ಏಕತಾನತೆ…. (time pass-1)

ಒಂದೇ ಕೆಲಸ, ಒಂದೇ ವಾತಾವರಣ, ಒಂದೇ ಅಭ್ಯಾಸ, ಹವ್ಯಾಸ ಇವುಗಳಿಂದ ಏಕತಾನತೆ ಮರೆಯಬಹುದು. ರೈತನೊಬ್ಬನಿಗೆ ಕಾಲಕಾಲಕ್ಕೆ ಬದಲಾಗುವ ವಾತಾವರಣ, ಬೆಳೆ, ಕೆಲಸ, ಸುಗ್ಗಿ,ಹಿಗ್ಗು ಇವೆಲ್ಲಾ ಆತನ ಏಕತಾನತೆಯನ್ನು ಮುರಿದು ಹೊಸ ಹುರುಪಿನ ಚಿಗುರನ್ನು ಹುಟ್ಟಿಸುತ್ತವೆ.

ವಿಜ್ಞಾನಿ ಮೌನದಲ್ಲಿ ಏಕಾಂತವನ್ನು ಹೊದ್ದು ಏನನ್ನಾದರೂ ಸಾಧಿಸುತ್ತಾನೆ.

ರಾಜಕಾರಣಿ, ಕವಿ,ಸಾಂಸ್ಕೃತಿಕ ವ್ಯಕ್ತಿ ಏಕಾಂತ, ಏಕತಾನತೆಯಲ್ಲೇ ವೈವಿಧ್ಯವನ್ನು ಕನಸುತ್ತಾನೆ.

ಒಟ್ಟಾರೆ ಏಕತಾನತೆ ಬಹುತೇಕರಿಗೆ ಆಪ್ತವಲ್ಲ.

ಒಂದು ಪ್ರಸಂಗ ನಡೆಯಿತು. ಆಗ ನಾವೆಲ್ಲಾ ಬೆಂಗಳೂರು ಮಹಾನಗರದಲ್ಲಿ ಕನಸು ಬಿತ್ತುವ ಕೆಲಸದಲ್ಲಿ ತೊಡಗಿಕೊಂಡ ಸಮಯ. ಖಾಲಿ ಜೇಬು ತಲೆ ತುಂಬಾ ಯೋಚನೆ, ಯೋಜನೆ ಆಕಾಶದಗಲದ ಕನಸು.

ಸ್ನೇಹಿತ ಮಹಾಂತೇಶ ನಮಗಿಂತ ಹೆಚ್ಚು ಪ್ರಬುದ್ಧನಂತಿದ್ದ ಆತನ ಪ್ರಬುದ್ಧತೆಯ ಮಟ್ಟ ಯಾವ ಎತ್ತರದಲ್ಲಿತ್ತೆಂದರೆ… ಮಿ.ನಾಯ್ಕ ಒಬ್ಬ ತಂತ್ರಜ್ಞ ಹೊಸ ಆವಿಷ್ಕಾರ ಮಾಡುತ್ತಾನೆ. ವೈದ್ಯ ರೋಗಿಯನ್ನು ಬದಲಿಸುತ್ತಾನೆ. ನಾವೇನು ಅವರಿವರು ಹೇಳಿದ್ದನ್ನು ಬರೆದು ಮಹಾ ಸುಧಾರಣೆ ಮಾಡುತ್ತೇವೆ ಎಂದು ಪತ್ರಿಕೋದ್ಯೊಗದ ನಿರರ್ಥತೆಯನ್ನು ಹೇಳುತಿದ್ದ!

ನಾವಿದ್ದ ಹೋಟೆಲ್‌ ನಿಂದ ಮಾರುದೂರ ನಡೆದುಹೋಗಿ ಉಪಹಾರ ಮಂದಿರದಲ್ಲಿ ಪ್ರತಿದಿನ ಸೆಟ್‌ ದೋಸೆ ತಿನ್ನುತಿದ್ದ. ಪ್ರತಿದಿನ ಬದಲಾವಣೆ ಬಯಸುತಿದ್ದ ನನಗೆ ಅವನ ಏಕತಾನತೆ ಬೇಸರವಾಗಿ ಆಹೋಟೆಲ್‌ ಹುಡುಗರಂತೆ ಪ್ರತಿದಿನ ಅದೇ ತಿಂದುಕೊಂಡು ಬದುಕುವುದು ವಾಕರಿಕೆ! ಏಕತಾನತೆ ಎನಿಸುವುದಿಲ್ಲವೆ ಎಂದೆ.

ಎಂದಿನಂತೆ ಹುಸುನಕ್ಕ!

ಯಾರಿಗೆ ಏಕತಾನತೆ? ಆಯ್ಕೆ ಇಲ್ಲದವರಿಗೆ ಎಂಥಾ ಎಕತಾನತೆ ಬೋರು ಎಂದ.

ಹೌದಲ್ವಾ? ಅನಿವಾರ್ಯತೆ, ಅನ್ಯ ಆಯ್ಕೆಗಳ ಅವಕಾಶ ಇದ್ದಿದ್ದರೆ ಭಾರತದಲ್ಲಿ ಮುಕ್ಕಾಲು ಪಾಲು ಜನ ಕೃಷಿ ಮಾಡುತಿದ್ದರೆ….?

ಆಯ್ಕೆ, ಅನುಕೂಲಗಳಿದ್ದಿದ್ದರೆ ಎಳೆ ಪ್ರತಿಭಾವಂತರು ಪ್ರಾಥಮಿಕ ಶಾಲೆಗಳ ಶಿಕ್ಷಕ-ಶಿಕ್ಷಕಿಯರಾಗುತಿದ್ದರೆ….

ಏಕತಾನತೆ ಮೀರಬೇಕೆಂದರೆ ಆಯ್ಕೆಯ ಅವಕಾಶವಿರಬೇಕು, ಇಲ್ಲ ನಾವೇ ಆಯ್ಕೆ, ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಯಾಕೆಂದರೆ ನಾವು ಅಂದುಕೊಂಡಂತೆ ಬದುಕುವುದಕ್ಕಿಂತ ಬದುಕಿದ್ದಲ್ಲಿ ಆಯ್ಕೆ ಮಾಡಿಕೊಳ್ಳುವುದರಲ್ಲಿ ಮಜವಿದೆ.

೨೦೨೪ ರಲ್ಲಿ ಏಕಾಂತ, ಏಕತಾನತೆಗಳಿಂದ ಹೊರಬರೋಣ, ಸುಂದರ ಸಂಕ್ರಾಂತಿ. ಸಂಬ್ರಮದ ಈ ದಶಕ ನಿಮ್ಮದಾಗಲಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *