



ಸಿದ್ದಾಪುರ: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ 80% ಕ್ಕಿಂತ ಅಧಿಕ ಅಂಕ ಗಳಿಸಿದ ಊರಿನ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ತಾಲೂಕಿನ ತ್ಯಾರ್ಸಿಯ ಸಮೃದ್ಧಿ ಯುವ ಬಳಗದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ತ್ಯಾರ್ಸಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಿಯುಸಿಯಲ್ಲಿ 88% ಫಲಿತಾಂಶ ಪಡೆದುಕೊಂಡ ರಾಧಾ ಪುರುಷೋತ್ತಮ ನಾಯ್ಕ, ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದಿವ್ಯಾ ಲೋಕೇಶ ನಾಯ್ಕ, ಶಿವರಾಜ ಯಶೋಧರ ಗೌಡ, ಹರ್ಷಿತಾ ಸಂತೋಷ ನಾಯ್ಕ, ಪ್ರಕೃತ್ತಿ ಸತೀಶ ಗೌಡ, ಪ್ರಥ್ವಿ ಲೋಕೇಶ ನಾಯ್ಕ, ಯೋಗಿತಾ ದ್ಯಾವಾ ನಾಯ್ಕ ಇವರನ್ನು ಸಮೃದ್ಧಿ ಯುವ ಬಳಗದ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಊರಿನ ಹಿರಿಯ ನಾಗರಿಕ ಗಣಪತಿ ಹನುಮಾ ನಾಯ್ಕ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಚಂದ್ರ ನಾಯ್ಕ, ಉಪಾಧ್ಯಕ್ಷೆ ಸುನೀತಾ ನಾಯ್ಕ, ಸದಸ್ಯರಾದ ಸತೀಶ ಗೌಡರ್, ಮೋಹನ ನಾಯ್ಕ, ರೇಖಾ ಗೌಡ, ರವಿ ನಾಯ್ಕ, ಪದ್ಮಾವತಿ ನಾಯ್ಕ, ಕವಿತಾ ನಾಯ್ಕ, ಮಮತಾ ಚೆನ್ನಯ್ಯ, ಮಾಜಿ ಅಧ್ಯಕ್ಷ ಮಾರುತಿ ಶಾಂತಾರಾಮ, ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಶೇಟ್, ಶಿಕ್ಷಕ ಎಂ.ಡಿ.ನಾಯ್ಕ, ಸಮೃದ್ಧಿ ಯುವ ಬಳಗದ ಸದಸ್ಯರಾದ ಹನುಮಂತ ಗೊಂಡ, ಜಗದೀಶ ನಾಯ್ಕ, ಕಾರ್ತಿಕ ನಾಯ್ಕ,
ಆಕಾಶ್ ನಾಯ್ಕ, ತರುಣ ನಾಯ್ಕ, ಮಂಜುನಾಥ ಮಾರುತಿ ನಾಯ್ಕ, ಮಕ್ಕಳ ಪಾಲಕ ಶಿವಾನಂದ ನಾಯ್ಕ, ಅಂಗನವಾಡಿ ಶಿಕ್ಷಕಿ ಗೀತಾ ನಾಯ್ಕ, ಅಡುಗೆ ಸಿಬ್ಬಂದಿ ವೇದಾವತಿ ನಾಯ್ಕ ಮತ್ತಿತರರು ಹಾಜರಿದ್ದರು. ಸಮೃದ್ಧಿ ಯುವ ಬಳಗದ ನವೀನ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________