ಕೆರೆಬೇಟೆ ಹುಡುಗನಿಗೆ ಹೆಚ್ಚಿದ ಬೇಡಿಕೆ

ಕೆರೆಬೇಟೆ ಚಿತ್ರದ ಯುವ ನಿರ್ಧೇಶಕ ಗುರುರಾಜ್‌ ಬಿ. ಯಾನೆ ರಾಜ್‌ ಗುರು ಚಿತ್ರ ಬಿಡುಗಡೆಗೆ ಮುನ್ನ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವಿರತ ೧೬ ವರ್ಷಗಳ ಶ್ರಮದ ನಂತರ ಕೆರೆಬೇಟೆ ಚಿತ್ರ ತೆರೆಗೆ ಬರುವ ಮೊದಲು ಕನ್ನಡ ಚಿತ್ರರಂಗ ಮತ್ತು ಮಾದ್ಯಮಲೋಕ ರಾಜ್‌ ಗುರು ಪ್ರತಿಭೆ ಗುರುತಿಸಿದೆ. ವಿನಯ ರಾಜ್‌ ಕುಮಾರ ಜೊತೆ ಎರಡನೇ ಸಿನೆಮಾಕ್ಕೆ ತಯಾರಿ ನಡೆಸುತ್ತಿರುವ ರಾಜ್‌ ಗುರು ಚಿಂಗುಮಣೆ ಮೂಲಕ ಮತ್ತೆ ಮಲೆನಾಡಿನಸೊಬಗು ಪರಿಚಯಿಸಲಿದ್ದಾರೆ. ಕೆರೆಬೇಟೆಯ ಪ್ರಸವ ವೇದನೆಯ ಖುಷಿಯಲ್ಲಿ ಉತ್ಸಾಹ ಹೆಚ್ಚಿಸಿಕೊಂಡಿರುವ ಗುರು ಆತ್ಮವಿಶ್ವಾಸದಿಂದಿರುವುದು ಅವರ ಮುಂದಿನ ಹಾದಿಗೆ ಪೂರಕವಾಗಲಿದೆ.

samajamukhi.net ಸಂಪಾದಕ ಕನ್ನೇಶ್‌ ಕೋಲಶಿರ್ಸಿ ಜೊತೆ ನಿಧೇಶಕ ರಾಜ್‌ಗುರು ( ಹಳೆಯ ಚಿತ್ರ)

https://samajamukhi.net/2022/08/20/arasu-a-social-desiner/

‘ಕೆರೆಬೇಟೆ’ ಬಿಡುಗಡೆಗೆ ಸಿದ್ಧ; ಚಿತ್ರದಲ್ಲಿ ನನ್ನ ಹುಟ್ಟೂರು ಮಲೆನಾಡಿನ ಸೊಬಗು ಆಳವಾಗಿ ಬೇರೂರಿದೆ: ನಿರ್ದೇಶಕ ರಾಜಗುರು

ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್

ನಿರ್ದೇಶಕ ರಾಜ್‌ಗುರು – ಕೆರೆಬೇಟೆ ಚಿತ್ರದ ಸ್ಟಿಲ್

ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

‘ಕೆರೆಬೇಟೆ ಚಿತ್ರದ ಮೂಲಕ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿರುವುದು ಸುದೀರ್ಘ ಹೋರಾಟದ ಪರಾಕಾಷ್ಠೆಯಾಗಿದೆ. ನಾನು 2008ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರೂ, ಸಿನಿಮಾ ನಿರ್ದೇಶಿಸುವ ನನ್ನ ಕನಸು ನನಸಾಗಲು ಇಷ್ಟು ವರ್ಷಗಳು ಬೇಕಾಯಿತು. ಈ ದಾರಿಯುದ್ದಕ್ಕೂ ವಿಷಾದದ ಕ್ಷಣಗಳು ಇದ್ದವು. ಆದರೆ, ಈಗ ಅದು ಕಾರ್ಯರೂಪಕ್ಕೆ ಬರುವುದನ್ನು ನೋಡಿ ನನಗೆ ತೃಪ್ತಿ ಇದೆ’ ಎನ್ನುತ್ತಾರೆ ರಾಜ್‌ಗುರು.

ಕಂಟೆಂಟ್ ಆಧರಿತ ಸಿನಿಮಾ ಮಾಡುವ ಅವರ ನಿರ್ಧಾರದ ಬಗ್ಗೆ ಮಾತನಾಡುವ ಅವರು, ‘ನಾನು ಕಮರ್ಷಿಯಲ್ ಚಿತ್ರವನ್ನು ಆಯ್ಕೆ ಮಾಡಿದ್ದರೆ ಮನ್ನಣೆ ಗಳಿಸಬಹುದು. ಆದರೆ, ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ಮಲೆನಾಡು ಪ್ರದೇಶದಿಂದ ಬಂದವನಾಗಿ, ಕೆರೆಬೇಟೆ ನನ್ನ ಸ್ಥಳೀಯ ಸೊಬಗು ಆಳವಾಗಿ ಬೇರೂರಿರುವ ಮತ್ತು ನನ್ನ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಚಿತ್ರ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಸಾಂಕ್ರಾಮಿಕ ರೋಗದ ನಂತರ ಪ್ರೇಕ್ಷಕರ ಬದಲಾಗುತ್ತಿರುವ ದೃಷ್ಟಿಕೋನಗಳು ಮತ್ತು ಹೊಸ ಕಂಟೆಂಟ್‌ಗೆ ಉದ್ಯಮದ ಮುಕ್ತತೆ ನನ್ನ ಚೊಚ್ಚಲ ಪ್ರವೇಶಕ್ಕೆ ಪರಿಪೂರ್ಣ ಅವಕಾಶವನ್ನು ಒದಗಿಸಿದೆ’ ಎಂದು ಅವರು ಹೇಳುತ್ತಾರೆ.

ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್

‘ಇಂದಿನ ಪ್ರೇಕ್ಷಕರು ವಾಸ್ತವಕ್ಕೆ ಹತ್ತಿರವಾದ ಕಥೆಗಳ ಹುಡುಕಾಟದಲ್ಲಿ ಕಂಟೆಂಟ್ ಆಧರಿತ ಸಿನಿಮಾದತ್ತ ಆಕರ್ಷಿತರಾಗಿದ್ದಾರೆ. ಬಲಿಷ್ಠ ಕಥೆ ಹೇಳುವ ಸಂಪ್ರದಾಯಕ್ಕೆ ಹೆಸರಾದ ನಮ್ಮ ಕನ್ನಡ ಸಿನಿಮಾಗಳು ಹೊರಗಿನ ಪ್ರಭಾವಗಳಿಂದ ತಮ್ಮ ಬೇರುಗಳಿಂದ ದೂರ ಸರಿದಿದ್ದವು. ಆದಾಗ್ಯೂ, ನಮ್ಮ ಪರಂಪರೆಯನ್ನು ಸಂಭ್ರಮಿಸುವ ಕಥೆಗಳ ಪುನರುತ್ಥಾನವನ್ನು ನಾವು ಈಗ ನೋಡುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

ಕೆರೆಬೇಟೆ ಸಿನಿಮಾ ಮಲೆನಾಡು ಪ್ರದೇಶಗಳಲ್ಲಿನ ಹಳೆಯ ಮೀನುಗಾರಿಕೆ ಸಂಪ್ರದಾಯಗಳ ಸುತ್ತ ಸುತ್ತುತ್ತದೆ. ಅದರ ಶೀರ್ಷಿಕೆಯನ್ನು ಸಮರ್ಥಿಸುವ ನಿರೂಪಣೆಯೊಂದಿಗೆ ಕಮರ್ಷಿಯಲ್ ಮನರಂಜನೆಯ ಅಂಶಗಳನ್ನು ಸೇರಿಸಲಾಗಿದೆ.

ಮಲೆನಾಡಿನವರೇ ಆದ ನಟ ಗೌರಿ ಶಂಕರ್ ಅವರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ನಿರ್ದೇಶಕ ರಾಜ್‌ಗುರು ಅವರು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಗೌರಿ ಶಂಕರ್ ಅವರು ಕಥೆಯನ್ನು ಮೆಚ್ಚಿಕೊಂಡರು ಮತ್ತು ನಟ ಮತ್ತು ನಿರ್ಮಾಪಕರಾಗಿಯೂ ನೆರವಾದರು ಎನ್ನುತ್ತಾರೆ.

ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್

ಜನಮನ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ದಿನಕರ್ ತೂಗುದೀಪ ಪ್ರಸ್ತುತಪಡಿಸಿ ಜೈಶಂಕರ್ ಪಟೇಲ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಿಂದು ಶಿವರಾಮ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಮತ್ತು ಸಂಪತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಅವರ ಸಂಗೀತ ಸಂಯೋಜನೆಯಿದ್ದು, ಡಿಒಪಿ ಆಗಿ ಕೀರ್ತನ್ ಪೂಜಾರಿ ಮತ್ತು ಸಂಕಲನಕಾರರಾಗಿ ಜ್ಞಾನೇಶ್ ಬಿ ಮಾತಾಡ್ ಇದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *