bheerappa of aslekoppa-ಎಸಳೆಕೊಪ್ಪ ಬೀರಪ್ಪ

arun naik <ar**********@***il.com>8:38 AM (9 hours ago)

ಸೊರಬಾ ತಾಲ್ಲೂಕು ಚಂದ್ರಗುತ್ತಿ ಹೋಬಳಿಯ ಭದ್ರಾಪುರ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಒಂದು ದೈವ ಸನ್ನಿಧಿ. ಹಾಲು ಮರದ ಅಡಿಯಲ್ಲಿ ಒಂದು ದೊಡ್ಡದಾದ ಕಲ್ಲಿನ ಶಕ್ತಿ ಅಪಾರ. ಅನೇಕ ಆಧುನಿಕತೆ ಹಾಗೂ ತಂತ್ರಜ್ಞಾನದ ನಡುವೆಯು ನಾವೊಮ್ಮೆ ದೇವರ ಮೊರೆ ಹೋಗುತ್ತೇವೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ರೈತ ಸಮುದಾಯದ ವ್ಯವಸ್ಥೆಯಲ್ಲಿ ಒಂದು ನಂಬಿಕೆಯ ಆಚರಣೆ ಸಂಪ್ರಧಾಯ ಒಂದಷ್ಟು ಭಯ ಭಕ್ತಿ ಹೆಚ್ಚಿಸಿದ್ದಂತೂ ಸುಳ್ಳಲ್ಲ.
ಹೌದು ಇಲ್ಲಿ ಚಂದ್ರಗುತ್ತಿಯಿಂದ ಬನವಾಸಿ ಹೋಗುವ ಬೆನ್ನೂರು ಕಮರೂರು ಹೋಗುವ ಮಾರ್ಗದಲ್ಲಿ ಒಂದು ಶಕ್ತಿ ಸ್ಥಳವಿದೆ. ಖುದ್ದು ನಾವೇ ಭೇಟಿ ಕೊಟ್ಟಾಗ ಇಲ್ಲಿ ತಮ್ಮ ಸಂಕಲ್ಪದ ಈಡೇರಿಕೆಯ ಫಲವಾಗಿ ಪೂಜೆ ಪುನಸ್ಕಾರ ಮಾಡಿಸುವವರು ಅಪಾರ. ಕೋಳಿ ಕುರಿ ಬಲಿ ಇಲ್ಲಿಯ ವಿಶೇಷ ಶಕ್ತಿಯ ಪ್ರತೀಕ ಎನ್ನುತ್ತಾರೆ ಪೂಜಾರಿ ಪುಟ್ಟಪ್ಪ
ಒಕ್ಕಲಿಗ ಸಮುದಾಯದ ಒಂದು ಕುಟುಂಬ ತಲೆತಲಾಂತರದ ಪೂಜೆ ನಡೆಸಿಕೊಂಡು ಬಂದಿದೆ. ಹೀಗೆ ನಾವು ಕೇಳಿದ ಕುತೂಹಲಕಾರಿ ಪ್ರಶ್ನೆಗೆ ಅವರು ಹಲವಾರು ಮಾಹಿತಿ ನೀಡಿದರು. ರೈತಾಪಿ ವರ್ಗ ಹಾಗೂ ಹೆಚ್ಚಾಗಿ ಹೈನುಗಾರಿಕೆ ಇರುವ ಕೆಲ ದಶಕಗಳ ಹಿಂದೆ ಹಸು ಎತ್ತುಗಳ ಕಳ್ಳತನ ನಡೆಯುತ್ತಿದ್ದವು. ಆಗ ರೈತರು ತಮ್ಮ ದನಕರು ಸಿಗಲೆಂದು ಕಳೆದ ದನವಿನ ಹಗ್ಗ ದಾಬ ತಂದು  ,ದೇವರ ಕಲ್ಲಿನ ಎದುರು ಮರಕ್ಕೆ ಕಟ್ಟಿ ಸಂಕಲ್ಪ ಮಾಡಿಕೊಂಡರೆ ಕೆಲ ಗಂಟೆಯ ಒಳಗೆ ದನ ಮರಳಿ ಮನೆ ಸೇರುತ್ತಿದ್ದವಂತೆ
ಇನ್ನೊಂದೇನೆಂದರೆ ಇನ್ನು ಪೇಟೆ ಪಟ್ಟಣದ ಮಹಿಳೆಯರು ತಮ್ಮ ಒಡವೆ, ದುಡ್ಡು ಕಾಸು ಕಳೆದುಕೊಂಡು ದೇವರಿಗೆ ಮೊರೆ ಹೋಗುತ್ತಿದ್ದರು. ಹರಕೆ ಇಲ್ಲಿಯ ವಿಶೇಷ.ಇನ್ನೂ ಇದೇ ಶಕ್ತಿ ಇಲ್ಲಿ ಮುಂದುವರಿಯುತ್ತಿದೆ ಎನ್ನುತ್ತಾರೆ ಪೂಜಾರಿ ಪುಟ್ಟಪ್ಪ.
  ಪ್ರಾಣಿ ಪಕ್ಷಿ ಬಲಿಯ ನಂತರ ಅದರ ಕತ್ತು ಅಲ್ಲೇ ಇಟ್ಟು ಹೋಗುವ ಪ್ರತೀತಿ ಇದ್ದು, ಕಳವು ಮಾಡಿದವರು ತಾವೇ ಸ್ವ ಪರಿವರ್ತನೆ ಆಗುವದಂತೂ ಸುಳ್ಳಲ್ಲ ಎನ್ನುತ್ತಾರೆ ಸ್ಥಳೀಯರು.

ಇಲ್ಲಿ ಸಾವಿರಾರು ಘಂಟೆವಳಿವೆ. ಸಾವಿರಾರು ದನ ಕಟ್ಟುವ ಹಗ್ಗಗಳು ಇರುವದನ್ನು ನೋಡಿದರೆ ಇಲ್ಲಿಯ ಶಕ್ತಿ ಹಾಗೂ ಬಡ ರೈತವರ್ಗದ ನಂಬಿಕೆ ವ್ಯಕ್ತವಾಗುತ್ತದೆ.ವಾಹನ ಸೌಕರ್ಯವಿಲ್ಲದ ಆ ಕಾಲದಲ್ಲಿ ಬಡತನದ ಜೊತೆ ಇಂತಹ ನಂಬಿಕೆಗಳಿಗೆ ,ಆಚರಣೆಗಳಿಗೆ ಶ್ರೀಮಂತಿಕೆ ಇತ್ತು ಎನ್ನಬಹುದು.

ಇನ್ನು ಇಲ್ಲಿನ ದೇವರ ಕಟ್ಟೆಯ ಎದುರು ಹಾದು ಹೋದ ಡಾಂಬರು ರಸ್ತೆ ,ಮುಂದೆ ಗದ್ದೆ ಬಯಲು, ಹಕ್ಕಿಗಳ ಕಲರವ ಸಾಕ್ಷಾತ್ ಗ್ರಾಮೀಣ ಸೊಗಸಿಗೆ ಒಪ್ಪಿ ಉಳಿಯುವಂತಿದೆ. ಇನ್ನು ಇಲ್ಲಿ ನಾಗರ ಹಾವುಗಳು ಸದ್ರಶ್ಯವಾಗಿ ಕಾಣುತ್ತಿರುತ್ತವೆ. ಇಲ್ಲೇ ಎದುರು ಭೂತರಾಜನಿದ್ದು ಮರಕ್ಕೆ ಬೊಟ್ಟು ಮಾಡಿ ಅಸಂಖ್ಯಾತ ಜೇನುಗಳನ್ನು ತೋರಿಸುವಾಗ ಮೈ ಝಲ್ ಎನ್ನುತ್ತದೆ.

ದೇವರ ಎದುರು ಹಾದು ಹೋಗುವ ಚಂದ್ರಗುತ್ತಿ-ಬನವಾಸಿ ರಸ್ತೆಯನ್ನು ಮಾಡುವ ಇತ್ತೀಚಿಗಿನ ಕಾಲದಲ್ಲೇ ಇಲಾಖೆ ಅಡ್ಡಲಾಗಿ ಬಂದ ಮರ ಕಡಿಯಲು ಮುಂದಾದಾಗ ಸ್ವತಃ ನಾಗರ ಪ್ರತ್ಯಕ್ಷವಾಗಿದ್ದನ್ನು ಪೂಜಾರಿ ಪುಟ್ಟಪ್ಪ ವಿವರಿಸಿದರು. 
ಗ್ರಾಮೀಣ ಭಾಗದಿಂದ ನೆಲೆಸಿದ ವಿದೇಶಿಗರು, ಮಕ್ಕಳಿಲ್ಲದವರು, ಹೀಗೆ ಹತ್ತು ಹಲವು ವಿಶೇಷವಾಗಿ ಕಳುವು ಇಲ್ಲಿಯ ಮಹತ್ವ ಎಂದು ವಿವರಿಸಿದರು. ಮಿಂಚಿನಂತೆ ಹೋದ ಹೋರಿ ಹಬ್ಬದ ಹೋರಿಗಳು ಇಲ್ಲಿಯ ಕೃಪಾ ಕಟಾಕ್ಷದಿಂದ ಸಿಕ್ಕಿವೆ ಎನ್ನುತ್ತಾರೆ ಅನೇಕ ರೈತರು .ಏನೇ ಆದರೂ ಮುಂದುವರಿದ ಯುಗದಲ್ಲೂ ಇಂತಹ ಅಚ್ಚರಿಗಳು,ಶಕ್ತಿಗಳು, ಸಾಮಾಜಿಕ ಸ್ವಾಸ್ತ್ಯದ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಿರುವದಂತೂ ಸುಳ್ಳಲ್ಲ.

ಇಂತಹ ಅನೇಕ ಧಾರ್ಮಿಕ ಶಕ್ತಿಗಳಿಗೆ ಮೂಢ ನಂಬಿಕೆಯ ತುಪ್ಪ ಸವರದೆ ಪರಿಮಿತ ಪ್ರಮಾಣದಲ್ಲಿ ಜೀರ್ಣೋದ್ಧಾರ ಹಾಗೂ ಮುಖ್ಯವಾಹಿನಿಗೆ ತರುವದು ಅವಶ್ಯಕವಾಗಿದೆ ಅಲ್ಲವೇ. ರೈತ ವರ್ಗದ ಹಿತಾಸಕ್ತಿಯಿಂದ ಈ ಕಿರು ಲೇಖನ. -ಅರುಣ್ ಕೊಪ್ಪ (ಈ ಲೇಖನದ ಅಭಿಪ್ರಾಯ,ಅನುಭವ,ನಂಬಿಕೆ ಲೇಖಕರಿಗೆ ಸಂಬಂಧಿಸಿದ್ದು-ಸಂ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *