Laxman kodse writes – ಮನಕಲಕುವ ಕಥಾನಕ-ಬೊಪ್ಪ ನನ್ನನ್ನು ಕ್ಷಮಿಸು

ಉದಯಕುಮಾರ್ ಹಬ್ಬು ಅವರ `ಬೊಪ್ಪ ನನ್ನನ್ನು ಕ್ಷಮಿಸು’ ಶೀರ್ಷಿಕೆಯಿಂದಲೇ ಸೆಳೆದುಕೊಳ್ಳುವ ಕಥಾನಕ. ಆತ್ಮಕತೆಯಾದರೂ ಕಾದಂಬರಿಯಂತೆ ಓದಿಸಿಕೊಳ್ಳುವ ಕೃತಿ. ಗಾಂಧೀಜಿ ಪ್ರಭಾವಕ್ಕೆ ಒಳಗಾಗಿದ್ದ ಶಾನುಭೋಗ ಹಬ್ಬು ಅವರ ತತ್ವನಿಷ್ಠ ಬದುಕು ಕರುಣಿಸಿದ ಬಡತನವನ್ನು ಎದುರಿಸಿ ಬದುಕು ಕಟ್ಟಿಕೊಂಡ ಸಾಹಸಗಾಥೆ. ತಂದೆ ತಾಯಿ ಅಣ್ಣ ತಮ್ಮಂದಿರ ತುಂಬು ಕುಟುಂಬದಲ್ಲಿದ್ದರೂ ಬಾಲ್ಯದ ದಿನಗಳನ್ನು ಕಂಡವರ ಮನೆಗಳಲ್ಲಿ ಕಳೆಯಬೇಕಾದ ಪರಿಸ್ಥಿತಿಯನ್ನು ಉದಯಕುಮಾರ್ ಎಳೆಎಳೆಯಾಗಿ ಬಿಡಿಸಿ ಕೊಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ ಪಟೇಲರ ಮನೆಯಲ್ಲಿ, ನಂತರದ ಮೂರು-ನಾಲ್ಕು ವರ್ಷಗಳನ್ನು ಉಮ್ಮಚ್ಚಿ, ಹಳದೀಪುರ, ಬರಬಳ್ಳಿ ಎಂಬಲ್ಲಿ ಅಜ್ಜಿಯ ಮನೆ, ಸಂಬಂಧವೇ ಇಲ್ಲದ ಇನ್ನೊಬ್ಬ ಭಟ್ಟರ ಮನೆಯಲ್ಲಿ ಕಳೆದ ದಿನಗಳು ಮನಸ್ಸನ್ನು ಕಲಕುವ ಹೃದಯಸ್ಪರ್ಶಿ ಘಟನೆಗಳಿಂದ ಕೂಡಿವೆ. ಓದಿನ ನಿಮಿತ್ತ ಒಂಬತ್ತನೆಯ ವರ್ಷದಲ್ಲಿಯೇ ಅಪ್ಪ, ಅವ್ವ, ಅಣ್ಣ ತಮ್ಮ ಇದ್ದ ತುಂಬು ಕುಟುಂಬದಿಂದ ದೂರ ಹೋಗಿ ಪರ ಊರಿನಲ್ಲಿ ಪರದೇಸಿಯಂತೆ ಐದು ವರ್ಷಗಳನ್ನು ಕಳೆದಿದ್ದ ನನಗೆ ಹಬ್ಬು ಅವರ ಅಂದಿನ ದಿನಗಳ ಕಷ್ಟ ಕಾರ್ಪಣ್ಯಗಳು ನನ್ನದೇ ಅನುಭವಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದವು (ಬಹು ವರ್ಷಗಳ ಹಿಂದೆ ಓದಿದ್ದ ನೊಬಡಿಸ್ ಚೈಲ್ಡ್ ಇಂಗ್ಲಿಷ್ ಕೃತಿಯ ನೆನಪು ಕೂಡ ಬಂದಿತು).

ಬಡತನದ ಕಾರಣ ಎದುರಾಗುತ್ತಿದ್ದ ಅಪಮಾನ, ಅವಗಣನೆ, ತಿರಸ್ಕಾರಗಳ ನಡುವೆಯೂ ಶಿಕ್ಷಣವನ್ನು ಕೈಬಿಡಲಾಗದ ದಿಟ್ಟ ಸಂಕಲ್ಪ, ಅದಕ್ಕಾಗಿ ನೇಗಿಲು ಹಿಡಿದು ಗೆಯ್ಯುವ, ಅಂಗಡಿಯಲ್ಲಿ ದುಡಿಯುವ ಪರಿಸ್ಥಿತಿಗೆ ಒಯ್ಯುವುದನ್ನು ಅನುಕಂಪಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ನಿರ್ಲಿಪ್ತ ಭಾವದಲ್ಲಿ ನಿರೂಪಿಸಿರುವುದು ಹಬ್ಬು ಅವರ ಬರವಣಿಗೆಯ ಹೆಚ್ಚುಗಾರಿಕೆ.
ಉದಯಕುಮಾರ್ ಅವರ ಸೋದರರಲ್ಲಿ ಒಬ್ಬರಾದ ಅರುಣ ಕುಮಾರ್ ಹಬ್ಬು ಪ್ರಜಾವಾಣಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು. ನನ್ನೊಂದಿಗೆ ಒಂದೇ ಪಾಳಿಯಲ್ಲಿ ಕೆಲಸ ಮಾಡಿದ ಸಜ್ಜನರು. ಆದ್ದರಿಂದ ಈ ಕಥಾನಕ ಹೆಚ್ಚು ಆಪ್ತವಾಗಿ ನನ್ನನ್ನು ತಟ್ಟಿದೆ. ಉದಯಕುಮಾರ್ ಅವರು ಫೇಸ್ ಬುಕ್ ನಲ್ಲಿ ಹಾಕಿದ್ದ ದಾರಾಶಿಕೊ ಕುರಿತ ಕಾದಂಬರಿಯನ್ನು ಕುತೂಹಲದಿಂದ ಗಮನಿಸಿದ್ದವನಿಗೆ ಈ ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತ್ತು. ಅವರ ಈ ಆತ್ಮಕತೆಯ ವಿವರಗಳು ಮನಸ್ಸನ್ನು ಕಲಕುವಷ್ಟು ಭಾವತೀವ್ರತೆಯಿಂದ ಕೂಡಿವೆ.

ಉಡುಪಿ ಜಿಲ್ಲೆಯ ಮುಂಡ್ಕೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಉದಯಕುಮಾರ್ ಹಬ್ಬು ಸದ್ಯ ಕಿನ್ನಿಗೋಳಿಯಲ್ಲಿ ನೆಲೆಸಿ ಓದು ಬರವಣಿಗೆಯಲ್ಲಿ ನಿರತರಾಗಿ, ವರ್ತಮಾನದ ಸಂಗತಿಗಳಿಗೆ ಆರೋಗ್ಯಕರವಾಗಿ ಸ್ಪಂದಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಳ್ಳೆಯ ಓದಿನ ಕೃತಿಯನ್ನು ನೀಡಿದ ಹಬ್ಬು ಅವರಿಗೆ ಅಭಿನಂದನೆಗಳು..

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *