ಎಲ್ಲದಕ್ಕೂ ಕಾರಣ ಕಾವ್ಯ

ಎಲ್ಲದಕ್ಕೂ ಕಾರಣ ಕಾವ್ಯ
ಕಾವ್ಯವನ್ನು ನಾನು ಈ ಭಾಷೆಯ ಅಹಂಕಾರದ ನೆಲೆಯ ಆಚೆಗೇ ಇಡ ಬಯಸುತ್ತೇನೆ. ಪ್ರತಿಜೀವಿಯಅಹಂಕಾರ ಶೂನ್ಯ ಕ್ಷಣವೇ ಆತನ ಸೃಜನ ಕ್ಷಣ, ಅತ್ಯುತ್ತಮ ಕ್ರೀಡಾಪಟುವಿನ ಶಿಖರಕ್ಷಣ, ಸಂಗೀತಗಾರನ ತನ್ಮಯ ಕ್ಷಣ, ಶಸ್ತ್ರ ಕ್ರಿಯೆಯ ನಡುವಿನ ವೈದ್ಯನಶ್ರದ್ಧಾವಂತ ಕ್ಷಣ ಮತ್ತು ಕಾವ್ಯ ನಿರ್ಮಿತಿಯ ಕ್ಷಣ ಇವು ಒಂದೇ.
ಮನುಷ್ಯ ಈಗ ಅತ್ಯಂತ ಸಂಕಟದ ಸ್ಥಿತಿಯಲ್ಲಿದ್ದಾನೆ. ಆತನಿಗೆ ತನ್ನೊಳಗಿನ ನಿಷ್ಕಪಟ ಮಗುವಿನ ಸಂಪರ್ಕವೇ ಕಡಿದು ಹೋಗಿದೆ. ಆತ ಮೊಂಡಾಗಿ ಹೋಗಿದ್ದಾನೆ.ಮರಗಟ್ಟಿದ್ದಾನೆ.
ಆದರೆ, ಈ ಮನುಷ್ಯನೂ ಎಂಥ ಬಿಸಿಲಿನಲ್ಲೂ ಎಂಥ ಅಪರಿಚಿತ ಶಿಶು ನಕ್ಕರೂ ಪ್ರತಿಯಾಗಿ ನಗದೇ ಇರಲಾರ. ಪೋಸ್ಟ್ ಆಫೀಸಿನಲ್ಲಿ ನಡುಗುವ ಕೈಗಳ ವೃದ್ಧ ವಿಳಾಸ ಬರೆಯಲು ತಡಕಾಡುತಿದ್ದರೆ ಆತನಿಗೆ ನೆರವಾಗದೇ ಇರಲಾರ. ಬಸುರಿ ಹೆಂಗಸು ನಿಂತಿದ್ದರೆ ಎದ್ದು ಆಕೆಗೆಸೀಟು ಕೊಡದೇ ಇರಲಾರ. ಇದು ಆತನೊಳಗೆ ಇನ್ನೂ ಜೀವ ಹಿಡಿದಿರುವ ಕಾವ್ಯ.
ಮನುಷ್ಯನೇನು ಕಬ್ಬಿಣದ ಪುಡಿಯೆ? ಆತ ಒಂದು ಮಣ್ಣಿನ ಗುಪ್ಪೆ,ತುಸುನೀರು ಸಿಂಪಡಿಸಿದರೂ ಕೊನರಬಲ್ಲ. ಮನುಷ್ಯ ನೇ ಮಾಡಿಕೊಂಡ ಮಣ್ಣಿನಗೋಡೆಗಳೂ ಒಂದು ಮಳೆಗೆ ಹಸಿರಾಗುತ್ತವಂತೆ. ಮನುಷ್ಯನೇಕೆ ಮೊಳೆಯಲಾರ?
ಒಳ್ಳೆಯ ಕಾವ್ಯಕ್ಕೆ ಈಗ ಬೇಕಾಗಿರುವುದು ಒಳ್ಳೆಯ ಕವಿಗಳಲ್ಲ, ಒಳ್ಳೆಯ ಜೀವಿಗಳು.
ಕೆಲವರು ಹೇಳುತ್ತಾರಲ್ಲ ಪ್ರೇತಾತ್ಮಗಳು ತಮಗೆ ಬೇಕಾದ ಶರೀರ ವನ್ನು ಅರಸುತ್ತಾ ಈ ಅವಕಾಶದಲ್ಲಿ ಅಲೆಯುತ್ತವೆ ಅಂತ. ಅದೇ ಥರ ಕಾವ್ಯಾತ್ಮವೂ ತಾನು ಪ್ರವೇಶಿಸಲು, ನೆಲೆಸಲು ಒಳ್ಳೆಯ ಮನಸ್ಸಿನ ಜಾಗವನ್ನು ಅರಸುತ್ತ ಅಲೆಯುತ್ತಲೇ ಇರುತ್ತದೆ. (ಮಕ್ಕಳಲ್ಲಿ ಅದು ಈಗಾಗಲೇ ನೆಲೆಸಿದೆ) ನಮ್ಮ ಹೃದಯ ವಿಶಾಲವಾದಷ್ಟೂ ಕಾವ್ಯಕ್ಕೆ ಅಷ್ಟು ಜಾಗ ಸಿಕ್ಕಂತೆ.
ಲಿಖಿತ ಕಾವ್ಯದಲ್ಲಿ ಸಮಾಜ ತರುವುದೇನೂ ಕಷ್ಟವಲ್ಲ. ಆದರೆ ಸಮಾಜದಲ್ಲಿ ಕಾವ್ಯ ತರುವುದು ಮತ್ತು ಉಳಿಸುವುದು ಅತ್ಯಂತ ಮುಖ್ಯ. ಇದೊಂದೇ ತನ್ನ ಶುದ್ಧ ರೂಪದಲ್ಲಿ ಮನುಷ್ಯನನ್ನು ಬರ್ಬರತೆಯಿಂದ ಕಾಪಾಡುವಸಂಜೀವಿನಿಆಗಬಹುದು.
ಲಿಖಿತ ಕಾವ್ಯ, ಸಮಾಜದ ಛಿಚಿಡಿಜiogಡಿಚಿm ನಂತೆ, ಅದರ ಹೃದಯದ ಸ್ಥಿತಿಗತಿಯ ದಿಕ್ಸೂಚಿ,ನಮ್ಮ ಬದುಕಿನ ಭಾವಗುಣ (emoಣioಟಿಚಿಟ quಚಿಟiಣಥಿ) ಹೆಚ್ಚಲಿ. ಬರೆಯದ ಕವಿತೆಗಳ ಮೊತ್ತ ಬರೆದ ಕವಿತೆಗಳಿಗಿಂತ ಸದಾ ಹೆಚ್ಚಿಗೇ ಇರಲಿ.
…..ಹೀಗೆ ಶಬ್ದ ತೀರದಲ್ಲಿ ‘ಕಾವ್ಯಕಾರಣ’ ಎಂಬ ಶಿರ್ಷಿಕೆಯಡಿ ನನ್ನ ಪ್ರೀತಿಯ ಕವಿ, ಕತೆಗಾರ ಜಯಂತ ಕಾಯ್ಕಿಣಿ ಬರೆಯುತ್ತಾರೆ.
ಅವರ ಕಾವ್ಯ ಕಾರಣ ಓದುವ ಮೊದಲೇ ಜಯಂತರಿಗೆ ನಮ್ಮ ‘ನೂರು ಕವಿತೆ ಸಾಲದು’ಕಾರ್ಯಕ್ರಮಕ್ಕೆ ಬರುತ್ತೀರೋ ಕೇಳಿದ್ದೆ. ಏನದು? ಎಂದವರಿಗೆ ‘ನೂರು ಕವಿತೆ ವಾಚನ ದೊಂದಿಗೆ ನೂರು ಹಣ್ಣಿನ ಗಿಡಗಳನ್ನು ನೆಡುವ ಅಪರೂಪದ ಕಾರ್ಯಕ್ರಮ’ ಎಂದೆ.
‘ನಿಮ್ಮ ಕವನ ಕೇಳಿ ಗಿಡಗಳು ಬಾಡದಿರಲಿ’ ಎಂದು ಕಿಚಾಯಿಸಿ ನಕ್ಕರು.
ಜಯಂತರ ಈ ವಿನೋದ ಪ್ರಜ್ಞೆ ಅವರನ್ನು ಈಗಲೂ ಥಿouಣh ಆಗಿಟ್ಟಿದೆ. ಹೀಗೆ ಸದಾ ಯುವಕರಾಗಿರುವ ಲಾಭವೆಂದರೆ. ಅವರ ಬರಹ, ಅಂಕಣ, ಕಾವ್ಯ ಒಟ್ಟಾರೆ ಸಾಹಿತ್ಯ ಸದಾ ಚೇತೋಹಾರಿ ಲವಲವಿಕೆಯಿಂದತುಂಬಿ ತುಳುಕುತ್ತಿರುತ್ತದೆ.
ಇಂಥ ಜೀವಪರ ಬರಹ, ಸಾಹಿತ್ಯಾಸಕ್ತಿಯ ಫಲಾನುಭವಿ ಗಳಾದ ನಾವು ನಮ್ಮ ಮಿತಿಯಲ್ಲಿ ಸಾಹಿತ್ಯ, ಸಾಂಸ್ಕøತಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ತೀರಾ ವ್ಯವಹಾರಿಕರಿಗೆ, ಸೃಜನಶೀಲತೆಗೆ ವಿಮುಖರಾಗಿದ್ದವರಿಗೆ ‘ಮಳ್ಳುತನ’ ಎನಿಸಬಹುದು.
ಆದರೆ, ಇಂಥ ಚಟುವಟಿಗಳ ಬಗ್ಗೆ ಕಾಳಜಿ ಇರುವ ಡಾ.ಆರ್.ಪಿ.ಹೆಗಡೆ,ನಾಗೇಶ್ ಹೆಗಡೆ, ರೋಹಿದಾಸನಾಯಕ, ನಾ.ಡಿಸೋಜಾ ವಿಷ್ಣುನಾಯ್ಕರಂಥ ಹಿರಿಯರೆಲ್ಲಾ ನಮ್ಮ ‘ನೂರು ಕವಿತೆ ಸಾಲದು’ ವಿಶಿಷ್ಟ ಸಮಾಜಮುಖಿ ಕೆಲಸ ಎಂದು ಶ್ಲಾಘಿಸಿದ್ದಾರೆ.
ಉಳಿದಂತೆ ನಮ್ಮ ಕಾಳಜಿ, ಪ್ರಗತಿಪರತೆ ಸಣ್ಣಮನಸ್ಸಿನ ಕೆಲವರ ಹೊಟ್ಟೆ ಉರಿಗೆ ಕಾರಣವಾದರೆ, ಅದಕ್ಕೆ ನಾವಂತೂ ಜವಾಬ್ಧಾರರಲ್ಲ ಯಾಕೆಂದರೆ, ನಮ್ಮ ಮುಂದಿರುವುದು ನಮ್ಮ ಕನಸಿನ ಜನಾಂಗ ಸಮಾಜಮುಖಿ ಸಮಾಜ, ಪ್ರತ್ಯಕ್ಷ-ಪರೋಕ್ಷವಾಗಿ, ಕೆಲವೆಡೆನಿರ್ಲಿಪ್ತರಾಗಿ ಬೆಂಬಲಿಸುತ್ತಿರುವ ಅಸಂಖ್ಯ ಒಳ್ಳೆಯ ಮನಸ್ಸುಗಳೇ ನಮಗೆ ಉತ್ತೇಜನ, ಪ್ರೇರಣೆ.
ನಮ್ಮ ‘ನೂರು ಕವಿತೆ ಸಾಲದು’ ಕಾರ್ಯಕ್ರಮದ ಬಗ್ಗೆ ಧ್ಯಾನಿಸುತ್ತ ಬರೆದ ಒಂದು ಕವನದೊಂದಿಗೆ ಬಿ.ಆರ್.ಲಕ್ಷಣರಾವ್‍ರ ನನ್ನಆಯ್ಕೆಯ ಒಂದು ಕವನ ಈ ಸಂದರ್ಭಕ್ಕೆ ಪ್ರಸ್ತುತ ಎಂದು ಭಾವಿಸಿ ಪ್ರಕಟಿಸಿದ್ದೇವೆ. ಧನ್ಯವಾದಗಳೊಂದಿಗೆ.
-ಕೋಲಶಿರ್ಸಿ ಕನ್ನೇಶ್
ಕಾವ್ಯ
ಕಾವ್ಯವೆಂದರೆ…. ಒಲುಮೆ,
ಕೈಗೆ ಸಿಕ್ಕಾಗ ತೋಯ್ದ ಗುಬ್ಬಿ
ಅವಚಿ, ಮುದ್ದಿಸಿ, ಆರಿಸಿ, ಆಡಿಸಿ
ಪುರ್ ಎಂದು ಹಾರಿಬಿಡುವ ಮೋಜು.
ಕಾವ್ಯವೆಂದರೆ….. ಕುಲುಮೆ
ಭಾವನೆಗಳಿಗೆ ಶಾಖ ಕೊಟ್ಟು
ಕಲ್ಫನೆಗಳಿಗೆ ರೂಪ ಕೊಟ್ಟು
ಕಾಯಿಸಿ, ಬೇಯಿಸಿ
ಬಡಿದ ನೇಗಿಲು.
ಕಾವ್ಯವೆಂದರೆ….. ಪ್ರತಿಮೆ
ಕೈ, ಕಾಲು, ಮೂಗು, ಬಾಯಿ
ಎಲ್ಲಾ ಆಕೃತಿಗಳನ್ನು ಜೋಡಿಸಿ
ಬೆರಳ ಬಲದಿಂದ ಎದ್ದು ನಿಲ್ಲುವ ಸಾಕಾರಮೂರ್ತಿ.
ಕಾವ್ಯವೆಂದರೆ….. ಚಿಲುಮೆ
ಮಳೆ, ಬಿಸಿಲು, ನೀರು, ಗಾಳಿ ಒತ್ತಡ ಎಲ್ಲವನ್ನೂ ಕೊಡವಿಕೊಂಡು
ಒಮ್ಮೆಲೇ ಚಿಮ್ಮುವ ನೀರು.
ಕಾವ್ಯವೆಂದರೆ.. ಕವಳ
ಎಲೆ, ಅಡಿಕೆ,ಸುಣ್ಣ, ಬಾಯಿ,ಹಲ್ಲು

ನವೆನವೆದು ಕೆಂಪಾಗಿ ಪಿಚ್ಚೆನ್ನುವ ಪಿಚಕಾರಿ

ನನ್ನ ಗೀತೆ
ನೆಲದ ಅನ್ನವನುಂಡು ತೇಗೀತೆ?
ಹಸಿರುಟ್ಟು, ಹೂ ಕೊಟ್ಟು ಬೀಗೀತೆ?
ಮೈ ತುಂಬ ಫಲ ಹೊತ್ತು ಬಾಗೀತೆ?
ನನ್ನ ಗೀತೆ…
ಹಕ್ಕಿಗಳ ಕೊರಳಿಂದ ಗುನುಗೀತೆ?
ಮೊಲದ ಕಣ್ಣುಗಳಿಂದ ಮಿನುಗೀತೆ?
ಜೇನ ಕೆಚ್ಚಲಿನಿಂದ ಜಿನುಗೀತೆ?
ನನ್ನ ಗೀತೆ…
ಪ್ರೇಮಿಗಳ ಒಸಗೆಯಲ್ಲಿ ತೊಡಗೀತೆ?
ಕಾಮಿಗಳ ಬೆಸುಗೆಯಲಿ ಅಡಗೀತೆ?
ಎಲ್ಲ ಉಲ್ಲಾಸದಲೂ ಇಡುಗೀತೆ?
ನನ್ನ ಗೀತೆ…
ಅಳುವ ಮಕ್ಕಳ ಹಾಡಿ ತೂಗೀತೆ?
ದಣಿದ ಒಕ್ಕಲ ಬಳಿಗೆ ಕೂಗೀತೆ?
ನೋವುಗಳ ಸಂತೈಸಿ ನೀಗೀತೆ?
ನನ್ನ ಗೀತೆ…
ಅಸಹಾಯಕರಿಗಾಗಿ ಮರುಗೀತೆ?
ದುರುಳರಿಗೆ ಕೆಚ್ಚಿಂದ ಎರಗೀತೆ?
ಮುರಿದರೂ ಕಂಗೆಡದೆ ಮಿರುಗೀತೆ?
ನನ್ನ ಗೀತೆ…
ಸಂಸಾರಿಗಳ ಜೋಡಿ ಏಗೀತೆ?
ಬೈರಾಗಿಗಳ ಕೂಡಿ ಮಾಗೀತೆ?
ತನ್ನದೇ ಪಥ ಹಿಡಿದು ಸಾಗೀತೆ?
ನನ್ನ ಗೀತೆ…ಎಲ್ಲರಿಗೂ ಹಿತವಾಗಿ ಒಗ್ಗೀತೆ?ಒಲ್ಲದವರನೂ ಬಳಿಗೆ ಜಗ್ಗೀತೆ?
ಬಲ್ಲವರ ಎದೆಗಳಲಿಹಿಗ್ಗೀತೆ?ನನ್ನಗೀತೆ…
-ಬಿ.ಆರ್ ಲಕ್ಷ್ಮಣರಾವ್
(14-08-2014 ರಲ್ಲಿ ಬರೆದದ್ದು)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *