ರಸ್ತೆಯಂಚಿನ ತುಂಬರಗೋಡ್‌ ಸುಂದರಿ!

ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆ ಕಾಡು,ನಾಡುಗಳನ್ನೆಲ್ಲಾ ಒದ್ದೆ ಮಾಡಿಟ್ಟಿದೆ. ವರ್ಷದ ಮಳೆಗಾಲವೆಂದರೆ ಜನರಿಗೆ ಮಳೆ,ನೆರೆ ತೊಂದರೆಗಳ ನೆನಪಿನ ಬುತ್ತಿ ಆದರೆ ಮಳೆ ಕಡಿಮೆಯಾಗುತ್ತಲೇ ನೆನಪಾಗುವುದು ಜಲಪಾತಗಳು. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎನ್ನಲಾಗುತ್ತದೆ.ಇಲ್ಲಿ ನದಿ,ಬೆಟ್ಟಗಳ ಅಂಚುಗಳಲ್ಲೆಲ್ಲಾ ಜಲಪಾತಗಳ ಜಾತ್ರೆ.ಆದರೆ ಈ ಮಳೆಗಾಲದಲ್ಲಿ ದುರ್ಗಮ ರಸ್ತೆ ಹಳ್ಳ-ಕೊಳ್ಳಗಳನ್ನೆಲ್ಲಾ ದಾಟಿ ಜಲಪಾತಗಳನ್ನು ನೋಡುವುದು ಹೇಗೆ ಎಂದು ಆತಂಕಗೊಳ್ಳುವವರಿಗೂ ಸುಲಭ ಮಾರ್ಗಗಳಿವೆ. ಹೆಚ್ಚಿನ ಜಲಪಾತಗಳು ಗುಡ್ಡ-ಬೆಟ್ಟಗಳ ನಡುವೆ ಧುಮುಕಿದರೆ ಕೆಲವುಕೂಗಳತೆ,ಕಾಲ್ನಡಿಗೆ ದೂರದಲ್ಲಿ ಸಿಗುತ್ತವೆ.
ಅಂಥ ಜಲಪಾತಗಳಲ್ಲಿ ಸಿದ್ಧಾಪುರದ ತುಂಬರಗೋಡ್‌ ಜಲಪಾತ ಒಂದು.

ವರ್ಷದ ಆರುತಿಂಗಳಿಗೂ ಹೆಚ್ಚು ಅವಧಿ ಕಂಡುಬರುವ ಸಿದ್ಧಾಪುರ ತಾಲೂಕಿನ ಶಿರಸಿ-ಸಿದ್ದಾಪುರ ರಸ್ತೆಯ ಪಕ್ಕದ ಜಲಪಾತ ಶಿರಸಿ ಬೆಂಗಳೂರು ರಸ್ತೆಯ ಪಕ್ಕಕ್ಕೇ ಹರಿಯುತ್ತದೆ. ಹಾರ್ಸಿಕಟ್ಟಾ ಪಂಚಾಯತ್‌ ವ್ಯಾಪ್ತಿಯ ಈ ಜಲಪಾತದ ವಿಶೇಶವೆಂದರೆ ಈ ಜಲಪಾತ ರಸ್ತೆಯ ಪಕ್ಕಕ್ಕೆ ನೂರು ಮೀಟರ್‌ ದೂರದಲ್ಲಿದೆ. ಶಿರಸಿ ರಸ್ತೆ ಪಕ್ಕ ವಾಹನ ನಿಲುಗಡೆ ಮಾಡಿ ನೂರು ಮೀಟರ್‌ ನಡೆಯುತ್ತಲೇ ಬೃಹತ್‌ ಗಾತ್ರದ ಬಂಡೆಮೇಲಿಂದ ಧುಮುಕುವ ಈ ಜಲಪಾತವನ್ನು ಪ್ರಯಾಸವಿಲ್ಲದೆ ಕಣ್ತಂಬಿಕೊಳ್ಳಬಹುದು. ಮಾವಿನಕೊಪ್ಪ ಹೊಳೆ ಸೃಷ್ಟಿಸಿರುವ ಈ ಸುಂದರ ಜಲಪಾತದ ಮೇಲೆ ಪ್ರಪಾತದಂಥಹ ನೀರಿನ ಗುಂಡಿಯೊಂದಿದೆ.ಅದರ ಕೆಳಗೆ ಹರಿಯುವ ತುಂಬರಗೋಡು ಜಲಪಾತಚಿಕ್ಕದಾಗಿದ್ದರೂ ಸುಂದರವಾಗಿದೆ.


ಬಹುತೇಕ ಜಲಪಾತಗಳಲ್ಲಿ ಸುರಕ್ಷತೆಯ ಕಾಳಜಿವಹಿಸದಿದ್ದರೆ ಜೀವಕ್ಕೇ ಅಪಾಯ ಈ ತುಂಬರಗೋಡು ಜಲಪಾತದ ವೈಶಿಷ್ಟ್ಯವೆಂದರೆ ಇಲ್ಲಿ ಅಪಾಯವಿಲ್ಲ.ವಯಸ್ಸಿನ ಭೇದವಿಲ್ಲದೆ ಎಲ್ಲರೂ ನೋಡಿ ಆನಂದಿಸಬಹುದಾದ ಈ ಜಲಪಾತದ ಅನನ್ಯತೆ ಬಳಸಿಕೊಂಡು ಪ್ರವಾಸಿ ಆಕರ್ಷಣೆಯ ಕೇಂದ್ರ ಮಾಡುವ ಮೂಲಕ ಈ ಜಲಪಾತದ ಸೊಬಗನ್ನು ಪರಿಚಯಿಸಿ ಅದರಿಂದ ಸ್ಥಳಿಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲು ಅವಕಾಶವಿದೆ. ಅಪಾಯ,ಸವಾಲುಗಳಿಲ್ಲದ ಈ ಜಲಪಾತದ ಮಳೆಗಾಲದ ನೋಟವಂತೂ ಎಂಥವರಿಗೂ ಮುದ ನೀಡುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *