ಇವನೊಂಥರಾ ಅಕ್ಕದಾಸನಿದ್ದಂಗೆ…..! (time pass)

ಕೆಲವು ಶಬ್ಧಗಳ ಉತ್ಫತ್ತಿ ವಿಶೇಶವಾಗಿರುತ್ತದೆ. ಕನ್ನಡದ ಹರಸಾಹಸ ಶಬ್ಧ ಹರಕ್ಯುಲಿಯನ್‌ ಟಾಸ್ಕ್‌ ಹರಕ್ಯುಲಸ್‌ ನಿಂದ ಬಂದ ಬಗ್ಗೆ ಹಿಂದೆ ಬರೆದಿದ್ದೆ.

ಈಗ ಅಕ್ಕದಾಸನ ಬಗ್ಗೆ ತಿಳಿಯೋಣ.

ಶಿರಸಿಯಲ್ಲಿ ಸಂಪ್ರದಾಯಸ್ಥ ಹವ್ಯಕ ಮನೆತನದಲ್ಲಿ ಗಣಪತಿ ಭಟ್ಟ ಎಂಬುವವನೊಬ್ಬನಿದ್ದ ಅವರ ಮನೆತನದ ಹೆಸರು ಅಕ್ಕದಾಸ ಅಂದರೆ ಅಕ್ಕದಾಸರ ಮನೆತನ.

ಈ ಅಕ್ಕದಾಸ ಗಣಪತಿ ಭಟ್ಟ ಕರ್ಮಠ ಹವ್ಯಕ ಆಚರಣೆಗಳ ವಿರುದ್ಧ ಸಿಡಿದೆದ್ದು ಸರಿಸುಮಾರು ಒಂದು ಶತಮಾನದ ಹಿಂದೆ ಸುಧಾರಣಾ ಚಳವಳಿ ಪ್ರಾರಂಭಿಸಿದ್ದಾತ. ವಿದವಾ ವಿವಾಹದ ಮೂಲಕ ಕ್ರಾಂತಿ ಮಾಡಿದ್ದ ಅಕ್ಕದಾಸ ಭಟ್ಟ ಲೌಕಿಕರ ಲೆಕ್ಕದಲ್ಲಿ ಲೇವಡಿಗೆ ಬಳಸುವ ಹೆಸರಾಗಿದ್ದ!

ಇವರ ನೊಬೆಲ್‌ ಕೆಲಸದ ಬಗ್ಗೆ ಕೆಲವರಿಗೆ ಒಪ್ಪಿಗೆ, ಮೆಚ್ಚುಗೆ ಇದ್ದರೆ ಬಹುಸಂಖ್ಯಾತ ಸಂಪ್ರದಾಯಸ್ಥರು ಇವರ ಕೆಲಸದ ವಿರುದ್ಧವಿದ್ದರು. ಇವರ ಸುಧಾರಣಾ ಕ್ರಮದಿಂದ ಸಮಾಜದಲ್ಲಿ ಪರಿವರ್ತನರಯಾದದ್ದಂತೂ ಸತ್ಯ

ಇಂಥ ಸುಧಾರಣಾ ವಾದಿ ಹೋರಾಟಗಾರನನ್ನು ಬಹುಸಂಖ್ಯಾತರು ಗೇಲಿ ಮಾಡುತಿದ್ದುದು ಇವನೊಬ್ಬ ಅಕ್ಕದಾಸನ ಥರದವನು ಅಥವಾ ಇವಳೊಂಥರಾ ಅಕ್ಕದಾಸನ ಥರದವಳು ಎಂದು.

ಈ ಅಕ್ಕದಾಸ ಮತ್ತು ಅಕ್ಕದಾಸನ ಥರದೋನು ಎನ್ನುವುದು ಈಗ ಅಷ್ಟು ಬಳಕೆಯಲ್ಲಿಲ್ಲ.

ಇತ್ತೀಚೆಗೆ ಸಾಗರದ ಕಲಗಾರಿನ ಲಕ್ಷ್ಮೀ ನಾರಾಯಣ ಶರ್ಮ ಈ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಪ್ರಕಟಿಸಿದವರು ಬೆಂಗಳೂರಿನ ಬಹುರೂಪಿ ಪ್ರಕಾಶನ. ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಶಿರಸಿ ಮುಂಡಗೆಸರದಲ್ಲಿ ನಡೆಯಿತು. ಯಥಾಪ್ರಕಾರ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೇರಿದವರು ಬಹುತೇಕ ಅದೇ ಕರ್ಮಠ ವ್ಯವಹಾರಿಗಳು ಎನ್ನುವುದು ಈ ಕಾರ್ಯಕ್ರಮದ ಬಗ್ಗೆ ಇದ್ದ ಟೀಕೆ. ಅದೇನೆ ಇರಲಿ, ಹಿರಿಯ ಸಾಹಿತಿ, ಸಂಶೋಧಕ ಮಧುರಾವ್‌ ಮಡೇನೂರು ಈ ಪುಸ್ತಕಕ್ಕೆ ಮುನ್ನುಡಿ ಬರೆದು ಆ ಬಗ್ಗೆ ಆಸಕ್ತಿಕಾರಕ ಕೆಲವು ವಿಚಾರಗಳನ್ನು ತಿಳಿಸಿದರು. ಇಂಥ ಚರ್ಚೆಗಳ ಮೂಲಕ ಕೆಲವು ಒಳನೋಟಗಳನ್ನು ಕೊಡುವ ಮಧುರಾವ್‌ ಹಳೆಪೈಕ ದೀವರ ಬಗ್ಗೆ ಮಾಹಿತಿಪೂರ್ಣ ಪುಸ್ತಕವೊಂದನ್ನು ಬರೆದಿದ್ದಾರೆ. ಅಕ್ಕದಾಸನನ್ನು ನೆನಪಿಸಿದ, ಬರೆದ, ಪ್ರಕಟಿಸಿದ ಮಧು ರಾವ್‌, ಶರ್ಮ, ಜಿ.ಎನ್.ಮೋಹನ್‌ ಈ ಕಾಲಕ್ಕೆ ಒಂದು ಶತಮಾನದ ಹಿಂದಿನ ಸುಧಾರಣಾವಾದಿ ಚಳವಳಿಯೊಂದನ್ನು ನೆನಪಿಸುವ ಮೂಲಕ ಸಾರಸ್ವತ ಲೋಕಕ್ಕೆ, ಕನ್ನಡ ಸಾಹಿತ್ಯಕ್ಕೆ ಅಪೂರ್ವ ಎನ್ನುಬಹುದಾದ ಕೊಡುಗೆ ನೀಡಿದ್ದಾರೆ ಎನ್ನುವುದು ನನ್ನ ಭಾವನೆ. …ಇಂತಿ ನಿಮ್ಮ ಕನ್ನೇಶ್….‌ ಕೋಲಶಿರ್ಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *