ಪುನೀತ್‌ ಮಾಮ ಮತ್ತು ಮಗಳ ಬೇಡಿಕೆ

ಯಾರಿಗೆ ಯಾರಿಷ್ಟ ಯಾಕೆ ಅದು ನನ್ನ ವ್ಯವಹಾರವಲ್ಲ, ನಾನದರ ಬಗ್ಗೆ ಆಸಕ್ತಿ ವಹಿಸುವುದೂ ಇಲ್ಲ. ಆದರೆ ಕಮಲ್‌ ಹಾಸನ್‌, ನಾನಾ ಪಾಟೇಕರ್‌ ಬಿಟ್ಟರೆ ನನಗೆ ಇಷ್ಟದ ನಟರೆಂದರೆ… ಶಾರುಖ್, ಅಮೀರ್‌ ಖಾನ್‌, ಶಿವರಾಜ್‌ ಕುಮಾರ್‌ ಇತ್ಯಾದಿ… ಇದರ ಮಧ್ಯೆ ರಾಜ್‌ ಕುಮಾರ ಮತ್ತು ಪುನೀತ್‌ ನನ್ನ ಆಯ್ಕೆ ಅಲ್ಲ ಎಂದರೆ ಸುಳ್ಳುಹೇಳಿದಂತಾಗುತ್ತದೆ.

ಕಳೆದ ತಿಂಗಳು ಪುನೀತ್‌ ಜೋಗಕ್ಕೆ ಬಂದು ನಮ್ಮ ಸೋಮಣ್ಣರಿಂದ ಚಾಕುಡಿದು ಹೋದ ಕೆಲವೇ ಕ್ಷಣಗಳ ನಂತರ ನಮ್ಮ ಕುಟುಂಬ ಜೋಗದಲ್ಲಿತ್ತು. ಸೋಮಣ್ಣರ ಮಾತು ಕೇಳಿದ ದೊಡ್ಡ ಮಗಳು ಸಸ್ಯ, ಪಪ್ಪಾ ಪುನೀತ್‌ ಮಾಮರನ್ನು ತೋರಸ್ತೇನಿ ಎಂದಿದ್ದಿಯಲ್ಲ ನೀನು ಎಂದು ಕಿವಿಹಿಡಿದು ಕೇಳಿದಳು. ಒಕೆ ಮಗಾ ಪುನೀತರನ್ನೇ ಕರೆಸೋಣ ಒಂದ್ಸಾರಿ ಎಂದು ಪೂಷಿಬಿಟ್ಟಿದ್ದೆ .

ಮಗಳಿಗೆ ಪುನೀತ್‌ ಮಾಮ ಯಾಕೆ ಇಷ್ಟ ಎನ್ನುವುದೂ ನನಗೆ ಬೇಡದ ವಿಷಯ.

ಪುನೀತ್‌ ಪ್ರಥ್ವಿ ಸಿನೇಮಾ ಮಾಡಿದ ಮೇಲೆ ಅನೇಕರು ಜಿಲ್ಲಾಧಿಕಾರಿ ಆಗಬೇಕು ಎಂದುಕೊಂಡಿರುವವರ ಬಗ್ಗೆ ಮಗಳಿಗೆ ಹೇಳಿದ್ದೆ.

ಸೊರಬಾದ ದೇವರಾಜ್‌ ಈಗ ಬೆಂಗಳೂರಿನಲ್ಲಿ ಉಪವಿಭಾಗಾಧಿಕಾರಿ ಅವರು ನಮ್ಮೂರಲ್ಲಿ ಕೃಷಿ ಅಧಿಕಾರಿಯಾಗಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಅಧಿಕಾರಿಯಾಗಿರುವ ಅವರು ನನ್ನ ಸಂದರ್ಶನ ಒಂದರಲ್ಲಿ ನಾನೂ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಕಾರಣ ನನ್ನ ಅಪ್ಪ ಮತ್ತು ಪುನೀತ್‌ ರ ಪ್ರಥ್ವಿ ಮೂವಿ ಎಂದಿದ್ದರು.

ಹೀಗೆ ಸಿನೆಮಾ ಮತ್ತು ನಟರು ಬೆಳ್ಳಿಪರದೆಯಿಂದ ಅನೇಕರನ್ನು ಪ್ರಭಾವಿಸಬಲ್ಲರು ಎಂಬುದನ್ನು ಕಲಿಸಿದ ಉಪಾನ್ಯಾಸಕ ನಾನು. ಪುನೀತ್‌ ಬಗ್ಗೆ ಭಾವನಾತ್ಮಕವಾಗಿ ಯೋಚಿಸದೆ ಪ್ರಾಯೋಗಿಕವಾಗಿ ವಿಮರ್ಶಿಸಿದರೂ ಪುನೀತ್‌ ಅಪ್ಪ- ಅಣ್ಣನಂತೆ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಪ್ರತಿಬಿಂಬಿಸುವ ಆಯ್ಕೆಗಳನ್ನು ಮಾಡಿದ ನಿಜ ನಾಯಕ.

ಪುನೀತ್‌ ರ ಮೈತ್ರಿ-ಅಮರಾವತಿ, ಯುವರತ್ನ, ರಾಜಕುಮಾರ ಸೇರಿದಂತೆ ಅನೇಕ ಚಿತ್ರಗಳನ್ನು ಕಣ್ತುಂಬಿಸಿಕೊಂಡವರಿಗೆ ಪುನೀತ್‌ ಸಾವು ಮರೆಯದ ನೋವು. ಪುನೀತ್‌,ರಾಜಕುಮಾರ್‌ ಅವರ ದೊಡ್ಮನೆ ಕುಟುಂಬ ಸಿನೆಮಾಗಳ ಮೂಲಕ ಸಾಮಾಜಿಕ ಮೌಲ್ಯಗಳ ಮಹತ್ವ ಸಾರಿರುವ ಕಾರಣಕ್ಕೆ ಅವರ ಬಗ್ಗೆ ಕನ್ನಡಿಗರಿಗೆ ಗೌರವ ಇರಲೇಬೇಕು. ಆದರೆ ಪುನೀತ್‌ ರನ್ನು ಎಳೆಯರು ಇಷ್ಟಪಡಲು ಕಾರಣ ಎನು ಎನ್ನುವ ಜಿದ್ಞಾಸೆ ಈಗಲೂ ನನ್ನಲ್ಲಿದೆ. ಘನತೆವೆತ್ತ ಕುಟುಂಬದ ಪುನೀತ್‌, ಶಿವರಾಜ್‌, ರಾಘವೇಂದ್ರ ರಾಜ್‌ ಕುಮಾರ ಗಳೆಲ್ಲ ನಮ್ಮೂರ ಸಂಬಂಧಿಕರು ಎನ್ನುವುದನ್ನು ಮೀರಿ ಕೋಟ್ಯಾಂತರ ಜನರು ಅವರನ್ನು ಆರಾಧಿಸುವ ಹಿಂದೆ ಅವರ ಶ್ರಮ, ಸರಳತೆ ಕಾರಣ ಎನ್ನುವ ಸತ್ಯ ಅರಿಯದವ ಕೋಮುವಾದಿಯಾಗಬಹುದಷ್ಟೇ.

ನನ್ನ ಮಗಳ ಪುನೀತ್‌ ಮಾಮ ಈ ವಯಸ್ಸಿನಲ್ಲಿ ಹೀಗೆ ಕೊನೆಯಾಗಬಾರದಿತ್ತು ಎನ್ನುವುದಷ್ಟೇ ನನ್ನ ವೇದನೆಯ ಮೂಲ. ಪುನೀತ್‌ ಮತ್ತೆ ಜೀವಂತ ಬರಬಾರದೆ ಮಕ್ಕಳ ಪ್ರೀತಿಗಾಗಿಯಾದರೂ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *