psi ನಿತ್ಯಾನಂದ ಗೌಡ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಲು ಉದ್ದೇಶಿಸಿದ್ದ ಬಿ.ಜೆ.ಪಿ. ನಾಯಕ ಯಾರು ಗೊತ್ತೆ…?

ಎಸ್. ನಿತ್ಯಾನಂದ ಗೌಡ ಇಂದಿನ ಹಾಗೂ ಈ ತಿಂಗಳ ಹೆಚ್ಚು ಪ್ರಚಾರದ ವ್ಯಕ್ತಿ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವಿಭಾಗದ ಸಿದ್ಧಾಪುರ ಠಾಣೆಯ ಉಪ ನಿರೀಕ್ಷಕರಾಗಿದ್ದ ಇವರು ಉತ್ತಮ ಹೆಸರು ಮಾಡಿ ನಂತರ ಕಳಂಕಿತರಾಗಿ ಇಲ್ಲಿಂದ ವರ್ಗಾವಣೆಯಾಗಿದ್ದರು. ಇವರನ್ನು ಇಲ್ಲಿಂದ ಎತ್ತಂಗಡಿ ಮಾಡಲು ಅನೇಕ ಸಂಘಟನೆಗಳು,ವ್ಯಕ್ತಿಗಳೂ ಪ್ರಯತ್ನಿಸಿದ್ದಾರಾದರೂ ಅದರ ಹಿಂದಿನ ಕಾರಣ ಬಹಳಷ್ಟಿದ್ದವು. ಆದರೆ ಇಂದು ಮಾಧ್ಯಮಗೋಷ್ಠಿ ಕರೆದು ಮಾತನಾಡಿದ ದಲಿತ ಮುಖಂಡ ಎಚ್.ಕೆ.ಶಿವಾನಂದ, ವಿಕ್ಟರ್ ಫರ್ನಾಂಡೀಸ್ ಹಾಗೂ ವೀರಭದ್ರನಾಯ್ಕ ಸ್ಥಳಿಯರು, ಜನತೆಯ ವಿರೋಧದಿಂದ ವರ್ಗಾವಣೆಯಾಗಿದ್ದ psi ನಿತ್ಯಾನಂದ ಗೌಡ ಮರಳಿ ಬಂದರೆ ಅವರ ವಿರುದ್ಧ ಮತ್ತು ಅವರನ್ನು ಬರಲು ಅವಕಾಶ ಮಾಡಿದ ಸ್ಥಳಿಯರ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಹೊರಗಿದ್ದ ಪ್ರೇಕ್ಷಕರ ಗ್ಯಾಲರಿಯಿಂದ ಮಾತನಾಡಿದ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಬ್ರಷ್ಟ-ಜನವಿರೋಧಿ ನಿತ್ಯಾನಂದ ಗೌಡರನ್ನು ಸಿದ್ಧಾಪುರಕ್ಕೆ ಕರೆತರುವ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಇದರ ಸೂತ್ರದಾರ ಯಾರೆಂಬುದೂ ನಮಗೆ ಗೊತ್ತು. ಇಂಥ ರಾಜಕಾರಣ ಹೆಚ್ಚುದಿವಸ ನಡೆಯುವುದಿಲ್ಲ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷರಿಗೇ ಪರೋಕ್ಷ ಟಾಂಗ್ ನೀಡಿದರು.

ಈ ಬಗ್ಗೆ ವಿವರಿಸುತ್ತಾ… ಹಿಂದೆ ನಿತ್ಯಾನಂದ ಗೌಡ ಸಿದ್ಧಾಪುರದಲ್ಲಿದ್ದಾಗ ತಮ್ಮ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಷಡ್ಯಂತ್ರದಿಂದ ಜಿಲ್ಲಾಧಿಕಾರಿಗಳ ಅನುಮತಿ ಪಡೆದಿದ್ದರು. ನಂತರ ಹಿರಿಯ ಅಧಿಕಾರಿಗಳು ಆ ದಾಖಲೆಯನ್ನೇ ಹರಿದು ಹಾಕಿದ್ದರು. ಜನರನ್ನು ಸುಲಿಯುವುದು, ಸ್ತ್ರೀಯರನ್ನು ಪೀಡಿಸುವುದು ಮಾಡಿ ರಾಜ್ಯದ ಯಾವ ಪೊಲೀಸ್ ಠಾಣೆಗೂ ನಿತ್ಯಾನಂದ ಗೌಡ ಬೇಡ ಎಂದು ಸಾರ್ವಜನಿಕ ಅಭಿಪ್ರಾಯ ಇರುವಾಗ ಸ್ಥಳಿಯ ಪ್ರಮುಖರೊಬ್ಬರು ಅವರನ್ನೇ ಮತ್ತೆ ಕರೆತರುವ ಹಿಂದೆ ಅವರ ಲೆಕ್ಕಾಚಾರ, ಲಾಭದ ವ್ಯವಹಾರ ಕೂಡಾ ಇರಬಹುದು ಆದರೆ ಮತ್ತೆ ನಿತ್ಯಾನಂದ ಗೌಡ ಸಿದ್ದಾಪುರಕ್ಕೆ ಬಂದರೆ ಅವರ ವಿರುದ್ಧ, ಅವರನ್ನು ಕರೆತರುವವರ ವಿರುದ್ಧ ಕೂಡಾ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *