ಗ್ರಾಮೀಣ ರೈತರ ಸಿಗಂದಿನಿಗೆ ಪೇಟೆಂಟ್ ಗೌರವ,15 ನೇ ಶತಮಾನದ ಹಿನ್ನೆಲೆಯ ಉ.ಕ. ಕರಿಮೆಣಸಿಗೆ ಅಂತರಾಷ್ಟ್ರೀಯ ಮಾನ್ಯತೆ..

ಕೃಷಿ ಉತ್ಫನ್ನಗಳ ಪೇಟೆಂಟ್ ಪಡೆದು ಲಾಭ,ಹೆಸರು ಗಳಿಸುವುದು ಸುಲಭದ ಕೆಲಸವಲ್ಲ ಹಾಗೆಂದು ಈ ಕಷ್ಟದ ಕೆಲಸ ಮಾಡಿದವರಿಗೇನೂ ಕೊರತೆಇಲ್ಲ.    ಇಂಥ ವಿರಳ ಸಾಧಕರ ಪಟ್ಟಿಗೆ ಸೇರ್ಪಡೆಯಾದ ಹೊಸ ಹೆಸರು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಕೃಷಿಕನದ್ದು.

ಸಿದ್ಧಾಪುರ ತಾಲೂಕಿನ ಕಾನಸೂರು ಸಮೀಪದ ಕೊಡ್ಸರ ಹುಣಸೆಕೊಪ್ಪದ ಗ್ರಾಮೀಣ ರೈತ ರಮಾಕಾಂತ ಹೆಗಡೆ ತಮ್ಮ ವೆನಿಲ್ಲಾ ಬೆಳೆ ಕೈಕೊಟ್ಟ ನಂತರ ಕೈಕಟ್ಟಿ ಕೂತುಕೊಳ್ಳಲಿಲ್ಲ. ತಮ್ಮ ತೋಟದಲ್ಲಿ ಎಲ್ಲಾ ತೊಂದರೆಗಳ ಮಧ್ಯೆ ಹುಲುಸಾಗಿ ಬೆಳೆದಿದ್ದ ಕರಿಮೆಣಸಿನ ಬಳ್ಳಿಯ ವೈಶಿಷ್ಟ್ಯ ತಿಳಿಯತೊಡಗಿದರು. ತಜ್ಞರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಕರಿಮೆಣಸಿನ ಕೃಷಿ ವಿಸ್ತರಣೆ ಮಾಡಿದರು.
ಬಳ್ಳಿಯ ಗಿಡಗಳ ನರ್ಸರಿ ಮಾಡಿದರು. ಹೆಚ್ಚಿನ ಮಳೆಗೆ ಹೆದರದ ರೋಗನಿರೋಧಕ ಶಕ್ತಿ ಇರುವ ಸ್ಥಳಿಯ ಕರಿಮೆಣಸಿನ ಪ್ರಬೇಧವನ್ನು ಬೆಳೆದು ಮಾರುಕಟ್ಟೆಗೆ ಕಳುಹಿಸಿದರು. ಸ್ಥಳಿಯ ಮಾರುಕಟ್ಟೆಯಲ್ಲಿ ರಮಾಕಾಂತ ಹೆಗಡೆಯವರ ಬಿಳಿ ಬೋಳುಕಾಳು,ಕರಿಮೆಣಸಿನ ಬೆಳೆಗೆ ಹೆಚ್ಚಿನ ಬೆಲೆಯೂ ದೊರೆಯಿತು. ಈ ಬಗ್ಗೆ ಕರಿಮೆಣಸು ತಜ್ಞ ಡಾ. ವೇಣುಗೋಪಾಲರ ಮಾರ್ಗದರ್ಶನ ಪಡೆದು ಪೇಟೆಂಟ್ ಗೆ ಪ್ರಯತ್ನಿಸಿದರು. ಈ ಪ್ರಯತ್ನ ಈಗ ಫಲ ಕೊಟ್ಟಿದ್ದು ಗ್ರಾಮೀಣ ರೈತ ರಮಾಕಾಂತ್ ಹೆಗಡೆಯವರಿಗೆ ತಮ್ಮ ಸಿಗಂದಿನಿ ಕರಿಮೆಣಸು ತಳಿಗೆ ಪೇಟೆಂಟ್ ಸಿಕ್ಕಿದೆ.


ಉತ್ತರ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಪ್ರಬೇಧಗಳಲ್ಲಿ ಶಿರಸಿ ಭಾಗದ 65 ರಲ್ಲಿ ಸಿದ್ಧಾಪುರ ತಾಲೂಕಿನಲ್ಲಿರುವ 28 ವಿಧಗಳಲ್ಲಿ ಸಿಗಂದಿನಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಮೂರನೇ ತಳಿಯಾಗಿ ರಾಜ್ಯದ ಪ್ರಮುಖ ತಳಿಯಾಗಿ ಗುರುತಿಸಲ್ಪಟ್ಟಿದೆ. ಈ ಬಗ್ಗೆ ಸಂಬಂಧಿಸಿದವರಿಂದ ಗುರುತು ಮತ್ತು ಅಭಿನಂದನೆಯ ಗೌರವ ಪಡೆದಿರುವ ಈ ಗ್ರಾಮೀಣ ರೈತನ ಪ್ರಯತ್ನ ರಾಜ್ಯಕ್ಕೂ ಹೆಸರು ತಂದುಕೊಟ್ಟಿದೆ. 15 ನೇ ಶತಮಾನದಲ್ಲಿ ಪ್ರಪಂಚಕ್ಕೆ ಕಾಳುಮೆಣಸು ಪರಿಚಯಿಸಿದ ಉತ್ತರ ಕನ್ನಡ ಜಿಲ್ಲೆಯ ರೈತರೊಬ್ಬರು ಈ ಸಾಂಬಾರಪದಾರ್ಥಕ್ಕೆ ಪೇಟೆಂಟ್ ಪಡೆದಿರುವುದು ಉತ್ತರ ಕನ್ನಡ ಜಿಲ್ಲೆಗೂ ವಿಶೇಶವೆನಿಸಿದೆ.

  • ಭಾರೀ ಮಳೆಗೂ ಹೆದರದ ಸಿಗಂಧಿನಿ ಕಾಳುಮೆಣಸಿನ ಕದುರು ಉಳಿದ ಕೆಲವು ತಳಿಗಳಂತೆ ತುದಿಯಲ್ಲ ಸಣ್ಣ ಕಾಳುಗಳನ್ನು ಹೊಂದಿರುವುದಿಲ್ಲ
  • * ಸಶಕ್ತತೆ, ಗುಣಮಟ್ಟ, ಪ್ರಮಾಣ ಎಲ್ಲದರಲ್ಲೂ ಸಿಗಂದಿನಿ ಅನನ್ಯ.
  • ಪ್ರತಿಕೂಲ ಹವಾಮಾನದಲ್ಲಿ ಗುಣಮಟ್ಟದ ಕಾಳು ನೀಡುವ ಸಿಗಂದಿನಿ ಮಲೆನಾಡಿನ ಅನನ್ಯ ಪ್ರಬೇಧ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *