲಾದರೂ ದಾಖಲಾಗುತ್ತದೆ ಎಂದರು. ಅದಕ್ಕೆ ಸಭೆ ಸರ್ವಾನುಮತದ ಬೆಂಬಲ ವ್ಯಕ್ತಪಡಿಸಲಿಲ್ಲ.
ಸೂಚಿತ ದಾಖಲಾತಿಗಳಿಲ್ಲದಿದ್ದರೂ ಕನಿಷ್ಟ ಲಭ್ಯ ದಾಖಲೆಗಳ ಆಧಾರದಲ್ಲಿ ಮನೆ ಸಂಖ್ಯೆ ಇತ್ಯಾದಿ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ ಉಪಾಧ್ಯಕ್ಷರ ಅನಿಸಿಕೆಗೆ ಗ್ರಾಮೀಣಾಭಿವೃದ್ಧಿ ಅಧಕಾರಿಗಳ ಪೂರಕ ಉತ್ತರ, ಸಹಕಾರ ದೊರೆಯಲಿಲ್ಲ. ಸದಸ್ಯರು, ಅಧಿಕಾರಿಗಳ ಬಹುಮತದ ನಿರ್ಣಯದಂತೆ ಮಾನವೀಯತೆ ಆಧಾರದಲ್ಲಿ ಅನುಕೂಲ ಮಾಡಲು ಅದರಿಂದ ಕಾನೂನು ನೀತಿ- ನಿಯಮಗಳಿಗೆ ಅಪಚಾರವಾಗದಂತೆ ಎಚ್ಚರ ವಹಿಸಲು ಸೂಚಿಸಲಾಯಿತು.
ಇ ಸ್ವತ್ತು ಸೇರಿದ ಕೆಲವು ಸರ್ಕಾರಿ ನಿಯಮಗಳು ಜನಸಾಮಾನ್ಯರಿಗೆ ಅನುಕೂಲಮಾಡಲು ತೊಡಕಾಗಿದ್ದು ಈ ತೊಂದರೆ ತಪ್ಪಿಸಲು ಸರ್ಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಹೀಗೆ ಬೇಡ್ಕಣಿ ಗ್ರಾ,ಪಂ, ಸೇರಿದಂತೆ ತಾಲೂಕು, ಜಿಲ್ಲೆಯ ಬಹುತೇಕ ಸ್ಥಳಿಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಘರ್ಷಣೆಗೆ ಕಾರಣವಾಗುತ್ತಿರುವ ಸರ್ಕಾರಿ ನೀತಿ-ನಿಯಮಗಳಿಂದ ಬಡಜನರಿಗೇ ತೊಂದರೆ ಆಗುತ್ತಿರುವ ವಾಸ್ತವವನ್ನು ಪ್ರತಿಬಿಂಬಿಸುವಲ್ಲಿ ಇಂದಿನ ಬೇಡ್ಕಣಿ ಗ್ರಾ.ಪಂ. ಘಟನೆ ದೃಷ್ಟಾಂತವಾಯಿತು.
ಸರ್ಕಾರದ ನಿರ್ಧೇಶನದ ಮೇರೆಗೆ ನಾವು ಕೆಲಸ ಮಾಡಬೇಕಾಗುತ್ತದೆ.ಸಭೆಯಲ್ಲಿ ಸರ್ವಾನುಮತದ ನಿರ್ಣಯಗಳ ಬಗ್ಗೆ ಮಾತ್ರ ಠರಾವಿನಲ್ಲಿ ದಾಖಲಿಸಲುಸಾಧ್ಯ
-ಪಿ.ಡಿ.ಓ. ಬೇಡ್ಕಣಿ ಗ್ರಾ.ಪಂ.

ಬಿಸಿಯೂಟದ ಕೋಣೆ ಮೇಲೆ ಬಿದ್ದ ಮರ,ಗಾಯ ಸಿದ್ದಾಪುರ,ಜು.30- ಸಿದ್ಧಾಪುರ ತಾಲೂಕಿನ ಕಾನಗೋಡು
ಹಿ.ಪ್ರಾ.ಶಾಲೆಯ ಬಿಸಿಯೂಟದ ಅಡುಗೆಮನೆ ಮೇಲೆ ಫಲಭರಿತ ಪಪ್ಪಾಯಿ ಮರ ಬಿದ್ದು ಭಾವಣಿಯ ಹೆಂಚು ಮುರಿದು ಹೋಗಿದೆ. ಅಡುಗೆತಯಾರಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿರುವುದರಿಂದ ಬಿಸಿಯೂಟ ತಯಾರಕರಿಗೆ ಸಣ್ಣ ಗಾಯಗಳಾಗಿದ್ದು ಅವರು ಸಿದ್ದಾಪುರ ತಾಲೂಕಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *