prashant kishor interview-ಅಮಿತ್ ಶಾ ಕೆಲಸಕ್ಕೆ ಬಾರದ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್: ಪ್ರಶಾಂತ್ ಕಿಶೋರ್

ಅಮಿತ್ ಶಾರ ಅಭಿಮಾನಿಗಳು ಮರೆಯದೇ ಓದಿರಿ-ಪುರುಷೋತ್ತಮ ಬಿಳಿಮಲೆ:

ಹೊಸದಿಲ್ಲಿ: “ನಾನು ದುರಹಂಕಾರಿ ಎಂದು ಭಾವಿಸಬೇಡಿ, ಆದರೆ ಅಮಿತ್ ಶಾ ಅತ್ಯಂತ ಓವರ್-ರೇಟೆಡ್ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್ ಆಗಿದ್ದಾರೆ. ಅವರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ಬಹಳ ಚಾಣಾಕ್ಷ ಚುನಾವಣಾ ತಂತ್ರಜ್ಞ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಅವರಿಗೆ ತೋರಿಸಲು ಯಾವ ಸಾಧನೆಯಿದೆ?” ಎಂದು ಪಶ್ಚಿಮ ಬಂಗಾಳದಲ್ಲಿ ಅಮೋಘ ಜಯ ಸಾಧಿಸಿದ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

‘ದಿ ಟೆಲಿಗ್ರಾಫ್‍’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗೆ ಯಾವತ್ತೂ ಇತ್ತು. ಆದರೆ ಹೆಚ್ಚಿನವರು ನಮ್ಮನ್ನು ನಂಬಿರಲಿಲ್ಲ. ಅಬ್ಬರದ ಪ್ರಚಾರ ಯಾವತ್ತೂ ಚುನಾವಣೆಯಲ್ಲಿ ಗೆಲುವು ತಂದು ಕೊಡುವುದಿಲ್ಲ. ಇದು ಭಾಗಶಃ ಬಿಜೆಪಿಯ ದುರಹಂಕಾರದ, ಪ್ರಮುಖವಾಗಿ ಅಮಿತ್ ಶಾ ಅವರಂತಹ ನಾಯಕರ ದುರಹಂಕಾರದ ಪರಿಣಾಮ. ಅವರೆಲ್ಲ ಆಕಾಶದಲ್ಲಿಯೇ ಹಾರಾಡಿ, ನೆಲವನ್ನು ಮರೆತು ಬಿಟ್ಟರು. ಬಿಜೆಪಿ ತನ್ನನ್ನು ವಿಜೇತ ಎಂದು ಘೋಷಿಸಿಕೊಂಡೇ ಚುನಾವಣಾ ಕಣಕ್ಕಿಳಿಯುತ್ತದೆ, ಅವರು ಬಹಳಷ್ಟು ಸದ್ದು ಮಾತ್ರ ಮಾಡುತ್ತಾರೆ,” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಅಮಿತ್ ಶಾ ಅವರಿಗೆ ವೇದಿಕೆಯಲ್ಲಿ ನಿಲ್ಲಿಸಲು ಅತ್ಯಂತ ವರ್ಚಸ್ವಿ ನಾಯಕ ನರೇಂದ್ರ ಮೋದಿ ಇದ್ದಾರೆ. ಅವರ ಕೈಯ್ಯಲ್ಲಿ ಅಪಾರ ಸಂಪನ್ಮೂಲಗಳೂ ಇವೆ. ಸಂಘ ಬೆಂಬಲಿತ ಪಕ್ಷದ ದೊಡ್ಡ ಜಾಲವೂ ಇದೆ, ಸರಕಾರ ಮತ್ತದರ ಏಜನ್ಸಿಗಳ ಬೆಂಬಲವೂ ಇದೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಚುನಾವಣಾ ಆಯೋಗವೂ ಇದೆ. ಆದರೂ ಅವರು ಸೋತರು. ಇದು ನಿಮಗೆ ಅಮಿತ್ ಶಾ ಅವರ ಅಸಲಿ ಸಾಮರ್ಥ್ಯ ಎಂದು ತೋರಿಸುತ್ತದೆ ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಇದು ನನ್ನ ಮತ್ತು ಅಮಿತ್ ಶಾ ಅವರ ನಡುವಿನ ಮೂರನೇ ಮುಖಾಮುಖಿ ಹಾಗೂ ಮೂರು ಬಾರಿಯೂ ನಾನು ಅವರನ್ನು ಸೋಲಿಸಿದ್ದೇನೆ- ಬಿಹಾರದಲ್ಲಿ ೨೦೧೫ರಲ್ಲಿ, ದಿಲ್ಲಿಯಲ್ಲಿ ಹಾಗೂ ಈಗ ಬಂಗಾಳದಲ್ಲಿ. ಮತ್ತೆ ಆಂಧ್ರ ಮತ್ತು ಪಂಜಾಬ್‍ನಲ್ಲೂ ಅವರನ್ನು ಸೋಲಿಸಿದ್ದೇವೆ, ಅವರು ಕೆಲಸಕ್ಕೆ ಬಾರದ ರಾಜಕೀಯ ಮ್ಯಾನೇಜರ್. ಒಬ್ಬ ರಾಜಕಾರಣಿಯಾಗಿ ಅಮಿತ್ ಶಾ ಅವರ ಮೇಲೆ ನನಗೆ ದೊಡ್ಡ ಗೌರವವೇನಿಲ್ಲ ಎಂದು ನನಗೆ ಹೇಳಬೇಕಾಗಿದೆ” ಎಂದು ಪ್ರಶಾಂತ್ ಕಿಶೋರ್ ತೀಕ್ಷ್ಣ ಮಾತುಗಳನ್ನಾಡಿದ್ದಾರೆ.ಸೌಜನ್ಯ : ವಾರ್ತಾಭಾರತಿ ೪.೫.೨೦೨೧

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *