3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ!

ಪ್ರವಾಹದ ತೀವೃತೆಇಳಿಕೆ- 4ಸಾವಿರ ಜನರು ಮರಳಿಮನೆಗೆ
ಮಳೆ, ಮಹಾಪೂರ, 3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ!
ಈ ವಾರದ ಪ್ರಾರಂಭದಿಂದ ಆರಂಭವಾಗಿದ್ದ ಮಳೆ ಮೂರ್ನಾಲ್ಕು ದಿವಸಗಳಲ್ಲಿ 4 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸಿ ಇಂದಿನಿಂದ ಮಳೆ-ಗಾಳಿ ತೀವೃತೆ ತಗ್ಗಿದ ಕಾರಣದಿಂದ ನಿರಾಶ್ರಿತರು ಮರಳಿ ಗೂಡು ಸೇರುತಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಮಳೆಯಾದ ಸಿದ್ಧಾಪುರ ತಾಲೂಕಿನಲ್ಲಿ 20 ಕುಟುಂಬಗಳ 67 ಜನರು ನಿರಾಶ್ರಿತರಾಗಿದ್ದರು. ಅವರನ್ನು ಮೂರು ಶಾಲೆಗಳಲ್ಲಿ ಊಟ, ವಸತಿ ನೀಡಿ ಪುನರ್ ರ್ವಸತಿ ಒದಗಿಸಲಾಗಿತ್ತು. ಇದೇ ರೀತಿ ಘಟ್ಟದ ಮೇಲಿನ ತಾಲೂಕುಗಳಿಗಿಂತ ಕೆಳಗಿನ ತಾಲೂಕುಗಳಲ್ಲಿ ಮಹಾಪೂರ ಬಹಳಷ್ಟು ಜನರನ್ನು ಭಾದಿಸಿ ಸಾವಿರಾರು ಜನರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.
ಲಕ್ಷಾಂತರ ಎಕರೆ ಕೃಷಿ ಭೂಮಿ ಮುಳುಗಡೆಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ಉತ್ತರಕನ್ನಡ ಜಿಲ್ಲೆಯ ಮಳೆ, ಪ್ರವಾಹದ ಒಟ್ಟೂ ಆಸ್ತಿ, ಮನೆ, ಬೆಳೆ ನಷ್ಟ ಕನಿಷ್ಟ ನೂರಾರು ಕೋಟಿ ಎಂದು ಅಂದಾಜಿಸಲಾಗಿದೆ.
ಒಂದು ಸಮೀಕ್ಷೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ರಸ್ತೆನಾಶ, ಬೆಳೆನಾಶ, ಆಸ್ತಿ-ಮನೆ, ಜೀವಹಾನಿಗಳ ಒಟ್ಟೂ ಮೊತ್ತ ಸಾವಿರ ಕೋಟಿ!ಗೂ ಅಧಿಕ ಎನ್ನಲಾಗುತ್ತಿದೆ.
ಹಳಿಯಾಳ ತಾಲೂಕಿನಲ್ಲಿ ರಸ್ತೆ, ಸೇತುವೆ ಮೇಲೆ ನುಗ್ಗಿದ ನೀರು ಬೆಳೆಹಾನಿ ಮಾಡಿದೆ. ಜೊಯಡಾ. ದಾಂಡೇಲಿ ತಾಲೂಕುಗಳಲ್ಲಿ ಮಳೆಯಿಂದಾಗಿ ಬೆಳೆ, ಆಸ್ತಿ-ಕೃಷಿಭೂಮಿ ನಾಶವಾಗಿದೆ. ಕಾರವಾರದ ಕೆಲವೆಡೆ ಮಳೆನೀರು ಕೃಷಿ-ಉದ್ಯಮಗಳ ಚಟುವಟಿಕೆ ಮೇಲೆ ಪರಿಣಾಮ ಬೀರಿ ಹಾನಿಯಾಗಿದೆ. ಕೃಷಿ ಭೂಮಿ, ವಾಸ್ತವ್ಯದ ಪ್ರದೇಶಗಳಿಗೆ ನುಗ್ಗಿದ ನೀರು ಮಾಡಿರುವ ಹಾನಿ ಅಪಾರ,
ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ನೀರು ಲಕ್ಷಾಂತರ ಎಕರೆ ಕೃಷಿಭೂಮಿ ಮೇಲೆ ಹರಿದು ಬೆಳೆನಾಶ, ಕುಮಟಾ ತಾಲೂಕಿನಲ್ಲಿ ಅಘನಾಶಿನಿ, ಗಂಗಾವಳಿ ನದಿಗಳ ನೀರಿನಿಂದ ಅಪಾರ ಹಾನಿ, ಜನಜೀವನಕ್ಕೆ ನಷ್ಟ.
ಹೊನ್ನಾವರ ಭಟ್ಕಳ ತಾಲೂಕುಗಳಲ್ಲಿ ಶರಾವತಿಯ ನೀರು, ಮಳೆ ಸೇರಿ ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ.ಸಿದ್ಧಾಪುರ-ಶಿರಸಿಗಳಲ್ಲೂ ಅಡಿಕೆ, ಭತ್ತ, ಬಾಳೆ, ಶುಂಠಿ ಬೆಳೆಗಳ ಹಾನಿ ಅಪಾರ. ಯಲ್ಲಾಪುರ, ಮುಂಡಗೋಡುಗಳಲ್ಲೂ ಬೆಳೆ ನಾಶ. ಜಿಲ್ಲೆಯಾದ್ಯಂತ ರಸ್ತೆ, ಸೇತುವೆ, ಕಾಲು ಸೇತುವೆ, ತೂಗುಸೇತುವೆಗಳಿಗೆ ಹಾನಿಯಾಗಿದೆ.
ಇಷ್ಟೆಲ್ಲ ಹಾನಿ-ನಷ್ಟಗಳ ನಡುವೆ ಜನ-ಜಾನುವಾರುಗಳ ಜೀವಹಾನಿ ಕಡಿಮೆ. ಉತ್ತರಕನ್ನಡ ಜಿಲ್ಲಾಧಿಕಾರಿ ಹರೀಶ್‍ಕುಮಾರ ಕೆ. ನೇತೃತ್ವದಲ್ಲಿ ಎಲ್ಲಾ ತಾಲೂಕಾ ಆಡಳಿತಗಳು ಪರಿಣಾಮಕಾರಿ ಕೆಲಸ ಮಾಡುವ ಮೂಲಕ ಜನರಲ್ಲಿ ವಿಶ್ವಾಸ ತುಂಬಿದ್ದಾರೆ. ಮನೆ. ಕೃಷಿ, ಕೃಷಿಭೂಮಿ ನಷ್ಟ ತುಂಬಿಕೊಳ್ಳಲು ಕನಿಷ್ಟ 1-2 ತಿಂಗಳ ಅವಧಿಯ ಸಮಯವೇ ಬೇಕು ಎನ್ನಲಾಗಿದೆ.

ನಿರಾಶ್ರಿತರಿಗೆ ತಹಸಿಲ್ಧಾರರ ಮೂಲಕ ನೆರವು ನೀಡಲು ಮನವಿ
ಸಿದ್ಧಾಪುರ,ಆ.08-ತಾಲೂಕಿನ ಎರಡು ನದಿಗಳ ನೀರಿನ ಮಹಾಪೂರ ಮತ್ತು ಮಳೆ ಹಿನ್ನೆಲೆಯಲ್ಲಿ ಸೋವಿನಕೊಪ್ಪ, ಅಕ್ಕುಂಜಿ,ಕಲ್ಯಾಣಪುರ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಈ ನಿರಾಶ್ರಿತರಿಗೆ ನೆರವು ನೀಡುವ ದಾನಿಗಳು ತಹಸಿಲ್ದಾರರ ಮೂಲಕ ನೆರವು ಒದಗಿಸುವಂತೆ ವಿನಂತಿಸಲಾಗಿದೆ. ಆಸಕ್ತರು ತಮ್ಮ ನೆರವನ್ನು ತಹಸಿಲ್ದಾರರ ಕಾರ್ಯಾಲಯದ ಮೂಲಕ ನೀಡಬೇಕು ಎಂದು ಕಂದಾಯ ಇಲಾಖೆಯ ಪ್ರಕಟಣೆ ತಿಳಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *