ಬಿಜೆಪಿ to ರೈತ ಸಂಘ -ರೈತಸಂಘದ ನಗರ ಘಟಕದ ಅಧ್ಯಕ್ಷರಾಗಿ ಜಿ.ಕೆ.ಕೊಪ್ಪ ಆಯ್ಕೆ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಮತ್ತು ಕೃಷಿ ಕಾಯಿದೆ ಗಳ ವಿರುದ್ಧದ ಸೆ.27 ರ ಭಾರತ್ ಬಂದ್ ಗೆ ಸಹಕರಿಸಲು ರಾಜ್ಯ ರೈತ ಸಂಘ ಕೋರಿದೆ. ಇಂದು ನಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಸಿದ್ಧಾಪುರ ತಾಲೂಕಾ ಅಧ್ಯಕ್ಷ ವೀರಭದ್ರ ನಾಯ್ಕ ಮಳಲವಳ್ಳಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಯಿಂದ ರೈತ ಸಂಘಕ್ಕೆ ಸೇರ್ಪಡೆಯಾದ ಪ್ರಮುಖ ಮುಖಂಡರನ್ನು ಸ್ವಾಗತಿಸಿ ಸೆ.27 ರ ಬಂದ್ ಗೆ ಬೆಂಬಲ ಕೋರಿದರು.

ಸೆ.27 ರಂದು ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಹಕರಿಸಬೇಕು. ಕಾಂಗ್ರೆಸ್,ಬಿ.ಜೆ.ಪಿ.ಗಳಿಂದ ರೈತ ಸಂಘಕ್ಕೆ ಸೇರ್ಪಡೆಯಾಗುವವರ ಪಟ್ಟಿ ದೊಡ್ಡದಿದೆ. ರೈತರ ಪರವಾಗಿ ಕೆಲಸಮಾಡುತ್ತಾ ರೈತರ ಹಿತಾಸಕ್ತಿಗೆ ದುಡಿಯುವವರಿಗೆ ಯಾವಾಗಲೂ ಸ್ವಾಗತ ಎಂದರು.

ರೈತರ ಪರವಾಗಿ ಕೆಲಸ ಮಾಡದ ಮೋದಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಬಿಟ್ಟುಹೊಡೆದು ರೈತಸಂಘ ಬಲಪಡಿಸುವುದಾಗಿ ಇಂದು ರೈತಸಂಘ ಸೇರಿದ ಪ್ರಮುಖರು ತಿಳಿಸಿದರು.

ರೈತ ಸಂಘದ ನಗರ ಘಟಕದ ಅಧ್ಯಕ್ಷರಾಗಿ ಜಿ.ಕೆ.ನಾಯ್ಕ ಕೊಪ್ಪ- ಕಳೆದ ಹಲವು ವರ್ಷಗಳಿಂದ ಬಿ.ಜೆ.ಪಿ. ಯಲ್ಲಿದ್ದು ವಿವಿಧ ಹಂತದ ಪದಾಧಿಕಾರಿಯಾಗಿದ್ದ ಜಿ.ಕೆ.ನಾಯ್ಕ ಕೊಪ್ಪ ಇಂದು ಅಧೀಕೃತವಾಗಿ ರಾಜ್ಯ ರೈತ ಸಂಘ ಸೇರಿದರು. ಬಿ.ಜೆ.ಪಿ. ತೊರೆದು ರೈತಸಂಘ ಸೇರು ತಿದ್ದಂತೆ ರೈತ ಸಂಘ ಅವರನ್ನು ಸಂಘದ ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಈ ಸಂಘರ್ಭದಲ್ಲಿ ಮಾತನಾಡಿದ ಜಿ.ಕೆ.ನಾಯ್ಕ ಬಹಳ ವರ್ಷಗಳಿಂದ ನಾನು ಬಿ.ಜೆ.ಪಿ.ಯಲ್ಲಿದ್ದರೂ ಬಿ.ಜೆ.ಪಿ. ರೈತರ ಪರವಾಗಿ ಕೆಲಸ ಮಾಡದೇ ಇರುವುದರಿಂದ ರೈತರ ಪರವಾಗಿ ಕೆಲಸ ಮಾಡಲು ನಾನು ಬಿ.ಜೆ.ಪಿ. ತೊರೆಯಬೇಕಾಯಿತು. ಅಲ್ಲಿದ್ದಾಗ ಅವರ ಪರವಾಗಿ ಕೆಲಸ ಮಾಡಿದಂತೆ ಈ ಕ್ಷಣದಿಂದ ರೈತರ ಪರ ರೈತಸಂಘದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.
ಸಿದ್ದಾಪುರ ನಗರ ಪದಾಧಿಕಾರಿಗಳ ಯಾದಿ
ಪದನಾಮ ಮೊಬೈಲ್ ನಂಬರ

ಅನಂ ಸದಸ್ಯರ ಹೆಸರು ಮತ್ತು ಊರು
1 ಗ್ರಾಸವಾಗಿ, ಚಾಲಕೊಪ್ಪ ಅಧ್ಯಕ್ಷರು 9483717327
7022874498
ಗಣಪತಿ ಅಣ್ಣಪ್ಪ ನಾಯ್ಕ * ಕೆ ..
9731917643
3) ನಿತ್ಯಾನಂದ ನಾಯ್ಕ ಹೊಂಡ್ತಿ
9740045382
ಮಹಾಬಲೇಶ್ವರ ನಾಯ್ಕ ಕೊಂಡ್ಲಿ
5) ಕೃಷ್ಣ ಬಸವಣ್ಣ ನಾಯ್ಕ
6 ಗಣಪತಿ ನಾಯ್ಕ ಕೊಳಗಿ
7) ಕೃಷ್ಣ ದ್ಯಾವ ನಾಯ್ಕ
8) ಆನಂದ ನಾರಾಯಣ ನಾಯ್ಕ ಚಿಕ್ಕಳಸೆ
ಬಸವರಾಜ ಕಾಳ ಕೊಂಡ್ಲಿ 9611631602
10) ಸದಾನಂದ ಬಂಗಾರ್ ಬಾಲಕೊಪ್ಪ
11) ಕೃಷ್ಣಮೂರ್ತಿ ಕೊಂಡ್ಡಿ 9481276781
12) ಮಂಜಪ್ಪ ಹೆಚ್. ನಾಯ್ಕ, ಹೊಸೂರು
13) ಜಗದೀಶ ಎನ್. ನಾಯ್ಕ ಕೊಂಡ್ಲಿ 7259459334
14) ಶ್ರೀಕಾಂತ ದಾಮೋದರ ಭಟ್ಟ, ಸಿದ್ದಾಪುರ 9900340025
15) ಮಾರುತಿ ಈರಾ ನಾಯ್ಕ, ತ್ಯಾ ರಸಿ 9449203459
ಸ್ಥಳ:-ಸಿದ್ದಾಪುರ
ದಿನಾಂಕ: 22-09-2021
ಅಧ್ಯಕ್ಷರು
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ
ಸಿದ್ದಾಪುರ

ಸಿದ್ದಾಪುರದಲ್ಲಿ ಲಯನ್ಸ್ ವಲಯ ಸಮಾವೇಶ
ಸಿದ್ದಾಪುರ – : ಸಿದ್ದಾಪುರ ಲಯನ್ಸ್ ಆಶ್ರಯದಲ್ಲಿ ಹೊನ್ನಾವರ, ಮುರ್ಡೇಶ್ವರ, ಅಂಕೋಲಾ ಹಾಗೂ ಸಿದ್ದಾಪುರ ಲಯನ್ಸ್ ಕ್ಲಬ್ ಸದಸ್ಯರುಗಳ ವಲಯ ಮಟ್ಟದ ಸಮಾವೇಶ ಸ್ಥಳೀಯ ಬಾಲಭವನದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ರಾಜೇಶ ಸಾಲೆಹಿತ್ತಲ ವಹಿಸಿ, ಮಾತನಾಡುತ್ತಾ, ಪರಿಸರ ರಕ್ಷಣೆ ಹಾಗೂ ನಾಯಕತ್ವ ಬೆಳವಣಿಗೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ವಲಯ ಮಟ್ಟದಲ್ಲಿ ಹೆಚ್ಚಿಸಬೇಕು. ಸದಸ್ಯತ್ವ ಹೆಚ್ಚಳದ ಬಗ್ಗೆ ಗಮನ ಅಗತ್ಯ ಎಂದು ಹೇಳಿದರು.
ಅಂಕೋಲಾ ಲಯನ್ಸ್ ಪರವಾಗಿ ಎನ್.ಎಚ್. ನಾಯ್ಕರವರು ಮಾತನಾಡಿ ಕಣ್ಣಿನ ಶಸ್ತçಚಿಕಿತ್ಸೆ ಕುರಿತು ಶಿಬಿರ ನಡೆಸುವುದಾಗಿ ಹೇಳಿದರು. ಮುರ್ಡೇಶ್ವರ ಲಯನ್ಸ್ ಪರವಾಗಿ ನಾಗೇಶ ಜನಪರ ಸೇವಾ ಕಾರ್ಯದ ಕುರಿತು ಮಾತನಾಡಿದರು.
ಹೊನ್ನಾವರ ಲಯನ್ಸ್ ಪರವಾಗಿ ವಿನೋದಾ ನಾಯ್ಕ ಮಾತನಾಡಿ ನಾಯಕತ್ವ ಬೆಳವಣಿಗೆಗೆ ತಮ್ಮ ಕ್ಲಬ್ಬಿನ ಪರವಾಗಿ ಆದ್ಯತೆ ನೀಡುವುದಾಗಿ ಹೇಳಿದರು.
ಉದಯ ನಾಯ್ಕ ಹೊನ್ನಾವರ, ಶಶಿಧರ ಶೇಣ್ವಿ, ಮಾಯಾ ಶೆಟ್ಟಿ, ತೃಪ್ತಿ ಶೇಟ್ ಹೊನ್ನಾವರ, ರಾಘವೇಂದ್ರ ಭಟ್ಟ ಸ್ವಸ್ತಿಕ್ ಮಾತನಾಡಿದರು.
ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಎಸ್.ಜೆ ಕೈರಾನ್ ಹಾಗೂ ಶಾಂತಾ ರಾಮ ನಾಯ್ಕ ಹೊನ್ನಾವರ ಅವರು ವಿಶೇಷ ಉಪನ್ಯಾಸ ನೀಡಿದರು.
ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನ್ಮನೆ ಸ್ವಾಗತಿಸಿದರು. ನಾಗರಾಜ ದೋಶೆಟ್ಟಿ ಧ್ವಜವಂದನೆ ನೆರವೇರಿಸಿದರು. ಸಿಎಸ್. ಗೌಡರ್ ಹೆಗ್ಗೋಡಮನೆ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *