Crime today – 2ಜನ ಮಹಿಳೆಯರ ಅಕಾಲಿಕ ಸಾವು

ಸಿದ್ದಾಪುರ ಹಲಗೇರಿ ಪ. ಪೂ. ಕಾಲೇಜಿನ ಉಪನ್ಯಾಸಕಿ ರಜನಿ ಶನಿವಾರ ನಿಧನರಾಗಿದ್ದಾರೆ. ಹಲಗೇರಿ ಸರ್ಕಾರಿ ಪ .ಪೂ. ಕಾಲೇಜಿನ ಉಪ ನ್ಯಾಸಕಿಯಾಗಿದ್ದ ಇವರು ಅಲ್ಪ ಕಾಲಿಕ ಅನಾರೋಗ್ಯ ದಿಂದ ಮೃತ ಪಟ್ಟಿದ್ದು ಇವರ ಪತಿ ಸಿದ್ದಾಪುರ ಕಾವಂಚೂರು ಮತ್ತು ಮನ್ಮನೆ ಪಿ. ಡಿ. ಓ. ಆಗಿದ್ದಾರೆ. ಜೇನು ಹೊಡೆದು ಸಾವು ವಿಷಯ : ಜೇನ್ನೊಣಗಳ ದಾಳಿಗೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಮೃತಪಟ್ಟ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಯುಡಿಆರ್ ನಂಬರ್ 35/2020 ಕಲಂ 174 CRPC ಅಡಿಯಲ್ಲಿ ಪ್ರಕರಣ ದಾಖಲಾದ ಕುರಿತು
ಸಾರಾಂಶ: ಮ್ರತೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಪ್ರಾಯ 47 ವರ್ಷ ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಇವಳು ತನ್ನ ಗಂಡ ರಾಮಚಂದ್ರ ಕನ್ನ ಮಡಿವಾಳ ( ಪಿರ್ಯಾದಿ ) ಪ್ರಾಯ 52 ವರ್ಷ
ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಹಾಗೂ ಮಗನೊಂದಿಗೆ ತಮ್ಮ ಮನೆಯಿಂದ ದೂರದಲ್ಲಿರುವ ಕುಂದಗ್ರಾಮ ವ್ಯಾಪ್ತಿಯ ನೆರೆಗುಳಿ ಗದ್ದೆಯಲ್ಲಿ ಇರುವ ತಮ್ಮ ಗದ್ದೆಗೆ ಬತ್ತದ ಹೊರೆ ಕಟ್ಟಲು ಹೋಗಿದ್ದವಳು ಕೆಲಸಮಾಡುತ್ತಿದ್ದಾಗ 11:00 ಗಂಟೆ ಸುಮಾರಿಗೆ ಜೇನ್ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ ಮೂರು ಜನರು ಜೇನುನೊಣಗಳ ಕಡಿತದಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗಿದ್ದು, 3 ಗಂಟೆ ಆದರೂ ಮೃತಳು ಬರದಿದ್ದರಿಂದ ಪಿರ್ಯಾದಿ , ಅವನ ಮಗ ಮತ್ತು ಊರಿನ 5-6 ಜನರು ಸೇರಿಕೊಂಡು ಹುಡುಕುತ್ತಿದ್ದಾಗ ಮಧ್ಯಾಹ್ನ 4;30 ಗಂಟೆ ಸುಮಾರಿಗೆ ಅವರ ಗದ್ದೆಯಿಂದ ಸುಮಾರು 300-400 ಮೀಟರ್ ದೂರದ ಬ್ಯಾಣದ ಕರಡದಲ್ಲಿ ಮೃತ ಶವ ಸಿಕ್ಕಿದ್ದು ತನ್ನ ಹೆಂಡತಿಯು ಜೇನುನೊಣಗಳ ಕಡಿತದಿಂದ ಮೃತ ಪಟ್ಟಿದ್ದಾಗಿ ನೀಡಿದ ಲಿಖಿತ ದೂರು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *