ಈಡಿಗ ಸಮುದಾಯದ ಕುಲಕಲ್ಪನೆ ಮತ್ತು ಒಳಪ್ರಭೇದಗಳು

————————————

ಈಡಿಗರಲ್ಲಿ ಹಲವಾರು ಉಪಜಾತಿಗಳು ಮತ್ತು ಒಳಪ್ರಭೇದಗಳಿವೆ. ಪ್ರಾದೇಶಿಕವಾಗಿ ಅನೇಕ ಹೆಸರುಗಳಿಂದ ಈಡಿಗ ಸಮುದಾಯವನ್ನು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳೆಪೈಕರು ಅಥವಾ ನಾಮದಾರಿಗಳು, ಕಲಾಲ, ನಾಯ್ಕ ಎಂಬ ಹೆಸರುಗಳಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದೀವರು, ಸುವರ್ಣ, ಬಿಲ್ಲವ, ಪೂಜಾರಿ ಎಂಬ ಹೆಸರುಗಳಿಂದ, ಬಯಲುಸೀಮೆಯಲ್ಲಿ ಈಡಿಗ, ಈಡಿಗ ಗೌಡ, ಆರ್ಯ ಈಡಿಗ ಎಂಬ ಹೆಸರುಗಳಿಂದ, ಉತ್ತರ ಕರ್ನಾಟಕದಲ್ಲಿ ಈಡಿಗ, ಈಳಿಗ, ಈಳಿಗೇರ್, ಗುತ್ತೇದಾರ, ಗೊಂಡ್ಲ, ಗೌಂಡಾಲ ಹೆಸರುಗಳಿಂದ, ತಮಿಳುನಾಡಿನಲ್ಲಿ ನಾಡಾರ, ಕೇರಳದಲ್ಲಿ ಈಳವ- ಈಳಿಗ- ತಿಯ್ಯಾ ಎಂಬ ಹೆಸರುಗಳಿಂದ, ಆಂಧ್ರಪ್ರದೇಶದಲ್ಲಿ ಈಡಿಗೋಳ್ಳು, ಈಡಿಗ, ಈಡಿಗ್ಲು, ಗೌಂಡಲು, ಈತಿಗೌಂಡ್ಲು, ಕಳಲಿ ಹೆಸರುಗಳಿಂದ, ಮಹಾರಾಷ್ಟ್ರದಲ್ಲಿ ಪಟೇಲ್, ಮಧ್ಯಪ್ರದೇಶದಲ್ಲಿ ಕಲಾಲ- ಜೈಸ್ವಾಲ್ ಹಾಗೂ ಪಂಜಾಬಿನಲ್ಲಿ ಅಲುವಾಲಿಯಾ ಎಂಬ ಹೆಸರಿನಿಂದ ಗುರುತಿಸಲಾಗಿದೆ.

ಇವರೆಲ್ಲರೂ ಹೆಂಡ ಇಳಿಸಿ ಮಾರಾಟ ಮಾಡುವ ವೃತ್ತಿಯ ನೆಲೆಯಿಂದ ಒಂದೇ ಎಂದು ಗುರುತಿಸಲ್ಪಡುತ್ತಿರುವರಾದರೂ ತಮ್ಮದೇ ಆದ ಕೆಲವು ವಿಶಿಷ್ಠವಾದ ಸಾಂಸ್ಕೃತಿಕ ಅನನ್ಯತೆಗಳಿಂದ ಪ್ರತ್ಯೇಕತೆಯನ್ನು ‌ಕಾಯ್ದುಕೊಂಡಿರುವುದನ್ನು ಕೂಡಾ ನೋಡುತ್ತೇವೆ. ಏನೇ ಇರಲಿ ಇವರೆಲ್ಲರೂ ಒಂದೇ ದ್ರಾವಿಡ ಮೂಲದ ತಾಯಿಬೇರಿನಿಂದ ಒಡಮೂಡಿ ದೇಶಾದ್ಯಂತ ಹರಡಿಕೊಂಡಿರುವ ಕಾರಣ ಕರ್ನಾಟಕದ ಮಟ್ಟಿಗಾದರೂ ಈಡಿಗ ಎಂಬ ಒಂದೇ ಹೆಸರಿನಿಂದ ಗುರುತಿಸಿಕೊಂಡಾಗ ಮಾತ್ರ ಒಂದು ದೊಡ್ಡ ರಾಜಕೀಯ ಶಕ್ತಿಯಾಗಲು ಸಾಧ್ಯವಿದೆ.

ಬಯಲುಸೀಮೆಯ ಈಡಿಗರಲ್ಲಿ ಕಾಡು ಈಡಿಗರು (ಬೆಲ್ಲದ ಈಡಿಗರು) ಮತ್ತು ಊರು ಈಡಿಗರು (ಸಾಚಾ ಈಡಿಗರು) ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಈ ಪ್ರಭೇದಗಳಲ್ಲಿ ಸಾಸುಮೆ ಈಡಿಗರು, ದಂಡಿನ ಈಡಿಗರು, ಮುದ್ದೆ ಈಡಿಗರು ಹಾಗೂ ಬಡ್ಡಿ ಈಡಿಗರೆಂಬ ಬಳಿ ಬೆಡಗುಗಳಿವೆ. ಸಂಸ್ಕೃತಾನುಕರಣದಿಂದಾಗಿ ಈಡಿಗರು ತೀರಾ ಇತ್ತೀಚೆಗೆ ಈ ಬೆಡಗುಗಳನ್ನು ಗೋತ್ರಗಳೆಂದು ಹೇಳಲು ಶುರುವಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಸಮುದಾಯಗಳಲ್ಲಿ ಸಗೋತ್ರ ವಿವಾಹ ನಿಷಿದ್ಧವಾಗಿರುವಂತೆ ಈಡಿಗರಲ್ಲಿಯೂ ಸಗೋತ್ರ ವಿವಾಹ ನಿಷಿದ್ಧವಾಗಿದೆ. ಬಡ್ಡಿ ಈಡಿಗರು ಸಾಸುಮೆ ಈಡಿಗರೊಂದಿಗೆ ಪರಸ್ಪರ ವೈವಾಹಿಕ ಸಂಬಂಧ ಬೆಳೆಸಬೇಕೇ ಹೊರತು ಸಾಸುಮೆ ಈಡಿಗರು ಅದೇ ಸಾಸುಮೆ ಈಡಿಗರಲ್ಲಿ ಮದುವೆಯಾಗುವಂತಿಲ್ಲ. ಒಂದೇ ಬೆಡಗಿನವರು ಅಣ್ತಮ್ಮಿಕೆಯಾಗುತ್ತಾರೆ.

ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ದಂಡಿನ ಈಡಿಗರು ಹಿಂದೆ ರಾಜ ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಸೈನಿಕರಿಗೆ ಹೆಂಡ ಒದಗಿಸುತ್ತಿದ್ದರು. ಸಮರ ವೀರರಿಗೆ ಹೆಂಡ ಸರಬರಾಜು ಮಾಡುತ್ತಿದ್ದ ಕಾರಣದಿಂದಲೇ ಅವರಿಗೆ ದಂಡಿನ ಈಡಿಗರು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಕೇರಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಈಳಿಗರು ತಿರುವಾಂಕೂರಿನ ರಾಜನ ಸೇನೆಯಲ್ಲಿ ಉನ್ನತ ಸ್ಥಾನದಲ್ಲಿದ್ದರು. ತಿರುವಾಂಕೂರಿನ ಪ್ರಸಿದ್ಧ ರಾಜನಾದ ರಾಮವರ್ಮನ ಸೇನೆಯಲ್ಲಿ ತಿಯ್ಯಾ ಈಳಿಗರ ‘ತಿಯ್ಯಾ ತುಕಡಿಗಳು’ ಇದ್ದವು. ತಮ್ಮ ಶೌರ್ಯದ ನೆನಪುಗಳನ್ನು ಉಳಿಸಿಕೊಳ್ಳಲು ತಿಯ್ಯಾ ಈಳಿಗರು ತಮ್ಮ ಮದುವೆಯ ಸಂದರ್ಭದಲ್ಲಿ ವರ ಮತ್ತು ಅವನ ಇಬ್ಬರು ಗೆಳೆಯರಿಗೆ ಸೈನಿಕರ ವೇಷವನ್ನು ತೊಡಿಸಿ ಅವರ ಕೈಗಳಿಗೆ ಕತ್ತಿ ಗುರಾಣಿಗಳನ್ನು ಕೊಟ್ಟು ಕತ್ತಿವರಸೆಯ ಅಣಕು ನೃತ್ಯ ಪ್ರದರ್ಶನವನ್ನು ಏರ್ಪಡಿಸುತ್ತಾರೆ. ಕತ್ತಿವರಸೆಯ ಅಣಕು ನೃತ್ಯ ಪ್ರದರ್ಶನ ಏರ್ಪಡಿಸದ ಹೊರತು ವಿವಾಹ ಪೂರ್ಣವಾಗುವುದಿಲ್ಲ.

ಹಾಲಕ್ಕಿ ಬುಡಕಟ್ಟು ಸಮುದಾಯವನ್ನು ಕುರಿತು ‘ಹಾಲಕ್ಕಿಗಳು : ಒಂದು ಅಧ್ಯಯನ’ ಎಂಬ ಸಂಶೋಧನಾ ಗ್ರಂಥವನ್ನು ಬರೆದಿರುವ ವಿಷ್ಣು ನಾಯ್ಕರು ಹೇಳುವಂತೆ, ‘ಮಯೂರವರ್ಮನು ಪಲ್ಲವರ ಮೇಲೆ ದಾಳಿಮಾಡಿ ಕದಂಬ ಸಾಮ್ರಾಜ್ಯವನ್ನು ಕಟ್ಟುವಾಗ ಈಡಿಗರು ದೊಡ್ಡ ಸಂಖ್ಯೆಯಲ್ಲಿ ಅರಣ್ಯವಾಸಿಗಳಾಗಿದ್ದರು. ಮಾತ್ರವಲ್ಲದೆ ಬಿಲ್ಲು ಬಾಣಗಳನ್ನು ಬಂದೂಕನ್ನು ಬಳಸುವಲ್ಲೂ ನಿಷ್ಣಾತರಾಗಿದ್ದರು. ಈಡಿಗರ ಹಳೆಪೈಕರನ್ನು ಕುರಿತು ಅಧ್ಯಯನ ಮಾಡಿ ‘ಹಳೆಪೈಕರು: ಒಂದು ಅಧ್ಯಯನ’ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸಿರುವ ‌ಮತ್ತು ಸ್ವಯಂ ನಾಮದಾರಿ ಹಳೆಪೈಕ ಸಮುದಾಯದವರೇ ಆಗಿರುವ ಉಮೇಶ್ ನಾಯ್ಕರು ಪ್ರಜಾವಾಣಿ ಪತ್ರಿಕೆಯಲ್ಲಿ ಷ.ಶೆಟ್ಟರ್ ಅವರು ಕದಂಬ ಸಾಮ್ರಾಜ್ಯ ಕುರಿತು ಬರೆದು ಪ್ರಕಟಿಸಿದ್ದ ಲೇಖನವನ್ನು ಆಧಾರವಾಗಿರಿಸಿಕೊಂಡು ಕದಂಬ ಸಾಮ್ರಾಜ್ಯವನ್ನು ಶೂದ್ರ ಹಳೆಪೈಕರು ಕಟ್ಟಿದ್ದು ಎಂದು ಪೂರಕ ಚಾರಿತ್ರಿಕ ದಾಖಲೆಗಳಿಂದ ವಿಶ್ಲೇಷಿಸಿರುತ್ತಾರೆ.

ಇಷ್ಟು ಮಾತ್ರವಲ್ಲದೇ ಉಮೇಶ್ ನಾಯ್ಕ ಅವರು, ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ತಾಯಿ ನಾಗಲಾಂಬಿಕೆ ಈಡಿಗರ ಹಳೆಪೈಕದವಳೆಂದು,‌ ಕೃಷ್ಣದೇವರಾಯನ ಸೈನ್ಯದಲ್ಲಿ ಹಳೆಪೈಕರ ದೊಡ್ಡ ಕಾಲ್ದಳ ಇತ್ತೆಂದು ವಿವರಿಸಿರುತ್ತಾರೆ. ಉಮೇಶ್ ನಾಯ್ಕ ಹೇಳುವ ಪ್ರಕಾರ ಹೆಂಡಗಾರ ಸಮುದಾಯವಾದ ಕರಾವಳಿಯ ಬಿಲ್ಲವರು ಕೂಡಾ ಸೈನಿಕ ಮೂಲದವರೇ ಆಗಿದ್ದು ಬಿಲ್ಲು ಬಾಣ ಹಿಡಿದು ಯುದ್ಧ ಮಾಡುತ್ತಿದ್ದ ಬಿಲ್ಲುಗಾರರಾಗಿದ್ದರಿಂದ ಬಿಲ್ಲವರು ಎಂದು ಕರೆಸಿಕೊಂಡಿದ್ದಾರೆ.

ಈಡಿಗ ಸಮುದಾಯ ಮೂಲದ ಹಿರಿಯ ಪತ್ರಕರ್ತ ವಿದ್ವಾಂಸರಾದ ಲಕ್ಷ್ಮಣ ಕೊಡಸೆಯವರು ‘ಈಡಿಗ ಜನಾಂಗದ ಇತಿಹಾಸ ಒಂದು ನೋಟ’ ಎಂಬ ಲೇಖನದಲ್ಲಿ ಹೆಂಡ ಇಳಿಸುವ ದೀವರು, ಬಿಲ್ಲವರು ಮತ್ತು ಹಳೆಪೈಕರು ಯುದ್ಧಗಳಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಬಿ.ಸಿದ್ಧಗಂಗಯ್ಯ ಕಂಬಾಳು ಅವರು ತಮ್ಮ ‘ಈಡಿಗರ ಸಂಸ್ಕೃತಿ’ ಎಂಬ ಸಂಶೋಧನಾ ಗ್ರಂಥದಲ್ಲಿ ‘ದೀವರನ್ನು ಹಳೆಪೈಕರು ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಈಡಿಗ ಗೌಡರ ಮುಖ್ಯಸ್ಥನಾದ ನಾರಾಯಣ ಗೌಡನು ನಿಷ್ಠೆಯಿಂದ ಸೇವೆ ಸಲ್ಲಿಸಿದುದರಿಂದ ಶ್ರೀ ಕೃಷ್ಣರಾಯ ಸಾರ್ವಭೌಮನು ಸಂತೃಪ್ತಿಗೊಂಡು ಆ ಗೌಡರಿಗೆ ಹಳೆಪೈಕ ಎಂಬ ಗ್ರಾಮವನ್ನು ಉಂಬಳಿ ಕೊಟ್ಟನು. ಅಂದಿನಿಂದ ಹಳೆಪೈಕರು ಎಂಬ ಹೆಸರು ಜನಾಂಗಕ್ಕೆ ಬಂದಿದೆ’ ಎಂದು ‘ಕೌಂಡಿನ್ಯ ವಂಶವೃಕ್ಷ’ ಎಂಬ ಕೃತಿಯಿಂದ ಉದ್ಧರಿಸಿರುತ್ತಾರೆ.

ಮುಂದುವರೆಯುತ್ತದೆ…

ಡಾ.ವಡ್ಡಗೆರೆ ನಾಗರಾಜಯ್ಯ

8722724174

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *