ಸಂಪಾದಕರ ಅನುಭವ ಕಥನ ಸ್ಮೃತಿಯಾಗಿ ಹರಿದಾಗ……..

ಊರು,ಸಂಬಂಧ,ಜಾತಿ,ಧರ್ಮ ನಿರುಪಯುಕ್ತ ಎನ್ನುವ ಅನುಭವವಾಗಿ, ಅವಮಾನ,ಅಪಮಾನವಾದಾಗಲೆಲ್ಲಾ ಛಲ ಜಾಗೃತವಾಗುತಿತ್ತು. ಸೋಲುವ, ಕಳೆದುಕೊಳ್ಳುವ ಭಯಗಳಿಂದ ಶ್ರಮದಿಂದ ಸಾಧಿಸುವುದು ರೂಢಿಯಾಯಿತು ಎಂದು ತಮ್ಮ ಗೆಲುವಿನ ಗುಟ್ಟನ್ನು ಹೇಳಿದವರು ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ.
ಸಿದ್ಧಾಪುರದ ಶಂಕರಮಠದಲ್ಲಿ ನಡೆದ ಗಣೇಶ್ ಹೆಗಡೆ ಸ್ಮೃತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ನಾನು ಶಾಲಾ-ಕಾಲೇಜುಗಳಲ್ಲಿ 35-36 ಪ್ರತಿಶತಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿರಲಿಲ್ಲ. ನನ್ನ ಓರಗೆಯವರೆಲ್ಲಾ ಅಧಿಕಾರಿಗಳಾಗಿ ಅವರ ಸ್ವಂತ ವಾಹನಗಳಲ್ಲಿ ಠೀವಿಯಿಂದ ಊರಿಗೆ ಬರುತಿದ್ದಾಗ ಬಡ ಮಾಸ್ತರರ ದಡ್ಡಮಗನಾಗಿ ನಾನು ಒಳಗೊಳಗೆ ಕುಸಿಯುತಿದ್ದೆ.
ಊರು, ನೆರೆಹೊರೆಯವರು, ಓರಿಗೆಯವರು ಎಲ್ಲರ ಎದುರು ಸಣ್ಣವನಾಗಿ ಬದುಕುವುದು ಕಷ್ಟವಾಗಿ ಊರು ಬಿಟ್ಟೆ. ಅಲ್ಲಿಂದ ಮಾವಿನಗುಂಡಿ, ಲಿಂಗನಮಕ್ಕಿ ನಿರ್ಮಾಣ ಕೆಲಸಗಾರನಾಗಿ, ಡಿಸೇಲ್ ತುಂಬುವ ಹುಡುಗನಾಗಿ ಕೆಲಸ ಪ್ರಾರಂಭಿಸಿದೆ. ಅಲ್ಲಿಂದ ಕಾರವಾರಕ್ಕೆ ಪತ್ರಿಕೆ ಹಂಚುವ ಹುಡುಗನಾಗಿ ಹೋದೆ. ಸಿನೆಮಾ ಮಂದಿರ,ಪತ್ರಿಕೆ, ಫೊಟೊಗ್ರಾಫಿ ಹೀಗೆ ದುಡಿಯುತ್ತಾ ಬಾಡಿಗೆ ರೂಮಿನ ಸೆಕೆ,ಸೊಳ್ಳೆಗೆ ಹೆದರಿ ಸಮುದ್ರದ ದಂಡೆಯಲ್ಲಿ ಮಲಗುತ್ತಾ ರಾತ್ರಿ ಕಳೆದೆ.
ಮುಂಗಾರು ಪತ್ರಿಕೆಯಲ್ಲಿ ಸೋಮಾರಿಯೆಂದು ಟೀಕಿಸಿಕೊಂಡೆ ನಂತರ ಅದೇ ಪತ್ರಿಕೆಯ ರಾಜ್ಯದ ಉತ್ತಮ ವರದಿಗಾರ ಪುರಸ್ಕಾರ ಪಡೆದೆ. ನಂತರ ಅಧಿಕಾರಿಯೊಬ್ಬರ ನೆರವು, ವಸಂತ ಅಸ್ನೋಟಿಕರರ ಸಹಕಾರದಿಂದ ಪತ್ರಿಕೆ, ಬದುಕು ಪ್ರಾರಂಭಿಸಿ ಒಂದೊಂದೇ ಮೆಟ್ಟಿಲೇರುತ್ತಾ ಇಂಥ ಪ್ರಶಸ್ತಿ ಸ್ವೀಕರಿಸುವಂತಾದೆ.
ಹೀಗೆ ತಮ್ಮ ಅನುಭವ ಹೇಳುತ್ತಾ ಹೋದಂತೆ ಅವರ ಪಕ್ಕದಲ್ಲಿ ಕೂತಿದ್ದ ಮಾಧ್ಯಮ ದಿಗ್ಗಜರು ದಿಗ್ಭ್ರಮೆಗೊಳಗಾದಂತೆ ಕಂಡುಬಂದರು.
ಈ ಸಂದರ್ಭದಲ್ಲಿದ್ದವರು ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಸಂಪಾದಕ ರವಿ ಹೆಗಡೆ, ಹಿರಿಯ ಪತ್ರಕರ್ತ ಭಾಸ್ಕರರಾವ್ ಮತ್ತು ಔಟ್‍ಲುಕ್ ನ ಕೃಷ್ಣಪ್ರಸಾದ.
ರವಿ ಹೆಗಡೆ ಮಾತನಾಡುತ್ತಾ ಸಿದ್ಧಾಪುರ ಕಳೆದ 30-40 ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹೀಗೇ ಇದೆ. ಇದನ್ನು ಸಹಜ ಎನ್ನೋಣವೋ? ಅಭಿವೃದ್ಧಿಯಾಗಿಲ್ಲ ಎಂದು ವಿಶಾದಿಸುವುದೋ. ದೇಶದ ಸಂತಸ ಸೂಚ್ಯಂಕದ ಆಧಾರದಲ್ಲಿ ಪರಿಗಣಿಸುವುದಾದರೆ ಹೀಗಿರುವುದೇ ಒಳ್ಳೆಯದು, ಅಭಿವೃದ್ಧಿ-ಜಿ.ಡಿ.ಪಿ. ಎನ್ನುವುದಾದರೆ ಇದು ದುರಂತ ಇಂಥ ಕಾಡುವ ಅಂಶಗಳೇ ನನ್ನನ್ನು ಇಲ್ಲಿಗೆ ಕರೆತಂದದ್ದು ಎಂದರು.
ಹಿರಿಯ ಪತ್ರಕರ್ತ ಭಾಸ್ಕರರಾವ್ ಮಾತನಾಡಿ ಏಕಚಿತ್ತ, ಏಕವ್ಯಕ್ತಿಯಾಗಿ, ಏಕಲವ್ಯ ಸಾಧನೆ ಮೂಲಕ ಗಣೇಶ್‍ಹೆಗಡೆ ಸ್ಮೃತಿ ಪುರಸ್ಕಾರ ಪಡೆದ ಗಂಗಾಧರ ಹಿರೇಗುತ್ತಿ ದಿಕ್ಕುತಪ್ಪುತ್ತಿರುವ ಸಮಾಜವನ್ನು ನಿರ್ಧೇಶಿಸುವ ಕೆಲಸಮಾಡುತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಂದು-ಇಂದು ವಿಷಯದ ಮೇಲೆ ಅದ್ಭುತ ಉಪನ್ಯಾಸ ನೀಡಿದ ಕೃಷ್ಣಪ್ರಸಾದ ಲಾಭ-ಅನುಕೂಲಕ್ಕಾಗಿ ಜನರನ್ನು ವಿಭಜಿಸುವ, ಉಳ್ಳವರ, ಅಧಿಕಾರಸ್ಥರ ಪರವಹಿಸುವ, ಜನರನ್ನು ವಿಭಜಿಸುವ ಕೋಮುವಾದಿ ಕಾರ್ಯಾಚರಣೆಯ ಮಾಧ್ಯಮಗಳು ಇಂದು ದೇಶದ ಗಂಡಾಂತರಕಾರಿ ದುಸ್ಥಿತಿಗೆ ಕಾರಣ. ಈ ಮಾಧ್ಯಮಗಳನ್ನು ತಿದ್ದುವ, ಸರಿಪಡಿಸುವ ಶಕ್ತಿ ಜನಸಮೂಹಕ್ಕಿದೆ,ಓದುವ ವರ್ಗಕ್ಕಿದೆ ಎಂದರು.
ಮಾಧ್ಯಮಗಳು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಅನಾರೋಗ್ಯಕರ ವಿಷಯಗಳನ್ನು ವಿಜೃಂಬಿಸುತ್ತಿರುವುದು ಅಪಾಯಕಾರಿ ವಿದ್ಯಮಾನ ಎಂದು ಎಚ್ಚರಿಸಿದರು.
ವಿಜಯ ಹೆಗಡೆ ದೊಡ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಆರ್.ಪಿ.ಹೆಗಡೆ, ಮತ್ತು ಗಣೇಶ್ ಹೆಗಡೆ ದೊಡ್ಮನೆಯವರನ್ನು ಸ್ಮರಿಸಿದರು. ಸಾಹಿತಿ ಗಂಗಾಧರ ಕೊಳಗಿ ಮತ್ತು ಕಾಶ್ಯಪ ಪರ್ಣಕುಟಿ ದೊಡ್ಮನೆ ಗಣೇಶ್ ಹೆಗಡೆಯವರ ವ್ಯಕ್ತಿತ್ವದ ಬಗ್ಗೆ ಸಾದ್ಯಂತವಾಗಿ ಮಾತನಾಡಿದರು. ಗಂಗಾಧರ ಹಿರೇಗುತ್ತಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *