ರಸ್ತೆಯಂಚಿನ ತುಂಬರಗೋಡ್‌ ಸುಂದರಿ!

ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆ ಕಾಡು,ನಾಡುಗಳನ್ನೆಲ್ಲಾ ಒದ್ದೆ ಮಾಡಿಟ್ಟಿದೆ. ವರ್ಷದ ಮಳೆಗಾಲವೆಂದರೆ ಜನರಿಗೆ ಮಳೆ,ನೆರೆ ತೊಂದರೆಗಳ ನೆನಪಿನ ಬುತ್ತಿ ಆದರೆ ಮಳೆ ಕಡಿಮೆಯಾಗುತ್ತಲೇ ನೆನಪಾಗುವುದು ಜಲಪಾತಗಳು. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎನ್ನಲಾಗುತ್ತದೆ.ಇಲ್ಲಿ ನದಿ,ಬೆಟ್ಟಗಳ ಅಂಚುಗಳಲ್ಲೆಲ್ಲಾ ಜಲಪಾತಗಳ ಜಾತ್ರೆ.ಆದರೆ ಈ ಮಳೆಗಾಲದಲ್ಲಿ ದುರ್ಗಮ ರಸ್ತೆ ಹಳ್ಳ-ಕೊಳ್ಳಗಳನ್ನೆಲ್ಲಾ ದಾಟಿ ಜಲಪಾತಗಳನ್ನು ನೋಡುವುದು ಹೇಗೆ ಎಂದು ಆತಂಕಗೊಳ್ಳುವವರಿಗೂ ಸುಲಭ ಮಾರ್ಗಗಳಿವೆ. ಹೆಚ್ಚಿನ ಜಲಪಾತಗಳು ಗುಡ್ಡ-ಬೆಟ್ಟಗಳ ನಡುವೆ ಧುಮುಕಿದರೆ ಕೆಲವುಕೂಗಳತೆ,ಕಾಲ್ನಡಿಗೆ ದೂರದಲ್ಲಿ ಸಿಗುತ್ತವೆ.
ಅಂಥ ಜಲಪಾತಗಳಲ್ಲಿ ಸಿದ್ಧಾಪುರದ ತುಂಬರಗೋಡ್‌ ಜಲಪಾತ ಒಂದು.

ವರ್ಷದ ಆರುತಿಂಗಳಿಗೂ ಹೆಚ್ಚು ಅವಧಿ ಕಂಡುಬರುವ ಸಿದ್ಧಾಪುರ ತಾಲೂಕಿನ ಶಿರಸಿ-ಸಿದ್ದಾಪುರ ರಸ್ತೆಯ ಪಕ್ಕದ ಜಲಪಾತ ಶಿರಸಿ ಬೆಂಗಳೂರು ರಸ್ತೆಯ ಪಕ್ಕಕ್ಕೇ ಹರಿಯುತ್ತದೆ. ಹಾರ್ಸಿಕಟ್ಟಾ ಪಂಚಾಯತ್‌ ವ್ಯಾಪ್ತಿಯ ಈ ಜಲಪಾತದ ವಿಶೇಶವೆಂದರೆ ಈ ಜಲಪಾತ ರಸ್ತೆಯ ಪಕ್ಕಕ್ಕೆ ನೂರು ಮೀಟರ್‌ ದೂರದಲ್ಲಿದೆ. ಶಿರಸಿ ರಸ್ತೆ ಪಕ್ಕ ವಾಹನ ನಿಲುಗಡೆ ಮಾಡಿ ನೂರು ಮೀಟರ್‌ ನಡೆಯುತ್ತಲೇ ಬೃಹತ್‌ ಗಾತ್ರದ ಬಂಡೆಮೇಲಿಂದ ಧುಮುಕುವ ಈ ಜಲಪಾತವನ್ನು ಪ್ರಯಾಸವಿಲ್ಲದೆ ಕಣ್ತಂಬಿಕೊಳ್ಳಬಹುದು. ಮಾವಿನಕೊಪ್ಪ ಹೊಳೆ ಸೃಷ್ಟಿಸಿರುವ ಈ ಸುಂದರ ಜಲಪಾತದ ಮೇಲೆ ಪ್ರಪಾತದಂಥಹ ನೀರಿನ ಗುಂಡಿಯೊಂದಿದೆ.ಅದರ ಕೆಳಗೆ ಹರಿಯುವ ತುಂಬರಗೋಡು ಜಲಪಾತಚಿಕ್ಕದಾಗಿದ್ದರೂ ಸುಂದರವಾಗಿದೆ.


ಬಹುತೇಕ ಜಲಪಾತಗಳಲ್ಲಿ ಸುರಕ್ಷತೆಯ ಕಾಳಜಿವಹಿಸದಿದ್ದರೆ ಜೀವಕ್ಕೇ ಅಪಾಯ ಈ ತುಂಬರಗೋಡು ಜಲಪಾತದ ವೈಶಿಷ್ಟ್ಯವೆಂದರೆ ಇಲ್ಲಿ ಅಪಾಯವಿಲ್ಲ.ವಯಸ್ಸಿನ ಭೇದವಿಲ್ಲದೆ ಎಲ್ಲರೂ ನೋಡಿ ಆನಂದಿಸಬಹುದಾದ ಈ ಜಲಪಾತದ ಅನನ್ಯತೆ ಬಳಸಿಕೊಂಡು ಪ್ರವಾಸಿ ಆಕರ್ಷಣೆಯ ಕೇಂದ್ರ ಮಾಡುವ ಮೂಲಕ ಈ ಜಲಪಾತದ ಸೊಬಗನ್ನು ಪರಿಚಯಿಸಿ ಅದರಿಂದ ಸ್ಥಳಿಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲು ಅವಕಾಶವಿದೆ. ಅಪಾಯ,ಸವಾಲುಗಳಿಲ್ಲದ ಈ ಜಲಪಾತದ ಮಳೆಗಾಲದ ನೋಟವಂತೂ ಎಂಥವರಿಗೂ ಮುದ ನೀಡುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *