deshpande 75- ೨೫ ರಿಂದ ೭೫ ರ ವರೆಗೆ ಚುರುಕಿನ ನಡಿಗೆ

ಆರ್.ವಿ.ದೇಶಪಾಂಡೆ ರಾಜ್ಯ ರಾಜಕಾರಣದ ಮಹತ್ವದ ಹೆಸರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ಮುಂಡಗೋಡು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಆರ್.ವಿ.ದೇಶಪಾಂಡೆ ತಿರುಗಿ ನೋಡಿದ್ದೇ ಇಲ್ಲ. ಕಾಂಗ್ರೆಸ್‌ ನಿಂದ ಜನತಾದಳ, ಲೋಕಶಕ್ತಿ,ಮರಳಿ ಕಾಂಗ್ರೆಸ್‌ ದೇಶಪಾಂಡೆ ಹೋದ ಕಡೆ ಅಧಿಕಾರ ಬರುತ್ತೋ,ಅಧಿಕಾರ ಅರಸಿ ದೇಶಪಾಂಡೆ ಹೋದಾಗಲೆಲ್ಲಾ ಅವಕಾಶ ದೊರೆಯುತ್ತೋ ಎನ್ನುವುದೇ ಒಗಟು. ಹಳಿಯಾಳದ ಯುವ ವಕೀಲ ರಘುನಾಥ ವಿಶ್ವನಾಥ ದೇಶಪಾಂಡೆ ೨೫ ರ ಹರೆಯದಲ್ಲೇ ರಾಜಕೀಯ ಪ್ರವೇಶಿಸಿದರು ಅಂದಿನಿಂದ ಈವರೆಗೆ ದೇಶಪಾಂಡೆ ೫ ದಶಕಗಳ ಕಾಲ ರಾಜ್ಯ ರಾಜಕಾರಣದ ಭಾಗವಾಗಿ ಈವರೆಗೆ ೮ ಬಾರಿ ಶಾಸಕರಾಗಿ, ಸಚಿವರಾಗಿ, ಪಕ್ಷದ ರಾಜ್ಯ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ ಚಾಪು ಮೂಡಿಸಿದ್ದಾರೆ.

೫೦ ವರ್ಷಗಳ ತಮ್ಮ ರಾಜಕೀಯದ ಸುದೀರ್ಘ ಅವಧಿಯಲ್ಲಿ ಹಲವು ಬಾರಿ ತಾವು ಬಯಸಿದ ಖಾತೆ ಪಡೆದು ಹೆಸರು ಮಾಡಿದ್ದಾರೆ. ಹಳಿಯಾಳ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಭಿವೃದ್ಧಿ ಕೆಲಸಗಳ ಕಾಮಗಾರಿ ಫಲಕಗಳ ಮೇಲೆ ತಮ್ಮ ಹೆಸರು ಛಾಪಿಸಿರುವ ದೇಶಪಾಂಡೆ ತಮ್ಮ ಗುರುವಿಗಾಗಿ ತಮ್ಮ ಕ್ಷೇತ್ರ-ಹುದ್ದೆಗಳನ್ನೆಲ್ಲಾ ಬಿಟ್ಟುಕೊಟ್ಟ ಧೀಮಂತ. ಜನತಾದಳದಿಂದ ರಾಮಕೃಷ್ಣ ಹೆಗಡೆಯವರನ್ನು ಉಚ್ಛಾಟಿಸಿದ್ದಾಗ ಗುರು ಹೆಗಡೆಯವರೊಂದಿಗೆ ಜನತಾದಳ ಬಿಟ್ಟುಬಂದ ದೇಶಪಾಂಡೆ ಗುರುವಿಗಾಗಿಮಿಡಿದ ಶಿಷ್ಯ.

ರಾಜಕೀಯ ಗರಡಿಯ ಬಿಗಿಪಟ್ಟುಗಳ ೫೦ ವರ್ಷದ ಸುವರ್ಣ ಅನುಭವಕ್ಕೂ ತಮ್ಮ ಬದುಕಿನ ಅಮೃತಮಹೋತ್ಸವಕ್ಕೂ ಸರಿಯಾಗಿ ೭೫ ವರ್ಷಗಳ ಅವಧಿಯಲ್ಲಿ ೫೦ ವರ್ಷ ನಿರಂತರ ರಾಜಕಾರಣ ಮಾಡಿರುವ ದೇಶಪಾಂಡೆ ಈಗಲೂ ದಣಿದಿಲ್ಲ. ಸರ್ಕಾರ ಬರಲಿ, ಅಧಿಕಾರ ಇರಲಿ, ಇಲ್ಲದಿರಲಿ ಸರ್ಕಾರ, ಪಕ್ಷದ ವಲಯದಲ್ಲಿ ವರ್ಚಸ್ವಿ ನಾಯಕರಾಗಿ ಹೆಸರುಮಾಡಿರುವ ಇವರ ವಿಶೇಶವೆಂದರೆ ಪಕ್ಷ,ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆಯೆ ವಿನ: ದೇಶಪಾಂಡೆ ಯಾರ ವಯಕ್ತಿಕ ವಿಚಾರದಲ್ಲಿ ಮಾತನಾಡುವ ವ್ಯಕ್ತಿಯಲ್ಲ. ಜಿಲ್ಲೆಯ ತಂತ್ರಗಾರಿಕೆಯ ಮೇಲ್ವರ್ಗ, ಬಹುಸಂಖ್ಯಾತ ಹಿಂದುಳಿದ ವರ್ಗ ಎಲ್ಲರ ನಡುವೆ ಅಲ್ಪಸಂಖ್ಯಾತನಾಗಿ ಜನಪ್ರತಿನಿಧಿಯಾಗುತ್ತಾ ಎಲ್ಲರ ಅಚ್ಚರಿಗೆ ಕಾರಣವಾದ ದೇಶಪಾಂಡೆ ಈಗ ತಮ್ಮ ಮಗ ಪ್ರಶಾಂತ್‌ ದೇಶಪಾಂಡೆ ಮೂಲಕ ರಾಜಕೀಯ ಪ್ರಯೋಗಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ನಿರಂತರ ಅಧಿಕಾರ,ಅನುಕೂಲಗಳ ಸುಖ ಕಂಡರೂ ಅದನ್ನು ಅಮಲಾಗಿಸಿಕೊಳ್ಳದ ದೇಶಪಾಂಡೆ ಈಗಲೂ ತಮ್ಮ ಸಂಸ್ಥೆ, ಟ್ರಸ್ಟ ಗಳ ಮೂಲಕ ಸಮಾಜಸೇವೆಯಲ್ಲಿದ್ದಾರೆ. ಕೋವಿಡ್‌ ಅವಧಿ, ಪ್ರವಾಹ ಪರಿಸ್ಥಿತಿಗಳಲ್ಲಿ ಪರ್ಯಾಯ ಸರ್ಕಾರದ ರೀತಿ ಕೆಲಸ ಮಾಡಿರುವ ದೇಶಪಾಂಡೆ ಅಪ್ಪ ಮಕ್ಕಳು ತಮ್ಮ ಕುಟುಂಬದ ೫ ದಶಕಗಳ ರಾಜಕೀಯ ಪರಂಪರೆಯ ಮುಂದುವರಿಕೆಗೆ ಪಣ ತೊಟ್ಟಂತಿದೆ. ಅಸಂಖ್ಯ ವರ್ಷಗಳ ರಾಜಕೀಯ ಶಕ್ತಿಯಿಂದ ತಮ್ಮ ವಲಯ ಬೆಳೆಸಿಕೊಂಡಿರುವ ಮಾಜಿ ಸಚಿವ ದೇಶಪಾಂಡೆ ಮಾರ್ಚ್‌ ೧೬ ರಂದು ತಮ್ಮ ೭೫ ನೇ ಜನ್ಮದಿನ ಆಚರಿಸಿಕೊಳ್ಳುತಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *