ಜಲಸಾಹಸದ ಹೊನ್ನೆಮರಡುವಿನ ನಾರೀಶಕ್ತಿ ನೊಮಿಟೋ ಸ್ವಾಮಿ ಸಾಹಸ ಪ್ರಸಂಗ

ಜಲ,ಮರ,ಗಾಳಿ,ಬೆಟ್ಟಗಳನ್ನು ಬಳಸಿ ಸಾಹಸ ಪ್ರದರ್ಶಿಸುವ ರೋಮಾಂಚಕಾರಿ ಕ್ರೀಡೆಗೆ ಈಗ ಎಲ್ಲೆಡೆ ಮನ್ನಣೆ. ಇಂಥ ಸಾಹಸಗಳ ಕಾರಣದಿಂದ ಪ್ರಖ್ಯಾತವಾದ ಸ್ಥಳಗಳಲ್ಲಿ ಹೊನ್ನೆಮರಡು ಒಂದು.
ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡು ಜಲಸಾಕ್ಷರತೆ,ಜಲಸಾಹಸ ಸೇರಿದ ಪಾಕೃತಿಕ ಆಕರ್ಷಣೆ ಮತ್ತು ಜ್ಞಾನದ ಕೇಂದ್ರ. ಇಂಥ ಕೇಂದ್ರ ಕಟ್ಟಿರುವ ಸ್ವಾಮಿ ದಂಪತಿಗಳು ಈ ಹೊನ್ನೆಮರುಡುವಿನ ಮೂಲಕ ಈ ಭಾಗದ ಪ್ರಕೃತಿ, ಪರಿಸರವನ್ನು ವಿಶ್ವಕ್ಕೆ ಪರಿಚಯಿಸಿದವರು. ಜಲಸಾಹಸದ ತರಬೇತಿ, ಚಾರಣ ಶಿಬಿರಗಳನ್ನು ನಡೆಸುವ ಸ್ವಾಮಿ,ಅವರ ನಿಷ್ಠೂರತೆ,ಸರಳತೆಗೆ ಪ್ರಸಿದ್ಧರು. ಇವರ ಪತ್ನಿ ನೊಮಿಟೋ. ನೊಮಿಟೋ ಜಲಸಾಹಸ ಯಾತ್ರೆಗೆ ಈಗ ಬೆಳ್ಳಿ ಹಬ್ಬದ ಹರ್ಷ. ಸ್ವಾಮಿಯವರೊಂದಿಗೆ ಸೇರಿ ನೊಮಿಟೋ ಹೊನ್ನೆಮರಡುವಿನಲ್ಲಿ ಜಲಸಾಹಸ ಶಿಬಿರಗಳು ಹೊರಗಡೆ ಸೈಕಲ್ ಯಾನ ನಡೆಸುತ್ತಾರೆ ಎಂಬುದು ಹೊರಜಗತ್ತು ನೋಡಿರುವ ಸತ್ಯ, ವಾಸ್ತವವೇನೆಂದರೆ ನೊಮಿಟೋ ಪ್ರಾರಂಭಿಸಿದ, ಪ್ರಾರಂಭಿಸುವ ಈ ಸಾಹಸದ ಯೋಚನೆ,ಯೋಜನೆಗಳನ್ನು ಹೊತ್ತೊಯ್ಯುವವರು ಅವರ ಪತಿ ಸ್ವಾಮಿ. ಕಳೆದ ಎರಡೂವರೆ ದಶಕಗಳಿಂದ ಹೊನ್ನೆಮರಡು ಕೇಂದ್ರವಾಗಿಸಿಕೊಂಡು ಈ ದಂಪತಿಗಳು ನಡೆಸಿರುವ ಸಾಹಸಗಳ ಚರಿತ್ರೆ ದೊಡ್ಡದು. ತಂಡಮಾಡಿಕೊಂಡು ನದಿಗುಂಟ ಸಾಗುವುದು, ಕಾಡು, ನೆಲ, ಜಲಗಳ ‘ಅರಿವು’ ತಿಳಿಸುವ ಜೊತೆಗೆ ಅವುಗಳ ಸಂರಕ್ಷಣೆಗೆ ಸ್ವಾಮಿ ದಂಪತಿಗಳು ಮಾಡುವ ಕೆಲಸ ಒಂದು ಹೋರಾಟ.
ಈ ದಂಪತಿಗಳ ಈ ಕೆಲಸ, ಸಾಹಸ ನೋಡಿ ಕಾಡಿನ ಮೂಲೆ ಹೊನ್ನೆಮರುಡುವಿಗೆ ದೇಶವಿದೇಶಗಳಿಂದ ಬಂದ ಜನರಿದ್ದಾರೆ. ಯಾರೇ ಬರಲಿ ಪ್ಲಾಸ್ಟಿಕ್, ಕಸ, ರಗಳೆ, ಇತ್ಯಾದಿ ನಿಷೇಧ. ಕಾಡನ್ನು ಅರಿಯುವವರು ಸಹಜ, ಸರಳ ಇರಬೇಕೆಂದು ಬಯಸುವ ಈ ದಂಪತಿಗಳು ಈ ಭಾಗಕ್ಕೆ ಸ್ವಚ್ಛ, ಶುದ್ಧ ಪರಿಸರದ ಅರಿವನ್ನು ಮೂಡಿಸಿದ್ದಾರೆ. ಹೀಗೆ ದಾಖಲೆಗೆ ಸಿಗುವ, ಸಿಗಲಾರದ ಅನೇಕ ಬದ್ಧತೆಯ ಕೆಲಸಮಾಡುವ ಈ ಸ್ವಾಮಿ ದಂಪತಿಗಳನ್ನು ಅವರ ಕೆಲಸ ಸಾಧನೆಗಳಿಗಾಗಿ ನಾಡಿನ ಅನೇಕ ಸಂಸ್ಥೆಗಳು ಗುರುತಿಸಿವೆ. ಕಳೆದ ವರ್ಷ ನೊಮಿಟೋ ಕೇಂದ್ರ ಸರ್ಕಾರದ ನಾರೀಶಕ್ತಿ ಗೌರವ ಪುರಸ್ಕಾರ ಪಡೆಯುವ ಮೂಲಕ ಕೇಂದ್ರ ನೊಮಿಟೋ ರನ್ನು ಗುರುತಿಸಿದೆ. ಚಿತ್ರದುರ್ಗದ ಮುರಘಾಮಠ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಹೊನ್ನೆಮರಡು ಸ್ವಾಮಿಯವರಿಗೆ ದೊರೆತಿದೆ. ಹೊನ್ನೆಮರುಡುವನ್ನು ಜಗತ್ತಿಗೆ ಪರಿಚಯಿಸಿದ ಈ ದಂಪತಿಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅಭಿನಂದಿಸಿ,ಗೌರವಿಸುವ ಮೂಲಕ ಜಗತ್ತಿಗೆ ಪರಿಚಯಿಸಿವೆ.ಮಲೆನಾಡಿನ ಪರಿಸರ, ಕಲೆ, ವೈಶಿಷ್ಟ್ಯ, ಅನನ್ಯತೆಗಳನ್ನು ಜಗತ್ತಿಗೆ ಪರಿಚಯಿಸಿ ಆಮೂಲಕ ಸ್ಥಳಿಯ ಆಸಕ್ತರೂ ಆದಾಯ, ಅಭಿನಂದನೆ, ವೃತ್ತಿ ಮಾಡುವಂತೆ ಪ್ರೇರೇಪಿಸಿದ ನಿಜ ನಾರೀಶಕ್ತಿ ನೊಮಿಟೋ ಮತ್ತು ಸ್ವಾಮಿ(ಜಿ.ಎನ್.) ದಂಪತಿಗಳಿಗೆ ಸಮಾಜಮುಖಿ ಅಭಿನಂದಿಸುತ್ತದೆ. (ಸಾಗರದ ಹೊನ್ನೆಮರಡು ಸಾಗರದಿಂದ 20.ಕಿ.ಮೀ. ಸಿದ್ಧಾಪುರದಿಂದ 14 ಕಿ.ಮೀ. ಜೋಗದಿಂದ 15 ಕಿ.ಮೀ.ಒಳಗೆ) ಸಂಪರ್ಕ ಸಂಖ್ಯೆ-9448485508

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *