ಸುವರ್ಣಮಹೋತ್ಸವ ಕಾರ್ಯಕ್ರಮ ಮುಂದೂಡಿಕೆ- ಸಹಕಾರಿ ಪಠ್ಯಕ್ರಮದ ಅಗತ್ಯ ಪ್ರತಿಪಾದನೆ

ಸಿದ್ದಾಪುರ ತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸುವರ್ಣಮಹೋತ್ಸವದ ಅಂಗವಾಗಿ ವಿಚಾರ ಗೋಷ್ಠಿ ನಡೆಯಿತು.
ಸಹಕಾರಿ ಸಂಘಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕುರಿತು ಕೆಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿದರು.ಸಹಕಾರಿ ಸಂಘಗಳು ಬಂಡವಾಳಗಾರರ ಸಂಸ್ಥೆ ಅಲ್ಲ. ಬಳಕೆದಾರರ ಸಂಸ್ಥೆ. ಸಹಕಾರಿ ಸಂಘದಲ್ಲಿ ಸಹಕಾರಿ ತತ್ವವನ್ನು ಅರಿತವರು ಇದ್ದರೆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಸಂಘದಲ್ಲಿ ಸದಸ್ಯರು ಭಾಗವಹಿಸುವುದು ಮುಖ್ಯ. ಸದಸ್ಯತ್ವ ಪಡೆದವನು ಜವಾಬ್ದಾರಿಯಿಂದ ವ್ಯವಹಾರ ಮಾಡಬೇಕು. ಯಾವುದೇ ಸಹಕಾರಿ ಸಂಘ ವ್ಯಕ್ತಿ ಆಧಾರಿತವಾಗಿರಬಾರದು. ಕಾನೂನು ಚೌಕಟ್ಟಿನಲ್ಲಿ ಇರಬೇಕು. ಸಹಕಾರಿ ಸಂಘಗಳ ಕುರಿತು ಪಠ್ಯವಿಷಯದಲ್ಲಿ ಪಾಠಗಳು ಇದ್ದರೆ ಯುವಕರಿಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಕೆ.ರಾಮಪ್ಪ ಸದಸ್ಯರ ಅರಿವು ಮತ್ತು ಸಹಕಾರಿ ಕಾನೂನು ಕುರಿತು ಮಾತನಾಡಿ ಸಹಕಾರಿ ಸಂಘಗಳು ಲಾಭಮಾಡುವ ಉದ್ದೇಶವನ್ನು ಮಾತ್ರ ಹೊಂದದೆ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಸಂಘದಲ್ಲಿ ನಾಮಕಾವಸ್ಥೆ ಸದಸ್ಯರಾಗಿದ್ದರೆ ಏನು ಪ್ರಯೋಜನ ಇಲ್ಲ. ಸಂಘದ ಕುರಿತು ಕಳಕಳಿ ಉಳ್ಳವರಾಗಿರಬೇಕು. ಸಂಸ್ಥೆ ಉತ್ತಮವಾಗಿ ಬೆಳೆಯಬೇಕಾದರೆ ದಕ್ಷ ಆಡಳಿತ ಮಂಡಳಿ, ನಿಷ್ಠಾವಂತ ಸಿಬ್ಬಂದಿ ಹಾಗೂ ಪ್ರಜ್ಞಾವಂತ ಸದಸ್ಯರು ಇರಬೇಕು ಎಂದು ಹೇಳಿ ಸಂಘದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ, ಮತದಾನದ ಕುರಿತು ಮಾತನಾಡಿದರು.
ಕೃಷಿ ತಜ್ಞ ವಿ.ಎಂ.ಹೆಗಡೆ ಕೃಷಿಯಲ್ಲಿ ಆಧುನಿಕತೆಯ ಅಳವಡಿಕೆ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ಪರಮೇಶ್ವರ ಹೆಗಡೆ ಹುಲಿಮಕ್ಕಿ ಅಧ್ಯಕ್ಷತೆವಹಿಸಿದ್ದರು. ಆರ್.ಎಸ್.ಹೆಗಡೆ ತುಪ್ಪದ, ವೆಂಕಟ್ರಮಣ ಎಂ.ಹೆಗಡೆ ಉಳ್ಳಾನೆ,ಎಲ್.ಕೆ.ಹೆಗಡೆ ಉಳ್ಳಾನೆ,ಶ್ರೀಕಾಂತ ಭಟ್ಟ ಚಟ್ನಳ್ಳಿ, ಪ್ರಕಾಶ ಹೆಗಡೆ ಮುತ್ತಿಗೆ ಉಪಸ್ಥಿತರಿದ್ದರು.ಭಾಸ್ಕರ ಹೆಗಡೆ ಕೊಡ್ಗಿಬೈಲ್ ಸ್ವಾಗತಿಸಿದರು. ಡಿ.ಜಿ.ಭಟ್ಟ ಮುತ್ತಿಗೆ ನಿರ್ವಹಿಸಿದರು. ಮಂಜುನಾಥ ಗೌಡ ವಂದಿಸಿದರು.

ಸುವರ್ಣಮಹೋತ್ಸವ ಕಾರ್ಯಕ್ರಮ ಮುಂದೂಡಿಕೆ
ಸಿದ್ದಾಪುರತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಮಾ.15ರಂದು ನಡೆಯಬೇಕಾಗಿದ್ದ ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳನ್ನು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೋಗರಸ್ತೆಯಲ್ಲಿ ರಿಕ್ಷಾ ಪಲ್ಟಿ ಒಂದು ಸಾವು, 7 ಜನರಿಗೆ ಗಾಯ
ಸಿದ್ದಾಪುರ,ಮಾ.13- ಜನರು ಪ್ರಯಾಣಿಸುತಿದ್ದ ರಿಕ್ಷಾ ಒಂದಕ್ಕೆ ಎದುರಿನಿಂದ ಬಂದ ದನ ತಪ್ಪಿಸಲು ಪ್ರಯತ್ನಿಸಿದ ರಿಕ್ಷಾ ಪಲ್ಟಿಯಾಗಿ ಇದರಲ್ಲಿ ಪ್ರಯಾಣಿಸುತಿದ್ದ 8ಜನರಲ್ಲಿ ಒಬ್ಬರು ಮೃತರಾಗಿ 7 ಜನರಿಗೆ ಗಾಯಗಳಾದ ದುರ್ಘಟನೆ ಇಂದು ಇಲ್ಲಿಯ ಜೋಗರಸ್ತೆಯ ಕುಂಬಾರಕುಳಿ ಬಳಿ ನಡೆದಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *