ಬಾವಿಗಳೆ ಕುಸಿದವು, ಕೆರೆ ಒಡೆದವು,ಶಾಲೆಮುರಿದವು…ಇದು ಸಂಸದರ ಆದರ್ಶಗ್ರಾಮದ ಕತೆ

ಮಳೆ ನಿಂತುಹೋದ ಮೇಲೆ-ಭಾಗ-06
ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ
ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್‍ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ ದ್ರೋಹ ಬಗೆದಿದೆ. ಇದರ ಹಿಂದಿರುವ ಕೈಗಳಲ್ಲ, ಕೆಸರಿನ ಕಮಲಗಳು ಯಾರು ಎಂದರೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎನ್ನುವ ಸ್ಥಿತಿ.
ಕಾನಗೋಡಿನಲ್ಲಿ ಒಂದು ದೊಡ್ಡಕೆರೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇನ್ನೊಂದು ಕೆರೆ ಮತ್ತೊಂದು ಗದ್ದೆಬೈಲಿಗೆ ನೀರುಣಿಸುತ್ತದೆ. ಆ ಕೆರೆಯೆ ತಾವರೆಕೆರೆ. ಎರಡೆಕರೆಯ ಈ ತಾವರೆಕೆರೆ ಈ ಮಳೆಗಾಲದಲ್ಲಿ ಒಳಗೊಳಗೇ ಅಸರಿದೆ. ಅದರ ಬಂಡು,ಚಾನೆಲ್ ಬಾಯಿಗಳೆಲ್ಲಾ ಕಿತ್ತು ನೀರು ಹೊರಹೋಗಿದೆ. ಈ ಬೃಹತ್ ಪ್ರಮಾಣದ ನೀರು ತುಂಬಿ, ಒಳಗೊಳಗೆ ಅಸರಿ ಹೋಗದಿದ್ದರೆ ಈ ಕೆರೆ ಒಡೆದು ನೂರಾರು ಎಕರೆ ಕೃಷಿಭೂಮಿ ಹಾಳಾಗುತಿತ್ತು. ಇದು ಮೇಲಿನ ಕೆರೆಯ ಕತೆಯಾದರೆ, ಊರಹೊರಗಿನ ದೊಡ್ಡಕೆರೆ ಅಥವಾ ಮಾರಿಕೆರೆ ಈ ಭಾಗದ ಪ್ರಮುಖ ಜಲಮೂಲ.


ಈ ಕೆರೆಯ ಬಂಡು ಒಡೆದಂತಾಗಿ ನೀರು ಹೊರಹೋಗದಿದ್ದರೆ ಈ ಕೆರೆಯ ನೀರು ಸಾವಿರಾರು ಎಕರೆ ಕೃಷಿ ಭೂಮಿಯನ್ನೇ ಕೊಚ್ಚಿಕೊಂಡು ಹೋಗುತಿತ್ತು. ಈ ಕೆರೆಗಳಿಗೆ ಮುಂದಿನ ಮಳೆಗಾಲದ ಮೊದಲು ಅಗತ್ಯ ದುರಸ್ಥಿ-ಕೆರೆಕಟ್ಟುವ ಕಾಮಗಾರಿ ಮಾಡಬೇಕು ಎಂಬುದು ಈ ಗ್ರಾಮದ ಜನರ ಬೇಡಿಕೆ.
ಭಾವಿಗಳು ಕುಸಿದವು- ಈ ವರ್ಷದ ಮಹಾಮಳೆಗೆ ಸಿದ್ದಾಪುರ ತಾಲೂಕು ಉತ್ತರಕನ್ನಡ ಜಿಲ್ಲೆಯ ಬಹಳ ಕಡೆ ತೆರೆದ ಬಾವಿಗಳು ಮುಚ್ಚಿವೆ. ಆದರೆ ಇಲ್ಲಿಯ ಗಣೇಶ್ ನಗರದಲ್ಲಿ ಎರಡ್ಮೂರು ಬಾವಿಗಳು ಕುಸಿದಿವೆ. ನೀರು ಎತ್ತಲು ಭಯ ಪಡುವಂತಾದ ದುಸ್ಥಿತಿಯಲ್ಲಿ ಇಲ್ಲಿಯ ಜನರು ಈ ಭಾವಿಗಳ ನೀರು ಎತ್ತುತಿದ್ದಾರೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿ ಕಿರಿದು, ಇಲ್ಲಿ ಸಂಪರ್ಕ ರಸ್ತೆಗಳು ವ್ಯವಸ್ಥಿತವಾಗಿಲ್ಲ. ಕಾನಗೋಡು, ಐಗೋಡು, ಮಂಕೋಡು,ಹಳ್ಳಿಬೈಲ್ ಸೇರಿದಂತೆ ಇಲ್ಲಿಯ ಬಹುತೇಕ ರಸ್ತೆಗಳೆಲ್ಲಾ ಕೆಸರುಗುಂಡಿಗಳಂತಾಗಿವೆ. ಈ ರಸ್ತೆಗಳ ಉನ್ನತೀಕರಣಕ್ಕೆ ಅನುದಾನದ ಕೊರತೆ ಇದೆ ಎನ್ನುತ್ತಾರೆ ಗ್ರಾ.ಪಂ. ಮುಖಂಡ ಎಚ್.ಕೆ. ಶಿವಾನಂದ.


ಕಾನಗೋಡಿನ ಶಾಲೆ, ಅಂಗನವಾಡಿಗಳಿಗೆ ವ್ಯವಸ್ಥಿತ ಕಟ್ಟಡಗಳಿಲ್ಲ, ಮಹಾಮಳೆಯಲ್ಲಿ ಇರುವ ಒಂದೆರಡು ಕೊಠಡಿಗಳೂ ಬಳಕೆಗೆ ಅಯೋಗ್ಯವಾಗಿವೆ. ಇದೇ ಪಂಚಾಯತ್ ನ ವಡಗೇರಿಯಲ್ಲಿ ಮಾಜಿ ಶಾಸಕ ಗೋಪಾಲಕಾನಡೆಯವರು ದಾನವಾಗಿ ನೀಡಿದ ಪ್ರದೇಶದಲ್ಲಿ ಹೊಸ ಶಾಲೆ ಪ್ರಾರಂಭವಾಗಿದೆ. ಆದರೆ ಅಲ್ಲಿ ಕೊಠಡಿಗಳ ಕೊರತೆ. ಈ ಕೊರತೆ ನೀಗಿಸಲು ಹಳೆಶಾಲೆಯ ಒಂದೆರಡು ಕೊಠಡಿ ಬಳಸಿಕೊಳ್ಳಲಾಗುತಿತ್ತು ಆದರೆ ಮಳೆಯ ನಂತರ ಆ ಶಾಲೆ ಕುಸಿಯುವ ಅಪಾಯ ಎದುರಿಸುತ್ತಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಗೆ ಕನಿಷ್ಟ ಎರಡು ಹೆಚ್ಚುವರಿ ಕೊಠಡಿಗಳು ಬೇಕು ಎನ್ನುವುದು ಅಲ್ಲಿಯ ಅನಿವಾರ್ಯ ಬೇಡಿಕೆ.
ಈ ಮಳೆಗಾಲದಲ್ಲಿ ಇಲ್ಲಿಯ ಬಳ್ಳಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅದೃಷ್ಟ ನೆಟ್ಟಗಿಲ್ಲದಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಜಿಲ್ಲಾಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಇಲ್ಲಿ ಆಗಬಹುದಾಗಿದ್ದ ಸಂಭವನೀಯ ಅನಾಹುತ ತಪ್ಪಿದ ಖುಷಿಯಿದೆ. ಒಂದು ದಿನದ ಮಳೆಗೆ ಈ ಶಾಲೆಯ ಚಾವಣಿ ಮುರಿದು ಹೆಂಚುಗಳು ನೆಲಕ್ಕುರುಳಿದವು. ಈಗ ಈ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ ಎರಡೆರಡು ತರಗತಿ ನಡೆಯುವ ಅನಿವಾರ್ಯತೆ. ಈ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲೇಬೇಕಾದ ಅನಿವಾರ್ಯತೆ ಇಲ್ಲಿ ಎದುರಾಗಿದೆ.
ವಿವಾದಿತ ಜಕ್ರಗುಂಡಿ ಹೊಳೆಯಲ್ಲಿ ನೀರು ಹರಿದಿದೆ. ಕಾನಗೋಡು ಗ್ರಾಮ ಪಂಚಾಯತ್ ಮಳೆಗೆ ಬೆಚ್ಚಿದೆ. ಮೋದಿಯವರ ಸಂಸದರ ಮಾದರಿ ಗ್ರಾಮ ಎಂಬ ಹುಸಿ ಘೋಷಣೆಯ ನಾಟಕದ ಮಾತಿಗೆ ಮರುಳಾದ ಇಲ್ಲಿಯ ಜನ ಸಂಸದನೂ ಇಲ್ಲ, ಅವನ ಆದರ್ಶವೂ ಇಲ್ಲ, ಆದರ್ಶ ಗ್ರಾಮವೂ ಇಲ್ಲ. ಬಿ.ಜೆ.ಪಿ. ಅಧಿಕಾರದಾಹಿ ರಾಜಕಾರಣದ ನಾಟಕಕ್ಕೆ ಬಲಿಯಾದ ಸಂಸದರ ಮಾದರಿ ಗ್ರಾಮಗಳ ವಾಸ್ತವಸ್ಥಿತಿ ನೋಡಬೇಕೆಂದರೆ ಆಮೋದಿ,ಈ ಯಡಿಯೂರಪ್ಪನೇ ಇಲ್ಲಿಗೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಲ್ಲಿಯ ಸ್ಥಳಿಯರು.
ಅಂದಹಾಗೆ ಸಂಸದರ ಈ ಆದರ್ಶ!ಗ್ರಾಮದಲ್ಲಿ ಕೆರೆ ಒಡೆದು,ಭಾವಿಗಳು ಕುಸಿದು, ರಸ್ತೆ, ಶಾಲೆ, ಜನಜೀವನ ಮೂರಾಬಟ್ಟೆಯಾದರೂ ಸಂಸದರ ಪತ್ತೆ ಇಲ್ಲ. ನಮ್ಮ ಸಂಸದರು, ಶಾಸಕರನ್ನು ನಾವು ಹಗಲಲ್ಲೂ ಬ್ಯಾಟರಿ ಹಿಡಿದು ಹುಡುಕಬೇಕಿದೆ ಎನ್ನುವ ಈ ಸ್ಥಳಿಯರ ವ್ಯಂಗ್ಯ ಇಲ್ಲಿಯ ಸಂಸದರು, ಶಾಸಕರ ಜನಸ್ಫಂದನಕ್ಕೆ ಉತ್ತಮ ದೃಷ್ಟಾಂತ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *