ನಿಲ್ಲಿ ಸ್ವಲ್ಪ….ನೆಲ್ಲಿ ಕತೆ ಕೇಳಿ, ಎಲ್ಲಿ ಬೆಟ್ಟದ ನೆಲ್ಲಿ?

ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ ಎತ್ತಣಿಂದೆತ್ತಣ ಸಂಬಂಧ? ಎನ್ನುವುದು ಪ್ರಸಿದ್ಧ ನುಡಿ. ಬೆಟ್ಟದ ನೆಲ್ಲಿಗೂ ಕಾಡಿನ ಜಿಂಕೆಗೂ ಎತ್ತಣಿಂದೆತ್ತಣ ಸಂಬಂಧ ಗೊತ್ತಾ?

ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಣುವ ಬೆಟ್ಟದ ನೆಲ್ಲಿ ಔಷಧಗಳ ಆಗರ. ನೆಲ್ಲಿಕಾಯಿ ತಿಂದು ನೀರು ಕುಡಿದರೆ ಅನುಭವಿಸುವ ಸಿಹಿಯಂತೆ ಕಹಿ ಒಗರಿನ ನೆಲ್ಲಿಕಾಯಿ ತಿಂದರೆದೇಹಕ್ಕೆ ಸಿಹಿ. ಈ ನೆಲ್ಲಿ ಅನೇಕ ಔಷಧ,ಸೌಂದರ್ಯ ವರ್ಧಕಗಳಿಗೆ ಕಚ್ಚಾ ವಸ್ತುವಾಗಿ ಬಳಕೆಯಾಗುತ್ತದೆ.

ಆಯುರ್ವೇದದ ಪ್ರಮುಖ ಕಾಯಿ ನೆಲ್ಲಿ ಬಹುಪಯೋಗಿ ಕಾಡು ಉತ್ಫನ್ನ.

ನೆಲ್ಲಿಕಾಯಿಯ ಒಳಗಿನ ಬೀಜ ಒರಟಾಗಿ ಗಟ್ಟಿಯಾಗಿರುತ್ತದೆ.ಇದು ಭೂಮಿಗೆ ಬಿದ್ದರೆ ಮೊಳಕೆ ಒಡೆದು ಸಸಿ,ಗಿಡವಾಗುವುದು ಅಪರೂಪ. ಆದರೆ ಈ ನೆಲ್ಲಿಕಾಯಿಯನ್ನು ಜಿಂಕೆಗಳು ತಿಂದು ವಿಸರ್ಜಿಸಿದರೆ ಸುಲಭವಾಗಿ ಮೊಳಕೆ ಒಡೆದು ಗಿಡವಾಗುತ್ತದೆ ಎನ್ನುವುದು ವಾಸ್ತವ. ಹಿಂದೆಲ್ಲಾ ಕಾಡಿನಲ್ಲಿ ಜಿಂಕೆಗಳಿರುತಿದ್ದವು ಜಿಂಕೆಗಳು ನೆಲ್ಲಿಕಾಯಿ ತಿಂದು ವಿಸರ್ಜಿಸಿ ಬೆಟ್ಟದ ನೆಲ್ಲಿಯ ಪ್ರಸಾರಕ್ಕೆ ಕಾರಣವಾಗುತಿದ್ದವು. ಈಗ ಜಿಂಕೆಗಳ ಸಂತತಿ ಕ್ಷೀಣಿಸುತ್ತಿದೆ. ಜಿಂಕೆಗಳು ಹುಲಿ, ಮಾನವನಿಗೆ ಆಹಾರವಾಗುತಿದ್ದರೆ ನೆಲ್ಲಿ ಮರಗಳು ನೀರೊಳಗೆ ಕೊಳೆಯದೆ ಶುದ್ಧ ನೀರು ಪೂರೈಸುವ ಬಾವಿಗಳ ಅಡಿಗೆ ಬಳಕೆಯಾಗುತ್ತಿವೆ!

ಬೆಟ್ಟದ ನೆಲ್ಲಿ ನರ್ಸರಿಗಳಲ್ಲಿ ಅಷ್ಟಾಗಿ ಬೆಳೆಯುವುದಿಲ್ಲ. ಕಸಿ ಪದ್ಧತಿಯಲ್ಲಿ ನೆಲ್ಲಿ ವೃದ್ಧಿಸಬಹುದು. ನೆಲ್ಲಿ ಬೆಳೆಗೆ ಪ್ರೋತ್ಸಾಹ ನೀಡುವ ಮೂಲಕ ಬೆಟ್ಟದ ನೆಲ್ಲಿ ಉಳಿಸುವ ಕೆಲಸ ಮಾಡಬಹುದು. ಜಿಂಕೆಗೂ ಅಂಕೆಗೂ ಸಿಗದ ಬೆಟ್ಟದ ನೆಲ್ಲಿ ಚಿತ್ರ, ವಿಡಿಯೋಕ್ಕೆ ಸೀಮಿತವಾಗದಂತೆ ಉಳಿಸಿ- ಬೆಳೆಸುವ ಮೂಲಕ ನೆಲ್ಲಿಗೂ ಮನುಷ್ಯರಿಗೂ ಇರುವ ನಂಟು ಉಳಿಸಬೇಕಿದೆ. (ಚಿತ್ರ-ಗಣೇಶ್‌ ಹೊಸ್ಮನೆ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ನಮಗೆ ಗ್ಯಾರಂಟಿ ಸಹಾಯಕ…

ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ: ಗೀತಾ ಶಿವರಾಜ್’ಕುಮಾರ್ (ಸಂದರ್ಶನ) ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೀತಾ ಶಿವರಾಜಕುಮಾರ್ ಅವರು,...

ಸಚಿವ ಮಧು ಬಂಗಾರಪ್ಪ ಮತ್ತೊಮ್ಮೆ ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ: ಕುಮಾರ್ ಬಂಗಾರಪ್ಪ

ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ...

modi namskar!- ಮೋದಿ ನಮಸ್ಕಾರ! ಇದು ಪಂಗನಾಮ….?

ಸುಳ್ಳು ಮತ್ತು ಅಹಂಕಾರದಿಂದ ಮೋದಿ ಜನರಿಗೆ ದ್ರೋಹ ಮಾಡುತಿದ್ದಾರೆ ಎಂದು ಆರೋಪಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಮೋದಿ...

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತದಾನ ಹೆಚ್ಚಳ: ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಅಂಶ, ಸೌಜನ್ಯಾ ಹತ್ಯೆ ಪ್ರಕರಣದಿಂದಾಗಿ ಮತದಾನದಲ್ಲಿ ಮತದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ನೋಟಾ ಅಭಿಯಾನ, ಎಸ್‌ಡಿಪಿಐ ಸ್ಪರ್ಧೆಯಲ್ಲಿ ಇಲ್ಲದಿರುವುದು ಮತ್ತು...

ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ

ಶಿರಸಿಯಲ್ಲಿ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್ ವಿ ದೇಶಪಾಂಡೆ. ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *