ನಾವು-ನಮ್ಮೂರು- ಸಮಾನ ಮನಸ್ಕರ ಶ್ರೇಷ್ಠ ಕೆಲಸ‌

ಸಂಘ-ಸಂಘಟನೆಗಳಲ್ಲಿ ಬಹುಮತಕ್ಕೆ ಆದ್ಯತೆ. ಕೆಲವೊಮ್ಮೆ ಬಹುಮತವೆಂಬುದು ಮೂರ್ಖರ ನಿರ್ಧಾರವಾಗುವ ಸಂಭವವೂ ಉಂಟು. ಇಂಥ ಬಹುಮತದ ಮೂರ್ಖರ ಕೆಲಸಕ್ಕಿಂತ ಒಬ್ಬರ-ಕೆಲವರ ವಿದಾಯಕ ಕೆಲಸಗಳು ಮಹತ್ವ ಪಡೆಯುವುದುಂಟು ಇಂಥ ನಿದರ್ಶನವೊಂದು ಇಲ್ಲಿದೆ.

ಸಿದ್ಧಾಪುರದ ಉಮೇಶ್‌ ಟಪಾಲ್‌ ನಿವೃತ್ತ ನೌಕರ. ಅವರು ಸರ್ಕಾರಿ ಸೇವೆಯಲ್ಲಿದ್ದಾಗ, ನಿವೃತ್ತಿ ನಂತರ ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಉಮೇಶ್‌ ಟಪಾಲ್‌ ಎಂದರೆ ರೇಷ್ಮೆ ಟಪಾಲ್‌ ಎನ್ನುವ ಮಟ್ಟಿಗೆ ಅನ್ವರ್ಥಕರಾದ ಉಮೇಶ್‌ ನಾಯ್ಕ ತಮ್ಮ ಸೇವಾವಧಿಯಲ್ಲಿ ತಮ್ಮ ಮಿತಿ-ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದವರು. ತಮ್ಮ ಕರ್ತವ್ಯದ ಜೊತೆಗೆ ಅವರ ಸೇವಾ ಮನೋಭಾವ ಎಲ್ಲರ ಗಮನಸೆಳೆದಿದೆ. ಹಲವು ಸಂಘ-ಸಂಸ್ಥೆ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ೬೪ ರ ಹರೆಯದ ಉಮೇಶ್‌ ಕೆಲವು ಸಂಘಟನೆಗಳಲ್ಲಿ ಪ್ರತಿಭಾವಂತರಿಗೆ ನೂರಾರು ಜನರು ಸೇರಿ ೫೦೦, ಸಾವಿರ ರೂಪಾಯಿ ಸಹಾಯ ಮಾಡಿ ಪ್ರಚಾರ ಪಡೆಯುವುದಕ್ಕಿಂತ ನೈಜ ಅರ್ಹರಿಗೆ ಅವಶ್ಯ ಸಹಾಯ ಮಾಡುವುದು ಒಳ್ಳೆಯದು ಎಂದು ಅರಿತು ಸಮಾನ ಮನಸ್ಕರ ತಂಡ ಕಟ್ಟಿದರು. ಆತಂಡದಲ್ಲಿ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ರವೀಂಧ್ರ ಟಪಾಲ, ರವಿ ಮೆಣಸಿ, ನಾಗಭೂಷಣ್‌ ನಾಯ್ಕ ರೆಲ್ಲಾ ಸೇರಿದರು. ತಾಲೂಕಿನಲ್ಲಿ ದ್ವಿತಿಯ ಪಿ.ಯು. ಪರೀಕ್ಷೆಯಲ್ಲಿ ಅತ್ತ್ಯುನ್ನತ ಅಂಕ ಪಡೆದ ಕೆಲವು ಪ್ರತಿಭಾವಂತ ಬಡ ಮಕ್ಕಳನ್ನು ಹುಡುಕಿದರು. ಅವರೆಲ್ಲರಿಗೆ ಸಮಾನಮನಸ್ಕರು ತಮ್ಮ ವೈಯಕ್ತಿಕ ನೆರವು ೫,೧೦ ಸಾವಿರ ರೂಪಾಯಿಗಳನ್ನು ಅವರ ಮನೆಗೇ ತೆರಳಿ ಹಂಚಿದರು. ಈ ಸಮಾನಮನಸ್ಕರ ಸಹಾಯ ಕನಿಷ್ಟ ಅರ್ಹ, ಸೂಕ್ತ ಮನೆಗಳನ್ನು ತಲುಪಿತು.

ಈ ತಂಡದ ನೇತೃತ್ವ ವಹಿಸಿದ್ದ ಉಮೇಶ್‌ ಟಪಾಲ್‌ ಹೇಳುವ ಪ್ರಕಾರ ಈ ಆರ್ಥಿಕ ಸಹಾಯ ಬಡ ಪ್ರತಿಭಾವಂತರಿಗೆ ಉಪಯೋಗವಾಗುತ್ತದೆ. ಇಂಥ ನೆರವು ಪಡೆದವರು ಮುಂದೆ ಇತರ ಬಡ ಪ್ರತಿಭಾವಂತರಿಗೆ ಸಹಾಯಮಾಡಲು ದಾರಿಮಾಡಿಕೊಡುತ್ತದೆ .

ಸಮಾಜದಲ್ಲಿ ಅನೇಕ ಬಡ ಪ್ರತಿಭಾವಂತರಿಗೆ ಪ್ರೋತ್ಸಾಹ, ನೆರವಿನ ಅಗತ್ಯವಿರುತ್ತದೆ ಕೆಲವರು ತಂಡ ಮಾಡಿಕೊಂಡು ಪ್ರತಿಭಾವಂತರಿಗೆ ನೆರವಾದರೆ ಅದರಿಂದ ಅರ್ಹರಿಗೆ ಉತ್ತೇಜನದ ಜೊತೆಗೆ ಮಾರ್ಗದರ್ಶನ ಪಡೆಯಲೂ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ತಂಡದ ಒಬ್ಬ ಸದಸ್ಯ ಆರ್.ಬಿ. ನಾಯ್ಕ ಟಪಾಲ್.

ಹೀಗೆ ಸಿದ್ದಾಪುರದ ಸಮಾನಮನಸ್ಕರ ತಂಡ ಮಾದರಿ ಕೆಲಸ ಮಾಡಿರುವುದನ್ನು ಅನೇಕರು ಪ್ರಶಂಸಿಸಿದ್ದಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವ ಈ ಮಾನವೀಯ ಕೆಲಸ ನಮ್ಮಿಂದ ಆಗುತ್ತಿರುವುದಕ್ಕೆ ಉಮೇಶ್‌, ರವಿ ಅಣ್ಣ, ನಾಗಭೂಷಣ್‌ ಕಾರಣ. ಇವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವ ತೃಪ್ತಿ-ಸಮಾಧಾನದ ಮುಂದೆ ಏನಿದೆ ಸರ್?‌ ಎನ್ನುತ್ತಾರೆ ವಾಹನ ಚಾಲಕ ರವಿ ನಾಯ್ಕ ಮೆಣಸಿ.

ನಾವು ನಮ್ಮೂರು ಇಂಥ ಸ್ಥಳೀಯ ಉತ್ತಮ ಕೆಲಸಗಳಿಗೆ ವೇದಿಕೆ. ನಿಮ್ಮ ವ್ಯಾಪ್ತಿಯಲ್ಲಾದ ಇಂಥ ಸಮಾಜಮುಖಿ ಕೆಲಸಗಳನ್ನು ನಮ್ಮ ಗಮನಕ್ಕೆ ತನ್ನಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *