ಕಾರಿನಲ್ಲಿ ಕೂತು ಎಣ್ಣೆ ಹೊಡೆಯುವುದು ಅಪರಾಧವೆ?

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಅಪರಾಧ: ಆದರೆ ಕಾರಿನಲ್ಲಿ ಕುಳಿತು ಎಣ್ಣೆ ಹೊಡೆಯುವುದು ಕಾನೂನು ಬಾಹೀರವೇ?

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂದು ಎಲ್ಲರಿಗೂ ಗೊತ್ತು. ಆದರೆ ಮೋಜಿಗಾಗಿ ಕಾರಿನಲ್ಲಿ ಕೂತು ಅನೇಕರು ಮದ್ಯ ಸೇವಿಸುವುದನ್ನು ನಾವು ನೋಡಿದ್ದೇವೆ. ಅನೇಕ ಜನರು ವಾಹನ ಚಾಲನೆ ಮಾಡುವಾಗ್ಲೂ ಡ್ರಿಂಕ್…

alcohol

ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂದು ಎಲ್ಲರಿಗೂ ಗೊತ್ತು. ಆದರೆ ಮೋಜಿಗಾಗಿ ಕಾರಿನಲ್ಲಿ ಕೂತು ಅನೇಕರು ಮದ್ಯ ಸೇವಿಸುವುದನ್ನು ನಾವು ನೋಡಿದ್ದೇವೆ. ಅನೇಕ ಜನರು ವಾಹನ ಚಾಲನೆ ಮಾಡುವಾಗ್ಲೂ ಡ್ರಿಂಕ್ ಮಾಡುತ್ತಾರೆ. ಇದು ತಪ್ಪು ಅನ್ನೋದು ನಮ್ಮ ಅರಿವಿಗೆ ಬರುತ್ತದೆ. ಆದರೆ ಕಾರು ಅನ್ನೋದು ನಿಮ್ಮ ಸ್ವಂತದ್ದಾಗಿರೋದ್ರಿಂದ ಅದರಲ್ಲಿ ಕೂತಿರುವುದು ಖಾಸಗಿ ಜಾಗ ಅನ್ನೋದು ಹಲವರ ಲೆಕ್ಕಾಚಾರ. ಇದರಲ್ಲಿ ಕುಳಿತು ಮದ್ಯ ಸೇವಿಸಿದ್ರೆ ತಪ್ಪೇನು ಅನ್ನೋದು ಹಲವರ ಅಭಿಪ್ರಾಯ. 

ಇನ್ನೊಂದು ವಾದದ ಪ್ರಕಾರ ಕಾರಿನಲ್ಲಿ ಕುಳಿತು ಮದ್ಯಪಾನ ಮಾಡೋದು ಅಪರಾಧ ಅಂತಾ ಇನ್ನೊಂದಿಷ್ಟು ಜನ ಹೇಳ್ತಾರೆ. ಆದ್ದರಿಂದ ಇಂದು ನಾವು ಕಾರು ಖಾಸಗಿ ಸ್ಥಳವೇ ಅಥವಾ ಸಾರ್ವಜನಿಕ ಸ್ಥಳವೇ ಅನ್ನೋ ಬಗ್ಗೆ ಸರಿಯಾದ ಉತ್ತರವನ್ನು ಹುಡುಕುವ ಕೆಲಸ ಮಾಡೋಣ. ಅಲ್ಲದೆ ಕಾರಿನಲ್ಲಿ ಕುಳಿತು ಮದ್ಯ ಸೇವಿಸುವುದು ಕಾನೂನು ಬಾಹಿರವೇ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಕಾರಿನಲ್ಲಿ ಮದ್ಯಪಾನ ಮಾಡುವುದು ಕಾನೂನುಬಾಹಿರವೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು ಕಾರು ಸಾರ್ವಜನಿಕ ಸ್ಥಳವೇ ಅಥವಾ ಖಾಸಗಿ ಜಾಗವೇ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ನಂತರವೇ ಕಾರಿನಲ್ಲಿ ಮದ್ಯಪಾನವು ಯಾವ ವರ್ಗದಲ್ಲಿ ಸೇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನ್ಯಾಯಾಲಯಗಳು ಸಹ ಕಾರನ್ನು ಸಾರ್ವಜನಿಕ ಹಾಗೂ ಖಾಸಗಿ ಸ್ಥಳವೆಂದು ಪರಿಗಣಿಸಿವೆ. ಆದ್ರೆ ವಾಸ್ತವವಾಗಿ ಘಟನೆಯನ್ನು ನೋಡುವಾಗ ಕಾರನ್ನು ಯಾವ ಜಾಗದಲ್ಲಿ ನಿಲ್ಲಿಸಲಾಗಿದೆ ಹಾಗೂ ಆ ಸಮಯದಲ್ಲಿನ ಪರಿಸ್ಥಿತಿಯ ಮೇಲೆ ಪ್ರಕರಣ ಅವಲಂಬಿತವಾಗಿರುತ್ತದೆ. ಅಂದಹಾಗೆ ನಿಮ್ಮ ಮನೆಯಿಂದ ಹೊರಬಂದ ನಂತರ ಕಾರು ಚಲಿಸುತ್ತಿದ್ದರೆ ಅಥವಾ ರಸ್ತೆಯ ಮೇಲೆ ನಿಲ್ಲಿಸಿದರೆ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿದ್ದರೆ ಅದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣನೆ ಮಾಡಲಾಗುತ್ತದೆ. ಈ ವೇಳೆ ಎಲ್ಲಾ ಕೆಲಸಗಳನ್ನು ಕಾರಿನಲ್ಲಿಯೂ ಮಾಡಲಾಗುವುದಿಲ್ಲ ಅನ್ನೋದನ್ನು ಸಾಮನ್ಯವಾಗಿ ನಂಬಲಾಗಿದೆ.

ದೆಹಲಿ ಹೈಕೋರ್ಟ್ ವಕೀಲರ ಪ್ರಕಾರ, “ಇತ್ತೀಚೆಗೆ, ಕಾರಿನಲ್ಲಿ ಮಾಸ್ಕ್ ಹಾಕುವ ಕುರಿತು ಚರ್ಚೆ ನಡೆದಾಗ ರಸ್ತೆಯಲ್ಲಿ ಓಡುವ ಕಾರನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಿ ಅದನ್ನು ಕಡ್ಡಾಯಗೊಳಿಸಲಾಗಿತ್ತು. ಕಾರನ್ನು ಖಾಸಗಿ ಸ್ಥಳವೆಂದು ಪರಿಗಣಿಸುವುದು ಕಾನೂನಿನ ಮಿಶ್ರ ಪ್ರಶ್ನೆಯಾಗಿದೆ. ಕಾರು ಸಾರ್ವಜನಿಕವೇ ಅಥವಾ ಇಲ್ಲವೇ ಎಂಬುದನ್ನು ಸ್ಥಳದಿಂದ ನಿರ್ಧರಿಸಲಾಗುತ್ತದೆ.

ಕೆಲವೊಮ್ಮೆ ನ್ಯಾಯಾಲಯದ ಕಡೆಯಿಂದ ಕಾನೂನುಗಳ ವ್ಯಾಖ್ಯಾನದ ವೇಳೆ ನ್ಯಾಯಾಂಗವೇ ನಿರಾಕರಿಸುವಂತಹ ಸನ್ನಿವೇಶಗಳು ಉದ್ಭವವಾಗುತ್ತವೆ. ದೆಹಲಿ ಹೈಕೋರ್ಟ್ ಕಾರನ್ನು ಸಾರ್ವಜನಿಕ ಸ್ಥಳವೆಂದು ಘೋಷಿಸಿದ್ದರೂ 2021ರಲ್ಲಿ ಬೂಟಾ ಸಿಂಗ್ ವರ್ಸಸ್ ಸ್ಟೇಟ್ ಆಫ್ ಹರಿಯಾಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾರನ್ನು NDPCA ಯ ಸೆಕ್ಷನ್ 43ರ ಅಡಿಯಲ್ಲಿ ಖಾಸಗಿ ಸ್ಥಳವೆಂದು ಪರಿಗಣಿಸಿತು.

ಕಾರಿನಲ್ಲಿ ಮದ್ಯ ಸೇವಿಸುವುದು ಕಾನೂನು ಬಾಹಿರವೇ?
ಇಂತಹ ಪರಿಸ್ಥಿತಿಯಲ್ಲಿ ಭಾರತದ ಕಾನೂನು ರಸ್ತೆಯಲ್ಲಿ ಓಡುವ ಅಥವಾ ನಿಲ್ಲಿಸುವ ಕಾರನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಲಾಗುತ್ತದೆ. ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರಲ್ಲಿ ಯಾರಾದರೂ ಮದ್ಯಪಾನ ಮಾಡುತ್ತಿದ್ದರೆ ಅದು ಕಾನೂನುಬಾಹೀ ರವಾಗಿದೆ. ಆದರೆ ಕಾರನ್ನು ಖಾಸಗಿ ಜಾಗದಲ್ಲಿ ಅಂದರೆ ನಿಮ್ಮ ಗ್ಯಾರೇಜ್‌ನಲ್ಲೋ ಅಥವಾ ಇನ್ಯಾವುದೋ ಪ್ರೈವೇಟ್ ಜಾಗದಲ್ಲಿ ನಿಲ್ಲಿಸಿ ಮದ್ಯ ಕುಡಿಯಬಹುದು. (KPC)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *