ರಮಣೀಯ ನಿಸರ್ಗತಾಣ ಹೊನ್ನೆಮರಡು!

ಪ್ರಕೃತಿ,ಅರಣ್ಯ, ನೀರು ಇರುವ ಪ್ರದೇಶಗಳೆಂದರೆ ಪ್ರವಾಸಿಗರಿಗೆ ಮೆಚ್ಚಿನ ಸ್ಥಳ. ಪಿಕ್‌ ನಿಕ್‌, ಟೂರ್‌ ಹೋಗುವವರ ಆಯ್ಕೆ ಕೂಡಾ ನೈಸರ್ಗಿಕ ಆಕರ್ಷಣೆಗಳೇ ಹೆಚ್ಚಿರುವುದು ಸಾಮಾನ್ಯ. ಇಂಥ ಸ್ಥಳಗಳಲ್ಲಿ ಪ್ರವಾಸಿಗರು ಬಂದು ಅಲ್ಲಿಯ ವಾತಾವರಣ ಕಲುಷಿತ ಮಾಡುತ್ತಿರುವುದಕ್ಕೆ ನೂರಾರು ದೃಷ್ಟಾಂತಗಳು ದೊರೆಯುತ್ತವೆ.ಆದರೆ ನೀವಿಲ್ಲಿ ನೋಡುತ್ತಿರುವ ಹೊನ್ನೆಮರಡು ಇವಕ್ಕೆಲ್ಲಾ ಅಪವಾದ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಈ ಹಿನ್ನೀರಿನ ಪ್ರದೇಶ ವಾಸ್ತವದಲ್ಲಿ ಸ್ವರ್ಗ ಸದೃಶ ಎಂದರೆ ಉತ್ಪ್ರೇಕ್ಷೆಯಲ್ಲ. ಇಲ್ಲಿರುವ ಹಿನ್ನೀರು ಸೃಷ್ಟಿಸಿರುವ ಕಾಡುದ್ವೀಪಗಳು,ಹಿನ್ನೀರಿನ ಅಲೆಗಳ ಮೊರೆತ ಎಂಥವರಲ್ಲೂ ರಸಿಕತ್ವ, ಕವಿತ್ವವನ್ನು ಎಚ್ಚರಿಸದೆ ಇರದು.


ಇಷ್ಟು ನೈಸರ್ಗಿಕ, ಸುಂದರ,ರಮಣೀಯ ಪ್ರದೇಶವೆಂದರೆ ಇಲ್ಲಿ ಪ್ರವಾಸಿಗರ ದಂಡು ಸಾಮಾನ್ಯ, ಬೇರೆ ಪ್ರದೇಶಗಳಂತೆ ಇಲ್ಲಿಯೂ ಪ್ರವಾಸಿಗರ ಆಟಾಟೋಪ ಎಂದುಕೊಂಡರೆ ನಿಮ್ಮ  ಅಭಿಪ್ರಾಯ, ಪೂರ್ವಾಗ್ರಹ ತಪ್ಪು ಯಾಕೆಂದರೆ ಇಲ್ಲಿ ನೀವು ಪ್ಲಾಸ್ಟಿಕ್‌, ಗಾಜು ಇತರ ಮಲಿನ ವಸ್ತುಗಳನ್ನು ಕಾಣಲು ಸಾಧ್ಯವಿಲ್ಲ.
ಈ ಪ್ರಕೃತಿ ಸೊಬಗಿನಲ್ಲಿ ಭಾರತೀಯ ಸಾಹಸ ಸಮನ್ವಯ ಕೇಂದ್ರ ನಡೆಸುವ ದಂಪತಿಗಳು ಈ ಪ್ರದೇಶದಲ್ಲಿ ಪ್ರವಾಸಿಗರು ತೊಂದರೆ ಮಾಡದಂತೆ, ಮಾಲಿನ್ಯ ಮಾಡದಂತೆ ತಡೆದಿದ್ದಾರೆ.


ವರ್ಷದಲ್ಲಿ ಹಲವು ಬಾರಿ ಇಲ್ಲಿ ಜಲಸಾಹಸ ಕ್ರೀಡೆ,ನೆಲ-ಜಲಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಸಂಯೋಜಿಸುವ ಭಾರತೀಯ ಸಾಹಸ ಸಮನ್ವಯ ಕೇಂದ್ರ ಉಳಿದ ಅವಧಿಯಲ್ಲಿ ಇಲ್ಲಿ ಪ್ರವಾಸಿಗರ ಆಟಾಟೋಪ ನಿಯಂತ್ರಿಸುತ್ತದೆ. ಹೊರ ಪ್ರದೇಶದಿಂದ ಬರುವವರು, ಸ್ಥಳಿಯರಿಗೆ ಇಲ್ಲಿಯ ಪ್ರಕೃತಿಯಲ್ಲಿ ಅನುಚಿತ ಕೆಲಸ, ನಡವಳಿಕೆ ನಡೆಸದಂತೆ ಎಚ್ಚರಿಕೆ ನೀಡುವ ಸಂಸ್ಥೆಯ ಸಿಬ್ಬಂದಿಗಳು ಈ ಪ್ರದೇಶವನ್ನು ಉತ್ತಮ ನಿಸರ್ಗವನ್ನಾಗಿ ಕಾಪಾ ಡಿಕೊಂಡು ಬಂದಿದೆ.


ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡುರಾಷ್ಟ್ರ, ಅಂತರಾಷ್ಟೀಯ ನಿಸರ್ಗ ಪ್ರೀಯರನ್ನು ಆಕರ್ಷಿಸುತ್ತಿದೆ. ಹೊರ ಪ್ರದೇಶದ ಪ್ರವಾಸಿಗರು ಈ ಸೊಬಗಿಗೆ ಮನಸೋತರೆ, ಸ್ಥಳೀಯರು ಇಲ್ಲಿಯ ಸಹಜತೆಗೆ ಬೆರಗಾಗುತ್ತಾರೆ. ಪ್ರವಾಸಿಗರಿಗೆ ಇದು ನೈಸರ್ಗಿಕ ಅದ್ಭುತವಾದರೆ ಇದನ್ನು ಸಹಜವಾಗಿ ಉಳಿಸಿದ ನೊಮಿಟೋ ಮತ್ತು ಸ್ವಾಮಿ ದಂಪತಿಗಳಿಗೆ ಇಲ್ಲಿಯ ಸರಳತೆ, ಸಹಜತೆಯ ನೈಸರ್ಗಿಕ ವಾತಾವರಣ ಕಾಯುವುದು ಬದ್ಧತೆ ಮತ್ತು ವೃತ.
ರಾಜ್ಯದ ಸುಂದರ ಪ್ರವಾಸಿ ತಾಣವನ್ನು ನೈಸರ್ಗಿಕವಾಗಿ ಉಳಿಸಿದ ಭಾರತೀಯ ಸಾಹಸ ಸಮನ್ವಯ ಕೇಂದ್ರಕ್ಕೆ ನೀವೂ ಕೂಡಾ ಧನ್ಯವಾದ ಹೇಳದೆ ಉಳಿಯಲಾರಿರಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *