ಸಿಗಂದೂರು ಚೌಡೇಶ್ವರಿ ಸರ್ಕಾರದ ವಶಕ್ಕೆ, ಸ್ಥಳಿಯರ ವಿರೋಧ

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಮೊದಲು ಮೇಲ್ ಉಸ್ತುವಾರಿ ಸಮಿತಿ ನೇಮಕ ಮಾಡಿ ನಂತರ ಅದನ್ನು ಸರ್ಕಾರದ ನಿಯಂತ್ರಣಕ್ಕೆ ತಂದು ಕೊನೆಗೆ ಅದನ್ನು ವೈದಿಕರ ಮಠ,ಮಂದಿರಕ್ಕೆ ವಹಿಸುವ ಹಿನ್ನೆಲೆಯಲ್ಲಿ ಶೇಷಗಿರಿ ಭಟ್ಟರ ಕುಟುಂಬ ದಾಂಧಲೆ ಎಬ್ಬಿಸಿದ್ದು ಈ ಗಲಾಟೆ ಮೂಲಕ ವೈದಿಕರ ಪರವಾಗಿರುವ ಸರ್ಕಾರ ಶೂದ್ರವಿರೋಧಿ ಕಾರ್ಯಾಚರಣೆ ಅಂಗವಾಗಿ ಗಲಾಟೆ, ದೊಂಬಿ ಮಾಡಿರುವ ಶೇಷಗಿರಿಭಟ್ಟರ ಕುಟುಂಬವನ್ನು ರಕ್ಷಿಸುತ್ತಿರುವುದನ್ನು ನೋಡಿದರೆ ಇವೆಲ್ಲಾ ಪೂರ್ವನಿಯೋಜಿತ ಪುರೋಹಿತಶಾಹಿ ತಂತ್ರಗಳು ಎಂದು ಸ್ಫಷ್ಟವಾಗುತ್ತದೆ ಎಂದು ಆರೋಪಿಸಿರುವ ಕೆಲವು ಸಂಘಟನೆಗಳು ರಾಜ್ಯ ಸರ್ಕಾರ ಬಹುಸಂಖ್ಯಾತ ಹಿಂದುಳಿದವರ ವಿರುದ್ಧ ಕಾರ್ಯಾಚರಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ಹಿಂದುಳಿದ ವರ್ಗಗಳು, ಈ ವರ್ಗಗಳ ಸಂಘಟನೆಗಳಿಗಿದೆ ಎಂದಿವೆ.

ವಲಸೆ ವೈದಿಕರು, ಮೂಲನಿವಾಸಿ ಶೂದ್ರರ ಕಾಳಗಕ್ಕೆ ಕಾರಣವಾಗಿದ್ದ ಸಾಗರ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆಯುವ ಮೂಲಕ ತನ್ನ ವೈದಿಕ ಪ್ರೇಮ ಮೆರೆದಿದೆ.

ಸಿಗಂದೂರಿನಲ್ಲಿ ಕುಟುಂಬ ಕಲಹ. ಜಾತಿ ಕಲಹ, ಶೂದ್ರ ಅವಿವೇಕತನವನ್ನು ಬಳಸಿಕೊಂಡ ವಲಸೆ ವೈದಿಕರು ದೇವಾಲಯವನ್ನು ನೇರವಾಗಿ ತಮ್ಮ ಹಿಡಿತಕ್ಕೆ ಅಥವಾ ಪರೋಕ್ಷವಾಗಿ ತಮ್ಮ ಹಿಡಿತಕ್ಕೆ ಪಡೆಯಲು ಹವಣಿಸುತಿದ್ದರು. ಈ ಷಡ್ಯಂತ್ರದ ಭಾಗವಾಗಿ ಶೇಷಗಿರಿ ಭಟ್ಟರ ಕುಟುಂಬ ಚೌಡೇಶ್ವರಿ ದೇವಾಲಯದಲ್ಲಿ ಹೊಡೆದಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದು ಹಳೆ ಕತೆ. ಆದರೆ ಶಾಂತಿ ಕದಡಿದ ಭಟ್ಟರ ಕುಟುಂಬವನ್ನು ಬಂಧಿಸಿ, ಬೆಂಡೆತ್ತುವ ಬದಲು ಸರ್ಕಾರ ರಾಮಪ್ಪರ ನೇತೃತ್ವದ ಆಡಳಿತ ಮಂಡಳಿಯನ್ನು ಅಮಾನತ್ತು ಮಾಡಿ ವೈದಿಕರಿಗೆ ಸಹಕರಿಸಿದೆ. ರಾಮಪ್ಪ ಕುಟುಂಬದ ಶೂದ್ರ ಹುಂಬತನ, ಕೆಲವು ವ್ಯಕ್ತಿಗಳು, ಸಂಘಟನೆಗಳ ಸ್ವಾರ್ಥವನ್ನು ಬಳಸಿಕೊಂಡ ವೈದಿಕರು ಸರ್ಕಾರದ ಮೇಲೆ ಪ್ರಭಾವ ಬೀರಿ ದೇವಸ್ಥಾನದ ಆಡಳಿತ, ಮೇಲುಸ್ತುವಾರಿ ಜವಾಬ್ಧಾರಿಯನ್ನು ಸರ್ಕಾರಕ್ಕೆ ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದ್ದು ಶೂದ್ರರು, ಬಹುಸಂಖ್ಯಾತರ ವಿರುದ್ಧವಿರುವ ರಾಜ್ಯ ಬಿ.ಜೆ.ಪಿ. ಸರ್ಕಾರ ಸ್ಥಳಿಯ ಬಹುಸಂಖ್ಯಾತರಿಗೆ ಅನ್ಯಾಯ ಮಾಡಿದೆ. ಗೋಕರ್ಣ ದೇವಾಲಯ ಆಪೋಶನ ಮಾಡಿ ಸಿಗಂದೂರಿನ ಮೇಲೆ ಕಣ್ಣಿಟ್ಟಿದ್ದ ಹೊಸನಗರ ಮಠ ಮತ್ತವರ ವೈದಿಕ ಪರಿವಾರ ಸಿಗಂದೂರು ವಿವಾದ,ಈ ಬೆಳವಣಿಗೆಗಳಿಗೆ ಕಾರಣವಾಗಿದ್ದು. ಶೂದ್ರವಿರೋಧಿ ವೈದಿಕರ ಸರ್ಕಾರ ಮತ್ತು ಅವರ ಪರಿವಾರದ ವಿರುದ್ಧ ಜನಾಂದೋಲನ ಮಾಡಿ ವಲಸೆ ವೈದಿಕರ ಬಹುಸಂಖ್ಯಾತರ ವಿರೋಧಿ ಸರ್ಕಾರ ಮತ್ತವರ ಬೆಂಬಲಿಗರ ವಿರುದ್ಧ ಹೋರಾಟ ರೂಪಿಸುವುದಾಗಿ ಎಚ್ಚರಿಸಿದೆ. ಸರ್ಕಾರದ ಈ ಕ್ರಮದ ವಿರುದ್ಧ ರಾಜ್ಯ ಬಿ.ಎಸ್. ಎನ್.ಡಿ.ಪಿ., ರಾಷ್ಟ್ರೀಯ ಈಡಿಗ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *