ನಾವು-ನಮ್ಮೂರು- ಸಮಾನ ಮನಸ್ಕರ ಶ್ರೇಷ್ಠ ಕೆಲಸ‌

ಸಂಘ-ಸಂಘಟನೆಗಳಲ್ಲಿ ಬಹುಮತಕ್ಕೆ ಆದ್ಯತೆ. ಕೆಲವೊಮ್ಮೆ ಬಹುಮತವೆಂಬುದು ಮೂರ್ಖರ ನಿರ್ಧಾರವಾಗುವ ಸಂಭವವೂ ಉಂಟು. ಇಂಥ ಬಹುಮತದ ಮೂರ್ಖರ ಕೆಲಸಕ್ಕಿಂತ ಒಬ್ಬರ-ಕೆಲವರ ವಿದಾಯಕ ಕೆಲಸಗಳು ಮಹತ್ವ ಪಡೆಯುವುದುಂಟು ಇಂಥ ನಿದರ್ಶನವೊಂದು ಇಲ್ಲಿದೆ.

ಸಿದ್ಧಾಪುರದ ಉಮೇಶ್‌ ಟಪಾಲ್‌ ನಿವೃತ್ತ ನೌಕರ. ಅವರು ಸರ್ಕಾರಿ ಸೇವೆಯಲ್ಲಿದ್ದಾಗ, ನಿವೃತ್ತಿ ನಂತರ ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಉಮೇಶ್‌ ಟಪಾಲ್‌ ಎಂದರೆ ರೇಷ್ಮೆ ಟಪಾಲ್‌ ಎನ್ನುವ ಮಟ್ಟಿಗೆ ಅನ್ವರ್ಥಕರಾದ ಉಮೇಶ್‌ ನಾಯ್ಕ ತಮ್ಮ ಸೇವಾವಧಿಯಲ್ಲಿ ತಮ್ಮ ಮಿತಿ-ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದವರು. ತಮ್ಮ ಕರ್ತವ್ಯದ ಜೊತೆಗೆ ಅವರ ಸೇವಾ ಮನೋಭಾವ ಎಲ್ಲರ ಗಮನಸೆಳೆದಿದೆ. ಹಲವು ಸಂಘ-ಸಂಸ್ಥೆ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ೬೪ ರ ಹರೆಯದ ಉಮೇಶ್‌ ಕೆಲವು ಸಂಘಟನೆಗಳಲ್ಲಿ ಪ್ರತಿಭಾವಂತರಿಗೆ ನೂರಾರು ಜನರು ಸೇರಿ ೫೦೦, ಸಾವಿರ ರೂಪಾಯಿ ಸಹಾಯ ಮಾಡಿ ಪ್ರಚಾರ ಪಡೆಯುವುದಕ್ಕಿಂತ ನೈಜ ಅರ್ಹರಿಗೆ ಅವಶ್ಯ ಸಹಾಯ ಮಾಡುವುದು ಒಳ್ಳೆಯದು ಎಂದು ಅರಿತು ಸಮಾನ ಮನಸ್ಕರ ತಂಡ ಕಟ್ಟಿದರು. ಆತಂಡದಲ್ಲಿ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ರವೀಂಧ್ರ ಟಪಾಲ, ರವಿ ಮೆಣಸಿ, ನಾಗಭೂಷಣ್‌ ನಾಯ್ಕ ರೆಲ್ಲಾ ಸೇರಿದರು. ತಾಲೂಕಿನಲ್ಲಿ ದ್ವಿತಿಯ ಪಿ.ಯು. ಪರೀಕ್ಷೆಯಲ್ಲಿ ಅತ್ತ್ಯುನ್ನತ ಅಂಕ ಪಡೆದ ಕೆಲವು ಪ್ರತಿಭಾವಂತ ಬಡ ಮಕ್ಕಳನ್ನು ಹುಡುಕಿದರು. ಅವರೆಲ್ಲರಿಗೆ ಸಮಾನಮನಸ್ಕರು ತಮ್ಮ ವೈಯಕ್ತಿಕ ನೆರವು ೫,೧೦ ಸಾವಿರ ರೂಪಾಯಿಗಳನ್ನು ಅವರ ಮನೆಗೇ ತೆರಳಿ ಹಂಚಿದರು. ಈ ಸಮಾನಮನಸ್ಕರ ಸಹಾಯ ಕನಿಷ್ಟ ಅರ್ಹ, ಸೂಕ್ತ ಮನೆಗಳನ್ನು ತಲುಪಿತು.

ಈ ತಂಡದ ನೇತೃತ್ವ ವಹಿಸಿದ್ದ ಉಮೇಶ್‌ ಟಪಾಲ್‌ ಹೇಳುವ ಪ್ರಕಾರ ಈ ಆರ್ಥಿಕ ಸಹಾಯ ಬಡ ಪ್ರತಿಭಾವಂತರಿಗೆ ಉಪಯೋಗವಾಗುತ್ತದೆ. ಇಂಥ ನೆರವು ಪಡೆದವರು ಮುಂದೆ ಇತರ ಬಡ ಪ್ರತಿಭಾವಂತರಿಗೆ ಸಹಾಯಮಾಡಲು ದಾರಿಮಾಡಿಕೊಡುತ್ತದೆ .

ಸಮಾಜದಲ್ಲಿ ಅನೇಕ ಬಡ ಪ್ರತಿಭಾವಂತರಿಗೆ ಪ್ರೋತ್ಸಾಹ, ನೆರವಿನ ಅಗತ್ಯವಿರುತ್ತದೆ ಕೆಲವರು ತಂಡ ಮಾಡಿಕೊಂಡು ಪ್ರತಿಭಾವಂತರಿಗೆ ನೆರವಾದರೆ ಅದರಿಂದ ಅರ್ಹರಿಗೆ ಉತ್ತೇಜನದ ಜೊತೆಗೆ ಮಾರ್ಗದರ್ಶನ ಪಡೆಯಲೂ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ತಂಡದ ಒಬ್ಬ ಸದಸ್ಯ ಆರ್.ಬಿ. ನಾಯ್ಕ ಟಪಾಲ್.

ಹೀಗೆ ಸಿದ್ದಾಪುರದ ಸಮಾನಮನಸ್ಕರ ತಂಡ ಮಾದರಿ ಕೆಲಸ ಮಾಡಿರುವುದನ್ನು ಅನೇಕರು ಪ್ರಶಂಸಿಸಿದ್ದಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವ ಈ ಮಾನವೀಯ ಕೆಲಸ ನಮ್ಮಿಂದ ಆಗುತ್ತಿರುವುದಕ್ಕೆ ಉಮೇಶ್‌, ರವಿ ಅಣ್ಣ, ನಾಗಭೂಷಣ್‌ ಕಾರಣ. ಇವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವ ತೃಪ್ತಿ-ಸಮಾಧಾನದ ಮುಂದೆ ಏನಿದೆ ಸರ್?‌ ಎನ್ನುತ್ತಾರೆ ವಾಹನ ಚಾಲಕ ರವಿ ನಾಯ್ಕ ಮೆಣಸಿ.

ನಾವು ನಮ್ಮೂರು ಇಂಥ ಸ್ಥಳೀಯ ಉತ್ತಮ ಕೆಲಸಗಳಿಗೆ ವೇದಿಕೆ. ನಿಮ್ಮ ವ್ಯಾಪ್ತಿಯಲ್ಲಾದ ಇಂಥ ಸಮಾಜಮುಖಿ ಕೆಲಸಗಳನ್ನು ನಮ್ಮ ಗಮನಕ್ಕೆ ತನ್ನಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *