ಮಧು ಬಂಗಾರಪ್ಪ,ಶಾರದಾ ನಾಯ್ಕ ಸೇರಿ ಕೆಲವರು ಕಾಂಗ್ರೆಸ್‍ಗೆ

ರಾಷ್ಟ್ರರಾಜಕಾರಣದಲ್ಲಿ ಸುಳ್ಳು,ವೈಭವೀಕರಣ,ಪ್ಯಾಷಿಸ್ಟ್ ಮನೋಭಾವ ವಿಪರೀತವಾಗುತ್ತಿರುವ ಸತ್ತ್ಯೋತ್ತರ ಕಾಲದಲ್ಲಿ ಕರ್ನಾಟಕದಲ್ಲಿ ಕಟೀಲ್ ಬಿ.ಜೆ.ಪಿ.ರಾಜ್ಯಾಧ್ಯಕ್ಷರಾಗಿರುವುದು, ಶಾಸಕರನ್ನು ಖರೀದಿಸಿ ಉಪಚುನಾವಣೆ ಮಾಡುತ್ತಿರುವುದು. ಬಿ.ಜೆ.ಪಿ.ಯಲ್ಲಿ ಆರೆಸ್ಸೆಸ್ ಮತ್ತು ಬಹುಸಂಖ್ಯಾತರ ಕಾಳಗ,ಅಲ್ಲಲ್ಲಿ ವಲಸೆ, ಇಂಥ ಬೆಳವಣಿಗೆಗಳ ನಂತರ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಬೆಳವಣಿಗೆಗಳಿಗೆ ತಕ್ಕಂತೆ ಮಾಜಿಶಾಸಕಮಧುಬಂಗಾರಪ್ಪ,ಶಾರದಾ ನಾಯ್ಕ ಸೇರಿದಂತೆ ಕೆಲವರು ಕಾಂಗ್ರೆಸ್ ಕಡೆವಾಲುತ್ತಿರುವ ಸುದ್ದಿ ವೈರಲ್ ಆಗುತ್ತಿದೆ.
ಒಂದುಕಾಲದಲ್ಲಿ ಕಾಂಗ್ರೆಸ್‍ನ ಭದ್ರ ಕೋಟೆಗಳಾಗಿದ್ದ ಶಿವಮೊಗ್ಗ ಮತ್ತು ಉತ್ತರಕನ್ನಡವನ್ನು ಬಿ.ಜೆ.ಪಿ.ಜಿಲ್ಲೆಗಳನ್ನಾಗಿಸುವಲ್ಲಿ ಮಾಜಿಮುಖ್ಯಮಂತ್ರಿಗಳಾದ ಬಂಗಾರಪ್ಪ,ಕುಮಾರಸ್ವಾಮಿ,ರಾಮಕೃಷ್ಣ ಹೆಗಡೆಯವರ ಪಾತ್ರಗಳಿವೆ.
10 ಜನ ಶಾಸಕರ ರಾಜ್ಯ ಬಿ.ಜೆ.ಪಿಯನ್ನು 70 ಶಾಸಕರಿಗೇರಿಸಿದ್ದ ಬಂಗಾರಪ್ಪ ಆ ಪಕ್ಷದ ರಿಮೋಟ್ ಕಂಟ್ರೋಲರ್ ಆರೆಸ್ಸೆಸ್ಸಿನಿಂದ ಹೊಡೆತ ತಿಂದ್ದದ್ದು ಹಳೆ ಕತೆ. ಈ ವಿದ್ಯಮಾನಕ್ಕೂ ಮೊದಲು ಬಳಲಿದ್ದ ಬಿ.ಜೆ.ಪಿ.ಗೆ ಶಕ್ತಿ ತುಂಬಿದವರು ಅಂದಿನ ಜೆ.ಡಿ.ಯು.ಮುಖಂಡ ರಾಮಕೃಷ್ಣ ಹೆಗಡೆ ನಂತರ ಕುಮಾರಸ್ವಾಮಿ ಆಡಳಿತದ ನಂತರ ರಾಜ್ಯದಲ್ಲಿ ಬಿ.ಜೆ.ಪಿ.ಅಧಿಕಾರದ ರುಚಿ ನೋಡಲು ಸಾಧ್ಯವಾಗಿದ್ದು.
ಹೀಗೆ ಅನೇಕ ಬದಲಾವಣೆ, ಅವಸ್ಥಾಂತರಗಳ ನಂತರ ಕೂಡ ಅನೈತಿಕಮಾರ್ಗಗಳ ಮೂಲಕ ಅಧಿಕಾರಕ್ಕೇರಿದ ಶಿಸ್ತಿನ ಪಕ್ಷ ಬಿ.ಜೆ.ಪಿ. ರಾಜ್ಯ ಸೇರಿದಂತೆ ಹಲವೆಡೆ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಿ ಕಾಂಗ್ರೆಸ್ ವಿರೋಧವೊಂದರಿಂದಲೇ ಶಕ್ತಿಗಳಿಸಿಕೊಂಡಿದ್ದು ರಾಜ್ಯ ಮತ್ತು ದೇಶದ ರಾಜಕೀಯ ಚರಿತ್ರೆಯ ಭಾಗ.
ಈಗ ಮತ್ತೆ ಬಿ.ಜೆ.ಪಿ.ಕಾಂಗ್ರೆಸ್,ಜನತಾದಳಗಳಮುಖಂಡರು,ಶಾಸಕರನ್ನು ಮುಟ್ಟಿನೋಡುವ ಆಟ ಶುರುಮಾಡಿದೆ. ಈ ಆಟಕ್ಕೆ ಒಪ್ಪದ,ಈ ಆಟದ ವಿರೋಧಿಗಳಾದ ರಾಜುಕಾಗೆ ಸೇರಿದಂತೆ ಕೆಲವರು ಆಡಳಿತಾರೂಢ ಬಿ.ಜೆ.ಪಿ.ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದು ಹೊಸ ಬೆಳವಣಿಗೆ.
ಇದೇ ಸಮಯದಲ್ಲಿ ಸಿದ್ಧರಾಮಯ್ಯ ವಿರೋಧಿಪಕ್ಷದ ನಾಯಕರಾಗಿರುವುದು,ಕಾಂಗ್ರೆಸ್ ಹಿಡಿತ ಸಾಧಿಸಿರುವುದು ಒಂದೆಡೆಯಾದರೆ ಬಿ.ಜೆ.ಪಿ.ಯಿಂದ ರಾಜಕೀಯ ವೈರಿಯಾಗಿ ಹೊಡೆತ ತಿಂದಿರುವ ಡಿ.ಕೆ.ಶಿವಕುಮಾರ ಕುಟುಂಬ ಬಿ.ಜೆ.ಪಿ.ಅವಸಾನಕ್ಕೆ ಪಣತೊಟ್ಟಿದೆಯಂತೆ.
ಈ ಬೆಳವಣಿಗೆಯ ಭಾಗವಾಗಿ ಬಿ.ಜೆ.ಪಿ.ವಿರೋಧಿಗಳನ್ನು ಕ್ರೋಢೀಕರಿಸುತ್ತಿರುವ ಕಾಂಗ್ರೆಸ್ ನಾಯಕರು ಮೊದಲ ಹಂತದಲ್ಲಿ ಮಾಜಿ ಶಾಸಕರಾದ ಮಧುಬಂಗಾರಪ್ಪ ಮತ್ತು ಶಾರದಾ ನಾಯ್ಕರಿಗೆ ಗಾಳ ಹಾಕಿದ್ದಾರಂತೆ! ಮಧು ಬಂಗಾರಪ್ಪ ಮಲೆನಾಡು,ಕರಾವಳಿ,ಉತ್ತರಕರ್ನಾಟಕ ಭಾಗದಲ್ಲೂ ಹೆಸರಿರುವ ನಾಯಕ,ಈ ಹಿಂದೆ ಜಾ.ದಳದ ಮಲೆನಾಡು,ಕರಾವಳಿ ಜವಾಬ್ಧಾರಿಗಳನ್ನೂ ಮಧು ನಿಭಾಯಿಸಿರುವ ಅನುಭವ ಹೊಂದಿದ್ದಾರೆ. ಶಾರದಾ ನಾಯ್ಕ ಉತ್ತರಕರ್ನಾಟಕ,ಹೈದ್ರಾಬಾದ್ ಕರ್ನಾಟಕದ ಮತದಾರರು,ಮುಖಂಡರ ಮೇಲೆ ಪ್ರಭಾವ ಬೀರಬಹುದಾದ ಮಹಿಳೆ. ಜನತಾದಳದ ಈ ಮುಖಂಡರನ್ನು ಕಾಂಗ್ರೆಸ್ ಗೆ ತರುವ ಮೂಲಕ ಮಲೆನಾಡು,ಕರಾವಳಿ, ಬಯಲುಸೀಮೆಗಳಲ್ಲಿ ಪಕ್ಷಗಟ್ಟಗೊಳಿಸುವ ಉದ್ಧೇಶ ಹೊಂದಿರುವ ಕಾಂಗ್ರೆಸ್ ಗೆ ಬಿ.ಜೆ.ಪಿ.,ಜನತಾದಳಗಳಿಗೆ ಸೆಡ್ಡುಹೊಡೆಯಲೂ ಇದೇ ಅಂಶಗಳು ಅವಶ್ಯ.
ಈ ಹಿನ್ನೆಲೆಯಲ್ಲಿ ಸೊರಬದ ಸಹೋದರರು,ಪಕ್ಷಗಳ ಮೇಲಾಟದ ಸೂತ್ರದಂತೇ ಮಧು ಮತ್ತು ಶಾರದಾರನ್ನು ಕಾಂಗ್ರೆಸ್‍ಗೆ ಕರೆತಂದು ಹೊಸ ಆಟ ಆಡುವ ಸೂತ್ರ ರಚಿಸಿದ್ದಾರೆ. ಈ ತಂತ್ರದ ಭಾಗವಾಗಿ ಮತ್ತಷ್ಟು ಮುಖಂಡರು ಬಿ.ಜೆ.ಪಿ., ಜನತಾದಳಗಳಿಂದ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಸಮ್ಮಿಶ್ರ ಮೈತ್ರಿಯ ನಂತರ ಕಾಂಗ್ರೆಸ್ ಜೊತೆ ದೋಸ್ತಿ ಬೆಳೆಸಿಕೊಂಡಿರುವ ಕೆಲವರು ಜನತಾದಳದಿಂದ ಕಾಂಗ್ರೆಸ್ ಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.
ಜಾದಳ ಬಿ.ಜೆ.ಪಿ.ಜೊತೆ ಮತ್ತೆ ಸಂಖ್ಯ ಬೆಳೆಸಿದರೆ ಆಗ ಜನತಾದಳ,ಬಿ.ಜೆ.ಪಿ. ದೋಸ್ತಿಯನ್ನು ವಿರೋಧ ಮಾಡುವ ಕೆಲವು ಮುಖಂಡರು ಬಿ.ಜೆ.ಪಿ., ಜಾ.ದಳಗಳಿಂದ ಕಾಂಗ್ರೆಸ್ ಸೇರಲಿದ್ದಾರೆ.ಈ ಬೆಳವಣಿಗೆಗಳ ಲಾಭ ಪಡೆದು ಮತ್ತೆ ಮುಖ್ಯಮಂತ್ರಿಯಾಗಲು ಯೋಜಿಸಿರುವ ಸಿದ್ಧರಾಮಯ್ಯ ನಾಯಕತ್ವಕ್ಕೆ ದಿನೇಶ್ ಗುಂಡೂರಾವ ಮತ್ತು ಡಿ.ಕೆ.ಶಿವಕುಮಾರ ಹೆಗಲುಕೊಟ್ಟಿದ್ದಾರೆ. ಹಾಗಾಗಿ ಜಾದಳದ ಸ್ನೇಹದಿಂದ ಕಳೆದುಕೊಂಡ ಗೌರವ,ಶಕ್ತಿಯನ್ನು ಜಾ.ದಳ, ಬಿ.ಜೆ.ಪಿ.ಗಳವಿರೋಧದಿಂದ ಗಳಿಸುವ ತಂತ್ರದ ಅಂಗವಾಗಿ ಮಧು,ಶಾರದಾ ನಾಯ್ಕ ರೊಂದಿಗೆ ಕೆಲವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *