exclusive report- ವಿಚಿತ್ರ ಆದರೂ ಸತ್ಯ- ಸದಾಕಾಲ ಹಲಸು ಕೋಟಿಗೊಂದು ದೃಷ್ಟಾಂತ!

ಪ್ರಕೃತಿಯ ವಿಸ್ಮಯಗಳಿಗೆ ಕೊನೆಇಲ್ಲ, ಸಕಾಲದಲ್ಲಿ ಎಲ್ಲವನ್ನೂ ಕರುಣಿಸುವ ಪರಿಸರ ಕೆಲವೊಮ್ಮೆ ಅಕಾಲದಲ್ಲಿ ಆಶ್ಚರ್ಯ ಹುಟ್ಟಿಸಿಬಿಡುತ್ತದೆ. ಇಂಥದ್ದೊಂದು ಸಕೇದಾಶ್ಚರ್ಯದ ಘಟನೆಯೊಂದು ಉತ್ತರ ಕನ್ನಡದಲ್ಲಿ ಕಂಡಿದೆ. ಉತ್ತರ ಕನ್ನಡ, ಶಿವಮೊಗ್ಗಗಳ ಮಲೆನಾಡ ಕಾಡಂಚುಗಳಲ್ಲಿ ಎಷ್ಟೊಂದು ವಿಸ್ಮಯಗಳಿವೆ. ಅಂಥ ವಿಶೇಶಗಳು ಎಲ್ಲರಿಗೂ ಕಾಣಲಾರವು. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಲ್ಲಿ ತ್ಯಾರ್ಸಿ ಎನ್ನುವ ಗ್ರಾಮವೊಂ ದಿದೆ ಅದಕ್ಕೆ ತಾಕಿಕೊಂಡ ಹಳ್ಳಿಯೇ ಕಡಕೇರಿ, ಈ ತ್ಯಾರ್ಸಿ ಸಮೀಪದ ಕಡಕೇರಿ ಗ್ರಾಮದ ರಸ್ತೆಯ ಬಳಿ ೨೦ ವರ್ಷಗಳ ಹಲಸಿನ ಮರವೊಂದಿದೆ. ಇದು ಮಲೆನಾಡಿನ ಇತರ ಹಲಸಿನ ಮರಗಳಂತೆ ಎಂದುಕೊಂಡು ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ವಿಶ್ವದ ವಿರಳ ವಿಸ್ಮಯ ಹಲಸಿನ ಮರದ ಬಗ್ಗೆ ತಿಳಿಯುವುದಿಲ್ಲ.
ಒಂದೆರಡು ಬಾರಿ ಬೇರೆ ಬೇರೆ ಕಾಲಗಳಲ್ಲಿ ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ನೇತುಕೊಂಡಿರುವುದು ಕಾಣುತ್ತದೆ.

ಹೌದು ವಿಚಿತ್ರ-ವಿಸ್ಮಯವೆನಿಸಿದರೂ ಇದು ವಾಸ್ತವ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ಬಿಡುತ್ತದೆ. ಬೇಸಿಗೆ-ಮಳೆಗಾಲದ ಪ್ರಾರಂಭದ ದಿನಗಳನ್ನು ಹೊರತುಪಡಿಸಿ ವರ್ಷದ ಮೂರ್ನಾಲ್ಕು ತಿಂಗಳು ಹೆಚ್ಚೆಂದರೆ ಆರು ತಿಂಗಳ ವರೆಗೆ ಫಲ ನೀಡುವ ಹಲಸು ಇಲ್ಲಿ ವರ್ಷವಿಡೀ ಕಾಯಿ ಬಿಡುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಅನುಮಾನವೂ ಮೂಡುತ್ತದೆ.
ಆದರೆ ಇದು ಸತ್ಯ ನಮ್ಮ ಪ್ರತಿನಿಧಿ ಸೇರಿ ಹಲವು ಜನ ಗಮನಿಸಿರುವ ನಿತ್ಯ ಹಲಸಿನ ಕಾಯಿಯ ಮರ ಕಲ್ಪವೃಕ್ಷದಂತಿದೆ.

ಎಂಟುವರ್ಷದ ಗಿಡವಾಗಿದ್ದಾಗಿನಿಂದ ವರ್ಷಪೂರ್ತಿ ಫಲ ನೀಡುವ ಈ ಹಲಸಿನ ಮರದಲ್ಲಿ ಈಗಲೂ ಬಲಿತ ಹಲಸಿನ ಕಾಯಿಗಳಿವೆ ಮತ್ತೂ ಯಾವಾಗಳೂ ನೇತಾಡುತ್ತಿರುತ್ತವೆ. ಈ ಹಲಸಿನ ವೈಶಿಷ್ಟ್ಯತೆ,ಅನನ್ಯತೆಯ ಬಗ್ಗೆ ಸ್ಥಳಿಯರಿಗೆ ಅಷ್ಟಾಗಿ ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ʼಇಂಥ ವಿರಳ ಸಸ್ಯಗಳಿವೆ. ಕೆಲವೊಮ್ಮೆ ವಾತಾವರಣ ಬದಲಾವಣೆಯಿಂದ ಅಕಾಲ, ಎಲ್ಲಾ ಕಾಲಗಳಲ್ಲಿ ಫಲ ನೀಡುತ್ತವೆ. ಆದರೆ ಪಶ್ಚಿಮಘಟ್ಟದ ಬಹುತೇಕ ಜೀವವೈವಿಧ್ಯಗಳ ಬಗ್ಗೆ ಅಧ್ಯಯನ ಮಾಡಿರುವ ನನಗೆ ನಿತ್ಯ ಫಲ ನೀಡುವ ಹಲಸು ಕಂಡಿದ್ದಿಲ್ಲ ಆದರೆ ಅತಿ ವಿರಳವಾಗಿ ಕೋಟಿಗೊಂದು, ಕೋಟಿಗೊಮ್ಮೆ ಎನ್ನುವಂತೆ ಇಂಥ ವಿಶೇಶಗಳಿರುತ್ತವೆ. ಈ ಬಗ್ಗೆ ಅಧ್ಯಯನಕ್ಕೆ ಹೊಸ ವಿಷಯ ಸಿಕ್ಕಂತಾಗಿದೆ ಎಂದಿದ್ದಾರೆ.
ರುಚಿ, ಆರೋಗ್ಯ ವರ್ಧಕವಾದ ಸಿದ್ದು ಹಲಸು ಸದ್ದು ಮಾಡಿದ ದಿನಗಳಲ್ಲೇ ವರ್ಷವಿಡೀ ಫಲ ನೀಡುವ ನಿತ್ಯಫಲದ ಹಲಸು ಸುದ್ದಿಯಾಗಿರುವುದು ವಿಶೇಶ ವಾಗಿದೆ.
(  -ಕನ್ನೇಶ್ವರ ನಾಯ್ಕ ಕೋಲಶಿರ್ಸಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *