ಕರೋನಾ ಪರಿಣಾಮ-ಪಂಜು ಗಂಗೊಳ್ಳಿ ಬರೆದ ಮನಮಿಡಿಯುವ ಘಟನೆ

ನ್ಯಾಯಾಧೀಶ: ನೀನೇಕೆ ಮಾರುಕಟ್ಟೆಯಲ್ಲಿ ಆ ಮಹಿಳೆಯ ಪರ್ಸನ್ನುಕದ್ದೆ?

16 ವರ್ಷದ ಬಾಲಾಪರಾಧಿ: ನನ್ನ ತಾಯಿ ಹಸಿವೆಯಿಂದ ನರಳುವುದನ್ನು ನೋಡಲಾಗಲಿಲ್ಲ. ತಾಯಿಗೆ ಏನಾದರೂ ತಿನ್ನಲು ತರಲು ಹಣವಿಲ್ಲದೆ, ದುಡಿಮೆಯಿಲ್ಲದೆ ಬೇರೆ ದಾರಿ ಕಾಣದೆ ಪರ್ಸ್ ಕದ್ದೆ.ನ್ಯಾಯಾಧೀಶರು ಅಪರಾಧಿಯ ಬಿಡುಗಡೆಗೆ ಆಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲ, ಆತನಿಗೆ ದಿನಸಿ, ತರಕಾರಿ, ಬಟ್ಟೆಬರೆ ತಂದು ಕೊಡಲು ನ್ಯಾಯಾಲಯದ ಸಿಬ್ಬಂದಿಯೊಬ್ಬರಿಗೆ ಹಣವನ್ನು ಕೊಡುತ್ತಾರೆ. ನ್ಯಾಯಾಲಯದಲ್ಲಿ ನೆರೆದ ಹಲವರ ಕಣ್ಣು ಒದ್ದೆಯಾಗುತ್ತದೆ…ಇದು ಯಾವುದೋ ಹಳೇಯ ಕನ್ನಡ ಹಿಂದಿ ಸಿನಿಮಾದ ದೃಶ್ಯವಲ್ಲ. ಏಪ್ರಿಲ್ 17 ರಂದು ಬಿಹಾರಿನ ನಾಲಂದದ ಕೋರ್ಟೊಂದರಲ್ಲಿ ನಡೆದ ಅಪರೂಪದ ಘಟನೆ. ಕೆಲವು ವರ್ಷಗಳ ಹಿಂದೆ ಈ ಬಾಲಕನ ಅಪ್ಪ ತೀರಿಕೊಂಡ ನಂತರ ತಾಯಿ ಮತ್ತು 12 ವರ್ಷ ಪ್ರಾಯದ ತಮ್ಮನ ಜವಾಬ್ದಾರಿ ಇವನದಾಯಿತು. ತಾಯಿ ಮಾನಸಿಕವಾಗಿ ಅಸ್ವಸ್ಥಳು. ಯಾವುದೋ ಘಟನೆಯಲ್ಲಿ ಬಾಲಕನ ಕಾಲಿನ ಮೂಳೆ ಪೆಟ್ಟಾಗಿ ಕುಂಟಾಗಿದೆ. ಅದೂ ಸಾಲದೆಂಬಂತೆ ಕೆಲ ಸಮಯದ ಹಿಂದೆ ಕಲ್ಲು ತಾಗಿ ಇವನ ಬಲಗಣ್ಣು ಕುರುಡಾಗಿದೆ. ಹೀಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಕೂಲಿನಾಲಿ ಮಾಡಿ ಹೇಗೋ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಏಕಾಏಕಿ ಹೇರಲಾದ ಲಾಕ್ ಡೌನ್ ಅದನ್ನೂ ಇಲ್ಲವಾಗಿಸಿತು. ಕಳೆದ ತಿಂಗಳು ಮಾರುಕಟ್ಟೆಗೆ ಹೋದಾಗ ಒಬ್ಬ ಮಹಿಳೆಯ ಪರ್ಸನ್ನು ಕದ್ದ. ಸಿಸಿ ಟಿವಿಯ ಸಹಾಯದಿಂದ ಪೋಲಿಸರು ಇವನನ್ನು ಪತ್ತೆ ಹಚ್ಚಿ ಕೇಸು ಹಾಕಿ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಸಿಂಗ್ ರ ಎದುರು ಹಾಜರು ಪಡಿಸಿದ್ದರು. ನ್ಯಾಯಾಧೀಶರ ಆಜ್ಞೆಯಂತೆ ಬಾಲಕನನ್ನು ಆತನ ಮನೆ ಮುಟ್ಟಿಸಲು ಹೋದ ಪೋಲಿಸರು ಆತನ ಮನೆಯ ಸ್ಥಿತಿ ನೋಡಿ ದಂಗಾದರು! ಮನೆ ಎಂದರೆ ಮುರುಕಲು ಗೋಡೆ, ಹರಿದ ಸೋಗೆಯ ಮಾಡು, ಅಷ್ಟೇ. ಮನೆಯಲ್ಲಿ ಚಾಪೆ ಇನ್ನಿತರ ವಸ್ತುಗಳು ಬಿಡಿ ಆಹಾರ ಬೇಯಿಸಲು ಇಂದು ಸ್ಟವ್ ಕೂಡಾ ಇಲ್ಲ! ತರಗೆಲೆ ಕಸಕಡ್ಡಿಗೆ ಬೆಂಕಿ ಹಾಕಿ ಅದರಲ್ಲಿ ಬೇಯಿಸಬೇಕು. ಆಧಾರ್, ರೇಷನ್ ಕಾರ್ಡ್ ಕೂಡಾ ಇಲ್ಲ. ನ್ಯಾಯಧೀಶರ ಆಜ್ಞೆಯ ಮೇರೆಗೆ ಸ್ಥಳೀಯಾಡಳಿತ ಬಾಲಕನ ಕುಟುಂಬಕ್ಕೆ ಜೀವನಾವಶ್ಯಕಗಳನ್ನು ಒದಗಿಸಲು ಈಗ ಮುಂದಾಗಿದೆ.(ಸಾಂದರ್ಭಿಕ ಚಿತ್ರ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *