exclusive report- ವಿಚಿತ್ರ ಆದರೂ ಸತ್ಯ- ಸದಾಕಾಲ ಹಲಸು ಕೋಟಿಗೊಂದು ದೃಷ್ಟಾಂತ!

ಪ್ರಕೃತಿಯ ವಿಸ್ಮಯಗಳಿಗೆ ಕೊನೆಇಲ್ಲ, ಸಕಾಲದಲ್ಲಿ ಎಲ್ಲವನ್ನೂ ಕರುಣಿಸುವ ಪರಿಸರ ಕೆಲವೊಮ್ಮೆ ಅಕಾಲದಲ್ಲಿ ಆಶ್ಚರ್ಯ ಹುಟ್ಟಿಸಿಬಿಡುತ್ತದೆ. ಇಂಥದ್ದೊಂದು ಸಕೇದಾಶ್ಚರ್ಯದ ಘಟನೆಯೊಂದು ಉತ್ತರ ಕನ್ನಡದಲ್ಲಿ ಕಂಡಿದೆ. ಉತ್ತರ ಕನ್ನಡ, ಶಿವಮೊಗ್ಗಗಳ ಮಲೆನಾಡ ಕಾಡಂಚುಗಳಲ್ಲಿ ಎಷ್ಟೊಂದು ವಿಸ್ಮಯಗಳಿವೆ. ಅಂಥ ವಿಶೇಶಗಳು ಎಲ್ಲರಿಗೂ ಕಾಣಲಾರವು. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಲ್ಲಿ ತ್ಯಾರ್ಸಿ ಎನ್ನುವ ಗ್ರಾಮವೊಂ ದಿದೆ ಅದಕ್ಕೆ ತಾಕಿಕೊಂಡ ಹಳ್ಳಿಯೇ ಕಡಕೇರಿ, ಈ ತ್ಯಾರ್ಸಿ ಸಮೀಪದ ಕಡಕೇರಿ ಗ್ರಾಮದ ರಸ್ತೆಯ ಬಳಿ ೨೦ ವರ್ಷಗಳ ಹಲಸಿನ ಮರವೊಂದಿದೆ. ಇದು ಮಲೆನಾಡಿನ ಇತರ ಹಲಸಿನ ಮರಗಳಂತೆ ಎಂದುಕೊಂಡು ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ವಿಶ್ವದ ವಿರಳ ವಿಸ್ಮಯ ಹಲಸಿನ ಮರದ ಬಗ್ಗೆ ತಿಳಿಯುವುದಿಲ್ಲ.
ಒಂದೆರಡು ಬಾರಿ ಬೇರೆ ಬೇರೆ ಕಾಲಗಳಲ್ಲಿ ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ನೇತುಕೊಂಡಿರುವುದು ಕಾಣುತ್ತದೆ.

ಹೌದು ವಿಚಿತ್ರ-ವಿಸ್ಮಯವೆನಿಸಿದರೂ ಇದು ವಾಸ್ತವ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ಬಿಡುತ್ತದೆ. ಬೇಸಿಗೆ-ಮಳೆಗಾಲದ ಪ್ರಾರಂಭದ ದಿನಗಳನ್ನು ಹೊರತುಪಡಿಸಿ ವರ್ಷದ ಮೂರ್ನಾಲ್ಕು ತಿಂಗಳು ಹೆಚ್ಚೆಂದರೆ ಆರು ತಿಂಗಳ ವರೆಗೆ ಫಲ ನೀಡುವ ಹಲಸು ಇಲ್ಲಿ ವರ್ಷವಿಡೀ ಕಾಯಿ ಬಿಡುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಅನುಮಾನವೂ ಮೂಡುತ್ತದೆ.
ಆದರೆ ಇದು ಸತ್ಯ ನಮ್ಮ ಪ್ರತಿನಿಧಿ ಸೇರಿ ಹಲವು ಜನ ಗಮನಿಸಿರುವ ನಿತ್ಯ ಹಲಸಿನ ಕಾಯಿಯ ಮರ ಕಲ್ಪವೃಕ್ಷದಂತಿದೆ.

ಎಂಟುವರ್ಷದ ಗಿಡವಾಗಿದ್ದಾಗಿನಿಂದ ವರ್ಷಪೂರ್ತಿ ಫಲ ನೀಡುವ ಈ ಹಲಸಿನ ಮರದಲ್ಲಿ ಈಗಲೂ ಬಲಿತ ಹಲಸಿನ ಕಾಯಿಗಳಿವೆ ಮತ್ತೂ ಯಾವಾಗಳೂ ನೇತಾಡುತ್ತಿರುತ್ತವೆ. ಈ ಹಲಸಿನ ವೈಶಿಷ್ಟ್ಯತೆ,ಅನನ್ಯತೆಯ ಬಗ್ಗೆ ಸ್ಥಳಿಯರಿಗೆ ಅಷ್ಟಾಗಿ ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ʼಇಂಥ ವಿರಳ ಸಸ್ಯಗಳಿವೆ. ಕೆಲವೊಮ್ಮೆ ವಾತಾವರಣ ಬದಲಾವಣೆಯಿಂದ ಅಕಾಲ, ಎಲ್ಲಾ ಕಾಲಗಳಲ್ಲಿ ಫಲ ನೀಡುತ್ತವೆ. ಆದರೆ ಪಶ್ಚಿಮಘಟ್ಟದ ಬಹುತೇಕ ಜೀವವೈವಿಧ್ಯಗಳ ಬಗ್ಗೆ ಅಧ್ಯಯನ ಮಾಡಿರುವ ನನಗೆ ನಿತ್ಯ ಫಲ ನೀಡುವ ಹಲಸು ಕಂಡಿದ್ದಿಲ್ಲ ಆದರೆ ಅತಿ ವಿರಳವಾಗಿ ಕೋಟಿಗೊಂದು, ಕೋಟಿಗೊಮ್ಮೆ ಎನ್ನುವಂತೆ ಇಂಥ ವಿಶೇಶಗಳಿರುತ್ತವೆ. ಈ ಬಗ್ಗೆ ಅಧ್ಯಯನಕ್ಕೆ ಹೊಸ ವಿಷಯ ಸಿಕ್ಕಂತಾಗಿದೆ ಎಂದಿದ್ದಾರೆ.
ರುಚಿ, ಆರೋಗ್ಯ ವರ್ಧಕವಾದ ಸಿದ್ದು ಹಲಸು ಸದ್ದು ಮಾಡಿದ ದಿನಗಳಲ್ಲೇ ವರ್ಷವಿಡೀ ಫಲ ನೀಡುವ ನಿತ್ಯಫಲದ ಹಲಸು ಸುದ್ದಿಯಾಗಿರುವುದು ವಿಶೇಶ ವಾಗಿದೆ.
(  -ಕನ್ನೇಶ್ವರ ನಾಯ್ಕ ಕೋಲಶಿರ್ಸಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *