ಇನ್ನಿಲ್ಲ ಆಶ್ರಯ ಯೋಜನೆಯ ಆ ಸಮಸ್ಯೆ…. ಕಾಗೇರಿ ಸಾಧನೆ ಎಂದ ಪ್ರಮುಖರು

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡು, ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಅಡ್ಡಿಯಾಗಿದ್ದ ಸಮಸ್ಯೆಗೆ ರಿಯಾಯತಿ ದೊರೆತಿದೆ. ಈ ಬಗ್ಗೆ ಸಿದ್ಧಾಪುರ ಕ್ಯಾದಗಿಯಲ್ಲಿ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿ.ಜೆ.ಪಿ. ಪ್ರಮುಖರಾದ ಮಾರುತಿ ನಾಯ್ಕ ಕಾನಗೋಡು, ಆದರ್ಶ ಪೈ,ಮಹೇಶ್ ನಾಯ್ಕ ಸೇರಿದ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆಯ ಫಲಾನುಭವಿಗಳು ಪಹಣಿ ಪತ್ರದ ಜೊತೆಗೆ ಪ್ರಮಾಣ ಪತ್ರ ನೀಡಿ ಮನೆಯ ಪ್ರದೇಶದ ವಾರಸುದಾರಿಕೆಯನ್ನು ನೋಂದಣಿ ಮಾಡಬೇಕಿತ್ತು ಆದರೆ ಈಗ ಹಳೆಯ ಮನೆ ಸಂಖ್ಯೆ ಮತ್ತು ತೆರಿಗೆ ಪಾವತಿಸಿದ ದಾಖಲೆಗಳ ಆಧಾರದಲ್ಲಿ ವಸತಿ ಯೋಜನೆಗಳ ಲಾಭ ಪಡೆಯಬಹುದು. ಇ ಸ್ವತ್ತಿನ ಈ ಅಡಚಣೆಯನ್ನು ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನಿಸಿದ ಫಲವಿದು ಎಂದರು.

ವೀಣಾ ಹಸ್ಲರ್,ರಾಜಾರಾಮ್ ನಾಯ್ಕ, ಚಂದ್ರಹಾಸ ಹಸ್ಲರ್,ಗಿರೀಶ್ ಶೇಟ್,ಕೃಷ್ಣಮೂರ್ತಿ ನಾಯ್ಕ ಐಸೂರು,ಎಸ್.ಎನ್.ಹೆಗಡೆ ಉಪಸ್ಥಿತರಿದ್ದರು.

ವಸತಿಯೋಜನೆಗಳ ಫಲಾನುಭವಿಗಳು ತಮ್ಮಲ್ಲಿಲ್ಲದ ಪಹಣಿ ಪತ್ರ,ಪಹಣಿಪತ್ರದ ಮೇಲೆ ಹಾಕುತಿದ್ದ ಬೋಜಾದಿಂದಾಗಿ ವಸತಿ ಯೋಜನೆಯ ಸಹಾಯಧನದಿಂದ ವಂಚಿತರಾಗುತಿದ್ದರು. ಬಹುತೇಕ ಕಡೆ ಸ್ವತ: ಪಹಣಿ ಪತ್ರ ಇಲ್ಲದಿರುವುದು ಇದ್ದವರು ದಾನಪತ್ರ ಕೊಡದಿರುವುದರಿಂದ ಅರ್ಹರೇ ಈ ಯೋಜನೆಯ ಲಾಭ ಪಡೆಯಲು ಆಗುತ್ತಿರಲಿಲ್ಲ. ಇಲಾಖೆಗಳ ಸಮನ್ವಯದಿಂದ ಸುಲಭವಾಗಿ ಫಲಾನುಭವಿಯಾಗುವ ಈ ಅವಕಾಶದಿಂದ ಅರ್ಹರಿಗೆ ಅನುಕೂಲವಾಗಲಿದೆ. -ಸುಬ್ರಮಣ್ಯ ಹೆಗಡೆ, ಗ್ರಾಮೀಣಾಭಿವೃದ್ಧಿ (pdo)ಅಧಿಕಾರಿ

ಪಹಣಿ ಪತ್ರದ ಕರಾರು,ಕಡ್ಡಾಯ ಒಪ್ಪಂದದ ರಗಳೆಗಳಿಂದ ನೈಜ ಅರ್ಹರಿಗೆ ವಸತಿಯೋಜನೆಯ ಸಹಾಯಧನದ ಪ್ರಯೋಜನ ದಕ್ಕುತ್ತಿರಲಿಲ್ಲ.ಈ ಬಗ್ಗೆ ಗ್ರಾಮೀಣ ಜನಪ್ರತಿನಿಧಿಗಳ ಬೇಡಿಕೆ ಮೇರೆಗೆ ವಿಧಾನಸಭಾ ಅಧ್ಯಕ್ಷರು ವಿಶೇಶ ಮುತುವರ್ಜಿ ವಹಿಸಿ ಈ ರಿಯಾಯತಿ ದೊರಕಿಸಿಕೊಟ್ಟಿದ್ದಾರೆ. ಅರಣ್ಯ ಇಲಾಖೆಯವರು ಕಾನೂನು-ಕಟ್ಟಲೆ ಎಂದು ತೊಂದರೆ ಕೊಡದಿದ್ದರೆ ಈ ರಿಯಾಯತಿಯಿಂದ ಬಡವರಿಗೆ ಅನುಕೂಲವಾಗಲಿದೆ.- ಕೃಷ್ಣಮೂರ್ತಿ ನಾಯ್ಕ ಐಸೂರು

ಇಸ್ವತ್ತಿನ ಅಡಚಣೆಯಿಂದಾಗಿ ನೈಜ ಬಡವರು ವಸತಿ ಯೋಜನೆಯ ಲಾಭ ಪಡೆಯದಂತಾಗಿತ್ತು.ಈಗ ಈ ಸಮಸ್ಯೆ ಬಗೆಹರಿಸುವ ಮೂಲಕ ಶಾಸಕ ಕಾಗೇರಿಯವರು ನಮ್ಮ ಕ್ಷೇತ್ರ,ಜಿಲ್ಲೆ ಸೇರಿ ಕೆಲವು ಜಿಲ್ಲೆಯ ಬಡವರಿಗೆ ಅನುಕೂಲ ಮಾಡಿದಂತಾಗಿದೆ.– ಮಾರುತಿ ನಾಯ್ಕ, ಕಾನಗೋಡು.

2013 ರಿಂದ ಬಡವರಿಗೆ ವಸತಿಯೋಜನೆ ಪಡೆಯಲು ಅಡ್ಡಿಯಾಗಿದ್ದ ಇ ಸ್ವತ್ತಿನ ರಗಳೆಗೆ ರಿಯಾಯತಿ ನೀಡಿರುವುದರಿಂದ ಅನೇಕರಿಗೆ ಅನುಕೂಲವಾಗಿದೆ.2013 ರ ಒಳಗೆ ಮನೆ ಸಂಖ್ಯೆ ಪಡೆದವರು, ತಾತ್ಕಾಲಿಕ ಮನೆ ತೆರಿಗೆ ಭರಣ ಮಾಡಿದವರು ಈಗ ವಸತಿ ಯೋಜನೆಗಳಸಹಾಯಧನ ಪಡೆಯಬಹುದು.- ಮಹೇಶ್ ನಾಯ್ಕ ಮತ್ತು ಆದರ್ಶ ಪೈ. (ಬಿಳಗಿ ಗ್ರಾ.ಪಂ. ಸದಸ್ಯರು)

ಹುಬ್ಬಳ್ಳಿ ಶಿರಸಿ ಮಾರ್ಗದಲ್ಲಿ ಅಪಘಾತ ಚಕ್ಕಡಿ ಗಾಡಿ ನೂಕಿದ ನೆಹರು!_______________________ಹುಬ್ಬಳ್ಳಿಯಿಂದ ಶಿರಸಿಗೆ ಸಂಚರಿಸುತ್ತಿದ್ದ ಜವಾಹರ್ ನೆಹರು ಪ್ರಯಾಣ ಮಾಡುತ್ತಿದ್ದ ಕಾರು ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಎತ್ತು ನೊಗ ತಪ್ಪಿಸಿಕೊಂಡು ಬಚಾವಾಗಿದೆ. ತಗ್ಗಿನಲ್ಲಿ ಇಳಿದ ಗಾಡಿಯನ್ನು ಪುನಃ ರಸ್ತೆಗೆ ತರಲು ಪ್ರಯಾಸ ಪಡಬೇಕಾಯಿತು. ಈ ಸಂದರ್ಭದಲ್ಲಿ ನೆಹರು ಕಾರು ಇಳಿದು ಎತ್ತಿನ ಗಾಡಿಯ ಚಕ್ರ ನೂಕಿದರು. ಗಾಡಿಗೆ ಪುನಃ ಎತ್ತು ಕಟ್ಟಿದ ಬಳಿಕ ನೆಹರು ಕಾರು ಪ್ರಯಾಣ ಮುಂದುವರಿಸಿತು.’ರಸ್ತೆ ಕೆಟ್ಟದಾಗಿದೆ. ನಿಧಾನಕ್ಕೆ ಹೋಗಿ ‘ ಎಂದು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುವಾಗ ಚಾಲಕನಿಗೆ ನೆಹರು ಹೇಳಿದರು.12-2-1937ಶಿರಸಿ ವರದಿಇದೇ ಬರುವ ಆಗಸ್ಟ್ 15 ರವಿವಾರ ಸಾಯಂಕಾಲ ನಾಲ್ಕು ಗಂಟೆಗೆ kalave clubhouse ಬನ್ನಿhttps://www.clubhouse.com/club/kalave

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *