ಕಪ್ಪು ಜನರ ಕೆಂಪು ಕಾವ್ಯ…..

‘1977 ರಲ್ಲಿ ಕ್ರಾಂತಿಕಾರಿ ಕವಿಗಳಿಗೆ ತಿಳಿಯಿತು -ಕಾವ್ಯ ಎಷ್ಟೇ ಪ್ರಯತ್ನಿಸಿದರೂ ಕ್ರಾಂತಿ ಮಾಡುವುದು ಕಷ್ಟ. ಬಸವರಾಜ ಎಂಬ ಮಂಡ್ಯದ ಹುಡುಗನಿದ್ದ; ಒಕ್ಕಲಿಗರ ಹುಡುಗನೀತ; ಸದಾ ಕಷ್ಟದಲ್ಲಿರುತ್ತಿದ್ದ ಈತ ಕ್ರಾಂತಿಕಾರಿ. ವ್ಯವಸ್ಥೆ ಮತ್ತು ಶೋಷಕರ ವಿರುದ್ಧ ಎಲ್ಲೇ ಪ್ರತಿಭಟನೆ, ಧರಣಿ, ಸಭೆ ನಡೆದರೂ ಅಲ್ಲಿರುತ್ತಿದ್ದ. ನನಗೆ ತುಂಬ ಹತ್ತಿರದವನು ಈತ. ಇವನು ಬಳಲಿ, ಮೈಯಲ್ಲಿ ಹನಿ ರಕ್ತವಿಲ್ಲದೆ, ಉಣ್ಣಲು ಅನ್ನವಿಲ್ಲದೆ ದಿಕ್ಕೆಟ್ಟು ನನ್ನನ್ನು ನೋಡುತ್ತಿದ್ದಾಗ ನಾನು ಅವನನ್ನು ಕೇಳುತ್ತಿದ್ದುದು ‘ಏನಾದರೂ ಕೆಲಸ ಸಿಕ್ಕಿತಾ, ಏನಾದರೂ ವ್ಯವಸ್ಥೆ ಮಾಡಿಕೊಂಡಿದ್ದೀಯಾ?’ ಎಂದು; ಅವನನ್ನು ಎಂದೂ, ‘ಇನ್ನಷ್ಟು ಕ್ರಾಂತಿಕಾರಕವಾಗಿ ಹೋರಾಡು’ ಎಂದು ಪ್ರೋತ್ಸಾಹಿಸುತ್ತಿರಲಿಲ್ಲ.

ಈ ಅಮಾಯಕ ಬಸವರಾಜ ತುರ್ತು ಪರಿಸ್ಥಿತಿಯಲ್ಲಿ (1975-77 ರಲ್ಲಿ) ಯಾರೋ ಪೊಲೀಸರೊಂದಿಗೆ ಜಗಳ ಆಡಿರಬೇಕು. ಅವನ ಹೆಣ ರೈಲು ಕಂಬಿಗಳ ಮೇಲೆ ಬಿದ್ದಿತ್ತು. ತುರ್ತು ಪರಿಸ್ಥಿತಿ ಮುಗಿದ ಮೇಲೆ ಕೂಡ ಯಾರೂ ಈ ಬಗ್ಗೆ ವಿಚಾರಣೆಯಾಗಬೇಕು ಎಂದು ಒತ್ತಾಯಿಸಲಿಲ್ಲ. ನಾವೆಲ್ಲ ಯಥಾಪ್ರಕಾರ ಭಾಷಣ ಮಾಡಿದೆವು. ಹೇಳಿಕೆ ಕೊಟ್ಟೆವು, ಬಸವರಾಜನನ್ನು ಹೊಗಳಿದೆವು. ಕೋಪ ತೀರಾ ಉಲ್ಬಣಿಸಿದಾಗ ಪದ್ಯ ಬರೆದೆವು!1977 ರ ಫೆಬ್ರವರಿ ತಿಂಗಳಲ್ಲಿ ಪ್ರಕಟವಾದ ‘ಕಪ್ಪು ಜನರ ಕೆಂಪು ಕಾವ್ಯ’ ಈ ಪುಸ್ತಕ ನೋಡಿದಾಗ ಇನ್ನೊಂದು ನೆನಪು. ‘ಕಪ್ಪು ಜನ’ ಎನ್ನುವುದು ಶೋಷಣೆಗೊಳಗಾದ ದಲಿತರು, ಹಿಂದುಳಿದವರು. ‘ಕೆಂಪು’ ಎನ್ನುವುದು ಕೋಪ, ರಕ್ತ, ಕ್ರಾಂತಿ- ಇದಕ್ಕೆಲ್ಲ ಸಂಕೇತ. ನಾವೆಲ್ಲ ಲೇಖಕರಾಗಿ ಬೆಳೆದದ್ದು ಈ ವೇಳೆಯಲ್ಲಿ; ಪದ್ಯ ಅಥವಾ ಕತೆ ನೇರವಾಗಿ ಕ್ರಾಂತಿ ಮಾಡಲಾರವು; ಕಪ್ಪು ಶೋಷಿತ ಜನರಿಗೆ ಎಲ್ಲರಿಗಿಂತ ಹೆಚ್ಚಾಗಿ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಪ್ರತಿಭಟನಾ ಸ್ವಾತಂತ್ರ್ಯ ಬೇಕು; ಬುದ್ದಿಜೀವಿಗಳಿಗಿಂತಲೂ ನೊಂದ ಜನರಿಗೆ ವಾಕ್ ಸ್ವಾತಂತ್ರ್ಯ ಬೇಕು; ತೀರಾ ಕ್ರಾಂತಿಕಾರರಾಗಿ ಎಗರಾಡುವ ಜನ ಸಮಯ ಸಿಕ್ಕೊಡನೆ ಶೋಷಿಸುವ ಖದೀಮರು ಅಥವಾ ಹುಚ್ಚರು ಆಗುತ್ತಾರೆ; ಮಾತಿನ ಕ್ರಾಂತಿ ನಿಜವಾದ ಕ್ರಾಂತಿಗೆ ದಾರಿ ಮಾಡಿಕೊಡುವ ಬದಲು ಕೆಟ್ಟವರು ಮುಂದೆ ಬರಲು ಸಹಾಯಕವಾಗಿದೆ.

ಮನುಷ್ಯ ತ್ಯಾಗ ಮಾಡಿದಷ್ಟೂ ಲಾಭ ನಿರೀಕ್ಷಿತೊಡಗುತ್ತಾನೆ- ತುರ್ತು ಪರಿಸ್ಥಿತಿಯಲ್ಲಿ ಜೈಲಲ್ಲಿದ್ದ ಕೆಲವರು ಖದೀಮರು ಈಗ ಏನಾಗಿದ್ದಾರೆ ನೋಡಿ.!ಆಗ ಈ ‘ಕಪ್ಪು ಜನರ ಕೆಂಪು ಕಾವ್ಯ’ ಪುಸ್ತಕಕ್ಕೆ ಚಿತ್ರ ಬರೆದವರು, ಮುನ್ನುಡಿ ಬರೆದವರು, ರಕ್ತಸಿಕ್ತ ಪದ್ಯ ಬರೆದವರು ಈಗ ಏನಾಗಿದ್ದಾರೆ ಎಂದು ಹೇಳುವುದಿಲ್ಲ, ಅದು ಈಗ ಬೇಡ. ಆ ಪುಸ್ತಕದಲ್ಲಿ ಹಿನ್ನುಡಿ ರೂಪದ ನನ್ನದೊಂದು ಕವನವಿದೆ. ಹೋರಾಡುವುದಕ್ಕೆ ಬದಲು ನಾವೆಲ್ಲ ಕವನ ಬರೆಯುವುದನ್ನು ನೋಡಿ ಬರೆದದ್ದು;ಆತ್ಮೀಯರೇನಿಮ್ಮ ಕವನಗಳು ತಲುಪಿವೆನಮ್ಮ ಜನಕ್ಕೆ ತಲುಪುತ್ತವೆಯೋ ಎಂಬ ಬಗ್ಗೆನನಗೆ ಅನುಮಾನವಿದೆ- ಕವನವಲ್ಲಕತ್ತಿ ಕೂಡಾ ತಲುಪದ ಸ್ಥಿತಿ ಈ ಜನರದ್ದು. ನಾವು ನೀವು ಹೀಗೆ ಕವನಗಳಲ್ಲಿಕಸರತ್ತು ಮಾಡಲುಎಂಥ ತಪ್ಪನ್ನೂ ಮಾಡಿರಲಿಲ್ಲ.ಸುಳ್ಳುಗಳನ್ನು ನಾಚಿಕೆಬಿಟ್ಟು ಹೇಳಿಸುಳ್ಳುಗಳ ದಲಿತೋದ್ಧಾರ ಮಾಡಿಕಳ್ಳತನದ ಲಾಭವನ್ನು ಎಂದೂ ಗುಟ್ಟಾಗಿ ಹಂಚಿಕೊಂಡು ತಿಂದಿರಲಿಲ್ಲ.ಕೊನೆಗೂ ಕಾವ್ಯದ ಹೆಣ್ಣಿನ ತೊಡೆಯಲ್ಲಿಅವಮಾನದ ಮುಖವನ್ನಿಟ್ಟುಅಳಬೇಕಾದ ಸ್ಥಿತಿ ಬಂದೀತೆಂದುನಾನಂತೂ ಬಗೆದಿರಲಿಲ್ಲ.ಗಾಳಿ ಕೊಂಚ ಗಾಳಿಯ ಗುಣ ಕಳೆದುಕೊಂಡುನೀರು ಕೊಂಚ ನೀರಿನ ಗುಣ ಕಳೆದುಕೊಂಡುನೆಲ ತನ್ನ ಸೈರಣೆ ಕಳೆದುಕೊಂಡುಸ್ತಬ್ಧವಾಗಿದ್ದಾಗ;ಈ ಕವನ ಸಂಕಲನಕೆಲವರ ಕಿವಿಯಲ್ಲಾದರೂಜೀವ ಬರಿಸಿದರೆಅಷ್ಟೇ ಸಾಕು…-

ಪಿ. ಲಂಕೇಶ್ಕೃಪೆ: -ಮರೆಯುವ ಮುನ್ನ (ಸಂಗ್ರಹ-3, 2011)PC : Sridhar

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *