Local news & crime- ಯಾರೂ ಕೇಳದ ಪರೀದ್ ಸಾಬ್ ಮಗನ ಸಾವಿನ ನೋವು

ಫಯಾಜ್ ಇಸ್ಮಾಯಿಲ್ ಗೆ 5 ವರ್ಷ ಶಿಕ್ಷೆ,50 ಸಾವಿರ ದಂಡ

ಈ ಚಿತ್ರದಲ್ಲಿ ಕಾಣುವ ಸುರದ್ರೂಪಿ ಹುಡುಗನ ಹೆಸರು ಹಾಶಮ್ ಪರೀದ್ ಸಾಬ್, ಈತ ಸಾಗರತಾಲೂಕು ಚೂರಿಕಟ್ಟೆಯ ಪರೀದ್ ಸಾಬ್ ರ ಮಗ. ಇವರ ತಂದೆ ಪರೀದ್ ಸಾಬ್ ಸಿದ್ಧಾಪುರದಲ್ಲಿ ಒಂದು ಗುಜರಿ ಅಂಗಡಿ ನಡೆಸುತ್ತಾರೆ. ಮೂರುಜನ ಹೆಣ್ಣುಮಕ್ಕಳ ನಂತರ ಪರೀದ್ ಸಾಬ್ ರಿಗೆ ಹುಟ್ಟಿದ ಏಕೈಕ ಗಂಡುಮಗ ದುಡಿಮೆಗಾಗಿ ಕುವೈತ್ ಗೆ ಹೋಗುತ್ತಾನೆ. ಕೆಲವು ವರ್ಷಗಳಿಂದ ಕುವೈತ್ ನಲ್ಲಿ ದುಡಿಯುತಿದ್ದ ಈ ಹುಡುಗ ಕಳೆದ ವರ್ಷದ ಕೊನೆಯ ದಿನಗಳಲ್ಲಿ ಕುವೈತ್ ನಲ್ಲಿ ಸಮುದ್ರಕ್ಕೆ ಈಜಲು ಹೋಗಿ ಮೃತಪಟ್ಟ ಸುದ್ದಿ ಪರೀದ್ ಸಾಬರ ಕುಟುಂಬಕ್ಕೆ ಬಡಸಿಡಿಲಿನಂತೆ ತಿಳಿಯುತ್ತದೆ.

ಕೆಲವೇ ದಿವಸಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಮನೆಗೆ ಮರಳುತ್ತೇನೆ ಎಂದು ತಂದೆ-ತಾಯಿಗಳಿಗೆ ತಿಳಿಸಿದ್ದ ಹುಡುಗ 15 ದಿವಸಗಳ ಹಿಂದೆ ತೀರಿಹೋದ ಎನ್ನುವ ಆಘಾತಕಾರಿ ಸುದ್ದಿಯ ಜಾಡು ಹಿಡಿದ ಹಾಶಮ್ ಪಾ ಲಕರು,ಸಂಬಂಧಿಗಳಿಗೆ ಈ ಸಾವು ಆಕಸ್ಮಿಕವಲ್ಲ ಕೊಲೆ ಎನ್ನುವ ಮಾಹಿತಿ ತಿಳಿಯುತ್ತದೆ.

ಆಕಸ್ಮಿಕ,ಅವಗಢ ಗಳಾದಾಗ ಮೈ ಕೈ ನಡುಗುವುದು ಸ್ವಾಭಾವಿಕ ಹೀಗೆ ನಡುಗಿ ಹೋದ ಪರೀದ್ ಸಾಬರ ಕುಟುಂಬ ಈ ಬಗ್ಗೆ ವಿಚಾರಣೆ, ತನಿಖೆಗೆ ಬೆಂಗಳೂರಿನ ಭಾರತೀಯ ರಾಯಭಾರಿ ಕಛೇರಿಗೆ ದೂರು ನೀಡಿದೆ. ಆದರೆ ಫಲಶೃತಿ ಶೂನ್ಯ. ಹಾಶಮ್ ಕೊಲೆಯಾಗಿ 15 ದಿವಸ ಕಳೆದರೂ ಶವ ಮರಳಲಿಲ್ಲ. ಮೊದಮೊದಲು ಈಜಲು ಹೋಗಿ ಸಾವಿಗೀಡಾದ ಬಗ್ಗೆ ಮಾಹಿತಿ ತಿಳಿದು ವಿಚಾರಿಸಿದಾಗ ಹಾಶಮ್ ತನ್ನ ಬಾಡಿಗೆ ಮನೆಯಲ್ಲಿ ರಕ್ತಸಿಕ್ತವಾಗಿ ಶವವಾಗಿ ಕಂಡ ಬಗ್ಗೆ ದಾಖಲೆ ದೊರೆತಿದೆ. ಮಗನೂ ಇಲ್ಲ, ಮಗನ ಕಳೆಬರಹವೂ ಬಂದಿಲ್ಲ ಎನ್ನುವ ವೇದನೆಯಲ್ಲಿರುವ ಕುಟುಂಬ ದುಡಿಯಲು ಹೋದ ಮಗ ಮರಳದೆ, ಶವವನ್ನೂ ನೋಡದೆ ಕಂಗಾಲಾಗಿದೆ. ಈ ಬಗ್ಗೆ ಸೂಕ್ತ ಏರ್ಪಾಡಿಗೆ ಸ್ಥಳಿಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಫಯಾಜ್ ಇಸ್ಮಾಯಿಲ್ ಗೆ 5 ವರ್ಷ ಶಿಕ್ಷೆ,50 ಸಾವಿರ ದಂಡ

ಸಿದ್ಧಾಪುರ ಕುಣಜಿ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ ಕಳ್ಳತನ ಸಾಬೀತಾದ ಹಿನ್ನೆಲೆಯಲ್ಲಿ ಸಾಗರ ಎಸ್.ಎನ್. ನಗರದ ಫಯಾಜ್ ಇಸ್ಮಾಯಿಲ್ ಗೆ ಶಿರಸಿ ಜಿಲ್ಲಾ ನ್ಯಾಯಾಲಯ 50 ಸಾವಿರ ದಂಡ,5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ವ್ಯಕ್ತಿ ಸೆಪ್ಟೆಂಬರ್ 2016 ರಲ್ಲಿ ಸಿದ್ಧಾಪುರ ಅರಣ್ಯಇಲಾಖೆ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ.


ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ-

ಸಿದ್ಧಾಪುರ ಕೃಷಿ ಇಲಾಖೆ ಆವರಣದಲ್ಲಿ ರೈತ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಕೃಷಿ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿದಂತಹ ರೈತರಿಗೆ ಆತ್ಮ ಯೋಜನೆಯ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದರಂತೆ ತಾಲ್ಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರಾದ
1) ಚಾಮರಾಜನ ಗೌಡರ್ -ನೆಜ್ಜುರ್ ಗ್ರಾಮ – ಹೈಟೆಕ್ ಹಸಿರು ಮನೆ ಕೃಷಿ ವಿಭಾಗ
2)ಚಂದ್ರಶೇಖರ್ ಗೊಂಡ -ಡುಗಡಿಕೊಪ್ಪ – ಸಮಗ್ರ ಕೃಷಿ ಪದ್ಧತಿ ವಿಭಾಗ
3) ಸುನೀಲ್ ವೆಂಕಟರಮಣ ನಾಯ್ಕ್ -ಬೇಡ್ಕಣಿ – ಸಮಗ್ರ ಕೃಷಿ ಪದ್ಧತಿ ವಿಭಾಗ
4) ರಮೇಶ್ ಈಶ್ವರ್ ನಾಯ್ಕ್ – ಕಿಲಾರ – ರೇಷ್ಮೆ ಕೃಷಿ ವಿಭಾಗ
5) ರಾಮದಾಸ್ ಹನುಮ ನಾಯ್ಕ್ – ಹುಸೂರ್ – ಸಮಗ್ರ ಕೃಷಿ ಪದ್ಧತಿ ವಿಭಾಗ
6) ಶ್ರೀಧರ್ ಕೃಷ್ಣ ಹೆಗಡೆ – ಸಂಪಗೋಡು – ಸಮಗ್ರ ಸಾವಯವ ಕೃಷಿ ಪದ್ಧತಿ ವಿಭಾಗ (ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ) ಆತ್ಮ ಯೋಜನೆಯಡಿ ಈ ರೈತರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಾಂತ್ ಜಿ ಎಸ್ ಕೃಷಿ ನಿರ್ದೇಶಕರು, ಡಾ // ಶಿವಶಂಕರ್ ಮೂರ್ತಿ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ವಿ ಎಂ ಹೆಗಡೆ ತಾಲೂಕು ರೈತ ಸಂಘದ ಕಾರ್ಯದರ್ಶಿ ಹಾಗೂ ಆತ್ಮ ಯೋಜನೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *