ಡಾಲಿ,ಬಡವ ರ್ಯಾಸ್ಕಲ್ ಕತೆ!

ಧನಂಜಯ್ ‘ಬಡವ ರಾಸ್ಕಲ್’ ಗೆ ವಿಸ್ಮಯಕಾರಿ ಕ್ಲೈಮ್ಯಾಕ್ಸ್: ನಿರ್ದೇಶಕ ಗುರುಪ್ರಸಾದ್

ಡಾಲಿ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ “ಬಡವ ರಾಸ್ಕಲ್” ಡಾಲಿ ಧನಂಜಯ್ ಬ್ಯಾನರ್‌ನಿಂದ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. “ಎದ್ದೇಳು ಮಂಜುನಾಥ” ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ

ಡಾಲಿ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ “ಬಡವ ರಾಸ್ಕಲ್” ಡಾಲಿ ಧನಂಜಯ್ ಬ್ಯಾನರ್‌ನಿಂದ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. “ಎದ್ದೇಳು ಮಂಜುನಾಥ” ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಶಾಟ್‌ನಲ್ಲಿಗುರುಪ್ರಸಾದ್ ನಟಿಸಿದ್ದು ಜತೆಗೆ ಇನ್ನೊಬ್ಬ ನಿರ್ದೇಶಕ ವಿಜಯ ಪ್ರಸಾದ್ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ನಿರ್ದೇಶಕ ಶಂಕರ್ ಗುರು ಮತ್ತು ನಟ ಧನಂಜಯ್ “ಬಡವ ರಾಸ್ಕಲ್” ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಗುರುಪ್ರಸಾದ್ ಅವರ ಅಭಿನಯಿಸಿರುವುದಕ್ಕೆ ಸಂತಸಪಟ್ಟಿದ್ದಾರೆ. “ಅವರು ನನ್ನ ಗುರು, ಮತ್ತು ಮಠ ಹೊರತಾಗಿ  ನಾನು ಅವರ ಎಲ್ಲಾ ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ, ಡೈರೆಕ್ಟರ್ಸ್ ಸ್ಪೆಷಲ್ ಸೆಟ್ ಗಳಲ್ಲಿ ನಾನು ಧನಂಜಯ್ ಅವರನ್ನು ಪರಿಚಯಿಸಿಕೊಂಡಿದ್ದೆ. ಬಡವ ರಾಸ್ಕಲ್ ಆಕ್ಷನ್ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವುದರಿಂದ, ನಾವು ಚಿತ್ರಕ್ಕೆ ಅತ್ಯಂತ ವಿಸ್ಮಯಕಾರಿ ಕ್ಲೈಮ್ಯಾಕ್ಸ್ ನಿಡಲು ಬಯಸಿದ್ದೆವು ಮತ್ತು ಅತಿಥಿ ಪಾತ್ರದಲ್ಲಿ ಗುರುಪ್ರಸಾದ್ ಬಗ್ಗೆ ನಾನು ಯೋಜಿಸಿದೆ. ಮತ್ತದನ್ನು ನಟ ಧನಂಜಯ್ ಅವರಿಗೆ ಹೇಳಿದೆ.  ಅವರು  ಒಪ್ಪಿದ್ದರು. 

” ಗುರುಪ್ರಸಾದ್ ಅವರೊಂದಿಗೆ ನಾವು ಇದನ್ನು ಚರ್ಚಿಸಿದೆವು. ಅವರೂ ಅದಕ್ಕೆ ತಕ್ಷಣವೇ ಒಪ್ಪಿದರು.  ಗುರುಪ್ರಸಾದ್ ಅವರ ಎರಡು ನಿಮಿಷಗಳ ಚಿತ್ರೀಕರಣವು ಚಿತ್ರದ ಕೊನೆಯಲ್ಲಿ ವೀಕ್ಷಕರ ಮನಸ್ಸನ್ನು ಖಚಿತವಾಗಿ ಹಿಡಿದಿಡಲಿದೆ.”

ಈ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿದ್ದರೆ, ನಾಗಭೂಷಣ್ ಮತ್ತು ತಾರಾ  ಸಹ ಅಭಿನಯಿಸಿದ್ದಾರೆ. ಚಿತ್ರಕ್ಕೆ  ವಾಸುಕಿ ವೈಭವ್ ಸಂಗೀತ ಮತ್ತು ಪ್ರೀತಾ ಜಯರಾಮ್ ಛಾಯಾಗ್ರಹಣವಿದೆ.  “ಬಡವ ರಾಸ್ಕಲ್” ಚಿತ್ರದ ಬಗ್ಗೆ ಮಾತನಾಡಿದ ಧನಂಜಯ್ “ನನ್ನ ಮೊದಲ ಚಿತ್ರಕ್ಕೆ ಆಕರ್ಷಕ ಕ್ಲೈಮ್ಯಾಕ್ಸ್ ನೀಡಲು ಬಯಸಿದ್ದೆವು. ಅದು ಇಡೀ ಪಾತ್ರವರ್ಗವನ್ನು ಒಟ್ಟುಗೂಡಿಸುತ್ತದೆ. ನಾವು ಒಂದು ಪ್ರಮುಖ ಪಾತ್ರವನ್ನು ಹುಡುಕುತ್ತಿದ್ದೆವು, ಮತ್ತು ನಮ್ಮ ಸರ್ವಾನುಮತದ ಆಯ್ಕೆ ಗುರುಪ್ರಸಾದ್  ಅವರಾಗಿದ್ದರು. ಅವರಿಗೂ ಸಹ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂತಸವಾಗಿದೆ.”

ಧನಂಜಯ್ ಅವರ ಅಭಿಮಾನಿಗಳು ಸಹ ಚಿತ್ರದ ಒಂದು ಭಾಗವಾಗಿದ್ದಾರೆ ಎನ್ನುವುದು ಚಿತ್ರದ ಇನ್ನೊಂದು ಹೈಲೈಟ್  “ಧನಂಜಯ ಅವರ ಅಭಿಮಾನಿಗಳು ಕಡೇ ಶೆಡ್ಯೂಲ್ ನಲ್ಲಿ ಸಾಕಷ್ಟು ಬೆಂಬಲಿಸಿದ್ದಾರೆ. . ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಅವರು ನಮ್ಮೊಂದಿಗೆ ನಿಂತು ಶುಭಕೋರಿದ್ದಾರೆ. ನಮ್ಮ ಟೀಂ ನೊಂದಿಗೆ 100 ಆಟೋ ಡ್ರೈವರ್‌ಗಳು ತಮ್ಮ ಆಟೋ ಚಲಾಯಿಸಿದ್ದಾರೆ. ಅಲ್ಲದೆ ಶೆಡ್ಯೂಲ್ ಅದ್ದೂರಿಯಾಗಿ ಅಂತ್ಯವಾಗುವುದನ್ನು ಖಾತ್ರಿಪಡಿಸಿದರು” ನಿರ್ದೇಶಕ ಶಂಕರ್ ಹೇಳಿದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *