ಒಂದು ತಿಂಗಳೊಳಗೆ ನಿಲ್ಕುಂದ-ಸಂತೆಗುಳಿ ರಸ್ತೆ ಸಿದ್ಧ- ಭರವಸೆ

ಸಿದ್ದಾಪುರ: ಪುರಾತನ ಕಾಲದ ನಿಲ್ಕುಂದ ಹಾಗೂ ಸಂತೆಗುಳಿ ರಸ್ತೆಯ ತಾತ್ಪೂರ್ತಿಕ ರಸ್ತೆಯ ರಿಪೇರಿ ಕಾರ್ಯವನ್ನು ಮುಂದಿನ 8 ದಿನಗಳಲ್ಲಿ ಪ್ರಾರಂಭಿಸಿ ಹೆಚ್ಚುವರಿ ಕಾಮಗಾರಿಯನ್ನು ಸೇರಿಸಿ ಜನಸಾಮಾನ್ಯರಿಗೆ ಓಡಾಡಲು 30 ದಿನಗಳಲ್ಲಿ ಸಿದ್ಧಪಡಿಸಿ ಕೊಡಲಾಗುವುದೆಂದು ಲೋಕೊಪಯೋಗಿ ಅಧಿಕಾರಿ ಸಭೆಯಲ್ಲಿ ಘೋಷಿಸಿದರು.

ರಸ್ತೆಯ ಕಾಮಗಾರಿಗೆ ತುರ್ತು ಕಾರ್ಯಯೋಜನೆ ಮಾಡಲು ಅಗ್ರಹಿಸಿ ಇಂದು ನಿಲ್ಕುಂದದಿಂದ ಕುಮಟ ಗಡಿಯವರೆಗೆ 7 ಕೀ.ಮಿ ಪಾದಯಾತ್ರೆ ಪೂರ್ಣಗೊಂಡು  ಏರ್ಪಡಿಸಿದ ಸಭೆಯಲ್ಲಿ ಅಧಿಕಾರಿಗಳು ಈ ಭರವಸೆ ನೀಡಿದರು.

ಸಂಪೂರ್ಣ ಜೀರ್ಣಾವ್ಯವಸ್ಥೆ ಗಿಡಗಂಟಿಗಳು, ಮಧ್ಯದಲ್ಲಿ ಮಳೆಗಾಲದಲ್ಲಿ ರಸ್ತೆಯ ಮೇಲೆ ಉರುಳಿಬಿದ್ದ ಮರ ದಾಟುತ್ತಾ ಹಿರಿಯ ಕಂದಾಯ, ಫಾರೆಸ್ಟ, ಪೊಲೀಸ್, ಅರಣ್ಯ ಅಧಿಕಾರಿಗಳು ಹೋರಾಟಗಾರರ ಜೊತೆಯಲ್ಲಿ ಪಾದಯಾತ್ರೆಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿತ್ತು 

ಅರಣ್ಯ ಅಧಿಕಾರಿಗಳಿಗೆ ಛಿಮಾರಿ:

ಸಾರ್ವಜನಿಕ ಹಿತಾಶಕ್ತಿಯ ರಸ್ತೆಯ ನಿರ್ವಹಣೆಯ ಹಿನ್ನೆಲೆಯಲ್ಲಿ ಪದೇ ಪದೇ ಅರಣ್ಯ ಸಿಬ್ಬಂದಿಗಳು ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಮಟ ಮತ್ತು ಸಿದ್ಧಾಪುರ ವಿಭಾಗದ ಅರಣ್ಯ ಅಧಿಕಾರಿಗಳು ಉಪಸ್ಥಿತರಿರುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮುಂಚಿತವಾಗಿ ಪತ್ರ ಬರೆಯಲಾಗಿದ್ದು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಸಾಮೂಹಿಕವಾಗಿ ಛಿಮಾರಿ ಹಾಕಿದರು.

ಅಧಿಕಾರಿಗಳ ದಂಡು ಹಾಜರ್:

ಪ್ರತಿಷ್ಠೆಯ ಹೋರಾಟದ ಪಾದಯಾತ್ರೆಗೆ ಸಿದ್ಧಾಪುರ ಸಿಪಿಐ ಎನ್ ಮಹೇಶ,     ಶಿರಸಿ ಸಿಪಿಐ ಪ್ರಮೋದ, ಡೆಪ್ಯೂಟಿ ಆರ್‍ಎಫ್‍ಒ ಹರೀಣಾ ಗ್ರೀಷ್, ಸಿದ್ಧಾಪುರ  ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಮುದಕಣ್ಣನವರ್, ಅಸಿಟೆಂಟ್ ಇಂಜಿನಿಯರ್ ಶಿವಪ್ರಕಾಶ, ಕುಮಟ ಅಸಿಟೆಂಟ್ ಇಂಜಿನಿಯರ್ ಸೋಮನಾಥ ಭಂಡಾರಿ, ಕುಮಟ ಪಿಎಸ್‍ಐ ಆನಂದ ಮೂರ್ತಿ, ಪಿಎನ್ ಜರಮಲ್ ಉಪತಹಶಿಲ್ದಾರ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತ್ರತ್ವವನ್ನು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ  ವಹಿಸಿದ್ದು ತುಕಾರಾಮ ಗೌಡ ಹುಕ್ಕಳಿ, ಬೀರಾ ಗೌಡ, ರವೀಶ್ ಹುತ್‍ಗಾರ, ಮಂಜುನಾಥ ನಾಯ್ಕ, ಈಶ್ವರ ಮರಾಠಿ ಬೆಂಗಳೆ, ಕೃಷ್ಣ ಮರಾಠಿ, ಮಾದೇವ ನಾಯ್ಕ, ಹರೀಶ್ ನಾಯ್ಕ, ನಾಗಪತಿ ಗೌಡ ಮಾಜಿ ಎಪಿಎಮ್‍ಸಿ ಸದಸ್ಯರು ಮುಂತಾದವರು ಭಾಗವಹಿಸಿದ್ದರು.


related old news-

ಬ್ರಿಟಿಷ್ ಆಳ್ವಿಕೆ ಅವಧಿಯಲ್ಲಿ ಕರಾವಳಿ ಭಾಗದವರಿಗೆ ಘಟ್ಟದ ಮೇಲಿನ ತಾಲೂಕುಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಸರಕಾರದ ತೀವ್ರ ನೀರ್ಲಕ್ಷ್ಯದಿಂದ 150 ವರ್ಷಕ್ಕಿಂತ ಹಳೆಯ ರಸ್ತೆ ಇಂದು ಅವಶೇಷದ ಕುರುಹುಗಳಾಗಿ ನಿಂತಿರುವುದು ವಿಷಾದಕರ.

ಶತಮಾನದ ಇತಿಹಾಸದ ರಸ್ತೆ ಪುನರ್ ಸ್ಥಾಪನೆಗೆ ಸ್ಥಳೀಕರು ಸಂಘಟನಾತ್ಮಕವಾಗಿ ಹೋರಾಟಕ್ಕೆ ಧುಮುಕಲು ನಿರ್ಧರಿಸಿರುವುದು ಸಾರ್ವಜನಿಕವಾಗಿ ಉತ್ತಮ ಪ್ರಕ್ರಿಯೇ ದೊರಕುತ್ತಿದೆ.

ಪಾದಯಾತ್ರೆ:

ಸರ್ವಋತು ರಸ್ತೆಗೆ ಅಗ್ರಹಿಸಿ ಫೆಬ್ರವರಿ 18 ಗುರುವಾರ ಮುಂಜಾನೆ 9:30 ಗಂಟೆಗೆ ನಿಲ್ಕುಂದದಿಂದ ಬೃಹತ್ ಪಾದಯಾತ್ರೆ ಪ್ರಾರಂಭವಾಗಿ ಕರ್ಮನಘಟಗಿಯಿಂದ 2 ಕೀ.ಮಿ ದೂರದಲ್ಲಿರುವ ಸಿದ್ಧಾಪುರ-ಕುಮಟ ಗಡಿಯಾದ ಪೆರಲಮಾರಿಯಲ್ಲಿಯವರೆಗೂ 7 ಕೀ.ಮಿ ಪಾದಯಾತ್ರೆಯೂ 11 ಗಂಟೆಗೆ ತಲುಪಿ ಸಭೆಯಾಗಿ ಪರಿವರ್ತನೆಗೊಳ್ಳುವುದು. ಸದ್ರಿ ಸಭೆಗೆ ಕಂದಾಯ, ಪೋಲಿಸ್, ಲೋಕಪಯೋಗಿ ಹಾಗೂ ಅರಣ್ಯ ಇಲಾಖೆಯವರಿಗೆ ಮುಂಚಿತವಾಗಿ ಸಭೆಯಲ್ಲಿ ಉಪಸ್ಥಿತರಿದ್ದು, ರಸ್ತೆ ದುರಸ್ಥಿಗೆ ಮತ್ತು ವಿಳಂಬಕ್ಕೆ  ಕಾರಣದ ಸ್ಪಷ್ಪೀಕರಣ ನೀಡಬೆಕೆಂದು ಸಂಘಟಿಕರು ಜಿಲ್ಲಾಧಿಕಾರಿಗಳಿಗೆ ಇಗಾಗಲೇ ಮನವಿ ನೀಡಿದ್ದಾರೆ. 

ಹಗಲು-ರಾತ್ರಿ ಧರಣಿಗೆ ನಿರ್ಧಾರ:

ಪಾದಯಾತ್ರೆ ಮುಗಿದ ನಂತರ ಕುಮಟ-ಸಿದ್ಧಾಪುರ ಗಡಿಯಲ್ಲಿ ಸಂಬಂಧಿಸಿದ ರಸ್ತೆಯ ಕುರಿತು ಪರಿಶಿಲಿಸದೇ ಸೂಕ್ತ ಮಾಹಿತಿ ಮತ್ತು ದಾಖಲೆ ಕೊಡುವಲ್ಲಿ ಗೈರಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿರಂತರ ಹಗಲು-ರಾತ್ರಿ ನೂರಾರು ಕಾರ್ಯಕರ್ತರ ಧರಣಿ ಸ್ಥಳಿದಲ್ಲಿಯೇ ಜರುಗಿಸಲಾಗುವುದು ಎಂದು ಸಂಘಟಿಕರು ತಿರ್ಮಾನಿಸಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಹೋರಾಟಗಾರರ ಪ್ರಾಣಕ್ಕೆ ತೊಂದರೆ ಉಂಟಾದಲ್ಲಿ ಸಂಬಂಧಿಸಿದ ಇಲಾಖೆಯು ಜವಾಬ್ದಾರಿಯಾಗುವುದು ಎಂದು ಸಂಘಟಿಕರು ಎಚ್ಚರಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *