3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ!

ಪ್ರವಾಹದ ತೀವೃತೆಇಳಿಕೆ- 4ಸಾವಿರ ಜನರು ಮರಳಿಮನೆಗೆ
ಮಳೆ, ಮಹಾಪೂರ, 3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ!
ಈ ವಾರದ ಪ್ರಾರಂಭದಿಂದ ಆರಂಭವಾಗಿದ್ದ ಮಳೆ ಮೂರ್ನಾಲ್ಕು ದಿವಸಗಳಲ್ಲಿ 4 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸಿ ಇಂದಿನಿಂದ ಮಳೆ-ಗಾಳಿ ತೀವೃತೆ ತಗ್ಗಿದ ಕಾರಣದಿಂದ ನಿರಾಶ್ರಿತರು ಮರಳಿ ಗೂಡು ಸೇರುತಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಮಳೆಯಾದ ಸಿದ್ಧಾಪುರ ತಾಲೂಕಿನಲ್ಲಿ 20 ಕುಟುಂಬಗಳ 67 ಜನರು ನಿರಾಶ್ರಿತರಾಗಿದ್ದರು. ಅವರನ್ನು ಮೂರು ಶಾಲೆಗಳಲ್ಲಿ ಊಟ, ವಸತಿ ನೀಡಿ ಪುನರ್ ರ್ವಸತಿ ಒದಗಿಸಲಾಗಿತ್ತು. ಇದೇ ರೀತಿ ಘಟ್ಟದ ಮೇಲಿನ ತಾಲೂಕುಗಳಿಗಿಂತ ಕೆಳಗಿನ ತಾಲೂಕುಗಳಲ್ಲಿ ಮಹಾಪೂರ ಬಹಳಷ್ಟು ಜನರನ್ನು ಭಾದಿಸಿ ಸಾವಿರಾರು ಜನರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.
ಲಕ್ಷಾಂತರ ಎಕರೆ ಕೃಷಿ ಭೂಮಿ ಮುಳುಗಡೆಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ಉತ್ತರಕನ್ನಡ ಜಿಲ್ಲೆಯ ಮಳೆ, ಪ್ರವಾಹದ ಒಟ್ಟೂ ಆಸ್ತಿ, ಮನೆ, ಬೆಳೆ ನಷ್ಟ ಕನಿಷ್ಟ ನೂರಾರು ಕೋಟಿ ಎಂದು ಅಂದಾಜಿಸಲಾಗಿದೆ.
ಒಂದು ಸಮೀಕ್ಷೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ರಸ್ತೆನಾಶ, ಬೆಳೆನಾಶ, ಆಸ್ತಿ-ಮನೆ, ಜೀವಹಾನಿಗಳ ಒಟ್ಟೂ ಮೊತ್ತ ಸಾವಿರ ಕೋಟಿ!ಗೂ ಅಧಿಕ ಎನ್ನಲಾಗುತ್ತಿದೆ.
ಹಳಿಯಾಳ ತಾಲೂಕಿನಲ್ಲಿ ರಸ್ತೆ, ಸೇತುವೆ ಮೇಲೆ ನುಗ್ಗಿದ ನೀರು ಬೆಳೆಹಾನಿ ಮಾಡಿದೆ. ಜೊಯಡಾ. ದಾಂಡೇಲಿ ತಾಲೂಕುಗಳಲ್ಲಿ ಮಳೆಯಿಂದಾಗಿ ಬೆಳೆ, ಆಸ್ತಿ-ಕೃಷಿಭೂಮಿ ನಾಶವಾಗಿದೆ. ಕಾರವಾರದ ಕೆಲವೆಡೆ ಮಳೆನೀರು ಕೃಷಿ-ಉದ್ಯಮಗಳ ಚಟುವಟಿಕೆ ಮೇಲೆ ಪರಿಣಾಮ ಬೀರಿ ಹಾನಿಯಾಗಿದೆ. ಕೃಷಿ ಭೂಮಿ, ವಾಸ್ತವ್ಯದ ಪ್ರದೇಶಗಳಿಗೆ ನುಗ್ಗಿದ ನೀರು ಮಾಡಿರುವ ಹಾನಿ ಅಪಾರ,
ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ನೀರು ಲಕ್ಷಾಂತರ ಎಕರೆ ಕೃಷಿಭೂಮಿ ಮೇಲೆ ಹರಿದು ಬೆಳೆನಾಶ, ಕುಮಟಾ ತಾಲೂಕಿನಲ್ಲಿ ಅಘನಾಶಿನಿ, ಗಂಗಾವಳಿ ನದಿಗಳ ನೀರಿನಿಂದ ಅಪಾರ ಹಾನಿ, ಜನಜೀವನಕ್ಕೆ ನಷ್ಟ.
ಹೊನ್ನಾವರ ಭಟ್ಕಳ ತಾಲೂಕುಗಳಲ್ಲಿ ಶರಾವತಿಯ ನೀರು, ಮಳೆ ಸೇರಿ ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ.ಸಿದ್ಧಾಪುರ-ಶಿರಸಿಗಳಲ್ಲೂ ಅಡಿಕೆ, ಭತ್ತ, ಬಾಳೆ, ಶುಂಠಿ ಬೆಳೆಗಳ ಹಾನಿ ಅಪಾರ. ಯಲ್ಲಾಪುರ, ಮುಂಡಗೋಡುಗಳಲ್ಲೂ ಬೆಳೆ ನಾಶ. ಜಿಲ್ಲೆಯಾದ್ಯಂತ ರಸ್ತೆ, ಸೇತುವೆ, ಕಾಲು ಸೇತುವೆ, ತೂಗುಸೇತುವೆಗಳಿಗೆ ಹಾನಿಯಾಗಿದೆ.
ಇಷ್ಟೆಲ್ಲ ಹಾನಿ-ನಷ್ಟಗಳ ನಡುವೆ ಜನ-ಜಾನುವಾರುಗಳ ಜೀವಹಾನಿ ಕಡಿಮೆ. ಉತ್ತರಕನ್ನಡ ಜಿಲ್ಲಾಧಿಕಾರಿ ಹರೀಶ್‍ಕುಮಾರ ಕೆ. ನೇತೃತ್ವದಲ್ಲಿ ಎಲ್ಲಾ ತಾಲೂಕಾ ಆಡಳಿತಗಳು ಪರಿಣಾಮಕಾರಿ ಕೆಲಸ ಮಾಡುವ ಮೂಲಕ ಜನರಲ್ಲಿ ವಿಶ್ವಾಸ ತುಂಬಿದ್ದಾರೆ. ಮನೆ. ಕೃಷಿ, ಕೃಷಿಭೂಮಿ ನಷ್ಟ ತುಂಬಿಕೊಳ್ಳಲು ಕನಿಷ್ಟ 1-2 ತಿಂಗಳ ಅವಧಿಯ ಸಮಯವೇ ಬೇಕು ಎನ್ನಲಾಗಿದೆ.

ನಿರಾಶ್ರಿತರಿಗೆ ತಹಸಿಲ್ಧಾರರ ಮೂಲಕ ನೆರವು ನೀಡಲು ಮನವಿ
ಸಿದ್ಧಾಪುರ,ಆ.08-ತಾಲೂಕಿನ ಎರಡು ನದಿಗಳ ನೀರಿನ ಮಹಾಪೂರ ಮತ್ತು ಮಳೆ ಹಿನ್ನೆಲೆಯಲ್ಲಿ ಸೋವಿನಕೊಪ್ಪ, ಅಕ್ಕುಂಜಿ,ಕಲ್ಯಾಣಪುರ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಈ ನಿರಾಶ್ರಿತರಿಗೆ ನೆರವು ನೀಡುವ ದಾನಿಗಳು ತಹಸಿಲ್ದಾರರ ಮೂಲಕ ನೆರವು ಒದಗಿಸುವಂತೆ ವಿನಂತಿಸಲಾಗಿದೆ. ಆಸಕ್ತರು ತಮ್ಮ ನೆರವನ್ನು ತಹಸಿಲ್ದಾರರ ಕಾರ್ಯಾಲಯದ ಮೂಲಕ ನೀಡಬೇಕು ಎಂದು ಕಂದಾಯ ಇಲಾಖೆಯ ಪ್ರಕಟಣೆ ತಿಳಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *