ಭಾರತರತ್ನ ಕರ್ಪೂರಿ ಠಾಕೂರ್‌ ಯಾರು?

ಕರ್ಪೂರಿಠಾಕೂರ್ ಹೆಸರಿನ ಬಗ್ಗೆ ಒಂದು ಸ್ಪಷ್ಟನೆ.

ಕರ್ಪೂರಿ ಅವರು ಮೂಲತಃ ಹಿಂದುಳಿದ ವರ್ಗಕ್ಕೆ ಸೇರಿದವರು. ಕ್ಷೌರಿಕ ಸಮುದಾಯದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬುದ್ದಿವಂತ ಹಾಗೂ ಅತ್ಯುತ್ತಮ ಮಾತುಗಾರರಾಗಿದ್ದ ಅವರ ಪ್ರತಿಭೆಯನ್ನು ನೋಡಿ ಹಿರಿಯೊಬ್ಬರು ಅವರಿಗೆ ಠಾಕೂರ್ ಎಂಬ ಬಿರುದನ್ನು ನೀಡಿದರು. ಅದು ಅವರ ಹೆಸರಿನ ಜೊತೆಗೆ ಶಾಶ್ವತವಾಗಿ ಅಂಟಿಕೊಂಡಿತು.

ಭಾರತದಲ್ಲಿ ಜಮೀನ್ದಾರರ ದಬ್ಬಾಳಿಕೆಯಲ್ಲಿ ಅಪಾರವಾಗಿ ನಲುಗಿದ ರಾಜ್ಯಗಳಲ್ಲಿ ಆಂಧ್ರ ಮತ್ತು ಬಿಹಾರ ಪ್ರಮುಖವಾದವು. ಕರ್ಪೂರಿಠಾಕೂರ್ ತಾವು ಪಿ.ಯು.ಸಿ. ಮುಗಿಸಿ ಡಿಗ್ರಿ ಓದುವ ದಿನಗಳಲ್ಲಿಯೂ ಸಹ ತಮ್ಮ ಹಳ್ಳಿಯಲ್ಲಿ ಸೈಕಲ್ ಪ್ರಯಾಣ ಮಾಡುವಂತಿರಲಿಲ್ಲ. ಅಂತಹ ಜಾತಿಯತೆಯ ಅಸಮಾನತೆಯನ್ನು ಅನುಭವಿಸಿದವರು.

ಆಶ್ಚರ್ಯಕರ ಸಂಗತಿ ಎಂದರೆ, ಠಾಕೂರ್ ಎಂಬ ಮೇಲ್ವರ್ಗದ ಹೆಸರು ಅವರಿಗೆ ಬಂದಿತು. ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಅವರ ತಂದೆಯವರು ತನ್ನ ಹಳ್ಳಿಯಲ್ಲಿ ಕ್ಷೌರಿಕ ವೃತ್ತಿಯನ್ನು ಮುಂದುವರಿಸಿದ್ದಂತೆ.

ಆಂಧ್ರಪ್ರದೇಶದಲ್ಲಿ ಕೂಡಾ ದಲಿತರು ತಮ್ಮ ಹೆಸರಿನ ಜೊತೆಗೆ ರಾವ್ ಎಂಬ ಶಬ್ದವನ್ನು ಸೇರಿಸಿಕೊಂಡ ಕಾರಣ ಅಲ್ಲಿಯೂ ಸಹ ಬ್ರಾಹ್ಮಣ ಮತ್ತು ದಲಿತ ನಾಯಕರನ್ನು ಹೊರಗಿನವರು ಗುರುತಿಸುವುದು ಕಷ್ಟಕರವಾಗಿದೆ.

ಕರ್ಪೂರಿಠಾಕೂರ್ ಶಿಷ್ಯರಲ್ಲಿ ನಿತೀಶ್ ಕುಮಾರ್ ಅವರ ಶಿಷ್ಯರು ಎಂದು ಹೇಳಬಹುದು. ಆದರೆ, ಇದೇ ಮಾತನ್ನ ಲಾಲು ಪ್ರಸಾದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಗೆ ಹೇಳಲು ನನಗೆ ಕಷ್ಟವಾಗುತ್ತದೆ.

ಕೊನೆಯ ಮಾತು- ಕರ್ಪೂರಿಠಾಕೂರ್ ಬಗ್ಗೆ ನನ್ನ ಮಿತ್ರ ಹಸನ್ ನಯಿಂ ಸುರಕೋಡ್ ಹದಿನೈದು ವರ್ಷಗಳ ಹಿಂದೆಯೇ ಕೃತಿ ರಚಿಸಿದ್ದು, ಇದೀಗ ಲೋಹಿಯಾ ಪ್ರಕಾಶನದಿಂದ ಎರಡನೇ ಮುದ್ರಣ ಕಂಡಿದೆ.

ರಾತ್ರಿ ಚೆನ್ನಬಸವಣ್ಣ ಅವರಿಗೆ ಪೋನ್ ಮಾಡಿದ್ದೆ.ಅವರು ಪಾಟ್ನಾ ನಗರದಲ್ಲಿದ್ದು ಇಂದಿನ ಕರ್ಪೂರಿಠಾಕೂರ್ ಅವರ ನೂರನೇ ಜನ್ಮದಿನದ ಕಾರ್ಯಕ್ರಮ ದಲ್ಲಿದ್ದಾರೆ. ಮೊನ್ನೆ 21 ರಂದು ಮುಂಬೈನಲ್ಲಿ ದಂಡವತೆ ಅವರ ನೂರನೇ ವರ್ಷದ ಕಾರ್ಯಕ್ರಮ ಮುಗಿಸಿ ಈಗ ಪಾಟ್ನಾ ನಗರದಲ್ಲಿ ಇದ್ದಾರೆ.

ಸದ್ಯ ಕರ್ನಾಟಕದಲ್ಲಿ ಜೀವಂತ ಇರುವ ಶುದ್ಧ ಸಮಾಜವಾದಿ ಚಿಂತಕರಲ್ಲಿ ಚೆನ್ನಬಸವಣ್ಣ ಮುಖ್ಯರು.

-ಜಗದೀಶ್ ಕೊಪ್ಪ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *