ವಿಶ್ವ ಮಾನ್ಯತೆ ಗಳಿಸಿದ ಮಾಜಿ ಜವಾನ ವಿಶ್ವನಾಥ ಶೇಟ್ ವಾಲ್ಮಿಕಿಯಾದ ಕತೆ

ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ 1964 ರಲ್ಲಿ ಅಶೋಕ ಪ್ರೌಢ ಶಾಲೆ ಪ್ರಾರಂಭವಾಯಿತು. ಮೊದಲ ಎಸ್.ಎಸ್.ಎಲ್.ಸಿ. ಬ್ಯಾಚ್ ಮುಗಿದಿತ್ತಷ್ಟೆ. 1967 ರಲ್ಲಿ ವಿದ್ಯಾರ್ಥಿಯಾಗಿದ್ದ ಮೆಣಸಿನಮನೆಯ ವಿಶ್ವನಾಥ ಶೇಟ್ ಆ ವರ್ಷ ನಿವೃತ್ತರಾದ ಜವಾನರೊಬ್ಬರ ಜಾಗಕ್ಕೆ ಬಂದರು.
ಅಂಥ ಅನಿವಾರ್ಯತೆಯ ಬಡತನದಲ್ಲಿ ಬೆಳೆದ ಶೇಟ್ ಓದಿದ್ದರೆ ದೊಡ್ಡ ನೌಕರರಾಗುತ್ತಿದ್ದರೇನೋ ಆದರೆ, ಮೆಟ್ರಿಕ್ ಓದಿ ಜವಾನರಾದ ವಿಶ್ವನಾಥ ಶೇಟ್ ವಿದ್ವಾಂಸರಾದರು. ಹೀಗೆ ಸಣ್ಣ ಕತೆಯಂತೆ ಮುಗಿಸಬಹುದಾದ ವಿಶ್ವನಾಥ ಶೇಟ್ ರ ಚರಿತ್ರೆ ಎಂಥವರಿಗೂ ಮಾದರಿ.
ತಾಯಿಯ ಮನೆಯಲ್ಲಿ ಮಾವಂದಿರು ಕಲಾವಿದರಾಗಿದ್ದರು.ಅವರೊಂದಿಗೆ ಆಟ ನೋಡುವ ,ಕುಣಿಯುವ ಚುರುಕಿನ ವಿಶ್ವನಾಥ್ ಶೇಟ್ ಮನೆಯ ಬಡತನದ ಕಾರಣಕ್ಕೆ ಸಣ್ಣ ವಯಸ್ಸಿನಲ್ಲಿ ದುಡಿಮೆ ಪ್ರಾರಂಭಿಸಿದ್ದರು.
ಹೀಗೆ ಸಮೀಪದ ಸಣ್ಣ ನೌಕರಿ ಮಾಡದಿದ್ದರೆ ಅನಿವಾರ್ಯತೆಯಲ್ಲಿ ಕೂಲಿಗೆ ಹೋಗಬೇಕಿತ್ತು. ಕೂಲಿಮಾಡಿ ನೋಯುವುದಕ್ಕಿಂತ ಇಲ್ಲಿ ಜವಾನನಾಗುವುದೇ ಲೇಸು ಎಂದು ಬಗೆದ ಮೆಣಸಿಮನೆಯ ವಿಶ್ವನಾಥ ಅಶೋಕ ಪ್ರೌಢ ಶಾಲೆಯ ಜವಾನನಾಗಿ ನಿವೃತ್ತರಾಗಿದ್ದರೆ ಅವರ ಪ್ರತಿಭೆ,ಸಾಮಥ್ರ್ಯ ಬೆಳಕಿಗೆ ಬರುತ್ತಿರಲಿಲ್ಲ. ಆದರೆ ಅಶೋಕಪ್ರೌಢ ಶಾಲೆಯ ಸಿಬ್ಬಂದಿಯಾಗಿ ಪ್ರಭಾರಿ ಗೃಂಥಪಾಲಕರಾಗಿ ಕೆಲಸ ಮಾಡಿದ ವಿಶ್ವನಾಥ ಶೇಟ್ ರನ್ನು ಪುಸ್ತಕಗಳು ಬೆಳಸಿದವು. ಅವರು ಓದಿದ ಪುಸ್ತಕಗಳು ಅಸಂಖ್ಯ ಆದರೆ ಅವರು ಬರೆದ 7-8 ಪುಸ್ತಕಗಳಲ್ಲಿ ಬಹುತೇಕ ಎಲ್ಲವೂ ಕೊಂಕಣಿ ಭಾಷೆಯಲ್ಲಿರುವುದು ವಿಶೇಶ.
1995 ರಲ್ಲಿ ಮೊದಲು ಕೊಂಕಣಿ ಯಕ್ಷಗಾನ ಬರೆದ ನಂತರ 1997 ರಿಂದ ಸಾಹಿತ್ಯ ಕೃಷಿ ಮುಂದುವರಿಸಿದ ಇವರು ಯಕ್ಷಗಾನ ಆಭರಣಗಳಿಗೆ ಸಂಬಂಧಿಸಿದ ಆಹಾರ್ಯ ಕಮ್ಮಟ ಬರೆದ ನಂತರ ಕೊಂಕಣಿ ರಾಮಾಯಣ ಶ್ರೀರಾಮ ಚರಿತ ಬರೆದು ವಿಶ್ವ ಕೊಂಕಣಿ ಸಮ್ಮೇಳದಲ್ಲಿ ಸನ್ಮಾನಿತರಾದರು.
ಯಕ್ಷಗಾನ ಆಭರಣ ತಯಾರಕರು,ಯಕ್ಷಗಾನ ಕಲಾವಿದರು. ಕೊಂಕಣಿ ಗಮಕ ಹಾಡುತ್ತಾ,ಅರ್ಥಧಾರಿಯಾಗಿ ಸಾಹಿತಿ,ಯಾಗಿ ಬಹುಮುಖಿಯಾಗಿ ಪ್ರಕಟವಾದ ವಿಶ್ವನಾಥ ಶೇಟ್ ರಾಜ್ಯೋತ್ಸವ ಪ್ರಶಸ್ತಿ ಪಡೆದರು.
ವಿಶ್ವಕೊಂಕಣಿ ಸಮ್ಮೇಳನದಲ್ಲಿ ವಸ್ತು ಪ್ರದರ್ಶನಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವ ಪಡೆದರು. ಮೂಲತ: ಕೃಷಿ ಕೂಲಿ,ಬಂಗಾರದ ಕೆಲಸ ಮಾಡುವ ಕುಟುಂಬದ ವಿಶ್ವನಾಥ ಶೇಟ್ ಕುಸುರಿ ಕೆಲಸ, ಮರದ ಕೆತ್ತನೆ ಕೆಲಸಗಳಲ್ಲೂ ಸಿದ್ಧಹಸ್ತರು. ಅನಿವಾರ್ಯತೆ, ಹಸಿವು ಎಲ್ಲವನ್ನೂ ಕಲಿಸುತ್ತದೆ ಎನ್ನುವ ಶೇಟ್ ಜವಾನನಾಗಿ ನಂತರ ಜಗದೆತ್ತರಕ್ಕೆ ಪ್ರಸಿದ್ಧರಾದ ಬಹುಮುಖಿ 7 ದಶಕದ ಹಿರಿಯ ಜೀವವಾಗಿರುವ ವಿಶ್ವನಾಥ ಶೇಟ್ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪ್ರತಿಭಾವಂತ.
ಮಕ್ಕಳು ಹೊರ ಊರುಗಳಲ್ಲಿದ್ದರೂ ಇಲ್ಲೇ ನೆಲೆಸಿ,ಹಾರ್ಸಿಕಟ್ಟಾ ವೇ ತಮ್ಮ ಜನ್ಮಭೂಮಿ,ಕರ್ಮಭೂಮಿ ಎನ್ನುವ ಶೇಟ್ ರನ್ನು ಹುಡುಕಿ ಬಂದ ಗೌರವ, ಪ್ರಶಸ್ತಿ, ಪುರಸ್ಕಾರಗಳೂ ಅನೇಕ. ಭಾರತೀಯ ತತ್ವಶಾಸ್ತ್ರ,ಶಿಲ್ಫಶಾಸ್ತ್ರ, ಆಭರಣ ಶಾಸ್ತ್ರಗಳ ಮೇಲೆ ಮಾತನಾಡುವ ವಿರಳ ವಿದ್ವತ್ತಿನ ವಿಶ್ವನಾಥ ಶೇಟ್ ಕುಗ್ರಾಮದಲ್ಲಿ ಹುಟ್ಟಿ ಹಾರ್ಸಿಕಟ್ಟಾದ ಜೊತೆಗೇ ತಾಲೂಕು, ಉತ್ತರಕನ್ನಡವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಪ್ರತೀಭಾವಂತ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *