ಬೆಳೆಹಾನಿಗೆ ಅರ್ಜಿನೀಡಲು ಗಡುವು ಮುಕ್ತಾಯ, ಸಮಯಾವಕಾಶಕ್ಕೆ ಜನಪ್ರತಿನಿಧಿಗಳು,ಮುಖಂಡರಆಗ್ರಹ


ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.
ತಾಲೂಕಿನ ಒಟ್ಟೂ 14700 ಕೃಷಿಕರಲ್ಲಿ 500 ಜನ ಭತ್ತಬೆಳೆಗಾರರು ಅರ್ಜಿ ನೀಡಿದ್ದು ಒಟ್ಟೂ ಅಂದಾಜು 4200 ಕ್ಕಿಂತ ಕಡಿಮೆ ರೈತರು ಅತಿವೃಷ್ಟಿಹಾನಿಗೆ ಅರ್ಜಿ ನೀಡಿದಂತಾಗಿದೆ.
ಈ ಅತಿವೃಷ್ಟಿ ಹಾನಿ ಅರ್ಜಿ ಸಲ್ಲಿಕೆಗೆ ಕಡಿಮೆ ಅವಧಿಯ ಸಮಯಾವಕಾಶ ನೀಡಿದ್ದು ಈ ಅವಧಿಯಲ್ಲಿ ಮಾಹಿತಿ ತಲುಪದೇ ಸಂವಹನ ಕೊರತೆಯಿಂದ ಅರ್ಜಿ ಸಲ್ಲಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಮಧ್ಯೆ ಕಾಂವಚೂರು ಮತ್ತು ವಾಜಗೋಡು ಪಂಚಾಯತ್, ಸೇವಾಸಹಕಾರಿ ಸಂಘಗಳ ವ್ಯಾಪ್ತಿಯ ರೈತ ಮುಖಂಡರು ಮತ್ತು ಜನಪ್ರತಿನಿಧಿಗಳು ಈ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಶಾಸಕರು, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವರೆಗೆ ಅವಧಿ ವಿಸ್ತರಣೆಯ ಬೇಡಿಕೆ ಹೋಗಿದ್ದು ಸೋಮುವಾರದ ವರೆಗೆ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಿ ಅರ್ಜಿ ಸ್ವೀಕರಿಸಬೇಕೆಂಬ ಒತ್ತಾಯ ಬಂದರೂ ತಾಂತ್ರಿಕ ಕಾರಣಗಳಿಂದ ಅರ್ಜಿ ಪಡೆಯುವ ಅವಧಿಯನ್ನು ಇಂದಿಗೆ ಮುಕ್ತಾಯಗೊಳಿಸಿದ್ದು. ಅಡಿಕೆ ತೋಟಗಳ ಕೊಳೆಹಾನಿ ಬಗ್ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಲೂಕಿನಲ್ಲಿ ಮಳೆ,ಪ್ರವಾಹ, ನೀರು ನಿಂತ ತೊಂದರೆ ಇದ್ದರೂ ಅಲ್ಫಪ್ರಮಾಣದ ಅರ್ಜಿ ಸಲ್ಲಿಕೆ ಆಗಿರುವ ಹಿಂದೆ ಕೆಲವು ಅಧಿಕಾರಿಗಳು ಭತ್ತದ ಗದ್ದೆ ಹಾನಿ ಅರ್ಜಿ ತಿರಸ್ಕರಿಸಿದ್ದೂ ಕಾರಣ ಎನ್ನಲಾಗಿದೆ. ಈ ಮಧ್ಯೆ ತಾಲೂಕಿನಲ್ಲಿ ಅತಿವೃಷ್ಟಿ ಹಾನಿ ವ್ಯಾಪಕವಾಗಿರುವುದರಿಂದ ಅರ್ಜಿ ಪಡೆಯದೆ ಸಾಮೂಹಿಕವಾಗಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎನ್ನುವ ಬೇಡಿಕೆಯೂ ವ್ಯಕ್ತವಾಗಿದೆ.ಇಂದು ನಿನ್ನೆ ತೋಟಗಾರಿಕೆ, ಕೃಷಿ ಇಲಾಖೆಗಳ ಸಿಬ್ಬಂದಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಅಹೋರಾತ್ರಿ ಅರ್ಜಿ ಪ್ರಕ್ರಿಯೆ ಕೆಲಸ ಮಾಡಿದರು.

ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ
ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22 ರ ವರೆಗೆ ಮೂರ್ನಾಲ್ಕು ತಂಡಗಳಲ್ಲಿ ಸಮೀಕ್ಷೆ ನಡೆಸಿವೆ. ಇಂದುಕೂಡಾ ಈ ಸಮೀಕ್ಷಾ ತಂಡದ ಮೂರ್ನಾಲ್ಕು ಗುಂಪುಗಳು ಪ್ರತ್ಯೇಕವಾಗಿ ತಾಲೂಕಿನ ನಾನಾ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದವು. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಆಯಾ ಪಂಚಾಯತ್ ವ್ಯಾಪ್ತಿಯ ಗ್ರಾಮಲೆಕ್ಕಿಗರೊಂದಿಗೆ ತಾಲೂಕಿನ ಕೃಷಿಕ್ಷೇತ್ರಗಳಾದ ಭತ್ತದ ಗದ್ದೆ ಮತ್ತು ತೋಟಗಾರಿಕಾ ಕ್ಷೇತ್ರಗಳನ್ನು ಸಂದರ್ಶಿಸಿದರು.
ಕಾಳಪ್ಪ ನೇತೃತ್ವದ ತಂಡ ನೆಜ್ಜೂರು. ಕಾವಂಚೂರು, ಕಲ್ಯಾಣಪುರ, ಕಲ್ಲೂರು ಸೇರಿದಂತೆ ಕೆಲವೆಡೆ ಸಮೀಕ್ಷೆ ನಡೆಸಿತು. ಈ ಭಾಗದ ಬಹುತೇಕ ಕಡೆ ಭತ್ತದ ಬೆಳೆಗೆ ತೊಂದರೆಯಾಗಿದೆ. ಕೆಲವೆಡೆ ಎರಡು, ಮೂರನೇ ಬಾರಿ ಕೂಡಾ ನಾಟಿ ಮಾಡಿದ್ದಾರೆ.ತಾಲೂಕಿನ ದೊಡ್ಡ ಭತ್ತದ ಕ್ಷೇತ್ರ ನೆಜ್ಜೂರು ಬೈಲ್ ನಲ್ಲಿ ಹೊಳೆಯ ಪಕ್ಕದ ಭತ್ತದ ಗದ್ದೆ ಬೆಳೆಗಳೆಲ್ಲಾ ತೊಳೆದು ಹೋಗಿವೆ. ಹೊಸಳ್ಳಿಯಲ್ಲಿ ತೋಟದ ಬೆಳೆಗಳಾದ ಅಡಿಕೆ ಕೊಳೆಯಿಂದ ಉದುರಿದ್ದರೆ, ಕಾಳುಮೆಣಸು ಕೊಳೆಯಿಂದ ಸತ್ತಿರುವ ದೃಶ್ಯ ಗಮನ ಸೆಳೆಯಿತು. ಅಕ್ಕುಂಜಿ,ಗೋಳಗೋಡು,ಕಲ್ಯಾಣಪುರ ಸೇರಿದಂತೆ ಹಲವೆಡೆ ಭತ್ತದ ಗದ್ದೆಗಳು ಕೆಸರುತುಂಬಿಕೊಂಡು ವ್ಯವಸಾಯ, ಬೆಳೆಗೆ ಯೋಗ್ಯವಲ್ಲದಂತಾಗಿರುವವಾಸ್ತವ ಕಂಡುಬಂತು. ಮುಳುಗಿದ್ದ ಬೆಳೆ, ಭತ್ತದ ಕ್ಷೇತ್ರಗಳೆಲ್ಲಾ ಮೇಲ್ನೋಟಕ್ಕೆ ಹಸಿರುಸೂಸುವಂತೆ ಕಂಡರೂ ಬುಡದಲ್ಲಿ ಬಂತು ಕೂತಿರುವ ಕೆಸರು ಬೆಳೆಗಿಂತ ಕಳೆಗೆ ಅನುಕೂಲಮಾಡಿಕೊಡುವ ಸಾಧ್ಯತೆಯನ್ನು ಪ್ರತಿಬಿಂಬಿಸಿತು.
ಸಮೀಕ್ಷಾ ಕಾರ್ಯದಲ್ಲಿದ್ದ ಅಧಿಕಾರಿಗಳು ಎಲ್ಲಾ ರೈತರೂ ತಮ್ಮ ಬೆಳೆಹಾನಿ ಬಗ್ಗೆ ಆಯಾ ಗ್ರಾಮಪಂಚಾಯತ್ ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಶೀಘ್ರ ಅರ್ಜಿ ನೀಡಲು ವಿನಂತಿಸಿದರು. ತಾಲೂಕಿನ ಐದುಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಬಹುತೇಕ ಕಡೆ ಪ್ರತಿಶತ 75 ಹಾನಿಯಾಗಿದ್ದರೆ, ಕೆಲವೆಡೆ 50% ಮತ್ತೂ ಕೆಲವೆಡೆ 100% ಹಾನಿಯಾಗಿರುವ ವರದಿ ಇದೆ. ತಾಲೂಕಿನಲ್ಲಿ ಅಡಿಕೆ, ಬಾಳೆ, ಶುಂಠಿ ಮತ್ತು ಕಾಳುಮೆಣಸು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳೂ ಹಾನಿಗೊಳಗಾಗಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *