ಬಿ.ಜೆ.ಪಿ. ಕಾರ್ಯಕರ್ತರ ಸಿಟ್ಟಿಗೆ ಗುರಿಯಾದ ಸ್ಪೀಕರ್ ಕಾಗೇರಿ

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪಕ್ಷದ ಪ್ರಮುಖರಿಂದಲೇ ಬಹಿರಂಗ ತರಾಟೆಗೆ ಗುರಿಯಾದ ಪ್ರಕರಣ ಇಂದು ಸಿದ್ಧಾಪುರದಲ್ಲಿ ನಡೆದಿದೆ.ಕಾರ್ಯಕರ್ತರ ಅವಗಣನೆ, ಅಭಿವೃದ್ಧಿಕಾರ್ಯಗಳ ನಿರ್ಲಕ್ಷದ ಹಿನ್ನೆಲೆಯಲ್ಲಿ ಬಿ.ಜೆ.ಪಿ. ಸದಸ್ಯರು, ಜನಪ್ರತಿನಿಧಿಗಳೇ ಬಹಿರಂಗವಾಗಿ ವಿಧಾನಸಭಾ ಅಧ್ಯಕ್ಷರನ್ನುತರಾಟೆಗೆ ತೆಗೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಿದ್ಧಾಪುರದ ಸಾಯಿನಗರದ ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ವಿಧಾನಸಭಾಧ್ಯಕ್ಷ ಕಾಗೇರಿ ತಮ್ಮ ನಿಗದಿತ ಕೆಲಸ ಮುಗಿಸುತಿದ್ದಂತೇ ಸ್ಥಳಿಯ ಪಟ್ಟಣ ಪಂಚಾಯತ್ ಸದಸ್ಯರು, ಬಿ.ಜೆ.ಪಿ.ಪದಾಧಿಕಾರಿಗಳೂ ಆಗಿರುವ ಕೆಲವರು ಶಾಸಕರಿಗೆ ನಮ್ಮ ಬೇಡಿಕೆ,ಅಹವಾಲು ಕೇಳಲು ಸಮಯವಿಲ್ಲ,ಜನ ಅಭಿವೃದ್ಧಿಯೂ ಇಲ್ಲ, ನಮ್ಮ ಪರಿಗಣನೆಯೂ ಇಲ್ಲ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ. ಹಿಂದೆ ನಮ್ಮ ಸರ್ಕಾರ ಬರಲಿ ಕೆಲಸ ಮಾಡೋಣ ಎನ್ನುತಿದ್ದವರು ಈಗ ಕಾರ್ಯಕರ್ತರಿಗೆ ಮಾತನಾಡಲೂ ಸಮಯ ನಿಡುತ್ತಿಲ್ಲ. ಯಾಕೆ ಹೀಗೆ? ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳ ಅಹವಾಲು ಕೇಳಲು ಸಮಯವಿದೆಯೆ? ಎಂದೆಲ್ಲಾ ಪ್ರಶ್ನಿಸತೊಡಗಿದಂತೆ ಮಾತನಾಡೋಣ, ಸಮಯಕೊಡುತ್ತೇನೆ ಎಂದು ಟಾಟಾ ಕೂಡಾ ಮಾಡದೆ ಸಭಾಧ್ಯಕ್ಷರು ಕಾರ್ ಹತ್ತಿ ನಡೆದಿರುವ ಬಗ್ಗೆ ಬಿ.ಜೆ.ಪಿ. ಕಾರ್ಯಕರ್ತರೇ ಮಾಹಿತಿ ನೀಡಿದ್ದಾರೆ.
ಇಂದಿನ ಸಾಯಿನಗರದ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸದಿರುವುದು, ಗ್ರಾಮೀಣಭಾಗದ ನಿಗದಿತ ಕಾರ್ಯಕ್ರಮಕ್ಕೆ ಬಂದಿದ್ದ ಕಾಗೇರಿ ಸಾಯಿನಗರದ ಸಣ್ಣ ಕಾಮಗಾರಿಯ ಶಂಕುಸ್ಥಾಪನೆ ಮಾಡಿರುವುದು. ಸಿದ್ಧಾಪುರ ತಾಲೂಕು ಮತ್ತು ಶಿರಸಿ ಕ್ಷೇತ್ರದಲ್ಲಿ ಸಭಾಧ್ಯಕ್ಷ ಕಾಗೇರಿ ಬಿ.ಜೆ.ಪಿ.ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿರುವುದು, ಸರ್ಕಾರದ ಕೆಲವು ಕೆಲಸಗಳನ್ನು ಜಾತಿ,ನಾಯಕರ ಮೇಲಿನ ಅಸಮಾಧಾನಕ್ಕೆ ತಡೆಹಿಡಿದಿರುವುದು ಸೇರಿದಂತೆ ಚುನಾವಣೆ,ಪಕ್ಷದ ಕೆಲಸಗಳನ್ನು ಮಾಡಿರುವ ಪ್ರಾಮಾಣಿಕರನ್ನು ಕಡೆಗಣಿಸಿ ಗುಟ್ಟಾಗಿ ಕೆಲವರಿಗೆ ಮಾತ್ರ ಸಕಲ ಅನುಕೂಲ ಮಾಡುತ್ತಿರುವ ಕಾಗೇರಿಯವರ ಇತ್ತೀಚಿನ ನಡವಳಿಕೆಯಿಂದ ಬೇಸತ್ತ ಪಕ್ಷದ ಕಾರ್ಯಕರ್ತರೇ ಈ ಘಟನೆಗೆ ಮುಂದಾಗಿ, ಮುಜುಗರ ಉಂಟುಮಾಡಿದ್ದು ಸತ್ಯ ಎಂದು ಸ್ಥಳಿಯರು ತಿಳಿಸಿದ್ದಾರೆ.

ಕಾರವಾರದಿಂದ ಬಂದಿದ್ದ ಗುರುಭಜಕರು- ರಥೋತ್ಸವ,ಜಾತ್ರೆ,ಉತ್ಸವ
ಗ್ರೀನ್‍ಲ್ಯಾಂಡ್‍ಶುಭಾರಂಭ-
ಸಿದ್ಧಾಪುರ ತಾಲೂಕಿನ ಭುವನಗಿರಿಯ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಗಳು ನಡೆದವು.
ನಗರದ ಬಸವೇಶ್ವರ ದೇವರ ಜಾತ್ರೆ ಇಂದು ನಾಳೆ ನಡೆಯಲಿದೆ. ಸೋಮವಾರ ಪುಷ್ಫರಥೋತ್ಸವ ನಡೆದರೆ,ಮಂಗಳವಾರ ಮಹಾರಥೋತ್ಸವ ನಡೆಯಲಿದೆ.ಸಿದ್ಧಾಪುರ ಕೊಂಡ್ಲಿ ಹಾಳದಕಟ್ಟಾದಲ್ಲಿ ನಡೆದ ಗುರುಪ್ರತಿಪದಾ ಉತ್ಸವ ಸೋಮುವಾರ ನಡೆಯಿತು.ಕಾರವಾರ ಬಾಡದ ಗುರುಮಠದ ಶಿಷ್ಯ ವರ್ಗಸೇರಿದಂತೆ ಅನೇಕರು ಕಾರವಾರದಿಂದ ಸಿದ್ಧಾಪುರಕ್ಕೆ ಆಗಮಿಸಿ ಈ ಉತ್ಸವದಲ್ಲಿ ಪಾಲ್ಗೊಂಡರು.
ಭಜನೆ,ಅನ್ನಸಂತರ್ಪಣೆ ವೇಳೆ ಸ್ಥಳಿಯರಿಗಿಂತ ಕಾರವಾರದಿಂದ ಬಂದ ಭಜಕರು ಪಾಲ್ಗೊಂಡು ಗುರುಪ್ರತಿಪದಾ ಉತ್ಸವ ಸಂಪನ್ನಮಾಡಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *