ಅರಣ್ಯ ಅತಿಕ್ರಮಣದಾರನಿಂದ ಅರಣ್ಯ ಸಿಬ್ಬಂಯ ಮೇಲೆ ಹಲ್ಲೆ

ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್‌ ಬಾಳೆಕೈ ಬಿಳೇಗೋಡಿನ ಅರಣ್ಯ ಅತಿಕ್ರಮಣದಾರ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕೊಲೆಪ್ರಯತ್ನ ನಡೆಸಿರುವ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಳೇಗೋಡಿನ ಮಾಬ್ಲೇಶ್ವರ ಚಂದು ಮರಾಠೆ ಉಪ ವಲಯ ಅರಣ್ಯ ಅಧಿಕಾರಿ ರಾಜೇಶ್‌ ಗೌಡ ರ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.

ದಿ : 17/11/2022 ರಂದು 12:30 ಗಂಟೆಗೆ ಶ ರಾಜೇಶ ತಂದೆ ಮಂಜುನಾಥ ಗೌಡ , ಪ್ರಾಯ : 29 ವರ್ಷ , ಉದ್ಯೋಗ : ಅರಣ್ಯ ರಕ್ಷಕ ( ಫಾರಸ್ಥ ಗಾರ್ಡ ) , ಸಾ|| ಕಾನಗೋಡ , ಹೊನ್ನಾವರ ಹಾಲಿ ಕಾನಸೂರ , ತಾ : ಸಿದ್ದಾಪುರ , ಇವರು ಠಾಣಿಗೆ ಹಾಜರಾಗಿ , ಈ ದಿನ ಬೆಳಗ್ಗೆ ತಾನು , ಉಪ ವಲಯ ಅರಣ್ಯಾಧಿಕಾರಿಗಳಾದ ವಿಶ್ವನಾಥ ತಿಮ್ಮಪ್ಪ ನಾಯ್ಕ , ಗಾರ್ಡ ಮಣಿಕಂಠ , ಗಾರ್ಡ ರೋಹಿತ ನಾಯ್ಕ ಹಾಗೂ ವಾಚರ್ ಗೋಪಾಲ ನಾಯ್ಕ ರವರು ಸೇರಿಕೊಂಡು ಕಾನಸೂರು ಭಾಗದ ಅರಣ್ಯದಲ್ಲಿ ಗಸ್ತು ಕರ್ತವ್ಯಕ್ಕೆ ಹೋಗಿದ್ದಾಗ ಸಿದ್ದಾಪುರ ತಾಲೂಕಿನ ಬಾಳಕೈ ಗ್ರಾಮದ ಬಿಳೆಗೋಡ ಊರಿನ ಮಬ್ಲೆಶ್ವರ ಚಂದು ಮರಾಠಿ ಈತನು ಅವನ ಮಾಲ್ಕಿ ಜಾಗದ ಪಕ್ಷದಲ್ಲಿರುವ ಅರಣ್ಯ ಸರ್ವೆ ನಂ 25 ರಲ್ಲಿ ಅರಣ್ಯ ಅತಿಕ್ರಮಣ ಮಾಡಿ ಹೊಸ ಶೆಡ್ ನಿರ್ಮಿಸಿಕೊಂಡಿದ್ದನ್ನು ನೋಡಿ ಅತಿಕ್ರಮಣ ಮಾಡುವದು ತಪ್ಪು ಹೊಸ ಅತಿಕ್ರಮಣಕ್ಕೆ ಅವಕಾಶ ಇಲ್ಲ . ನೀನು ನಿನ್ನ ಮಾಲ್ಕಿ ಜಾಗದಲ್ಲಿ ಮನೆ ಕಟ್ಟಕೊ ಅಂತಾ ಹೇಳಿದಾಗ ಆತನು ಸಿಬ್ಬಂದಿಗಳ ಸಲಹೆಗೆ ಕಿಮ್ಮತ್ತು ಕೊಡದೆ ಏಕಾಏಕಿ ಸಿಟ್ಟಾದವನು ಫಾರೆಸ್ಥ ಮಕ್ಕಳಾ ನಿಮ್ಮದು ಬಹಳಾ ಆಯ್ತು , ನಿಮ್ಮಲ್ಲ ಒಬ್ಬರನ್ನು ತೆಗೆದರೆ ಇನ್ನು ಮುಂದೆ ಫಾರೆಸ್ಸಿನ ಮತ್ಯಾರೂ ನಮ್ಮ ಸುದ್ದಿಗೆ ಬರೋದಿಲ್ಲ . ನೀವು ಇಲ್ಲಂದ ಹೇಗೆ ಜೀವಂತ ವಾಪಸ್ ಹೋಗುತ್ತಿರಿ ಅಂತಾ ನೋಡುತ್ತೇನೆ . ನಿಮ್ಮನ್ನು ಕೊಂದೇ ಹಾಕುತ್ತೇನೆ ಅಂತಾ ಹೇಳದವನೇ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅವರ ಮೇಲೆ ಎರಗಿ ಅವನ ಕೈಯಲ್ಲಿದ್ದ ಕತ್ತಿಯನ್ನು ವಿಶ್ವನಾಥ ರವರ ಕುತ್ತಿಗೆಯನ್ನು ಕಡಿಯಲು ಬೀಸಿದ್ದು ತಪ್ಪಿಸಿಕೊಳ್ಳಲು ಅವರು ಬಲಗೈಯನ್ನು ಅಡ್ಡತಂದಿದ್ದರಿಂದ ಹತ್ತಿಯ ಏಟು ಬಲಗೈನ ಬೆರಳಿಗೆ ಅದ್ದು ಗಂಭೀರ ಸ್ವರೂಪದ ರಕ್ತ ಗಾಯವಾಗಿರುತ್ತದೆ .

ಆನಂತರ ಅವನು ನನ್ನ ಮೇಲೆಯೂ ಎರಗಿ ಸೂಳೇ ಮಗನೇ ನಿನಗೂ ಬಿಡುವುದಿಲ್ಲ ಅಂತಾ ಹೇಳಿ ಕತ್ತಿಯಿಂದ ಕಡಿಯಲು ಬಂದಾಗ ನಾನು ಕೈಯನ್ನು ಅಡ್ಡ ಮಾಡಿದ್ದರಿಂದ ಕತ್ತಿ ನನ್ನ ಎಡಕೈಬೆರಳಿಗೆ ತಾಗಿ ರಕ್ತ ಗಾಯವಾಗಿರುತ್ತದೆ . ಅಷ್ಟರಲ್ಲ ನಮ್ಮೊಂದಿಗಿದ್ದ ಉಳಿದ ಸಿಬ್ಬಂದಿಗಳು ಮುಂದೆ ಬಂದು ಬಿಡಿಸಿಕೊಂಡಿದ್ದು , ಆಗ ಅವನು ಸೂಳೇ ಮಕ್ಕಳ ಧಮ್ ಇದ್ದರೆ ಇನ್ನೊಮ್ಮೆ ನನ್ನ ಜಾಗಕ್ಕೆ ಕಾಲಟ್ಟು ನೋಡಿ ನಿಮ್ಮನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡತರ ಮಾಡಿರುತ್ತಾನೆ . ಘಟನೆ ಆದಾಗ ಬೆಳಗ್ಗೆ 09:15 ಗಂಟೆ ಆಗಿತ್ತು ಈ ಬಗ್ಗ ಮಬ್ಲೆಶ್ವರ ತಂದೆ ಚಂದು ಮರಾಠಿ ಈತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *