ಬರ್ತ್‌ ಡೆ ಪಾರ್ಟಿ ಯಲ್ಲಿ ಚರ್ಚೆಯಾಯ್ತು ಕಮೀಷನ್‌,ಪಕ್ಷಪಾತ,ತಾರತಮ್ಯ!

ದೇಶದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬರುತ್ತಲೇ ಪ್ರಾರಂಭವಾದ ೪೦-೫೦-% ಕಮೀಷನ್‌ ವಿಚಾರ ಈಗ ಹಾದಿ-ಬೀದಿಗಳಲ್ಲಿ ಚರ್ಚೆಯ ವಿಷಯವಾಗಿದೆ.ಸಿದ್ಧಾಪುರ,ಶಿರಸಿಗಳಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷರ ಆಪ್ತರು,ಸಂಬಂಧಿಗಳು ಸಾರ್ವಜನಿಕ ಕಾಮಗಾರಿಗಳ ೪೦% ಕಮೀಷನ್‌ ಪಡೆದು ಕಳಪೆ ಕಾಮಗಾರಿ ಮಾಡುತಿದ್ದಾರೆ ಎನ್ನುವ ವಿಷಯ ಈಗ ಮುನ್ನೆಲೆಗೆ ಬಂದಿದೆ.

ರವಿವಾರ ನಗರದ ಲಯನ್ಸ್ ಬಾಲಭವನದಲ್ಲಿ ಬಿ.ಜೆ.ಪಿ. ಯುವಮೊರ್ಚಾ ಯುವ ಘಟಕದ ಮಾಜಿ ಅಧ್ಯಕ್ಷ ಹರೀಶ್‌ ಗೌಡರ್‌ ರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸೇರಿದ್ದ ಬಿ.ಜೆ.ಪಿ. ಬಂಡಾಯ ಕಾರ್ಯಕರ್ತರೆದುರು ಮಾತನಾಡಿದ ರೈತ ಸಂಘದ ಅಧ್ಯಕ್ಷ ವೀರಭದ್ರನಾಯ್ಕ ತಾಲೂಕು ಮತ್ತು ಕ್ಷೇತ್ರದಲ್ಲಿ ಸ್ವಜನ ಪಕ್ಷಪಾತ ಮೇರೆ ಮೀರಿದೆ. ಶಾಸಕರ ಜಾತಿಯ ಪ್ರಭಾವಿಗಳ ಮನೆಗೆ ಕೋಟ್ಯಾಂತರ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ ಶಾಸಕರು ಬಡವರು, ಬಹುಸಂಖ್ಯಾತರಿರುವ ಹಳ್ಳಿಗಳಿಗೆ ಅನುದಾನವನ್ನೇ ಹಂಚಿಲ್ಲ ಇದು ಜಾತೀಯತೆ,ಸ್ವಜನಪಕ್ಷಪಾತವಲ್ಲವೆ? ಎಂದು ಪ್ರಶ್ನಿಸಿ

ಗುಂಜಗೋಡಿನಲ್ಲಿ ಬಿರುಕುಬಿಟ್ಟ ಸ್ವಜಾತಿಯವರ ಮನೆಗೆ ಸರ್ಕಾರದ ೫ ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡುವ ಪಟ್ಟಭದ್ರರು ಅಕ್ಕುಂಜಿ,ಹೆಮ್ಮನಬೈಲ್‌ ಗಳಲ್ಲಿ ಮನೆ ಕಳೆದುಕೊಂಡ ಬಡವರಿಗೆ ೯೫ ಸಾವಿರ ಪರಿಹಾರ ನೀಡಿದ್ದಾರೆ.

ತಾರೇಸರದಲ್ಲಿ ಕುಡಿದು ಮೃತಪಟ್ಟ ಸ್ವಜಾತಿವರಿಗೆ ಒಂದು ದಿವಸದ ಒಳಗೆ ೫ ಲಕ್ಷ ರೂಪಾಯಿ ನೀಡುವ ಶಾಸಕರು ಇತರ ಜಾತಿಯ ಸಾವುಗಳಿಗೆ ಪರಿಹಾರ ನೀಡಿಲ್ಲ ಈ ತಾರತಮ್ಯದ ವಿರುದ್ಧ ತಾಲೂಕಿನ ಜನತೆ ಸಿಡಿದೇಳುತಿದ್ದು ಕಮೀಷನ್‌ ವ್ಯವಹಾರ ಬೆಳೆಸಿ, ಪಕ್ಷಪಾತ ಪೋಶಿಸಿ ತಾರತಮ್ಯ ಮಾಡುತ್ತಿರುವ ಶಾಸಕರು ತಮ್ಮ ಕರ್ಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಪರ ಸಂಘಟನೆಗಳ ಪ್ರತಿನಿಧಿ ಆಕಾಶ್‌ ಕೊಂಡ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅವರ ಬಿ.ಜೆ.ಪಿ. ಧರ್ಮದ ಹೆಸರಿನಲ್ಲಿ ಜಾತೀಯತೆ ಮಾಡುತ್ತಿದೆ. ಬಡವರು, ಬಹುಸಂಖ್ಯಾತರ ವಿರುದ್ಧ ಇರುವ ಈ ಸಮಯಸಾಧಕರಿಗೆ ಚುನಾವಣೆಯಲ್ಲಿ ಉತ್ತರ ನೀಡಬೇಕು. ಪಕ್ಷದ ಮುಖಂಡರು ಕಾರ್ಯಕರ್ತರನ್ನು ನಿರ್ಲಕ್ಷಿಸಿ ಕೆಲವು ಗುತ್ತಿಗೆದಾರರ ಕೂಟ ನಿರ್ಮಿಸಿಕೊಂಡಿರುವ ಕಾಗೇರಿ ಆ ವಂಧಿಮಾಗಧರಿಂದಲೇ ಸೋಲು ಕಾಣುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಯವಸ್ಥೆಯ ದೋಶಗಳ ಬಗ್ಗೆ ಮಾತನಾಡಿದ ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಮತ್ತು ಉದ್ಯಮಿ ಉಪೇಂದ್ರ ಪೈ ಶಾಸಕ ಕಾಗೇರಿಯವರ ಹೆಸರು ಹೇಳದೆ ಕೆಲವು ಜ್ವಲಂತ ವಿಷಯಗಳನ್ನು ಪ್ರಸ್ಥಾಪಿಸಿದರು. ಹುಟ್ಟುಹಬ್ಬದ ನಿಮಿತ್ತ ಏರ್ಪಡಿಸಿದ ಸನ್ಮಾನ ಮತ್ತು ಔತಣಕೂಟದಲ್ಲಿ ನೂರಾರು ಜನರು ಪಾಲ್ಗೊಂಡು ಸಂಬ್ರಮಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *