ರಸ್ತೆಯಂಚಿನ ತುಂಬರಗೋಡ್‌ ಸುಂದರಿ!

ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆ ಕಾಡು,ನಾಡುಗಳನ್ನೆಲ್ಲಾ ಒದ್ದೆ ಮಾಡಿಟ್ಟಿದೆ. ವರ್ಷದ ಮಳೆಗಾಲವೆಂದರೆ ಜನರಿಗೆ ಮಳೆ,ನೆರೆ ತೊಂದರೆಗಳ ನೆನಪಿನ ಬುತ್ತಿ ಆದರೆ ಮಳೆ ಕಡಿಮೆಯಾಗುತ್ತಲೇ ನೆನಪಾಗುವುದು ಜಲಪಾತಗಳು. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎನ್ನಲಾಗುತ್ತದೆ.ಇಲ್ಲಿ ನದಿ,ಬೆಟ್ಟಗಳ ಅಂಚುಗಳಲ್ಲೆಲ್ಲಾ ಜಲಪಾತಗಳ ಜಾತ್ರೆ.ಆದರೆ ಈ ಮಳೆಗಾಲದಲ್ಲಿ ದುರ್ಗಮ ರಸ್ತೆ ಹಳ್ಳ-ಕೊಳ್ಳಗಳನ್ನೆಲ್ಲಾ ದಾಟಿ ಜಲಪಾತಗಳನ್ನು ನೋಡುವುದು ಹೇಗೆ ಎಂದು ಆತಂಕಗೊಳ್ಳುವವರಿಗೂ ಸುಲಭ ಮಾರ್ಗಗಳಿವೆ. ಹೆಚ್ಚಿನ ಜಲಪಾತಗಳು ಗುಡ್ಡ-ಬೆಟ್ಟಗಳ ನಡುವೆ ಧುಮುಕಿದರೆ ಕೆಲವುಕೂಗಳತೆ,ಕಾಲ್ನಡಿಗೆ ದೂರದಲ್ಲಿ ಸಿಗುತ್ತವೆ.
ಅಂಥ ಜಲಪಾತಗಳಲ್ಲಿ ಸಿದ್ಧಾಪುರದ ತುಂಬರಗೋಡ್‌ ಜಲಪಾತ ಒಂದು.

ವರ್ಷದ ಆರುತಿಂಗಳಿಗೂ ಹೆಚ್ಚು ಅವಧಿ ಕಂಡುಬರುವ ಸಿದ್ಧಾಪುರ ತಾಲೂಕಿನ ಶಿರಸಿ-ಸಿದ್ದಾಪುರ ರಸ್ತೆಯ ಪಕ್ಕದ ಜಲಪಾತ ಶಿರಸಿ ಬೆಂಗಳೂರು ರಸ್ತೆಯ ಪಕ್ಕಕ್ಕೇ ಹರಿಯುತ್ತದೆ. ಹಾರ್ಸಿಕಟ್ಟಾ ಪಂಚಾಯತ್‌ ವ್ಯಾಪ್ತಿಯ ಈ ಜಲಪಾತದ ವಿಶೇಶವೆಂದರೆ ಈ ಜಲಪಾತ ರಸ್ತೆಯ ಪಕ್ಕಕ್ಕೆ ನೂರು ಮೀಟರ್‌ ದೂರದಲ್ಲಿದೆ. ಶಿರಸಿ ರಸ್ತೆ ಪಕ್ಕ ವಾಹನ ನಿಲುಗಡೆ ಮಾಡಿ ನೂರು ಮೀಟರ್‌ ನಡೆಯುತ್ತಲೇ ಬೃಹತ್‌ ಗಾತ್ರದ ಬಂಡೆಮೇಲಿಂದ ಧುಮುಕುವ ಈ ಜಲಪಾತವನ್ನು ಪ್ರಯಾಸವಿಲ್ಲದೆ ಕಣ್ತಂಬಿಕೊಳ್ಳಬಹುದು. ಮಾವಿನಕೊಪ್ಪ ಹೊಳೆ ಸೃಷ್ಟಿಸಿರುವ ಈ ಸುಂದರ ಜಲಪಾತದ ಮೇಲೆ ಪ್ರಪಾತದಂಥಹ ನೀರಿನ ಗುಂಡಿಯೊಂದಿದೆ.ಅದರ ಕೆಳಗೆ ಹರಿಯುವ ತುಂಬರಗೋಡು ಜಲಪಾತಚಿಕ್ಕದಾಗಿದ್ದರೂ ಸುಂದರವಾಗಿದೆ.


ಬಹುತೇಕ ಜಲಪಾತಗಳಲ್ಲಿ ಸುರಕ್ಷತೆಯ ಕಾಳಜಿವಹಿಸದಿದ್ದರೆ ಜೀವಕ್ಕೇ ಅಪಾಯ ಈ ತುಂಬರಗೋಡು ಜಲಪಾತದ ವೈಶಿಷ್ಟ್ಯವೆಂದರೆ ಇಲ್ಲಿ ಅಪಾಯವಿಲ್ಲ.ವಯಸ್ಸಿನ ಭೇದವಿಲ್ಲದೆ ಎಲ್ಲರೂ ನೋಡಿ ಆನಂದಿಸಬಹುದಾದ ಈ ಜಲಪಾತದ ಅನನ್ಯತೆ ಬಳಸಿಕೊಂಡು ಪ್ರವಾಸಿ ಆಕರ್ಷಣೆಯ ಕೇಂದ್ರ ಮಾಡುವ ಮೂಲಕ ಈ ಜಲಪಾತದ ಸೊಬಗನ್ನು ಪರಿಚಯಿಸಿ ಅದರಿಂದ ಸ್ಥಳಿಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲು ಅವಕಾಶವಿದೆ. ಅಪಾಯ,ಸವಾಲುಗಳಿಲ್ಲದ ಈ ಜಲಪಾತದ ಮಳೆಗಾಲದ ನೋಟವಂತೂ ಎಂಥವರಿಗೂ ಮುದ ನೀಡುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *