ಸ್ವಚ್ಛ,ಜನಪರ, ಪ್ರಾಮಾಣಿಕ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮೀತಿ

ರಾಜಕಾರಣ,ಜನಸೇವೆ ಯಲ್ಲಿ ಯಾರೆಲ್ಲಾ ಇರಬಾರದೋ, ಯಾರ್ಯಾರು ಬರಬಾರದೋ ಅಥವರೆಲ್ಲಾ ರಾಜಕಾರಣಿಗಳಾಗಿ ಈಗಿನ ವ್ಯವಸ್ಥೆ ಕಲುಷಿತಗೊಂಡಿದೆ. ಈ ಸ್ಥಿತಿಯಲ್ಲಿ ಸ್ವಚ್ಛ,ಪ್ರಾಮಾಣಿಕ, ಜನಪರ ರಾಜಕಾರಣ ಮಾಡಬಯಸುವವರಿಗಾಗಿ ಕರ್ನಾಟಕ ರಾಷ್ಟ್ರಸಮೀತಿ ಹೊಸ ನಾಯಕತ್ವ, ಹೊಸ ಆಲೋಚನೆ, ಯೋಜನೆಗಳೊಂದಿಗೆ ರಾಜ್ಯದಲ್ಲಿ ಕೆಲಸಮಾಡುವ ಸಂಕಲ್ಫಮಾಡಿದೆ ಎಂದು ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು.
ಅವರು ಇಲ್ಲಿಯ ನೌಕರರ ಸಭಾಭವನದಲ್ಲಿ ನಡೆದ ನಾಯಕತ್ವ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಸಂವೇದನೆ ಇಲ್ಲದ ಜೆ.ಸಿ.ಬಿ.
(ಜಾದಳ,ಕಾಂಗ್ರೆಸ್, ಬಿ.ಜೆ.ಪಿ.) ರಾಜಕಾರಣದಿಂದಾಗಿ ಜನರಲ್ಲಿ ಸಿನಿಕತೆ ಪ್ರಾರಂಭವಾಗಿದೆ. ಈ ವ್ಯವಸ್ಥೆ ಬದಲಿಸುವ ಸಂಕಲ್ಫದಿಂದಲೇ ಕರ್ನಾಟಕ ರಾಷ್ಟ್ರಸಮೀತಿ ಪ್ರಾರಂಭವಾಗಿದೆ. ಹೊಸ ರಾಜಕೀಯ ಪರಿಭಾಷೆ ಅರ್ಥಮಾಡಿಕೊಳ್ಳುವವರು, ಹಣ-ಹೆಂಡದ ಹಂಗಿಲ್ಲದೆ ನಾಯಕತ್ವ, ರಾಜಕೀಯ ಮಾಡುವವರು ಮಾತ್ರ ಕೆಆರೆಸ್‍ಗೆ ಬರಬೇಕು ಎಂದರು.
ಎಲ್ಲಾ ಪಕ್ಷಗಳು ಅಮಲಿನ ರಾಜಕೀಯ ಪ್ರಯೋಗಮಾಡುತ್ತಿರುವ ಸಂದರ್ಭದಲ್ಲಿ ಹೊಸ ಆಶಾವಾದದಿಂದ ಬರುತ್ತಿರುವ ರವಿಕೃಷ್ಣ ರೆಡ್ಡಿ ಮತ್ತು ಅವರ ಕರ್ನಾಟಕ ರಾಷ್ಟ್ರ ಸಮೀತಿ ಮೇಲೆ ಜನ ಭರವಸೆ ಕಾಣುವಂತಾಗಿದೆ ಎಂದು ಈ ಕಾರ್ಯಾಗಾರ ಉದ್ಘಾಟಿಸಿದ ಪತ್ರಕರ್ತ ಗಣೇಶ್ ಭಟ್ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜಮುಖಿ ಕನ್ನೇಶ್ ಮಾತನಾಡಿ ರಾಜ್ಯದ ಜನರ ಹೊಸ ನಿರೀಕ್ಷೆಯಂತೆ, ಹೊಸ ನಿರೀಕ್ಷೆ ಭರವಸೆಗಳೊಂದಿಗೆ ಬಂದಿರುವ ಕರ್ನಾಟಕ ರಾಷ್ಟ್ರಸಮೀತಿ ಜನರ ಕಷ್ಟಕಾಲದ ಒಳ್ಳೆಯ ಆಯ್ಕೆ, ಜನಪರ ಕೆಲಸಗಳಿಂದ, ಹೋರಾಟಗಳಿಂದ ರಾಜಕಾರಣ ಸಮಾಜಮುಖಿಯಾಗಬೇಕಾದ ಈ ತುರ್ತಿನ ಕಾಲದಲ್ಲಿ ರವಿಕೃಷ್ಣ ರೆಡ್ಡಯಂಥವರ ನಾಯಕತ್ವವನ್ನು ಒಪ್ಪಿ, ಭರವಸೆ ಇಡಬಹುದು ಎಂದು ಶ್ಲಾಘಿಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಕರ್ನಾಟಕ ರಾಷ್ಟ್ರ ಸಮೀತಿಯಿಂದ ನಾಯಕತ್ವ ಶಿಬಿರ ನಡೆಸಿ ಸ್ವಚ್ಛ, ಪ್ರಾಮಾಣಿಕ ನಾಯಕತ್ವ ರೂಪಿಸುವುದು ಮತ್ತು ಮತದಾರರಿಗೂ ಜನಪ್ರೀಯ ರಾಜಕಾರಣಕ್ಕಿಂತ ಜನಪರ ರಾಜಕಾರಣದ ಮಹತ್ವ ಹೆಚ್ಚು ಎಂದು ಪರಿಚಯಿಸುವುದಾಗಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಮತ್ತು ಸಮಾಜಮುಖಿ ಸಮೂಹದ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿಯವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಕರ್ನಾಟಕ ರಾಷ್ಟ್ರ ಸಮೀತಿಯ ಪ್ರಮುಖರು ವೇದಿಕೆಯಲ್ಲಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *