ಆರೋಗ್ಯವರ್ಧಕ ಅಣಬೆಯತ್ತ ಶಿಕ್ಷಿತರ ಚಿತ್ತ

ಪ್ರಧಾನಿ ಮೋದಿ ಮತ್ತು ಶ್ರೀಮಂತ ಐಶಾರಾಮಿಗಳ ಆರೋಗ್ಯವನ್ನು ಕಾಪಾಡುವ ಅಣಬೆಗಳೆಂದರೆ ಎಲ್ಲರಿಗೂ ಇಷ್ಟ.
ನೈಸರ್ಗಿಕ ಅಣಬೆಗಳನ್ನು ವರ್ಷವಿಡಿ ಸಂಗ್ರಹಿಸಲು ಸಾಧ್ಯವಿಲ್ಲ ಹಾಗಾಗಿ ವರ್ಷವಿಡೀ ಬೆಳೆಯುವ ಕೃತಕ ಅಣಬೆಗಳು ಅಣಬೆಪ್ರೀಯರನ್ನು ಸಮಾಧಾನಪಡಿಸುತ್ತವೆ.
ಹೆಚ್ಚಿನ ಉಷ್ಣಾಂಶ,ನೀರು ಬಯಸುವ ಅಣಬೆ ಕೃಷಿ ಅಷ್ಟು ಸುಲಭಸಾಧ್ಯ ಕೆಲಸವೂ ಅಲ್ಲ. ಹೆಚ್ಚಿನ ಉಷ್ಣಾಂಶದ ಕರಾವಳಿ, ಬಯಲುಸೀಮೆಯಲ್ಲಿ ಬೆಳೆಯಲು ಯೋಗ್ಯವಾದ ಅಣಬೆಯನ್ನು ಸಿದ್ಧಾಪುರದಂಥ ಮಲೆನಾಡಿನ ತಂಪಿನ ವಾತಾವರಣದಲ್ಲಿ ಬೆಳೆದು ತೋರಿಸುವ ಮೂಲಕ ಹದಿನಾರನೇ ಮೈಲಿಕಲ್ಲು ಗಿಳಿಲಗುಂಡಿಯ ದಯಾನಂದ ನಾಯ್ಕ ಸಾಧನೆ ಮಾಡುತಿದ್ದಾರೆ.
ದಯಾನಂದ ನಾಯ್ಕರ ಕುಟುಂಬ ಕರಾವಳಿಯಿಂದ 30-35 ವರ್ಷಗಳ ಹಿಂದೆ ಇಲ್ಲಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕೃಷಿ ಜೊತೆಗೆ ಈ ಕುಟುಂಬದ ಇಬ್ಬರು ಯುವಕರು ಸರ್ಕಾರಿ ನೌಕರಿಮಾಡುತ್ತಾರೆ. ವಿಶೇಶವೆಂದರೆ… ಈ ಇಬ್ಬರು ಸಹೋದರರಿಗಿಂತ ಹೆಚ್ಚು ಕಲಿತವರು ಮಧ್ಯದ ಸಹೋದರ ದಯಾನಂದ, ಎಂ.ಕಾಂ ಪದವಿಧರರಾದ ದಯಾನಂದರಿಗೆ ಎಲ್ಲರಂತೆ ಮೊದಲು ಆಕರ್ಷಿಸಿದ್ದು ಬೆಂಗಳೂರು.
ಬೆಂಗಳೂರಿನ ಅನ್ಯರ ಕೆಳಗಿನ ಕೆಲಸ ಹೆಚ್ಚುದಿನ ಬೇಡ ಎಂದು ತೀರ್ಮಾನಿಸಿದವರಿಗೆ ಕಾಲ್ ಸೆಂಟರ್ ಉದ್ಯೋಗ ಮಾಡುವ ಯೋಚನೆ ಬಂದು ಬೆಂಗಳೂರಿನಿಂದ ಕರಾವಳಿಯವರೆಗೆ 50-60 ಜನರಿಗೆ ಕೆಲಸಕೊಟ್ಟ ಇವರ ದುರಾದೃಷ್ಟಕ್ಕೆ ಕೇಂದ್ರಸರ್ಕಾರದ ಜಿಯೋ ಏಕಸ್ವಾಮ್ಯದ ಪರಿಣಾಮ ಕಾಲ್ ಸೆಂಟರ್ ಮುಚ್ಚುವ ಅನಿವಾರ್ಯತೆ ಬಂದೊದಗಿತು.
ಅಲ್ಲಿಂದ ಮನೆ ಸೇರಿದ ದಯಾನಂದರಿಗೆ ಕೃಷಿಯ ಒಲವು ಶುರುವಾಯಿತು. ಇದರ ಪರಿಣಾಮ ಈಗ ನೂರಾರು ಕೆ.ಜಿ. ಅಣಬೆ ಬೆಳೆಯುವ ಇವರಿಗೆ ಅಣಬೆ ಬೆಳೆಯುವ ಮೂಲಕ ಸ್ಥಳಿಯರ ಆರೋಗ್ಯದ ರಕ್ಷಣೆಯೊಂದಿಗೆತಮ್ಮ ಆರ್ಥಿಕ ಚೇತರಿಕೆಗೂ ಶ್ರಮಿಸುವ ಅವಕಾಶ.
ಕಳೆದ ಒಂದು ವರ್ಷದಲ್ಲಿ ನೂರಾರು ಕೆ.ಜಿ. ಅಣಬೆ ಬೆಳೆದು ವಾತಾವರಣ,ಮಾರುಕಟ್ಟೆ ಅಭ್ಯಸಿಸುತ್ತಿರುವ ದಯಾನಂದ ಹೊರಗೆ ಯಾರದೋ ಕಂಪನಿಗಾಗಿ ದುಡಿಯುವುದಕ್ಕಿಂತ ನಮಗೆ, ನಮ್ಮೂರಿನ ಜನರಿಗಾಗಿ ಶ್ರಮಿಸುವಲ್ಲಿ ಸುಖ ಕಾಣುವ ಹಂಬಲ.
ಈಗಾಗಲೇ ಶಿರಸಿ-ಸಿದ್ಧಾಪುರದಲ್ಲಿ ಮಾರುಕಟ್ಟೆ ಮಾಡಿಕೊಂಡಿರುವ ದಯಾನಂದ ಇನ್ನೂ ಹೆಚ್ಚಿನ ಅಣಬೆ ಬೆಳೆಯುವ ಮೂಲಕ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ಉತ್ಸಾಹದಲ್ಲಿದ್ದಾರೆ. ಅಣಬೆ ಬೆಳೆಗೆ ಸರ್ಕಾರದಿಂದ ಬೆಂಬಲ-ಪ್ರೋತ್ಸಾಹಗಳಿದ್ದರೂ ಅಣಬೆ ಬೀಜ ಇನ್ನಿತರ ಅನುಕೂಲಕ್ಕಾಗಿ ಶಿವಮೊಗ್ಗ, ಬೆಂಗಳೂರುಗಳಿಗೆ ಧಾವಿಸಬೇಕು. ಸ್ಥಳಿಯವಾಗಿ ಉತ್ತಮ ಮಾರುಕಟ್ಟೆ, ಸರ್ಕಾರ, ಹಣಕಾಸು ಸಂಸ್ಥೆಗಳ ನೆರವು ದೊರೆತರೆ ಅಣಬೆ ಉದ್ಯಮ ಸಣ್ಣ ಉದ್ಯಮವಾಗಿ ಬೆಳೆಯಬಹುದೆನ್ನುವ ನಿರೀಕ್ಷೆಯಲ್ಲಿರುವ ದಯಾನಂದ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆರೋಗ್ಯವರ್ಧಕ,ನೈಸರ್ಗಿಕ ಅಣಬೆ ಕೃಷಿ ಬೆಳೆದರೆ ಜನರ ಆರೋಗ್ಯ ಸುಧಾರಿಸುತ್ತದೆ ಎನ್ನುವ ಯೋಚನೆಯಿಂದ ಮರಳಿಮಣ್ಣಿಗೆ ಬಂದಿರುವ ದಯಾನಂದರಂಥ ಯುವಕರು ಮಾಡುವ ಪ್ರಯೋಗಗಳಿಗೆ ಜನರ ಸಹಕಾರ ದೊರೆತರೆ ಅನುಕೂಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *