psi ನಿತ್ಯಾನಂದ ಗೌಡ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಲು ಉದ್ದೇಶಿಸಿದ್ದ ಬಿ.ಜೆ.ಪಿ. ನಾಯಕ ಯಾರು ಗೊತ್ತೆ…?

ಎಸ್. ನಿತ್ಯಾನಂದ ಗೌಡ ಇಂದಿನ ಹಾಗೂ ಈ ತಿಂಗಳ ಹೆಚ್ಚು ಪ್ರಚಾರದ ವ್ಯಕ್ತಿ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವಿಭಾಗದ ಸಿದ್ಧಾಪುರ ಠಾಣೆಯ ಉಪ ನಿರೀಕ್ಷಕರಾಗಿದ್ದ ಇವರು ಉತ್ತಮ ಹೆಸರು ಮಾಡಿ ನಂತರ ಕಳಂಕಿತರಾಗಿ ಇಲ್ಲಿಂದ ವರ್ಗಾವಣೆಯಾಗಿದ್ದರು. ಇವರನ್ನು ಇಲ್ಲಿಂದ ಎತ್ತಂಗಡಿ ಮಾಡಲು ಅನೇಕ ಸಂಘಟನೆಗಳು,ವ್ಯಕ್ತಿಗಳೂ ಪ್ರಯತ್ನಿಸಿದ್ದಾರಾದರೂ ಅದರ ಹಿಂದಿನ ಕಾರಣ ಬಹಳಷ್ಟಿದ್ದವು. ಆದರೆ ಇಂದು ಮಾಧ್ಯಮಗೋಷ್ಠಿ ಕರೆದು ಮಾತನಾಡಿದ ದಲಿತ ಮುಖಂಡ ಎಚ್.ಕೆ.ಶಿವಾನಂದ, ವಿಕ್ಟರ್ ಫರ್ನಾಂಡೀಸ್ ಹಾಗೂ ವೀರಭದ್ರನಾಯ್ಕ ಸ್ಥಳಿಯರು, ಜನತೆಯ ವಿರೋಧದಿಂದ ವರ್ಗಾವಣೆಯಾಗಿದ್ದ psi ನಿತ್ಯಾನಂದ ಗೌಡ ಮರಳಿ ಬಂದರೆ ಅವರ ವಿರುದ್ಧ ಮತ್ತು ಅವರನ್ನು ಬರಲು ಅವಕಾಶ ಮಾಡಿದ ಸ್ಥಳಿಯರ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಹೊರಗಿದ್ದ ಪ್ರೇಕ್ಷಕರ ಗ್ಯಾಲರಿಯಿಂದ ಮಾತನಾಡಿದ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಬ್ರಷ್ಟ-ಜನವಿರೋಧಿ ನಿತ್ಯಾನಂದ ಗೌಡರನ್ನು ಸಿದ್ಧಾಪುರಕ್ಕೆ ಕರೆತರುವ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಇದರ ಸೂತ್ರದಾರ ಯಾರೆಂಬುದೂ ನಮಗೆ ಗೊತ್ತು. ಇಂಥ ರಾಜಕಾರಣ ಹೆಚ್ಚುದಿವಸ ನಡೆಯುವುದಿಲ್ಲ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷರಿಗೇ ಪರೋಕ್ಷ ಟಾಂಗ್ ನೀಡಿದರು.

ಈ ಬಗ್ಗೆ ವಿವರಿಸುತ್ತಾ… ಹಿಂದೆ ನಿತ್ಯಾನಂದ ಗೌಡ ಸಿದ್ಧಾಪುರದಲ್ಲಿದ್ದಾಗ ತಮ್ಮ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಷಡ್ಯಂತ್ರದಿಂದ ಜಿಲ್ಲಾಧಿಕಾರಿಗಳ ಅನುಮತಿ ಪಡೆದಿದ್ದರು. ನಂತರ ಹಿರಿಯ ಅಧಿಕಾರಿಗಳು ಆ ದಾಖಲೆಯನ್ನೇ ಹರಿದು ಹಾಕಿದ್ದರು. ಜನರನ್ನು ಸುಲಿಯುವುದು, ಸ್ತ್ರೀಯರನ್ನು ಪೀಡಿಸುವುದು ಮಾಡಿ ರಾಜ್ಯದ ಯಾವ ಪೊಲೀಸ್ ಠಾಣೆಗೂ ನಿತ್ಯಾನಂದ ಗೌಡ ಬೇಡ ಎಂದು ಸಾರ್ವಜನಿಕ ಅಭಿಪ್ರಾಯ ಇರುವಾಗ ಸ್ಥಳಿಯ ಪ್ರಮುಖರೊಬ್ಬರು ಅವರನ್ನೇ ಮತ್ತೆ ಕರೆತರುವ ಹಿಂದೆ ಅವರ ಲೆಕ್ಕಾಚಾರ, ಲಾಭದ ವ್ಯವಹಾರ ಕೂಡಾ ಇರಬಹುದು ಆದರೆ ಮತ್ತೆ ನಿತ್ಯಾನಂದ ಗೌಡ ಸಿದ್ದಾಪುರಕ್ಕೆ ಬಂದರೆ ಅವರ ವಿರುದ್ಧ, ಅವರನ್ನು ಕರೆತರುವವರ ವಿರುದ್ಧ ಕೂಡಾ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *