ವಿಧಾನಸಭಾಧ್ಯಕ್ಷರ ಮಗಳ ಮದುವೆ ಆರತಕ್ಷತೆಯಲ್ಲಿ ಆಪ್ತರೇ ನಾಪತ್ತೆ! ಕಾಗೇರಿ ಪಲಾಯನಕ್ಕೆ ಪೂರ್ವಭಾವಿ ಸಿದ್ಧತೆಯ ನಿರೀಕ್ಷೆ?

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈ ವಾರ ಎರಡು ವಿಶೇಶ ಸಂದರ್ಭಗಳು ಸಾರ್ವಜನಿಕ ಆಸಕ್ತಿಯ ಕೇಂದ್ರಗಳಾಗಿದ್ದವು.
ಮೊದಲನೆಯದು ಯಲ್ಲಾಪುರ ಕ್ಷೇತ್ರದ ಉಪಚುನಾವಣೆ,
ಎರಡನೆಯದು ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಆರತಕ್ಷತೆ.
ಯಲ್ಲಾಪುರ ಉಪಚುನಾವಣೆಯನ್ನು ಪ್ರತಿಷ್ಠೆಯಪ್ರಶ್ನೆ ಯನ್ನಾಗಿಸಿಕೊಂಡ ರಾಜ್ಯ ಬಿ.ಜೆ.ಪಿ. ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರೀಕ್ಷೆಯಂತೆ ಬಹುಮತದಿಂದ ಯಲ್ಲಾಪುರ ಕ್ಷೇತ್ರವನ್ನು ವಶಪಡಿಸಿಕೊಂಡಿವೆ.
ಈ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಸ್ಫರ್ಧಿಸುವುದು, ಗೆಲ್ಲುವುದು ಪೂರ್ವನಿಯೋಜಿತವಾಗಿತ್ತು. ಇವರ ಎದುರಾಳಿ ಭೀಮಣ್ಣ ನಾಯ್ಕ ಕಾಂಗ್ರೆಸ್ ನ ಅನಿವಾರ್ಯ ಆಯ್ಕೆಯಾಗಿದ್ದರೂ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಮಗ ಅಥವಾ ತಮ್ಮ ತಲೆದಂಡದ ಬದಲು ಭೀಮಣ್ಣ ನಾಯ್ಕರನ್ನು ಬಳಸಿಕೊಂಡರು ಎನ್ನುವ ಆರೋಪಗಳಿವೆ.
ಅದೇನೇ ಇರಲಿ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಮತ್ತು ಯಲ್ಲಾಪುರ ಕ್ಷೇತ್ರದಲ್ಲಿ ಕೂಡಾ ಕಾಂಗ್ರೆಸ್ ವಿರೋಧದ ಅಲೆ ನಡುವೆ ಅರ್ಧ ಲಕ್ಷ ಮತಗಳನ್ನು ಬಾಚಿರುವುದು ಅವರ ವೈಯಕ್ತಿಕ ಸಾಮಥ್ರ್ಯ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಮತಗಳ ದೆಸೆಯಿಂದಾಗಿ ಎನ್ನುವುದೂ ಸಾಬೀತಾಗಿದೆ.
ಕಾಂಗ್ರೆಸ್ ಬಹುಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಪರವಾಗಿದೆಯಾದರೂ ಅದು ಭಾರತೀಯ ಕಾಯಸ್ಥ ಜಾತಿ, ಉಚ್ಛವರ್ಗದ ಪರಿವಾರದ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಹಾಗಾಗಿ ಕಾಂಗ್ರೆಸ್ ನಲ್ಲಿ ಭೀಮಣ್ಣ, ಬಂಗಾರಪ್ಪ, ಸಿದ್ಧರಾಮಯ್ಯ ತರಹದವರು ಒಳಏಟುಗಳ ಜೊತೆಗೆ ಹೊರಏಟುಗಳಿಗೂ ಎದೆಯೊಡ್ಡುವ ಅನಿವಾರ್ಯತೆ ಇದೆ.
ಇಂಥ ಎದೆಗಾರರು ಇರದಿದ್ದರೆ ಬಿ.ಜೆ.ಪಿ. ಮನಸ್ಥಿತಿಯಾದ ಮನುವಾದ ಮತ್ತು ಕಾಂಗ್ರೆಸ್ ನ ಮೃಧು ಹಿಂದುತ್ವವಾದದ ಅವಕಾಶವಾದಿ ಮನುವಾದಿಗಳು ವ್ಯವಸ್ಥೆಯನ್ನು ಹದಗೆಡಿಸಿಬಿಡುತ್ತಾರೆ. ಹಾಗಾಗಿ ಸೋಲು, ನೋವು, ವೈಯಕ್ತಿಕ ಹಾನಿಗಳ ನಡುವೆ ಇಂಥವರು ನಾಯಕತ್ವದ ನೊಗ ಹೊರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಿಲ್ಲೆಯಲ್ಲಿ ಜಾದಳ, ಕಾಂಗ್ರೆಸ್ ಗಳ ಸೋಲು ಬರಲಿರುವ ಗೆಲುವುಗಳಿಗೆ ಅಡಿಪಾಯ.
ಕಾಗೇರಿ ಮಗಳ ಆರತಕ್ಷತೆ-
ಇದೇವಾರ ಶಿರಸಿ ಕಾಗೇರಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಗೋಳಿ ದೇವಸ್ಥಾನದಲ್ಲಿ ಆರತಕ್ಷತೆಗಳು ನಡೆದಿವೆ.
ಕ್ಷೇತ್ರ-ರಾಜ್ಯದ ಪ್ರಮುಖರು, ಜನಸಾಮಾನ್ಯರಾದಿಯಾಗಿ ಎಲ್ಲರನ್ನೂ ಆಹ್ವಾನಿಸಿದ್ದ ಕಾಗೇರಿ ಪರಿವಾರ ತಮ್ಮ ಅಂತಸ್ಥಿಗೆ ತಕ್ಕಂತೆ ತಮ್ಮ ಸರಳತೆ, ಸಜ್ಜನಿಕೆಗಳ ಆರೋಪಗಳನ್ನು ಸುಳ್ಳು ಮಾಡುವಂತೆ ಕೌಟುಂಬಿಕ ಕಾರ್ಯಕ್ರಮ ಮಾಡಿದ್ದಾರೆ.
ಆದರೆ ಈ ಬಾರಿ ಕಾಗೇರಿಯವರ ಪರಮಾಪ್ತರೆನಿಸಿಕೊಂಡ ಕೆಲವು ಬಿ.ಜೆ.ಪಿ. ಪ್ರಮುಖರು, ಅವರ ಪಕ್ಷ, ಸ್ನೇಹಿತವಲಯದ ಕೆಲವು ಪ್ರಮುಖರು ಕಾಗೇರಿಯವರ ಈ ಅದ್ಧೂರಿ ಸಮಾರಂಭಗಳಲ್ಲಿ ಸ್ವಾಗತಕಾರರಾಗಬೇಕಿದ್ದವರು ಗೈರು ಹಾಜರಾಗಿರುವುದು ಚರ್ಚೆಯ ವಿಷಯವಾಗಿದೆ.
ವಿಧಾನಸಭಾ ಅಧ್ಯಕ್ಷರು ತಮ್ಮ ಖಾಸಗಿ ಕಾರ್ಯಕ್ರಮದಲ್ಲಿ ತಮಗೆ ಬೇಕಾದವರನ್ನು ಕರೆಯಿಸಿಕೊಳ್ಳಲು ಸಂಪೂರ್ಣ ಸ್ವತಂತ್ರರು. ಆದರೆ ಅವರ ಗೆಲುವಿಗಾಗಿ ನಡೆಸಿದ ಮೆರವಣಿಗೆಯ ಅಂಬಾರಿ ಹೊತ್ತ ಭಕ್ತರೇ ಅವರ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರುವುದು ಸಾರ್ವಜನಿಕ ಚರ್ಚೆಯನ್ನಂತೂ ಹುಟ್ಟುಹಾಕಿದೆ.
ಶಿರಸಿ ಕ್ಷೇತ್ರದಲ್ಲಿ ಕಳಪೆಕಾಮಗಾರಿ,ಅಕ್ರಮ ಮದ್ಯ ಮಾರಾಟ, ಇಸ್ಫೀಟ್ ಜುಗಾರಿ ಸೇರಿದಂತೆ ಸಕ್ರಮವಲ್ಲದ ಅನೇಕ ಕೆಲಸಗಳನ್ನು ತಮ್ಮವರು, ತಮ್ಮವರ ಆಪ್ತರ ಮೂಲಕ ಮಾಡಿಸುತ್ತಿರುವ ಕಾಗೇರಿ ಪರಿವಾರ ಅನೇಕ ವರ್ಷಗಳ ರಾಜಕೀಯ ಪ್ರಯತ್ನದ ಸಹಚರರನ್ನು ಸಾರ್ವಜನಿಕ,ಖಾಸಗಿ ಕಾರ್ಯಕ್ರಮಗಳಲ್ಲಿ ತೆರೆಮೆರೆಗೆ ಸರಿಸಿ ಸಂಘದ ಕಾರ್ಯಾಚರಣೆ ಪ್ರಾರಂಭಿಸಿರುವ ಘನ ಉದ್ಧೇಶಗಳಿಗಾಗಿ ಕಾಗೇರಿ ಮೊಟ್ಟಮೊದಲ ಬಾರಿ ತಮ್ಮ ಆಪ್ತರನ್ನು ದೂರಸರಿಸಿ, ಶಿರಸಿ ಕ್ಷೇತ್ರದಿಂದ ಪಲಾಯನ ಗೈಯುವ ಯೋಜನೆ ಪ್ರಾರಂಭಿಸಿದ್ದಾರಾ ಎನ್ನುವ ಅನುಮಾನಗಳ ಹಿನ್ನೆಲೆಯಲ್ಲಿ ಸಂಘದ ಲಾಭಕೋರರು,ಕಾಗೇರಿ ಆಪ್ತರು ಅನ್ಯರನ್ನು ಹೊರಗಿಟ್ಟು ವ್ಯವಹರಿಸುತ್ತಿರುವ ಬಗ್ಗೆ ಅವರ ಪಕ್ಷದ ವಲಯದಲ್ಲೇ ಅಸಮಾಧಾನವಂತೂ ಮುಚ್ಚಿದ ಕೆಂಡದಂತೆ ಬೇಯತೊಡಗಿರುವ ವಿದ್ಯಮಾನವಂತೂ ನಿಗೂಢವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

Latest Posts

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ ಕುಡಿಯಾಗಿದ್ದ ರಮಾನಂದ ನಾಯಕ ಸಾಹಿತ್ಯ-ಸಾಂಸ್ಕೃತಿಕ ಮನಸ್ಸಿನ ತೂಕದ ವ್ಯಕ್ತಿಯಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಇಂದು ಬೆಂಗಳೂರಿನಲ್ಲಿ ನಿಧನರಾದ ಅವರ ಶವ ಸಂಸ್ಕಾರ ಅವರ ಹುಟ್ಟೂರು ಹಿಚ್ಕಡದಲ್ಲಿ ಶುಕ್ರವಾರ ನಡೆಯಲಿದೆ. ಹಿರಿಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *