

ಅವರ್ನಬಿಟ್ಟ್ ಇವರ್ಯಾರು?

ಲೋಕಸಭೆಗೆ ಆಮದು ಅಭ್ಯರ್ಥಿಗಳು!
ಮುಂದಿನ ಎರಡು ತಿಂಗಳು ನಡೆಯುವ ಲೋಕಸಭಾ ಚುನಾವಣೆಗೆ ಅಂಕಣ ಸಿದ್ಧವಾಗಿದೆ. ಆದರೆ ಅಭ್ಯರ್ಥಿಗಳ್ಯಾರು? ಎನ್ನುವ ರಹಸ್ಯ ಇನ್ನೂ ಮುಂದುವರಿದಿದೆ. ಇದು ಈ ದೇಶದ, ರಾಜ್ಯದ ಜೊತೆಜೊತೆಗೆ ಜಿಲ್ಲೆಯ ವಿದ್ಯಮಾನ ಕೂಡಾ.
ಹಸಿಸುಳ್ಳು ಅಧಿಕಾರ ತಂದುಕೊಡುತ್ತದೆ ಎಂದು ಬಲವಾಗಿ ನಂಬುವ ಪರಿವಾರ ಸುಳ್ಳಿನಿಂದಲೇ ಎರಡು ಬಾರಿ ಜನಾದೇಶ ಪಡೆದ ಅನುಭವದಿಂದ ಈ ಚುನಾವಣೆಯಲ್ಲಿ ಕೂಡಾ ಸುಳ್ಳಿನ ಸುಳಿಗಳಿಗೆ ಸಿಲಿಕಿಕೊಂಡಿದೆ.
ಮೋದಿ–ಅಮಿತ್ ಶಾ ಜೋಡಿ ಈ ಬಾರಿ ಕಟ್ಟರ್ ಹಿಂದೂ ವಾದಿಗಳನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹೌದು ದೇಶದಾದ್ಯಂತ ಮತಿವಿಕಲರಂತೆ ಅರಚುತಿದ್ದ ವಿವೇಕಶೂನ್ಯರು ಅವಕಾಶ ಕಳೆದುಕೊಂಡಿದ್ದಾರೆ. ಅವರ ಬದಲು ಸಜ್ಜನರು ಬರುವರೆ? ಅನುಮಾನ.
ಮೋದಿಗೆ ಸೆಡ್ಡು ಹೊಡೆದಿರುವ ರಾಹುಲ್, ಪರಿವಾರದ ಷಡ್ಯಂತ್ರಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದಾರೆ. ಆದರೆ ಅವರ ಚಾಣಾಕ್ಷತೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮುಂದುವರಿಯುತ್ತಾ ಕಾಲವೇ ಉತ್ತರಿಸಬೇಕು.
ಇಂಡಿಯಾದಲ್ಲಿ ಗುಜರಾತ್, ಉತ್ತರ ಪ್ರದೇಶ,ಮಧ್ಯ ಪ್ರದೇಶ ಸೇರಿದ ಕೆಲವು ರಾಜ್ಯಗಳಲ್ಲಿ ಬಿ.ಜೆ.ಪಿ. ಗೆ ಸಂಖ್ಯೆಹೆಚ್ಚು ಮಾಡಿಕೊಳ್ಳುವ ಅವಕಾಶ ಕಡಿಮೆ.
ಇತ್ತ ಬಂದರೆ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಇಲ್ಲಿ ಬಿ.ಜೆ.ಪಿ ಗಳಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಇದೇ ಲೆಕ್ಕಾಚಾರದಲ್ಲಿ ಬಿ.ಜೆ.ಪಿ.೨೦೦ ಸ್ಥಾನಗಳನ್ನು ದಾಟಲ್ಲ ಎನ್ನುವುದಕ್ಕೆ ಬಲವಾದ ಕಾರಣಗಳಿವೆ. ಇತರ ಪಕ್ಷಗಳನ್ನು ಹೊರತು ಪಡಿಸಿ ಬಿ.ಜೆ.ಪಿ. ನಂತರ ಅತಿದೊಡ್ಡ ಪಕ್ಷವಾಗುವ ಅವಕಾಶ ಕಾಂಗ್ರೆಸ್ ಗೆ ಇತ್ತು, ಇರುತ್ತದೆ,ಇರಲಿದೆ ಕೂಡಾ.
ಈ ಸಮೀಕರಣದ ಪ್ರಕಾರ ಬಿ.ಜೆ.ಪಿ.ಗಿಂತ ಹೆಚ್ಚು ಸ್ಥಾನಗಳನ್ನು ಯು.ಪಿ.ಎ. ಪಡೆದರೆ ಆಗ ಎನ್.ಡಿ.ಎ. ಅಂಗಪಕ್ಷಗಳು ವಿರೋಧಿ ಒಕ್ಕೂಟದ ಕೈ ಹಿಡಿಯಬಹುದು. ಅಥವಾ ಮೋದಿ–ಯೋಗಿ ಎನ್ನುವ ಆರೆಸ್ಸೆಸ್ ಕುಟಿಲತೆ ವಿರೋಧಿಸಿ ಬೇರೆಯವರನ್ನು ಪ್ರಧಾನಿ ಮಾಡಬಹುದು.
ಇದು ದೇಶದ ವಿದ್ಯಮಾನವಾದರೆ ರಾಜ್ಯದಲ್ಲಿ ಬಿ.ಜೆ.ಪಿ. ಬಂಡಾಯ, ಜೆ.ಡಿ.ಎಸ್.ಹೊಂದಾಣಿಕೆ ಕೊರತೆ ಇವುಗಳ ಪರಿಣಾಮ ಬಿ.ಜೆ.ಪಿಗೆ .ಹತ್ತರಿಂದ ಹದಿನೈದು ಸ್ಥಾನಗಳು ಕಡಿಮೆ ಆಗಬಹುದು ಆಗ ಕಾಂಗ್ರೆಸ್ ಗೆ ಒಂದರಿಂದ ಒಂದು ಡಜನ್ ದಾಟಿ ಬಿ.ಜೆ.ಪಿ. ಒಂದಂಕಿ ಗಿಳಿದರೂ ಆಶ್ಚರ್ಯವಿಲ್ಲ.
ಈ ಸ್ಥಿತಿಯಲ್ಲಿ ಶಿವಮೊಗ್ಗದಲ್ಲಿ ರಾಜ್ಯ ಬಿ.ಜೆ.ಪಿ. ನಾಯಕತ್ವಕ್ಕೇ ಸವಾಲು ಎದುರಾಗಿದೆ. ಹಳೆಮೈಸೂರಿನಲ್ಲಿ ಜೆ.ಡಿ.ಎಸ್. ಕಬಳಿಸುತಿದ್ದ ಜಾತ್ಯಾತೀತ ಮತಗಳು ಕಾಂಗ್ರೆಸ್ ಪಾಲಾದರೆ ಕಾಂಗ್ರೆಸ್ ಹೆಚ್ಚು ಸಂಸದರನ್ನು ಪಡೆಯುವ ಅವಕಾಶ ಸೃಷ್ಟಿಯಾಗಿಬಿಡುತ್ತದೆ. ಈ ವಾತಾವರಣದಲ್ಲಿ ಉತ್ತರ ಕನ್ನಡಕ್ಕೆ ಬಂದರೆ ಅನಂತಕುಮಾರ ಕಳೆದುಕೊಳ್ಳುವ ಬಿ.ಜೆ.ಪಿ. ಅವಕಾಶ ಕ್ಕಾಗಿ ಕಾಗೇರಿ ವಿಶ್ವೇಶ್ವರ ಹೆಗಡೆ ಕಾದು ಕುಳಿತಿದ್ದಾರೆ. ಇದರ ಮಧ್ಯೆ ಹೈಕಮಾಂಡ್ ಚಕ್ರವರ್ತಿ ಸೂಲಿಬೆಲೆ ನಿಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣರ ಪರಿವಾರ,ಬಿ.ಜೆ.ಪಿ. ಪ್ರೇಮ ಪರೀಕ್ಷಿಸಲು ಹೊರಟಂತಿರುವಾಗ ಅನಂತಕುಮಾರ ಹೆಗಡೆ ತಾನಲ್ಲದಿದ್ದರೆ ಸೂಲಿಬೆಲೆ, ವಿಶ್ವೇಶ್ವರ ಹೆಗಡೆ ಬೇಡ ಶಶಿಭೂಷಣ ಹೆಗಡೆ ಯವರಿಗೆ ಅವಕಾಶ ನೀಡಿ ಎಂದಿದ್ದಾರಂತೆ. ಇವರ ಮಧ್ಯೆ ರದ್ದಿ ಪತ್ರಿಕೆಯಿಂದ ತಲೆ ಎತ್ತುತ್ತಿರುವ ಕೋಣೆಮನೆಮನೆಮೂಲೆ ಸೇರುವ ಸಾಧ್ಯತೆ ದಟ್ಟವಾಗಿದೆ.
ಬಿ.ಜೆ.ಪಿ.ಯಲ್ಲಿ ಮೋದಿ ಅಲೆ ಎಂದು ಅಪನಂಬಿಕೆಯಿಂದ ಟಿಕೇಟ್ ಮೇಲಾಟ ಪ್ರಾರಂಭವಾಗಿದ್ದರೆ. ಉತ್ತರ ಕನ್ನಡ ಕಾಂಗ್ರೆಸ್ ಉತ್ತರ ದ್ರುವ, ದಕ್ಷಿಣದ್ರುವ ಎನ್ನುವಂತಿದೆ.
ಅಂಜಲಿ ನಿಂಬಾಳ್ಕರ್ ಗೆ ಟಿಕೆಟ್ ಕೊಡಲು ಸಿದ್ಧರಾಗಿರುವ ಮಂಕಾಳು, ದೇಶಪಾಂಡೆ ನಡುವೆ ಶಿರಸಿಯ ಮಾವ- ಅಳಿಯ ಶಿವರಾಮ್ ಹೆಬ್ಬಾರ್ ,ಅಂಜಲಿ, ರವೀಂದ್ರ ನಾಯ್ಕ ಬದಲು ಬೇರೆ ಅಭ್ಯರ್ಥಿ ತರೋಣ ಎನ್ನುತಿದ್ದಾ ರಂತೆ!
ಆ ಬೇರೆ ಅಭ್ಯರ್ಥಿ ಕುಮಾರ ಬಂಗಾರಪ್ಪನವರ? ಸ್ವಯಂ ಭೀಮಣ್ಣ ನಾಯ್ಕರ? ಅಥವಾ ಜಿ.ಟಿ. ನಾಯ್ಕರ ? ಎಂಬುದು ಸದ್ಯಕ್ಕೆ ಬಿಡಿಸಲಾಗದ ಒಗಟು.
ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಭೀಮಣ್ಣ ಅಥವಾ ಕುಮಾರ ಬಂಗಾರಪ್ಪ ಅಥವಾ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿಗಳಾದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಸಮೀಕ್ಷೆಗಳಿವೆಯಂತೆ. ಕೊನೆ ಹಂತದಲ್ಲಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಉತ್ತರ ಕನ್ನಡದ ಮೇಲ್ವರ್ಗದ ಜಾತಿ ಪ್ರೇಮ ಸಾಬೀತಾಗಲಿದ್ದು ಕಾಂಗ್ರೆಸ್ ಅನಯಾಸವಾಗಿ ಗೆಲ್ಲುವ ಅವಕಾಶವಿದೆ.ಇನ್ನುಳಿದಂತೆ ಈ ವಾರದ ಕೊನೆಗೆ ಎಲ್ಲವೂ ಬಟಾಬಯಲಾದ ಮೇಲೆ ಮತ್ತೆ ಸಮೀಕ್ಷೆಯ ದಾರಿ ಬೇರೆ ಆಗಲಿದೆ. (tEjaswi)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
