local news-ವಾಜಗೋಡು ವಿ.ಎಸ್.ಎಸ್.ನಿಂದ 9 ಲಕ್ಷ ಕರೋನಾ ಪ್ಯಾಕೇಜ್

ಸಿದ್ದಾಪುರ ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ತನ್ನ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಸಾವಿರದಂತೆ ಕೋವಿಡ್ ಪರಿಹಾರ ನೀಡಲು 9ಲಕ್ಷ ರೂಗಳ ಪ್ಯಾಕೇಜ್ ಬಿಡುಗಡೆಮಾಡಿದೆ ಎಂದು ಸಂಘದ ಅಧ್ಯಕ್ಷ ಎಂ..ಐ.ನಾಯ್ಕ ಕೆಳಗಿನಸಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.19ರಂದು ನಡೆದ ಸಂಘದ ಆಡಳಿತ ಮಂಡಳಿಯಲ್ಲಿ ಈ ಕುರಿತು ಸರ್ವಾನುಮತದಿಂದ ಸಭೆ ತೀರ್ಮಾನಿಸಿದೆ. ಕರೊನಾ ಎರಡನೇ ಅಲೆಯಿಂದ ಸಂಘದ ಸದಸ್ಯರು ಸಂಕಟ ಅನುಭವಿಸುವಂತಾಗಿದೆ. ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವ ದೃಷ್ಠಿಯಿಂದ ಈ ಕುರಿತು ತೀರ್ಮಾನಿಸಲಾಗಿದೆ. ಸಂಘದಲ್ಲಿ ಖಾತೆ ಹೊಂದಿದ 900ಜನ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಸಾವಿರ ರೂಗಳನ್ನು ಕೋವಿಡ್ ಪರಿಹಾರ ನೀಡಲಾಗುತ್ತಿದ್ದು ಅದನ್ನು ಅವರ ಸಂಘದ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು. ಇದಕ್ಕಾಗಿ 9ಲಕ್ಷ ರೂಗಳ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪಾಧ್ಯಕ್ಷ ಜಿ.ಜಿ.ಭಟ್ಟ ದಾಸನಹುಡಿಲು, ನಿರ್ದೇಶಕರಾದ ಎಂ.ಎನ್. ಹೆಗಡೆ ತಲೆಕೇರಿ,ನಾರಾಯಣ ಹೆಗಡೆ ಗೊದ್ಲಮನೆ,ಮಹೇಂದ್ರ ಈರಾ ನಾಯ್ಕ ಅರಶಿನಗೋಡ, ಕೃಷ್ಣ ಲಿಂಗ ನಾಯ್ಕ ಸುತ್ತಲಮನೆ, ನಾರಾಯಣ ನಾಯ್ಕ ಗಾಳಮಾವ, ಗಣಪತಿ ನಾಯ್ಕ ಕಲಕೈ, ಈರ ಫಕೀರ ಹಸ್ಲರ್ ಬಿಜ್ಜಾಳ, ಮಾದೇವಿ ತಿಮ್ಮಪ್ಪ ನಾಯ್ಕ ಅರಶಿನಗೋಡ, ಸುಭದ್ರ ಆರ್.ಹೆಗಡೆ ತ್ಯಾಗ್ಲಿಮನೆ,ರಮಾನಂದ ಹೆಗಡೆ ಮಳಗುಳಿ ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಕ ಬಾಲಚಂದ್ರ ಜಿ.ಭಟ್ಟ ಹಾಗೂ ಸಿಬ್ಬಂದಿಗಳು ಸಭೆಯಲ್ಲಿದ್ದರು.

ಗುಣಮಟ್ಟ ಪರಿಶೀಲನೆ- ಸಿದ್ದಾಪುರ
ತಾಲೂಕಿನ ನಿಡಗೋಡಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಸಾಂದ್ರ ಶೀಥಲೀಕರಣ ಘಟಕಕ್ಕೆ (ಬಿಎಂಸಿ)ಒಕ್ಕೂಟದ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಹಾಲಿನ ಗುಣಮಟ್ಟವನ್ನು ಪರಿಶೀಲಿಸಿದರು.
ಶೀಥಲೀಕರಣ ಘಟಕದಲ್ಲಿ ಹಾಲಿನ ಗುಣಮಟ್ಟದ ಕುರಿತು ಹೆಚ್ಚು ಗಮನ ನೀಡಬೇಕು. ಪ್ರತಿಯೊಂದು ಸಂಘದಿಂದ ಬಂದ ಹಾಲಿನ ಗುಣಮಟ್ಟವನ್ನು ಸರಿಯಾಗಿ ನೋಡಬೇಕು. ಸ್ವಚ್ಛತೆ ಕುರಿತು ಹೆಚ್ಚು ಗಮನ ನೀಡಬೇಕು ಎಂದು ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಕೆಎಂಎಫ್‍ನ ಸಲಹೆಗಾರರಾದ ಡಾ.ಡಿ.ಎನ್.ಹೆಗಡೆ, ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತೇಶ್ವರ, ಧಾರವಾಡ ಹಾಲು ಒಕ್ಕೂಟದ ಅಧಿಕಾರಿ ಜಿ.ಡಿ.ದೇಸಾಯಿ ಬಿಎಂಸಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಸಂಘದ ಆಡಳಿತ ಮಂಡಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ನಿಡಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಗೌಡರ್ ಹೂಕಾರ್, ನಿದೇಶಕರಾದ ಲಕ್ಷ್ಮೀನಾರಾಯಣ ಹೆಗಡೆ,ರಾಮ ಜಿ.ನಾಯ್ಕ, ಎಸ್.ಎಸ್.ಗೌಡರ್ ಹೆಗ್ಗೋಡಮನೆ, ವಿಸ್ತರಾಣಾಧಿಕಾರಿ ಚಂದನ್, ಸಂಘದ ಮುಖ್ಯಕಾರ್ಯನಿರ್ವಾಹಕ ವೆಂಕಟೇಶ್ ನಾಯ್ಕ ಹಾಗೂ ಸಿಬ್ಬಂದಿಗಳಿದ್ದರು.
ಇದೇ ಸಂದರ್ಭದಲ್ಲಿ ಸಂಘದಿಂದ ಡಾ.ಡಿ.ಎನ್.ಹೆಗಡೆ ಹಾಗೂ ಡಾ.ಲೋಹಿತೇಶ್ವರ ಅವರನ್ನು ಸನ್ಮಾನಿಸಲಾಯಿತು.

ಸೇವಾ ಭಾರತಿ ಸಿದ್ದಾಪುರದ ಪ್ರಕರಣೆ-

ಕೋವಿಡ್ 2.0 ಆಪತ್ಕಾಲೀನ ಸಮಯದಲ್ಲಿ ನಡೆದ ಸೇವಾ ಚಟುವಟಿಕೆಗಳ ಈವರೆಗಿನ ಸಮಗ್ರ ವಿವರ

 ದಿನಸಿ ಕಿಟ್ ಗಳ ವಿತರಣೆ
ಒಟ್ಟೂ 27 ಪ್ರಾಯೋಜಕರಿಂದ ಪಡೆದ 410(254+156) ದಿನಸಿ ಕಿಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ಸೇವಾ ಭಾರತಿ ಸಿದ್ದಾಪುರ ವತಿಯಿಂದ ತಲುಪಿಸಲಾಯಿತು.
 ಹೋಮಿಯೋಪಥಿ ಔಷಧಿ ವಿತರಣೆ
ಕನ್ನೇರಿ ಮಠದಿಂದ ಪೂರೈಸಿದ ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಯನ್ನು 1022 ಮನೆಗಳಿಂದ 3746 ಜನರಿಗೆ ತಲುಪಿಸಲಾಯಿತು.
 ತಾಲೂಕಾ ಆಸ್ಪತ್ರೆ ಸಿದ್ದಾಪುರದಲ್ಲಿರುವ ವೆಂಟಿಲೇಟರ್‍ಗಳ ನಿರ್ವಹಣೆ ಕುರಿತು
ಸೇವಾ ಭಾರತಿ ಸಿದ್ದಾಪುರ ಕೋರಿಕೆಯ ಮೇರೆಗೆ ಹೋಲಿ ಫ್ಯಾಮಿಲಿ ಆಸ್ಪತ್ರೆ ಮುಂಬಯಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ನುರಿತ ಅರವಳಿಕೆ ಹಾಗೂ ವೆಂಟಿಲೇಟರ್ ತಜ್ಞ ವೈದ್ಯರಾದ ಸಿದ್ದಾಪುರದ ಡಾ ವಿದ್ಯಾಧರ ಗಜಾನನ ಲಕ್ಕಪ್ಪನ್ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಆಸ್ಪತ್ರೆಯಲ್ಲಿ ¯ಲಭ್ಯವಿರುವ ವೆಂಟಿಲೇಟರ್ ಗಳ ನಿರ್ವಹಣೆ ಹಾಗೂ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು ತದನಂತರ ತಾಲೂಕ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ವೆಂಟಿಲೇಟರ್‍ಗಳ ಬಳಕೆ ಪ್ರಾರಂಭಿಸಲಾಯಿತು.
 ಶವ ಸಂಸ್ಕಾರ ಮತ್ತು ಉತ್ತರಕ್ರಿಯೆ
• ಪೋಲಿಸ್ ಇಲಾಖೆ ಸಿದ್ದಾಪುರ ಮಾಹಿತಿಯ ಮೇರೆಗೆ ಅನಾಥವಾಗಿ ಮರಣ ಹೊಂದಿರುವಂತಹ ಕಳೆದ ಸುಮಾರು 40 ವರ್ಷಗಳಿಂದ ಸಿದ್ದಾಪುರದ ಎಪಿಎಮ್‍ಸಿ ಬಳಿ ನೆಲಸಿ ಸನ್ಯಾಸಿ ಜೀವನ ನೆಡೆಸುತ್ತಿದ್ದ ಅವಧೂತರಾದ ಭದ್ರಾಚಾರಿ ಯವರ ಶವ ಸಂಸ್ಕಾರ, ಅಸ್ತಿ ವಿಸರ್ಜನೆ ಮತ್ತು ಉತ್ತರಕ್ರಿಯೆಯನ್ನು ಪೂರೈಸಲಾಯಿತು.
• ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಕೋರಿಕೆಯಂತೆ ಕೋವಿಡ್ ನಿಂದ ಮೃತರಾದ ಹೊಸೂರಿನ ಮಹಿಳೆಯ ಶವ ಸಂಸ್ಕಾರಕ್ಕೆ ಕುಟುಂಬದವರೊಂದಿಗೆ ಸಹಕರಿಸಿಲಾಯಿತು.
 ಲಸಿಕಾ ಕೇಂದ್ರದ ಸ್ಥಳಾಂತರ ಮತ್ತು ನಿರ್ವಹಣೆ
ತಾಲೂಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಲಸಿಕಾ ಅಭಿಯಾನವನ್ನು ಸುರಕ್ಷತಾ ದೃಷ್ಟಿಯಿಂದ ಲಸಿಕಾ ಕೇಂದ್ರಕ್ಕೆ ಅನುಕೂಲಕರವಾದ ಶ್ರೀ ರಾಘವೇಂದ್ರ ಮಠದ ಸಭಾಭವನಕ್ಕೆ ಸ್ಥಳಾಂತರಿಸುವಂತೆ ತಾಲೂಕಾ ದಂಡಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಮನವಿ ಸಲ್ಲಿಸಿ ಸ್ಥಳಾಂತರಿಸುವಲ್ಲಿ ಸೇವಾ ಭಾರತಿ ಸಿದ್ದಾಪುರ ವತಿಯಿಂದ ಸಹಕಾರ ನೀಡಲಾಯಿತು. ಆ ಬಳಿಕ ದಿನಾಂಕ 28-05-2021 ರಿಂದ ಪ್ರಾರಂಭಗೊಂಡ ಲಸಿಕ ಕೇಂದ್ರದಲ್ಲಿ ಲಸಿಕೆಯನ್ನು ಈ ವರೆಗೆ ಸುಮಾರು 2866 ಜನರಿಗೆ ಲಸಿಕಾ ನೊಂದಣಿ ಸೇರಿದಂತೆ ಲಸಿಕೆ ಕಾರ್ಯ ನಡೆಯುವಂತೆ ಸ್ವಯಂ ಸೇವಕರಿಂದ ನಿರ್ವಹಿಸಲಾಯಿತು.
 ಸುರಕ್ಷತಾ ಕಿಟ್ ವಿತರಣೆ
ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಕೊರೋನಾ ಮುಂಚೂಣಿ ವಾರಿಯರ್ಸ ಗಳಾದ 17 ಅಂಗನವಾಡಿ ಹಾಗೂ 12 ಆಶಾ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್ , ಎನ್95 ಮಾಸ್ಕ್, ಬಟ್ಟೆ ಮಾಸ್ಕ್ , ಸ್ಯಾನಿಟೈಸರ್ ಮತ್ತು ಛತ್ರಿಗಳನ್ನು ರಾಘವೇಂದ್ರ ಮಠದ ಸಭಾಭವನದಲ್ಲಿ ವಿತರಿಸಲಾಯಿತು. ಇದರ ಹೊರತಾಗಿ ಹೇರೂರು ಭಾಗದಲ್ಲಿ 19 ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್ , ಎನ್95 ಮಾಸ್ಕ್, ಸ್ಯಾನಿಟೈಸರ್ ಮತ್ತು ಛತ್ರಿಗಳನ್ನು ವಿತರಿಸಲಾಯಿತು.
 ಅಲೋಪಥಿಕ್ ಮೆಡಿಕಲ್ ಕಿಟ್ ಗಳ ವಿತರಣೆ.
ಯೂಥ್ ಫಾರ್ ಸೇವಾ ಬೆಂಗಳೂರು ಇವರು ನೀಡಿದ 50 ಸುಸಜ್ಜಿತ ಮೆಡಿಕಲ್ ಕಿಟ್ ಗಳನ್ನು ಸೇವಾ ಭಾರತಿ ಸಿದ್ದಾಪುರ ಇವರ ಮೂಲಕ ಕೋವಿಡ್ ರೋಗಿಗಳಿಗೆ ನೀಡುವಂತೆ ಕೋರಿ ತಾಲೂಕಾ ಆರೋಗ್ಯಾಧಿಕಾರಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪೋಲಿಸ್ ಠಾಣಾಧಿಕಾರಿಗಳು ಉಪಸ್ಥಿತರಿದ್ದರು. ಹಾಗೂ ಹೇರೂರು ಭಾಗದಲ್ಲಿ 7 ಸುಸಜ್ಜಿತ ಮೆಡಿಕಲ್ ಕಿಟ್‍ಗಳನ್ನು ಕೋವಿಡ್ ರೋಗಿಗಳಿಗೆ ವಿತರಿಸಲಾಯಿತು.
 ಪೌಷ್ಟಿಕ ಆಹಾರದÀ ಕಿಟ್ ವಿತರಣೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕೋರಿಕೆಯ ಮೇರೆಗೆ ತಾಲೂಕಿನಲ್ಲಿ ಗುರುತಿಸಿದ ಅಪೌಷ್ಟಿಕತೆಯಿಂದ ಬಳಲುತ್ತಿರುವ 14 ಜನ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‍ಗಳನ್ನು ಸೇವಾ ಭಾರತಿ ಸಿದ್ದಾಪುರ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್ 2 ನೇ ಅಲೆಯ ತುರ್ತು ಸಂದರ್ಭದಲ್ಲಿ ಸೇವಾ ಭಾರತಿ ಸಿದ್ದಾಪುರ ಇವರಿಂದ ಈ ಮೇಲ್ಕಾಣಿಸಿದ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಈ ಸಂದರ್ಭದಲ್ಲಿ ನಮಗೆ ಸಹಕರಿಸಿದ ಮಾನ್ಯ ಜಿಲ್ಲಾಧಿಕಾರಿಗಳು, ತಾಲೂಕಾ ದಂಡಾಧಿಕಾರಿಗಳು, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು, ಪೋಲಿಸ್ ಇಲಾಖಾ ಸಿಬ್ಬಂದಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು, ತಾಲೂಕಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪತ್ರಿಕಾ ವರದಿಗಾರರು, ಎಲ್ಲಾ ಮುಂಚೂ ಣಿ ವಾರಿಯರ್ಸ ಹಾಗೂ ಈ ಎಲ್ಲಾ ಸೇವಾ ಚಟುವಟಿಕೆಗಳಿಗೆ ತನು ಮನ ಧನಗಳಿಂದ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.


_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *