ಬೆಳಕಿಗೆ ಬರದ ಸಂಸ್ಥೆ ಹೊರತಂದಿದ್ದು ಸಾವಿರಾರು ಪ್ರತಿಭಾವಂತರನ್ನು

ಸಿದ್ಧಾಪುರದ ನೆಲ-ಮಣ್ಣಿನ ಮಹಿಮೆಯೋ ಅಥವಾ ಇಲ್ಲಿಯ ಚಾರಿತ್ರಿಕ ಹಿನ್ನೆಲೆಯ ಮಹಿಮೆಯೋ ಇಲ್ಲಿ ಸಂಭವಿಸುವ ಪ್ರತಿ ಘಟನೆ,ವಿದ್ಯಮಾನಗಳೂ ವಿಶೇಶ.
ತೀರಾ ಹಳ್ಳಿಯಂಥ ಪಟ್ಟಣದ ಸಿದ್ಧಾಪುರದಲ್ಲಿ ಬಹಳ ವರ್ಷಗಳ ಹಿಂದಿನಿಂದ ತೋಟಗಾರಿಕಾ ತರಬೇತಿ ಸಂಸ್ಥೆಯೊಂದು ನಡೆಯುತ್ತಿದೆ. ಈ ಸಂಸ್ಥೆಯ ವ್ಯಾಪ್ತಿ ಉತ್ತರಕನ್ನಡ ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತವಾಗಿದೆಯಾದರೂ ಇಲ್ಲಿ ರಾಜ್ಯ ಹೊರರಾಜ್ಯಗಳ ವಿದ್ಯಾರ್ಥಿಗಳು ಕಲಿತು ಹೆಸರು ಮಾಡಿದ್ದಾರೆ.
ರಾಜ್ಯಸರ್ಕಾರದ ತೋಟಗಾರಿಕೆ ಇಲಾಖೆಯ ಜವಾಬ್ಧಾರಿಯ ಈ ಸಂಸ್ಥೆ ಪ್ರತಿವರ್ಷ 35 ರಂತೆ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಿ ತರಬೇತಿ ನೀಡುತ್ತಿದೆ.
ಕನಿಷ್ಟ ಮೆಟ್ರಿಕ್ ಓದಿರುವ ಯಾವುದೇ ಭಾರತೀಯ ಪ್ರಜೆ ಇಲ್ಲಿ ಅರ್ಜಿ ಹಾಕಿ ಪ್ರವೇಶ ಪಡೆಯಬಹುದು ಆದರೆ ವಯೋಮಿತಿ 18 ರಿಂದ ಮೂವತ್ತು ವರ್ಷ ದಾಟುವಂತಿಲ್ಲ.
ಪ್ರತಿವರ್ಷ ಏಫ್ರಿಲ್ ನಲ್ಲಿ ಕರೆಯುವ ಪ್ರವೇಶ ಆಮಂತ್ರಣದ ಮೇರೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 11ತಿಂಗಳ ವರೆಗೆ ಸ್ಟೈಪಂಡ್ ಪಡೆದು ತರಬೇತಿ ಪಡೆಯುತ್ತಾರೆ. ಹೊಸೂರಿನ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ಡಿಪ್ಲೋಮಾ ತರಬೇತಿ ಪಡೆಯುವ ನಂತರ ಅವರು ಸ್ವಯಂ ಉದ್ಯೋಗ, ಸರ್ಕಾರಿ, ಅರೆಸರ್ಕಾರಿ ಕೆಲಸಗಳಿಗೆ ನೇಮಕವಾಗಬಹುದು.
ಇಲ್ಲಿಯ67 ಎಕರೆಯ ವಿಶಾಲ ಪ್ರದೇಶದಲ್ಲಿ ತರಬೇತಿ, ಪ್ರಾಯೋಗಿಕ ಅನುಭವ ಪಡೆದು ಹೊರನಡೆದವರಲ್ಲಿ ಬಹುತೇಕರು ಸಾಧಕರು, ಪ್ರಸಿದ್ಧರು ಆಗಿರುವುದು ಈ ತರಬೇತಿ ಕೇಂದ್ರದ ಹೆಗ್ಗಳಿಕೆ.
ಈ ತರಬೇತಿ ಪಡೆಯಲಿಚ್ಛಿಸುವವರು ರೈತ ಕುಟುಂಬದವರಾಗಿರಬೇಕು, ಕನಿಷ್ಟ ಮೆಟ್ರಿಕ್ ಓದಿರಬೇಕು ಎನ್ನುವ ಕಡ್ಡಾಯ ನಿಯಮ ಬಿಟ್ಟರೆ ರಾಜ್ಯದ ಯಾವುದೇ ವ್ಯಕ್ತಿ ಇಲ್ಲಿ ವಿದ್ಯಾರ್ಥಿಯಾಗಬಹುದು. ವಿಶೇಶವೆಂದರೆ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಿಗಾಗಿಯೇ ಇರುವ ಈ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಅತಿ ಕಡಮೆ ಆಕಾಂಕ್ಷಿಗಳೆಂದರೆ ಉತ್ತರಕನ್ನಡ ಜಿಲ್ಲೆಯವರು.
ವಿಶಾಲ ಕ್ಯಾಂಪಸ್,ವಿಶೇಶ ವ್ಯವಸ್ಥೆ, ಎಲ್ಲಾ ಅನುಕೂಲಗಳ ನಡುವೆ ಕೂಡಾ ಸ್ಥಳಿಯರು ಕಡಿಮೆ ಆಸಕ್ತರಾಗಲು ಕಾರಣ ಈ ಸಂಸ್ಥೆ ತೆರೆಮರೆಯಲ್ಲಿರುವುದು. ರೈತರ ಮಕ್ಕಳು, ಆಸಕ್ತ ವಿದ್ಯಾರ್ಥಿಗಳು ಈ ತರಬೇತಿ ಪಡೆದರೆ ಅದು ತೋಟಗಾರಿಕೆ ಕ್ಷೇತ್ರದ ಹೆಬ್ಬಾಗಿಲು ಪ್ರವೇಶಿಸಿದಂತೆ ಪ್ರತಿವರ್ಷಕ್ಕೊಂದರಂತೆ ಡಿಪ್ಲೊಮಾ ಪಡೆದು ಇಲ್ಲಿಂದ ಹೊರಹೋದವರು ಮತ್ತೆ ಮರಳುವಾಗ ಸಾಧಕರು, ನೌಕರರು ಆಗಿ ಮರಳಿ ಬರುವ ಈ ತರಬೇತಿ ಕೇಂದ್ರ ಸ್ಥಳಿಯರಿಗೇ ದೂರವಾಗಿರುವುದು ಅಚ್ಚರಿಯ ವಿಷಯ.
ಈ ಸಂಸ್ಥೆಯ ಮಾಹಿತಿಗಾಗಿ 08389298032 ಸಂಖ್ಯೆಯನ್ನು ಸಂಪರ್ಕಿಸಬಹುದು. ತೋಟಗಾರಿಕಾ ಬೆಳೆಗಳು,ಮಾರುಕಟ್ಟೆ ಕೇಂದ್ರಗಳು, ಪೂರಕ ಪರಿಸರ ಇರುವ ಸಿದ್ದಾಪುರದ ಹೊಸೂರು ತೋಟಗಾರಿಕಾ ತರಬೇತಿ ಕೇಂದ್ರ ರಾಜ್ಯದ ಅನೇಕ ತರಬೇತಿ ಕೇಂದ್ರಗಳಿಗಿಂತ ಭಿನ್ನ ಎನ್ನುವ ಹೆಗ್ಗಳಿಕೆಯ ಸ್ಥಾನ-ಮಾನ ರಾಜ್ಯಮಟ್ಟದಲ್ಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *