breaking news- ಹುಬ್ಬಳ್ಳಿ ಹುಡ್ಗ ಕರ್ನಾಟಕ ಮುಖ್ಯಮಂತ್ರಿ!

ಅರವಿಂದ ಬೆಲ್ಲದ್ ಮುಂದಿನ ಕರ್ನಾಟಕದ ಮುಖ್ಯಮಂತ್ರಿ, ಅರವಿಂದ ಬೆಲ್ಲದ್ ವೆಂಕಯ್ಯ ನಾಯ್ಡು,ಅಮಿತ್ಶಾ ರಿಂದ ಹಿಡಿದು ಅನೇಕ ಮುಖಂಡರ ಸಂಪರ್ಕದಲ್ಲಿದ್ದವರು.ಯಡಿಯೂರಪ್ಪನವರನ್ನು ಬದಲಾಯಿಸುವ ಕಾರ್ಯಯೋಜನೆ ಹಿಂದಿದ್ದ ವ್ಯಕ್ತಿ ಮತ್ತು ಯಡಿಯೂರಪ್ಪ ವಿರೋಧಿ ಬಣದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೇಂದ್ರಕ್ಕೆ ರಾಜ್ಯದ ವರ್ತಮಾನವನ್ನು ದಿನನಿತ್ಯ ಪೂರೈಸುತಿದ್ದವರು ಎಂದು ಹೇಳಲಾಗುತ್ತಿರುವ ಬೆಲ್ಲದ್ ಕೇಂದ್ರದ ಮುಖಂಡರ ನೆಚ್ಚಿನ ಆಯ್ಕೆ ಹಾಗಾಗಿ ಅವರ ಹೆಸರೇ ಇಂದು ಅಂತಿಮಗೊಳ್ಳುತ್ತಿದೆ ಎಂದು ಆರ್. ಎಸ್,ಎಸ್. ವಲಯ ಹೇಳುತ್ತಲೇ ಆಶ್ಚರ್ಯಕರವಾಗಿ ಇಂದು ಅಥವಾ ಒಂದು ವರ್ಷದೊಳಗೆ ಬಿ.ಎಲ್. ಸಂತೋಷ ಹೆಸರೇ ಅಂತಿಮಗೊಳ್ಳಲಿದೆ ಎನ್ನುವ ರಹಸ್ಯವನ್ನೂ ಪರಿವಾರ ಹೇಳುತ್ತಿದೆ!.

ಆದರೆ ಈ ಸಂಘ ಪರಿವಾರಕ್ಕೆ ತಲೆನೋವಾಗಿರುವ ಇನ್ನೊಂದು ಹೆಸರು ಮೂಲ ಜನತಾ ಪರಿವಾರದ ಬಸವರಾಜ್ ಬೊಮ್ಮಾಯಿ. ಬಸವರಾಜ್ ಬೊಮ್ಮಾಯಿ ಮಾಜಿಮುಖ್ಯಮಂತ್ರಿ ದಿ.ಎಸ್.ಆರ್. ಬೊಮ್ಮಾಯಿಯವರ ಪುತ್ರ. ರಾಜಕೀಯ ಮನೆತನದ ಹಿನ್ನೆಲೆ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಶರಣರ ಗುಣ, ವಿದ್ಯೆ-ವಿಲಯ,ಸರಳತೆ, ಬುದ್ಧಿವಂತಿಕೆ ಜೊತೆಗೆ ಚಾಣಾಕ್ಷತೆ ಈ ಎಲ್ಲಾ ಗುಣ ವಿಶೇಶಗಳ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ಪರಮಾಪ್ತರು. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಹಾಯಾಗಿ ವಿಶ್ರಾಂತಿ ಪಡೆಯಬಹುದು ಯಾಕೆಂದರೆ ಬೊಮ್ಮಾಯಿ ಯಡಿಯೂರಪ್ಪ ಪುತ್ರರ ಆಪ್ತರು.

ಇದೇ ಕಾರಣಕ್ಕೆ ಈಗ ಬಿ.ಜೆ.ಪಿ. ಸಂಘದ ವಲಯಗಳಲ್ಲಿ ಅಳೆದುತೂಗುವ ಕೆಲಸ ನಡೆಯುತ್ತಿದೆ. ಸಂಘ ಮತ್ತು ಬಿ.ಜೆ.ಪಿ. ಹೈಕಮಾಂಡ್ ಅರವಿಂದ ಬೆಲ್ಲದ್ ಎನ್ನುವ ಉದ್ಯಮಿಯನ್ನು ಬೆಂಬಲಿಸುವ ಹಿಂದೆ ಅವರದ್ದೇ ಆದ ಲೆಕ್ಕಾಚಾರಗಳಿವೆ. ಆದರೆ ಬೊಮ್ಮಾಯಿಗೆ ಯಡಿಯೂರಪ್ಪ ಜೊತೆಗೆ ಜನತಾಪರಿವಾರದ ಸಿದ್ಧರಾಮಯ್ಯ, ಜೆ.ಡಿ.ಎಸ್. ಪರಿವಾರದ ಬೆಂಬಲವಿದೆ.

ಸಂಘ ಮೊದಲು ಬಿ.ಎಲ್. ಸಂತೋಷರನ್ನು ಮುಖ್ಯಮಂತ್ರಿ ಮಾಡುವ ಕಸರತ್ತು ಮಾಡಿ ನಂತರ ಯಾರೇ ಆಗಲಿ ಅವರು ಬ್ರಾಹ್ಮಣರಾಗಲಿ ಎಂದು ತನ್ನ ಅಭಿಪ್ರಾಯ ತೇಲಿಸಿತ್ತು. ಬ್ರಾಹ್ಮಣರನ್ನು ಅಧಿಕಾರಕ್ಕೆ ಕೂರಿಸುವ ಸಂಘದ ಯತ್ನಕ್ಕೆ ತಮ್ಮ ಧ್ವನಿ ಸೇರಿಸಿದ ಮಾಧ್ಯಮಗಳು ಜೋಷಿ, ಹೆಗಡೆ, ಸಂತೋಷ, ಇನ್ನೂ ಅನೇಕರ ಹೆಸರು ಸೇರಿಸಿ ಜನಾಭಿಪ್ರಾಯಕ್ಕೆ ಯತ್ನಿಸಿದ್ದೇ ಪ್ರಯತ್ನಿಸಿದ್ದು!

ಈಗ ಸಂಘದ ಕಾರ್ಯಾಚರಣೆಗೆ ಏಟು ಬಿದ್ದಿದೆ. ಸಂಘ, ಬಿ.ಜೆ.ಪಿ. ಹೈಕಮಾಂಡ್ ಏನೆಲ್ಲಾ ಕಸರತ್ತು ನಡೆಸಿದರೂ ಅರವಿಂದ ಬೆಲ್ಲದ್ ರಿಗೆ ಬೆಂಬಲ ಸಿಗುತ್ತಿಲ್ಲ. ಬ್ರಾಹ್ಮಣರು, ಸಂಘ, ಸಂಘದ ಹಿನ್ನೆಲೆಯ ಶ್ರೀಮಂತರು, ಸಳತೆಯ ಸೋಗಿನ ಮುಖಂಡರು ಹೀಗೆ ಏನೇನೆಲ್ಲಾ ಪ್ರಯತ್ನ, ಪ್ರಯೋಗಗಳ ನಂತರ ಈಗ ಸಂಘದ ಬೆಲ್ಲದ್ ಗೆ ಎದುರಾಗಿ ಯಡಿಯೂರಪ್ಪ ಪರಿವಾರದ ಬಸವರಾಜ್ ಬೊಮ್ಮಾಯಿ ಅಂತಿಮ ಸ್ಫರ್ಧೆಯಲ್ಲಿದ್ದಾರೆ. ಇನ್ನೇನು ಎರಡ್ಮೂರು ಗಂಟೆಗಳ ಅವಧಿಗೆ ಮೊದಲು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವವರು ಸಂಘದ ಬೆಲ್ಲದ್ ಅಥವಾ ಜನತಾಪರಿವಾರದ ಬೊಮ್ಮಾಯಿ ಎನ್ನುವುದಷ್ಟೇ ಬಾಕಿ.

ಕಾಂಗ್ರೆಸ್ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ಜನತಾಪರಿವಾರ ಪರಿಣಾಮಕಾರಿ ಎಂದು ಒಪ್ಪಿಕೊಂಡ ನಂತರ ಬಿ.ಜೆ.ಪಿ. ಕೂಡಾ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿ ತಮ್ಮ ಕೋಮುವಾದಿ ಪರಿವಾರಕ್ಕಿಂತ ಜನತಾ ಪರಿವಾರ ಸ್ವೀಕಾರಾರ್ಹ ಎನ್ನುವುದನ್ನು ಒಪ್ಪಿಕೊಳ್ಳಲು ಇನ್ನು ಕೆಲವೇ ಸಮಯ ಬಾಕಿ ಎನ್ನುವುದು ಈಗಿನ ವಾಸ್ತವ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *